<p><strong>ತೇರದಾಳ:</strong> ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಚರಂಡಿ ಹೂಳೆತ್ತುತ್ತಿಲ್ಲ, ತೆರಿಗೆ ಭರಿಸಿದರೂ ಉತಾರೆ ಸಿಗುತ್ತಿಲ್ಲ. ಅಧಿಕಾರಿಗಳು ಸರಿಯಾದ ಸಮಯಕ್ಕೆ ಕರ್ತವ್ಯದಲ್ಲಿರುವುದಿಲ್ಲ, ಆಡಳಿತಾಧಿಕಾರಿಗಳು ಬರಗಾಲದಲ್ಲೂ ಸಭೆ ನಡೆಸಲಿಲ್ಲ.... ಹೀಗೆ ಆರೋಪಗಳ ಸುರಿಮಳೆ ಗೈದ ಇಲ್ಲಿನ ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿ, ಪುರಸಭೆ ಕಾರ್ಯಾಲಯಕ್ಕೆ ಬೀಗ ಹಾಕಿದ ಪ್ರಸಂಗ ಮಂಗಳವಾರ ನಡೆಯಿತು.</p>.<p>ಸದಸ್ಯರ ಈ ಕ್ರಮಕ್ಕೆ ಪುರಸಭೆಯ ಮಾಜಿ ಅಧ್ಯಕ್ಷರು, ಮುಖಂಡರು ಬೆಂಬಲ ಸೂಚಿಸಿ ಧರಣಿ ನಿರತರಾದರು. ಈ ಸಂದರ್ಭದಲ್ಲಿ ಮಾತನಾಡಿದ ಶೆಟ್ಟೆಪ್ಪ ಸುಣಗಾರ, ಸಚೀನ ಕೊಡತೆ, ಪಟ್ಟಣದ ಸ್ವಚ್ಛತೆ ಮರೆಯಾಗಿದೆ, ಆಯ್ಕೆ ಮಾಡಿದ ವಾರ್ಡ್ ಜನರು ಕೇಳುವ ಸೌಲಭ್ಯಗಳನ್ನು ಒದಗಿಸಿಕೊಡಲು ನಮ್ಮಿಂದ ಆಗುತ್ತಿಲ್ಲ. ಅಧ್ಯಕ್ಷರು ಇದ್ದಿದ್ದರೆ ಅವರನ್ನು ಕೇಳಿ ಸೌಲಭ್ಯಗಳನ್ನು ಪಡೆಯಬಹುದಿತ್ತು ಆದರೆ ಅಧ್ಯಕ್ಷರ ಅಧಿಕಾರಾವಧಿ ಮುಗಿದು ಒಂದೂವರೆ ವರ್ಷಗಳಾಗಿವೆ. ಆಡಳಿತಾಧಿಕಾರಿಗಳು ಇಲ್ಲಿಯವರೆಗೆ ಒಂದು ಸಭೆ ನಡೆಸಿಲ್ಲ’ ಎಂದು ದೂರಿದರು.</p>.<p>‘ಜನತಾ ದರ್ಶನದಲ್ಲಿ ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳಲ್ಲಿ ಬಹುತೇಕ ಅಹವಾಲುಗಳಿಗೆ ಪರಿಹಾರ ದೊರೆತಿಲ್ಲವೆಂದರೆ ಇಲ್ಲಿನ ಕಾರ್ಯವೈಖರಿ ಅರ್ಥವಾದೀತು. ದಿನ ಬೆಳಗಾದರೆ ಸಾರ್ವಜನಿಕರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಇಲ್ಲಿ ಪುರಸಭೆಯಲ್ಲಿ ನಮ್ಮ ಮಾತಿಗೆ ಕಿಮ್ಮತ್ತಿಲ್ಲ ಎಂದಮೇಲೆ ನಮಗೆ ಈ ಸದಸ್ಯತ್ವ ಬೇಡ ರಾಜೀನಾಮೆ ನೀಡಲು ಮುಂದಾಗಿದ್ದೇವೆ’ ಎಂದರು.</p>.<p>ಸಂತೋಷ ಜಮಖಂಡಿ, ಸುರೇಶ ಕಬಾಡಗಿ ಮಾತನಾಡಿ ಜಾಕ್ವೆಲ್ನಲ್ಲಿ ಅಂದಾಜು ₹2 ಲಕ್ಷ ಮೊತ್ತದ ಪುರಸಭೆ ನೀರು ಸರಬರಾಜಿಗಾಗಿ ಬಳಸುವ ಪಂಪಸೆಟ್ ಕಳುವಾಗಿ ಒಂದು ವರ್ಷವಾಯಿತು. ಪುರಸಭೆಯ ಇಲ್ಲಿಯವರೆಗೆ ಅದರ ಕುರಿತಾಗಿ ಅಧಿಕಾರಿಗಳು ಆ ವಿಷಯವನ್ನು ಗಂಭೀರವಾಗಿ ತೆಗದುಕೊಂಡಿಲ್ಲ. ಎರಡು ವರ್ಷದಿಂದ ಪಟ್ಟಣದ ಅಭಿವೃದ್ದಿಗಾಗಿ ಒಂದು ಟೆಂಡರ್ ಕೂಡ ನಡೆದಿಲ್ಲ. ಆದರೆ ಹಣವೆಲ್ಲ ಖಾಲಿಯಾಗಿದೆ. ಅಲ್ಲಿಯೇ ಕುಳಿತು ಇಲ್ಲಿನ ಆಡಳಿತ ನಡೆಸುವ ಈ ವ್ಯವಸ್ಥೆಯಲ್ಲಿ ನಾವು ಸದಸ್ಯರಾಗಿರಲು ಬಯಸುವುದಿಲ್ಲ ಹಾಗಾಗಿ ಪಕ್ಷಾತೀತವಾಗಿ ನಾವೆಲ್ಲರೂ ರಾಜೀನಾಮೆ ನೀಡಲು ಮುಂದಾಗಿದ್ದೇವೆ ಎಂದರು.</p>.<p>ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಪಿಎಸೈ ಅಪ್ಪು ಐಗಳಿ ಧರಣಿ ನಿರತ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು. ‘</p>.<p>ಪುರಸಭೆ ಆಡಳಿತಾಧಿಕಾರಿಗಳು ಇಲ್ಲಿಗೆ ಬರುವವರೆಗೆ ಶಾಂತಯುತವಾಗಿ ಧರಣಿ ಕೈಗೊಳ್ಳಲಿದ್ದೇವೆ’ ಎಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಪುರಸಭೆ ಮುಂಭಾಗದಲ್ಲಿ ಠೀಕಾಣಿ ಹೂಡಿದರು. ಸಂಜೆ ವೇಳೆ ಪುರಸಭೆಗೆ ಬಂದ ಆಡಳಿತಾಧಿಕಾರಿ ಹಾಗೂ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಧರಣಿ ನಿರತ ಸದಸ್ಯರ ಮನವೊಲಿಸಿ ಬೀಗ ತೆಗೆಸಿ, ಆಡಳಿತಾಧಿಕಾರಿಗಳ ಕೊಠಡಿಯಲ್ಲಿ ಪುರಸಭೆ ಸದಸ್ಯರ ಹಾಗೂ ಸಿಬ್ಬಂದಿಯ ಸಭೆಯನ್ನು ಗೌಪ್ಯವಾಗಿ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ:</strong> ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ, ಚರಂಡಿ ಹೂಳೆತ್ತುತ್ತಿಲ್ಲ, ತೆರಿಗೆ ಭರಿಸಿದರೂ ಉತಾರೆ ಸಿಗುತ್ತಿಲ್ಲ. ಅಧಿಕಾರಿಗಳು ಸರಿಯಾದ ಸಮಯಕ್ಕೆ ಕರ್ತವ್ಯದಲ್ಲಿರುವುದಿಲ್ಲ, ಆಡಳಿತಾಧಿಕಾರಿಗಳು ಬರಗಾಲದಲ್ಲೂ ಸಭೆ ನಡೆಸಲಿಲ್ಲ.... ಹೀಗೆ ಆರೋಪಗಳ ಸುರಿಮಳೆ ಗೈದ ಇಲ್ಲಿನ ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆಗೆ ಮುಂದಾಗಿ, ಪುರಸಭೆ ಕಾರ್ಯಾಲಯಕ್ಕೆ ಬೀಗ ಹಾಕಿದ ಪ್ರಸಂಗ ಮಂಗಳವಾರ ನಡೆಯಿತು.</p>.<p>ಸದಸ್ಯರ ಈ ಕ್ರಮಕ್ಕೆ ಪುರಸಭೆಯ ಮಾಜಿ ಅಧ್ಯಕ್ಷರು, ಮುಖಂಡರು ಬೆಂಬಲ ಸೂಚಿಸಿ ಧರಣಿ ನಿರತರಾದರು. ಈ ಸಂದರ್ಭದಲ್ಲಿ ಮಾತನಾಡಿದ ಶೆಟ್ಟೆಪ್ಪ ಸುಣಗಾರ, ಸಚೀನ ಕೊಡತೆ, ಪಟ್ಟಣದ ಸ್ವಚ್ಛತೆ ಮರೆಯಾಗಿದೆ, ಆಯ್ಕೆ ಮಾಡಿದ ವಾರ್ಡ್ ಜನರು ಕೇಳುವ ಸೌಲಭ್ಯಗಳನ್ನು ಒದಗಿಸಿಕೊಡಲು ನಮ್ಮಿಂದ ಆಗುತ್ತಿಲ್ಲ. ಅಧ್ಯಕ್ಷರು ಇದ್ದಿದ್ದರೆ ಅವರನ್ನು ಕೇಳಿ ಸೌಲಭ್ಯಗಳನ್ನು ಪಡೆಯಬಹುದಿತ್ತು ಆದರೆ ಅಧ್ಯಕ್ಷರ ಅಧಿಕಾರಾವಧಿ ಮುಗಿದು ಒಂದೂವರೆ ವರ್ಷಗಳಾಗಿವೆ. ಆಡಳಿತಾಧಿಕಾರಿಗಳು ಇಲ್ಲಿಯವರೆಗೆ ಒಂದು ಸಭೆ ನಡೆಸಿಲ್ಲ’ ಎಂದು ದೂರಿದರು.</p>.<p>‘ಜನತಾ ದರ್ಶನದಲ್ಲಿ ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳಲ್ಲಿ ಬಹುತೇಕ ಅಹವಾಲುಗಳಿಗೆ ಪರಿಹಾರ ದೊರೆತಿಲ್ಲವೆಂದರೆ ಇಲ್ಲಿನ ಕಾರ್ಯವೈಖರಿ ಅರ್ಥವಾದೀತು. ದಿನ ಬೆಳಗಾದರೆ ಸಾರ್ವಜನಿಕರು ನಮ್ಮನ್ನು ಪ್ರಶ್ನೆ ಮಾಡುತ್ತಾರೆ. ಇಲ್ಲಿ ಪುರಸಭೆಯಲ್ಲಿ ನಮ್ಮ ಮಾತಿಗೆ ಕಿಮ್ಮತ್ತಿಲ್ಲ ಎಂದಮೇಲೆ ನಮಗೆ ಈ ಸದಸ್ಯತ್ವ ಬೇಡ ರಾಜೀನಾಮೆ ನೀಡಲು ಮುಂದಾಗಿದ್ದೇವೆ’ ಎಂದರು.</p>.<p>ಸಂತೋಷ ಜಮಖಂಡಿ, ಸುರೇಶ ಕಬಾಡಗಿ ಮಾತನಾಡಿ ಜಾಕ್ವೆಲ್ನಲ್ಲಿ ಅಂದಾಜು ₹2 ಲಕ್ಷ ಮೊತ್ತದ ಪುರಸಭೆ ನೀರು ಸರಬರಾಜಿಗಾಗಿ ಬಳಸುವ ಪಂಪಸೆಟ್ ಕಳುವಾಗಿ ಒಂದು ವರ್ಷವಾಯಿತು. ಪುರಸಭೆಯ ಇಲ್ಲಿಯವರೆಗೆ ಅದರ ಕುರಿತಾಗಿ ಅಧಿಕಾರಿಗಳು ಆ ವಿಷಯವನ್ನು ಗಂಭೀರವಾಗಿ ತೆಗದುಕೊಂಡಿಲ್ಲ. ಎರಡು ವರ್ಷದಿಂದ ಪಟ್ಟಣದ ಅಭಿವೃದ್ದಿಗಾಗಿ ಒಂದು ಟೆಂಡರ್ ಕೂಡ ನಡೆದಿಲ್ಲ. ಆದರೆ ಹಣವೆಲ್ಲ ಖಾಲಿಯಾಗಿದೆ. ಅಲ್ಲಿಯೇ ಕುಳಿತು ಇಲ್ಲಿನ ಆಡಳಿತ ನಡೆಸುವ ಈ ವ್ಯವಸ್ಥೆಯಲ್ಲಿ ನಾವು ಸದಸ್ಯರಾಗಿರಲು ಬಯಸುವುದಿಲ್ಲ ಹಾಗಾಗಿ ಪಕ್ಷಾತೀತವಾಗಿ ನಾವೆಲ್ಲರೂ ರಾಜೀನಾಮೆ ನೀಡಲು ಮುಂದಾಗಿದ್ದೇವೆ ಎಂದರು.</p>.<p>ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ, ಪಿಎಸೈ ಅಪ್ಪು ಐಗಳಿ ಧರಣಿ ನಿರತ ಸದಸ್ಯರ ಮನವೊಲಿಸಲು ಪ್ರಯತ್ನಿಸಿದರು. ‘</p>.<p>ಪುರಸಭೆ ಆಡಳಿತಾಧಿಕಾರಿಗಳು ಇಲ್ಲಿಗೆ ಬರುವವರೆಗೆ ಶಾಂತಯುತವಾಗಿ ಧರಣಿ ಕೈಗೊಳ್ಳಲಿದ್ದೇವೆ’ ಎಂದರು. ಬೆಳಿಗ್ಗೆಯಿಂದ ಸಂಜೆಯವರೆಗೆ ಪುರಸಭೆ ಮುಂಭಾಗದಲ್ಲಿ ಠೀಕಾಣಿ ಹೂಡಿದರು. ಸಂಜೆ ವೇಳೆ ಪುರಸಭೆಗೆ ಬಂದ ಆಡಳಿತಾಧಿಕಾರಿ ಹಾಗೂ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಧರಣಿ ನಿರತ ಸದಸ್ಯರ ಮನವೊಲಿಸಿ ಬೀಗ ತೆಗೆಸಿ, ಆಡಳಿತಾಧಿಕಾರಿಗಳ ಕೊಠಡಿಯಲ್ಲಿ ಪುರಸಭೆ ಸದಸ್ಯರ ಹಾಗೂ ಸಿಬ್ಬಂದಿಯ ಸಭೆಯನ್ನು ಗೌಪ್ಯವಾಗಿ ನಡೆಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>