<p><strong>ಆನೇಕಲ್: </strong>ಹತ್ತು ದಿನಗಳ ಒಳಗೆ ಮೂರು ಜನರನ್ನು ಕೊಂದ<strong> </strong>ಕಾಡಾನೆ ಮಕ್ನಾ (ದಂತವಿಲ್ಲದ ಗಂಡು ಅಲ್ಲದ, ಹೆಣ್ಣೂ ಅಲ್ಲದ ಆನೆ) ಸೆರೆ ಹಿಡಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಪಳಗಿಸುತ್ತಿದ್ದಾರೆ.</p>.<p>ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪುಂಡಾನೆ ಮಂಗಳವಾರ ಇಡೀ ದಿನವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಸೀಗೆಕಟ್ಟೆಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾಗಿರುವ ಕ್ರಾಲ್ನಲ್ಲಿ ಕಳೆಯಿತು. </p>.<p>ಕ್ರಾಲ್ನಿಂದ ಹೊರ ಬರಲು ಮಕ್ನಾ ದಿಮ್ಮಿಗಳನ್ನು ಒದೆಯುವುದು, ಮೇಲೇರಲು ಪ್ರಯತ್ನಿಸುತ್ತಿದೆ. ನಿಂತಲ್ಲಿ ನಿಲ್ಲದೆ ಅಸಹನೆಯಿಂದ ಅತ್ತಿಂದಿತ್ತ ಓಡಾಡುತ್ತಿದೆ. </p>.<p>ಗೋಣಿ, ಬಸ್ರಿ ಮರದ ರೆಂಬೆ, ಎಲೆ ಮತ್ತು ಬಿದಿರನ್ನು ಆಹಾರವಾಗಿ ನೀಡಲಾಗುತ್ತಿದೆ. ಆನೆ ಪಳಗಿಸಲು ಒಬ್ಬ ಮಾವುತ ಮತ್ತು ಕಾವಡಿ ನಿಯೋಜಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸ್ವಚ್ಛತೆಗೆ ಗಮನ ಹರಿಸಲಾಗಿದೆ. ಬೆಳಗ್ಗೆ ಬಿಸಿ ನೀರು ಹಾಕಿ ಶಾಖ ನೀಡಲಾಗುತ್ತಿದೆ.</p>.<p>ಸಾಮಾನ್ಯವಾಗಿ ಆನೆ ಪಳಗಿಸಲು ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು. ಒಂದು ತಿಂಗಳು ದುಬಾರೆಯಿಂದ ಬಂದಿರುವ ಪರಿಣಿತರು ತರಬೇತಿ ನೀಡಲಿದ್ದಾರೆ. ನಂತರ ಆನೆ ಪಳಗಿಸಿ ಜೈವಿಕ ಉದ್ಯಾನದ ಆನೆಗಳ ಜೊತೆಗೂಡಿಸಬೇಕಾಗುತ್ತದೆ. ಇದೊಂದು ಸವಾಲಿನ ಕೆಲಸವಾಗಿದೆ. ಅತ್ಯಂತ ಎಚ್ಚರಿಕೆಯಿಂದ ಕಾಡಾನೆ ಪಳಗಿಸಬೇಕಾಗುತ್ತದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮತ್ತೊಂದು ಪುಂಡಾನೆ ‘ಕೋಳಿ ಒಂಟೆ’ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಇಡೀ ದಿನ ಗಸ್ತು ನಡೆಸಿದರೂ ಅದರ ಸುಳಿವು ಸಿಗಲಿಲ್ಲ. ಹಾಗಾಗಿ ಕಾರ್ಯಾಚರಣೆಗೆ ದಿನ ನಿಗದಿಯಾಗಿಲ್ಲ. ಆನೆ ಇರುವ ಜಾಗ ಪತ್ತೆಯಾಗುತ್ತಿದ್ದಂತೆಯೇ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಎಂಟು ಕುಮ್ಕಿ (ತರಬೇತಿ ಪಡೆದ ಪಳಗಿದ ಆನೆ) ಆನೆಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಮುಂದಿನ ಕಾರ್ಯಾಚರಣೆಗಾಗಿ ಕಾಯುತ್ತಿದ್ದಾರೆ.</p>.<p><strong>ಹೀಗಿತ್ತು ‘ಮಕ್ನಾ’ ಸೆರೆ ಕಾರ್ಯಾಚರಣೆ</strong></p><p>ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಉಪಟಳ ನೀಡುತ್ತಿದ್ದ ಪುಂಡಾನೆ ಮಕ್ನಾ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಯಶಸ್ವಿ<br>ಯಾಗಿದ್ದರು.</p><p>*ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದ ಎಂಟು ಕುಮ್ಕಿ ಆನೆಗಳಿಗೆ ಸೋಮವಾರ ಬೆಳಗ್ಗೆ ಬನ್ನೇರುಘಟ್ಟ ಸಿಗೇಕಟ್ಟೆಯ ಬಳಿ ಮಾವುತರು, ಕಾವಾಡಿಗರು, ವೈದ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ ಪೂಜೆ ನೆರವೇರಿಸಿದ್ದರು.</p><p>*ಸುಮಾರು 100ಕ್ಕೂ ಹೆಚ್ಚು ಮಂದಿ ಇದ್ದ ತಂಡದಿಂದ ‘ಆಪರೇಷನ್ ಮಕ್ನಾ’ ಕಾರ್ಯಾಚರಣೆ ಆರಂಭವಾಗಿತ್ತು. ಕ್ಯಾಪ್ಟನ್ ಆನೆಗಳಾದ ಭೀಮ ಮತ್ತು ಮಹೇಂದ್ರನ ನೇತೃತ್ವದಲ್ಲಿ ಎಂಟು ಕುಮ್ಕಿ ಆನೆ ಭಾಗಿಯಾಗಿದ್ದವು.</p><p>*ಕಾಡಾನೆ ಮಕ್ನಾ ಬೀಡುಬಿಟ್ಟಿದ್ದ ಸ್ಥಳವನ್ನು ಡ್ರೋನ್ ಮೂಲಕ ಭಾನುವಾರ ಗುರುತಿಸ<br>ಲಾಗಿತ್ತು. ಆನೆ ಇದ್ದ ತಟಗುಪ್ಪೆ ಸಮೀಪದ ಮುಳ್ಳುಮರದ ಬಳಿಗೆ ಬೆಳಗ್ಗೆ 10ಕ್ಕೆ ತೆರಳಿದ ಆನೆಗಳ ತಂಡ ಕಾಡಾನೆಯಿದ್ದ ಪ್ರದೇಶ ಸುತ್ತುವರಿದವು.</p><p>*ಪರಿಣಿತ ಮಾವುತರು ಮತ್ತು ಕಾವಾಡಿಗಳು ಕರಾರುವಾಕ್ಕಾಗಿ ಮಕ್ನಾ ಸುತ್ತಲೂ ವ್ಯೂಹ ರಚಿಸಿದರು. ಮಕ್ನಾ ಚಲನವಲನ ಗಮನಿಸಿದ ಡಾ.ರಮೇಶ್ ಮತ್ತು ತಂಡ. ತಗ್ಗು ಪ್ರದೇಶ ದಲ್ಲಿದ್ದ ಆನೆಗೆ ದಿಬ್ಬದ ಮೇಲೆ ನಿಂತು ಅರಿವಳಿಕೆ ತಜ್ಞ ರಂಜನ್ ಅವರು ಬಂದೂಕಿನಿಂದ ಅರಿವಳಿಕೆ ಮದ್ದು ಇರುವ ಬಾಣ ಹೊಡೆದರು.</p><p>*ಬಾಣ ನಾಟುತ್ತಲೆ ಕೆರಳಿದ ಮಕ್ನಾ ಓಡಲು ಆರಂಭ. ಸ್ವಲ್ಪ ದೂರ ಓಡಿದ ನಂತರ ನಿತ್ರಾಣಗೊಂಡು ಮಂಪರಿನಿಂದ ಕುಸಿದು ಬಿದ್ದ ಆನೆ. ಈ ವೇಳೆಗೆ ಮಕ್ನಾ ಸುತ್ತುವರೆದ ಭೀಮ ಮತ್ತು ಮಹೇಂದ್ರ ನೇತೃತ್ವದ ಎಂಟು ಕುಮ್ಕಿ ಆನೆಗಳ ತಂಡ.</p><p>*ಒಂದೂ ಮುಕ್ಕಾಲು ತಾಸಿನಲ್ಲಿ (ಬೆಳಗ್ಗೆ 11.45ಕ್ಕೆ) ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ. ಮಂಪರಿನಲ್ಲಿದ್ದ ಕಾಡಾನೆ ನಾಲ್ಕು ಕಾಲುಗಳಿಗೆ ಹಗ್ಗ ಕಟ್ಟಿ ಕುಮ್ಕಿ ಆನೆಗಳ ಸಹಾಯದಿಂದ ಎಳೆದು ಲಾರಿಯ ಮೂಲಕ ಬನ್ನೇರುಘಟ್ಟ ಉದ್ಯಾನದ ಸಿಗೇಕಟ್ಟೆಯ ಬಳಿಗೆ ತರಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ಹತ್ತು ದಿನಗಳ ಒಳಗೆ ಮೂರು ಜನರನ್ನು ಕೊಂದ<strong> </strong>ಕಾಡಾನೆ ಮಕ್ನಾ (ದಂತವಿಲ್ಲದ ಗಂಡು ಅಲ್ಲದ, ಹೆಣ್ಣೂ ಅಲ್ಲದ ಆನೆ) ಸೆರೆ ಹಿಡಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಪಳಗಿಸುತ್ತಿದ್ದಾರೆ.</p>.<p>ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪುಂಡಾನೆ ಮಂಗಳವಾರ ಇಡೀ ದಿನವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಸೀಗೆಕಟ್ಟೆಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾಗಿರುವ ಕ್ರಾಲ್ನಲ್ಲಿ ಕಳೆಯಿತು. </p>.<p>ಕ್ರಾಲ್ನಿಂದ ಹೊರ ಬರಲು ಮಕ್ನಾ ದಿಮ್ಮಿಗಳನ್ನು ಒದೆಯುವುದು, ಮೇಲೇರಲು ಪ್ರಯತ್ನಿಸುತ್ತಿದೆ. ನಿಂತಲ್ಲಿ ನಿಲ್ಲದೆ ಅಸಹನೆಯಿಂದ ಅತ್ತಿಂದಿತ್ತ ಓಡಾಡುತ್ತಿದೆ. </p>.<p>ಗೋಣಿ, ಬಸ್ರಿ ಮರದ ರೆಂಬೆ, ಎಲೆ ಮತ್ತು ಬಿದಿರನ್ನು ಆಹಾರವಾಗಿ ನೀಡಲಾಗುತ್ತಿದೆ. ಆನೆ ಪಳಗಿಸಲು ಒಬ್ಬ ಮಾವುತ ಮತ್ತು ಕಾವಡಿ ನಿಯೋಜಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸ್ವಚ್ಛತೆಗೆ ಗಮನ ಹರಿಸಲಾಗಿದೆ. ಬೆಳಗ್ಗೆ ಬಿಸಿ ನೀರು ಹಾಕಿ ಶಾಖ ನೀಡಲಾಗುತ್ತಿದೆ.</p>.<p>ಸಾಮಾನ್ಯವಾಗಿ ಆನೆ ಪಳಗಿಸಲು ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು. ಒಂದು ತಿಂಗಳು ದುಬಾರೆಯಿಂದ ಬಂದಿರುವ ಪರಿಣಿತರು ತರಬೇತಿ ನೀಡಲಿದ್ದಾರೆ. ನಂತರ ಆನೆ ಪಳಗಿಸಿ ಜೈವಿಕ ಉದ್ಯಾನದ ಆನೆಗಳ ಜೊತೆಗೂಡಿಸಬೇಕಾಗುತ್ತದೆ. ಇದೊಂದು ಸವಾಲಿನ ಕೆಲಸವಾಗಿದೆ. ಅತ್ಯಂತ ಎಚ್ಚರಿಕೆಯಿಂದ ಕಾಡಾನೆ ಪಳಗಿಸಬೇಕಾಗುತ್ತದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮತ್ತೊಂದು ಪುಂಡಾನೆ ‘ಕೋಳಿ ಒಂಟೆ’ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಇಡೀ ದಿನ ಗಸ್ತು ನಡೆಸಿದರೂ ಅದರ ಸುಳಿವು ಸಿಗಲಿಲ್ಲ. ಹಾಗಾಗಿ ಕಾರ್ಯಾಚರಣೆಗೆ ದಿನ ನಿಗದಿಯಾಗಿಲ್ಲ. ಆನೆ ಇರುವ ಜಾಗ ಪತ್ತೆಯಾಗುತ್ತಿದ್ದಂತೆಯೇ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಎಂಟು ಕುಮ್ಕಿ (ತರಬೇತಿ ಪಡೆದ ಪಳಗಿದ ಆನೆ) ಆನೆಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಮುಂದಿನ ಕಾರ್ಯಾಚರಣೆಗಾಗಿ ಕಾಯುತ್ತಿದ್ದಾರೆ.</p>.<p><strong>ಹೀಗಿತ್ತು ‘ಮಕ್ನಾ’ ಸೆರೆ ಕಾರ್ಯಾಚರಣೆ</strong></p><p>ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಉಪಟಳ ನೀಡುತ್ತಿದ್ದ ಪುಂಡಾನೆ ಮಕ್ನಾ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಯಶಸ್ವಿ<br>ಯಾಗಿದ್ದರು.</p><p>*ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಬಂದಿದ್ದ ಎಂಟು ಕುಮ್ಕಿ ಆನೆಗಳಿಗೆ ಸೋಮವಾರ ಬೆಳಗ್ಗೆ ಬನ್ನೇರುಘಟ್ಟ ಸಿಗೇಕಟ್ಟೆಯ ಬಳಿ ಮಾವುತರು, ಕಾವಾಡಿಗರು, ವೈದ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ ಪೂಜೆ ನೆರವೇರಿಸಿದ್ದರು.</p><p>*ಸುಮಾರು 100ಕ್ಕೂ ಹೆಚ್ಚು ಮಂದಿ ಇದ್ದ ತಂಡದಿಂದ ‘ಆಪರೇಷನ್ ಮಕ್ನಾ’ ಕಾರ್ಯಾಚರಣೆ ಆರಂಭವಾಗಿತ್ತು. ಕ್ಯಾಪ್ಟನ್ ಆನೆಗಳಾದ ಭೀಮ ಮತ್ತು ಮಹೇಂದ್ರನ ನೇತೃತ್ವದಲ್ಲಿ ಎಂಟು ಕುಮ್ಕಿ ಆನೆ ಭಾಗಿಯಾಗಿದ್ದವು.</p><p>*ಕಾಡಾನೆ ಮಕ್ನಾ ಬೀಡುಬಿಟ್ಟಿದ್ದ ಸ್ಥಳವನ್ನು ಡ್ರೋನ್ ಮೂಲಕ ಭಾನುವಾರ ಗುರುತಿಸ<br>ಲಾಗಿತ್ತು. ಆನೆ ಇದ್ದ ತಟಗುಪ್ಪೆ ಸಮೀಪದ ಮುಳ್ಳುಮರದ ಬಳಿಗೆ ಬೆಳಗ್ಗೆ 10ಕ್ಕೆ ತೆರಳಿದ ಆನೆಗಳ ತಂಡ ಕಾಡಾನೆಯಿದ್ದ ಪ್ರದೇಶ ಸುತ್ತುವರಿದವು.</p><p>*ಪರಿಣಿತ ಮಾವುತರು ಮತ್ತು ಕಾವಾಡಿಗಳು ಕರಾರುವಾಕ್ಕಾಗಿ ಮಕ್ನಾ ಸುತ್ತಲೂ ವ್ಯೂಹ ರಚಿಸಿದರು. ಮಕ್ನಾ ಚಲನವಲನ ಗಮನಿಸಿದ ಡಾ.ರಮೇಶ್ ಮತ್ತು ತಂಡ. ತಗ್ಗು ಪ್ರದೇಶ ದಲ್ಲಿದ್ದ ಆನೆಗೆ ದಿಬ್ಬದ ಮೇಲೆ ನಿಂತು ಅರಿವಳಿಕೆ ತಜ್ಞ ರಂಜನ್ ಅವರು ಬಂದೂಕಿನಿಂದ ಅರಿವಳಿಕೆ ಮದ್ದು ಇರುವ ಬಾಣ ಹೊಡೆದರು.</p><p>*ಬಾಣ ನಾಟುತ್ತಲೆ ಕೆರಳಿದ ಮಕ್ನಾ ಓಡಲು ಆರಂಭ. ಸ್ವಲ್ಪ ದೂರ ಓಡಿದ ನಂತರ ನಿತ್ರಾಣಗೊಂಡು ಮಂಪರಿನಿಂದ ಕುಸಿದು ಬಿದ್ದ ಆನೆ. ಈ ವೇಳೆಗೆ ಮಕ್ನಾ ಸುತ್ತುವರೆದ ಭೀಮ ಮತ್ತು ಮಹೇಂದ್ರ ನೇತೃತ್ವದ ಎಂಟು ಕುಮ್ಕಿ ಆನೆಗಳ ತಂಡ.</p><p>*ಒಂದೂ ಮುಕ್ಕಾಲು ತಾಸಿನಲ್ಲಿ (ಬೆಳಗ್ಗೆ 11.45ಕ್ಕೆ) ಕಾಡಾನೆ ಸೆರೆ ಕಾರ್ಯಾಚರಣೆ ಯಶಸ್ವಿ. ಮಂಪರಿನಲ್ಲಿದ್ದ ಕಾಡಾನೆ ನಾಲ್ಕು ಕಾಲುಗಳಿಗೆ ಹಗ್ಗ ಕಟ್ಟಿ ಕುಮ್ಕಿ ಆನೆಗಳ ಸಹಾಯದಿಂದ ಎಳೆದು ಲಾರಿಯ ಮೂಲಕ ಬನ್ನೇರುಘಟ್ಟ ಉದ್ಯಾನದ ಸಿಗೇಕಟ್ಟೆಯ ಬಳಿಗೆ ತರಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>