<p><em><strong>–ಎರ್ರಿಸ್ವಾಮಿ ಬಿ.</strong></em></p>.<p><strong>ತೋರಣಗಲ್ಲು</strong>: ಹೋಬಳಿಯ ತಾಳೂರು ಗ್ರಾಮದ ರೈತ ವಾಲ್ಮೀಕಿ ಪಕ್ಕೀರಪ್ಪ ಅವರು ಎರಡು ಎಕರೆ ಜಮೀನಿನಲ್ಲಿ ಪೇರಲೆ, ತೆಂಗು, ರಕ್ತಚಂದನ ಹಾಗೂ ಶ್ರೀಗಂಧ ಗಿಡಗಳನ್ನು ಬೆಳೆದು ವಾರ್ಷಿಕ ₹2ಲಕ್ಷ ಲಾಭ ಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.</p>.<p>ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಪೇರಲೆ, ತೆಂಗು ಹಾಗೂ ತರಕಾರಿಯನ್ನು ಮೂರು ವರ್ಷಗಳಿಂದ ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನೇ ನಂಬಿ ವರ್ಷ ಪೂರ್ತಿ ಶ್ರಮವಹಿಸಿ ಕೃಷಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ.</p>.<p>ವರ್ಷದಲ್ಲಿ ನಾಲ್ಕು ಬಾರಿ ಪೇರಲೆ ಕಟಾವು ಮಾಡಿ ₹2ಲಕ್ಷ ಆದಾಯ ಗಳಿದ್ದಾರೆ. ತೆಂಗಿನ ಬೆಳೆಯಿಂದ ₹50 ಸಾವಿರ ಆದಾಯ ಗಳಿಸಿದ್ದಾರೆ.</p>.<p>ಪ್ರತಿ ವರ್ಷ ವಾಣಿಜ್ಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಯುತ್ತಿದ್ದರು. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಇರುವುದರಿಂದ ಧೂಳು ಕಲುಷಿತ ಹೊಗೆಯಿಂದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗುತ್ತಿತ್ತು. ಇದರಿಂದ ಆ ಬೆಳೆಗಳಿಗೆ ವಿದಾಯ ಹೇಳಿ ವಿವಿಧ ಹಣ್ಣು, ವಾಣಿಜ್ಯ ಬೇಸಾಯದ ಮೊರೆ ಹೋಗಿದ್ದಾರೆ.</p>.<p>₹ 80ರಂತೆ 750 ಪೇರಲೆ ಸಸಿಗಳನ್ನು, ₹45ರಂತೆ 250 ರಕ್ತಚಂದನ ಸಸಿಗಳನ್ನು, ₹155ರಂತೆ 400 ತೆಂಗಿನ ಸಸಿಗಳನ್ನು, ₹150ರಂತೆ ಒಂದು ಸಾವಿರ ಸಸಿಗಳನ್ನು ತಂದು ನೆಟ್ಟಿದ್ದಾರೆ.</p>.<p>ಸಾವಯವ ಕೃಷಿ ಪದ್ಧತಿಯ ಅನುಸಾರ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಇತ್ತೀಚೆಗೆ ಉತ್ತಮ ಇಳುವರಿ, ಹೆಚ್ಚಿನ ಆದಾಯಕ್ಕಾಗಿ ರಾಸಾಯನಿಕ ಗೊಬ್ಬರ, ಔಷಧಗಳನ್ನು ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ.</p>.<p>ಎರಡು ಕೊಳವೆ ಬಾವಿಗಳನ್ನು ಕೊರೆಯಿಸಿದ್ದಾರೆ. ವಿವಿಧ ವೆಚ್ಚಕ್ಕಾಗಿ ಸಂಡೂರಿನ ಖಾಸಗಿ ಬ್ಯಾಂಕಿನಲ್ಲಿ ₹6ಲಕ್ಷ ಸಾಲ ಪಡೆದಿದ್ದಾರೆ.</p>.<p>ಪೇರಲೆ, ಶ್ರೀಗಂಧದ ಸಸಿಗಳನ್ನು ಎರಡು ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಜಮೀನಿನ ಸುತ್ತಲಿನ ಬದುಗಳಲ್ಲಿ ತೆಂಗು, ರಕ್ತಚಂದನ ಸಸ್ಯಗಳನ್ನು ನೆಟ್ಟಿದ್ದಾರೆ. ಇದರೊಂದಿಗೆ 4 ಎಕರೆಯಲ್ಲಿ ಅಡಿಕೆ ಬೆಳೆ ಬೆಳೆಯಲು ತಯಾರಿ ನಡೆಸಿದ್ದಾರೆ.</p>.<div><blockquote>ತೋಟಗಾರಿಕೆ ಬೆಳೆಗೆ ಅಧಿಕಾರಿಗಳ ಸಹಕಾರ ಮಾರ್ಗದರ್ಶನ ಅಗತ್ಯ. ಕೃಷಿ ಸೌಲಭ್ಯಗಳ ಕುರಿತು ರೈತರಿಗೆ ಸಕಾಲಕ್ಕೆ ಮಾಹಿತಿ ನೀಡಬೇಕು </blockquote><span class="attribution">ಪಕ್ಕಿರಪ್ಪ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>–ಎರ್ರಿಸ್ವಾಮಿ ಬಿ.</strong></em></p>.<p><strong>ತೋರಣಗಲ್ಲು</strong>: ಹೋಬಳಿಯ ತಾಳೂರು ಗ್ರಾಮದ ರೈತ ವಾಲ್ಮೀಕಿ ಪಕ್ಕೀರಪ್ಪ ಅವರು ಎರಡು ಎಕರೆ ಜಮೀನಿನಲ್ಲಿ ಪೇರಲೆ, ತೆಂಗು, ರಕ್ತಚಂದನ ಹಾಗೂ ಶ್ರೀಗಂಧ ಗಿಡಗಳನ್ನು ಬೆಳೆದು ವಾರ್ಷಿಕ ₹2ಲಕ್ಷ ಲಾಭ ಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.</p>.<p>ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಪೇರಲೆ, ತೆಂಗು ಹಾಗೂ ತರಕಾರಿಯನ್ನು ಮೂರು ವರ್ಷಗಳಿಂದ ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನೇ ನಂಬಿ ವರ್ಷ ಪೂರ್ತಿ ಶ್ರಮವಹಿಸಿ ಕೃಷಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ.</p>.<p>ವರ್ಷದಲ್ಲಿ ನಾಲ್ಕು ಬಾರಿ ಪೇರಲೆ ಕಟಾವು ಮಾಡಿ ₹2ಲಕ್ಷ ಆದಾಯ ಗಳಿದ್ದಾರೆ. ತೆಂಗಿನ ಬೆಳೆಯಿಂದ ₹50 ಸಾವಿರ ಆದಾಯ ಗಳಿಸಿದ್ದಾರೆ.</p>.<p>ಪ್ರತಿ ವರ್ಷ ವಾಣಿಜ್ಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಯುತ್ತಿದ್ದರು. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಇರುವುದರಿಂದ ಧೂಳು ಕಲುಷಿತ ಹೊಗೆಯಿಂದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗುತ್ತಿತ್ತು. ಇದರಿಂದ ಆ ಬೆಳೆಗಳಿಗೆ ವಿದಾಯ ಹೇಳಿ ವಿವಿಧ ಹಣ್ಣು, ವಾಣಿಜ್ಯ ಬೇಸಾಯದ ಮೊರೆ ಹೋಗಿದ್ದಾರೆ.</p>.<p>₹ 80ರಂತೆ 750 ಪೇರಲೆ ಸಸಿಗಳನ್ನು, ₹45ರಂತೆ 250 ರಕ್ತಚಂದನ ಸಸಿಗಳನ್ನು, ₹155ರಂತೆ 400 ತೆಂಗಿನ ಸಸಿಗಳನ್ನು, ₹150ರಂತೆ ಒಂದು ಸಾವಿರ ಸಸಿಗಳನ್ನು ತಂದು ನೆಟ್ಟಿದ್ದಾರೆ.</p>.<p>ಸಾವಯವ ಕೃಷಿ ಪದ್ಧತಿಯ ಅನುಸಾರ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಇತ್ತೀಚೆಗೆ ಉತ್ತಮ ಇಳುವರಿ, ಹೆಚ್ಚಿನ ಆದಾಯಕ್ಕಾಗಿ ರಾಸಾಯನಿಕ ಗೊಬ್ಬರ, ಔಷಧಗಳನ್ನು ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ.</p>.<p>ಎರಡು ಕೊಳವೆ ಬಾವಿಗಳನ್ನು ಕೊರೆಯಿಸಿದ್ದಾರೆ. ವಿವಿಧ ವೆಚ್ಚಕ್ಕಾಗಿ ಸಂಡೂರಿನ ಖಾಸಗಿ ಬ್ಯಾಂಕಿನಲ್ಲಿ ₹6ಲಕ್ಷ ಸಾಲ ಪಡೆದಿದ್ದಾರೆ.</p>.<p>ಪೇರಲೆ, ಶ್ರೀಗಂಧದ ಸಸಿಗಳನ್ನು ಎರಡು ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಜಮೀನಿನ ಸುತ್ತಲಿನ ಬದುಗಳಲ್ಲಿ ತೆಂಗು, ರಕ್ತಚಂದನ ಸಸ್ಯಗಳನ್ನು ನೆಟ್ಟಿದ್ದಾರೆ. ಇದರೊಂದಿಗೆ 4 ಎಕರೆಯಲ್ಲಿ ಅಡಿಕೆ ಬೆಳೆ ಬೆಳೆಯಲು ತಯಾರಿ ನಡೆಸಿದ್ದಾರೆ.</p>.<div><blockquote>ತೋಟಗಾರಿಕೆ ಬೆಳೆಗೆ ಅಧಿಕಾರಿಗಳ ಸಹಕಾರ ಮಾರ್ಗದರ್ಶನ ಅಗತ್ಯ. ಕೃಷಿ ಸೌಲಭ್ಯಗಳ ಕುರಿತು ರೈತರಿಗೆ ಸಕಾಲಕ್ಕೆ ಮಾಹಿತಿ ನೀಡಬೇಕು </blockquote><span class="attribution">ಪಕ್ಕಿರಪ್ಪ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>