<p><strong>ರಬಕವಿ– ಬನಹಟ್ಟಿ:</strong> ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆ ಹಿನ್ನೆಲೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದು, ಕೃಷ್ಣಾ ನಂದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುತ್ತಿದೆ.</p>.<p>ರಬಕವಿ–ಬನಹಟ್ಟಿ ಜಾಕ್ವೆಲ್ಗಳಿಗೆ ಹೋಗುವ ಮಾರ್ಗ ನದಿ ನೀರಿನಿಂದ ಬಂದ್ ಆಗಿದ್ದು, ಸುತ್ತಲಿನ ಗ್ರಾಮ, ಪಟ್ಟಣಗಳಿಗೆ ನೀರು ಸರಬರಾಜು ಮಾಡಲು ಸಮಸ್ಯೆ ಉಂಟಾಗಿದೆ. ಅಲ್ಲದೆ, ನದಿ ನೀರಿನಲ್ಲಿ ಜಾಕ್ವೆಲ್ ಸುತ್ತಲಿನ ಬೆಳೆಗಳು ಮುಳುಗಡೆ ಆಗಿವೆ.</p>.<p>ಹೆಚ್ಚಿದ ಒಳಹರಿವು: ಸಮೀಪದ ಹಿಪ್ಪರಗಿ ಜಲಾಶಯದಲ್ಲಿ ಶನಿವಾರ ಬೆಳಿಗ್ಗೆ 2,28,056 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೆ ಪ್ರಮಾಣದ ಹೊರ ಹರಿವು ಕೂಡ ದಾಖಲಾಗಿದೆ.</p>.<p>‘ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಾದ ಕೊಯ್ನಾದಲ್ಲಿ 9. 3 ಸೆಂ.ಮೀ, ನವುಜಾ– 10.6 ಸೆಂ.ಮೀ, ಮಹಾಬಳೇಶ್ವರ– 18.2 ಸೆಂ.ಮೀ, ಉಮದಿ– 16.2 ಸೆಂ,ಮೀ, ತರಾಳಿ– 16.2 ಸೆಂ.ಮೀ, ರಾಧಾ ನಗರಿ– 18 ಸೆಂ.ಮೀ, ದೂಧಗಂಗಾದಲ್ಲಿ 15 ಸೆಂ.ಮೀ ಮಳೆಯಾದ ವರದಿಯಾಗಿದ್ದು, ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಹರಿದುಬಂದಿದೆ’ ಎಂದು ರಬಕವಿ–ಬನಹಟ್ಟಿ ತಹಶೀಲ್ಧಾರ್ ಗಿರೀಶ ಸ್ವಾದಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಬಕವಿ– ಬನಹಟ್ಟಿ:</strong> ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಮಳೆ ಹಿನ್ನೆಲೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದು, ಕೃಷ್ಣಾ ನಂದಿ ತುಂಬಿ ಹರಿಯುತ್ತಿದೆ. ಇದರಿಂದಾಗಿ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುತ್ತಿದೆ.</p>.<p>ರಬಕವಿ–ಬನಹಟ್ಟಿ ಜಾಕ್ವೆಲ್ಗಳಿಗೆ ಹೋಗುವ ಮಾರ್ಗ ನದಿ ನೀರಿನಿಂದ ಬಂದ್ ಆಗಿದ್ದು, ಸುತ್ತಲಿನ ಗ್ರಾಮ, ಪಟ್ಟಣಗಳಿಗೆ ನೀರು ಸರಬರಾಜು ಮಾಡಲು ಸಮಸ್ಯೆ ಉಂಟಾಗಿದೆ. ಅಲ್ಲದೆ, ನದಿ ನೀರಿನಲ್ಲಿ ಜಾಕ್ವೆಲ್ ಸುತ್ತಲಿನ ಬೆಳೆಗಳು ಮುಳುಗಡೆ ಆಗಿವೆ.</p>.<p>ಹೆಚ್ಚಿದ ಒಳಹರಿವು: ಸಮೀಪದ ಹಿಪ್ಪರಗಿ ಜಲಾಶಯದಲ್ಲಿ ಶನಿವಾರ ಬೆಳಿಗ್ಗೆ 2,28,056 ಕ್ಯೂಸೆಕ್ ಒಳ ಹರಿವು ಇದ್ದು, ಅಷ್ಟೆ ಪ್ರಮಾಣದ ಹೊರ ಹರಿವು ಕೂಡ ದಾಖಲಾಗಿದೆ.</p>.<p>‘ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಾದ ಕೊಯ್ನಾದಲ್ಲಿ 9. 3 ಸೆಂ.ಮೀ, ನವುಜಾ– 10.6 ಸೆಂ.ಮೀ, ಮಹಾಬಳೇಶ್ವರ– 18.2 ಸೆಂ.ಮೀ, ಉಮದಿ– 16.2 ಸೆಂ,ಮೀ, ತರಾಳಿ– 16.2 ಸೆಂ.ಮೀ, ರಾಧಾ ನಗರಿ– 18 ಸೆಂ.ಮೀ, ದೂಧಗಂಗಾದಲ್ಲಿ 15 ಸೆಂ.ಮೀ ಮಳೆಯಾದ ವರದಿಯಾಗಿದ್ದು, ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಹರಿದುಬಂದಿದೆ’ ಎಂದು ರಬಕವಿ–ಬನಹಟ್ಟಿ ತಹಶೀಲ್ಧಾರ್ ಗಿರೀಶ ಸ್ವಾದಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>