ಹೊಸಹಳ್ಳಿ ಕೆರೆ ಕಲುಷಿತವಾಗಿದ್ದು ಗಬ್ಬುನಾರುತ್ತಿರುವುದರಿಂದ ಹೊಸಹಳ್ಳಿ ಕೆರೆಯ ಏರಿಯ ಮೇಲೆ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಲು ಶೀಘ್ರ ಕ್ರಮ ವಹಿಸಬೇಕು
ದಿಲೀಪ್ ಹೆನ್ನಾಗರ ನಿವಾಸಿ
ಹೊಸಹಳ್ಳಿ ಕೆರೆಗೆ ವಿವಿಧ ಕಾರ್ಖಾನೆಗಳು ಮತ್ತು ಅಪಾರ್ಟ್ಮೆಂಟ್ಗಳಿಂದ ತ್ಯಾಜ್ಯ ನೀರು ಹರಿಯುತ್ತಿದೆ. ಈ ಸಂಬಂಧ ಪಂಚಾಯಿತಿಯಿಂದ ತ್ಯಾಜ್ಯ ನೀರು ಹರಿಸುತ್ತಿರುವ ಕಾರ್ಖಾನೆಗಳಿಗೆ ನೊಟೀಸ್ ನೀಡಲಾಗಿದೆ
ಸಿದ್ದರಾಜು ಪಿಡಿಓ
ಕೆರೆ ಅಂಗಳದಲ್ಲಿ ತ್ಯಾಜ್ಯ
ಹಾಳಾಗಿರುವ ಕೆರೆಯ ಅಂದವನ್ನು ಮತ್ತಷ್ಟು ಹಾಳು ಮಾಡಲು ಕಾದಿರುವ ಜನರು ಸುತ್ತಮುತ್ತಲಿನ ಕಸವನ್ನು ತಂದು ಕೆರೆಯ ಏರಿಯ ಮೇಲೆ ಹಾಕುತ್ತಿದ್ದಾರೆ. ಕಟ್ಟಡ ತ್ಯಾಜ್ಯವನ್ನು ಕೆರೆಯ ಅಂಗಳದಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಕೆರೆಯು ಸಂಪೂರ್ಣ ಮಾಲಿನ್ಯಗೊಂಡಿದ್ದು ಜನರಿಗೆ ಶಾಪವಾಗಿದೆ. ರಾಜಕಾಲುವೆಗಳಲ್ಲಿ ಮಳೆಯ ನೀರು ಹರಿಯುವ ಬದಲಿಗೆ ಚರಂಡಿ ನೀರು ಹರಿಯುತ್ತಿದೆ. ಈ ಚರಂಡಿ ನೀರು ಕೆರೆ ಸೇರುತ್ತಿದ್ದು ಕೆರೆ ತುಂಬುತ್ತಿದೆ. ಆದರೆ ತುಂಬಿದ ಕೆರೆಯಿಂದ ಜನರಿಗಾಗಲಿ ಪರಿಸರಕ್ಕಾಗಲಿ ಯಾವುದೇ ಉಪಯೋಗವಿಲ್ಲ. ಬದಲಿಗೆ ಜನರು ಪರಿತಪಿಸುವಂತಾಗಿದೆ. ಕೆರೆಯನ್ನು ಶುದ್ಧೀಕರಿಸಿ ಹಳೆಯ ಗತ ವೈಭವವನ್ನು ಮರಳಿ ಪಡೆಯಲಾಗುವುದೇ ಎಂದು ಜನರು ಚಾತಕ ಪಕ್ಷಿಗಳಂತೆ ಕಾದಿದ್ದಾರೆ.