<p><strong>ಮಾಲೂರು</strong>: ಕುಡಿಯುವ ನೀರು, ರಸ್ತೆ, ಬೀದಿದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ನಾಗರಿಕ ಸಮಾಜದ ವಾಸಕ್ಕೆ ಬೇಕಾದ ಮೂಲ ಸೌಕರ್ಯ ಇಲ್ಲದೆ ಪಾರ್ತಿಬನ್ ಬಡಾವಣೆ ಜನ ಪರಾಡುತ್ತಿದ್ದಾರೆ.</p>.<p>ಪಟ್ಟಣದ 22–23ನೇ ವಾರ್ಡ್ನ ಸುಮಾರು 60 ರಿಂದ 70 ಮನೆ ಹೊಂದಿರುವ ಪಾರ್ತಿಬನ್ ಬಡವಾಣೆಯಲ್ಲಿ ಸ್ವಚ್ಛತೆ ಇಲ್ಲದೆ ಮನೆಗಳ ಬಳಿ ಗಿಡಗೆಂಟೆಗಳು ಅಳೆತ್ತರ ಬೆಳೆದು ಹಾವುಗಳ ಕಾಟದಿಂದ ಇಲ್ಲಿನ ನಿವಾಸಿಗಳು ಭಯದಿಂದ ಜೀವನ ಸಾಗಿಸುತ್ತಿದ್ದಾರೆ.</p>.<p>10ರಿಂದ 15 ವರ್ಷಗಳಿಂದ ವಾಸ ಮಾಡುತ್ತಿರುವ ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸೌಕರ್ಯ ಇಲ್ಲದೇ ನೀರಿನ ಟ್ಯಾಂಕ್ ಮೇಲೆ ಅವಲಂಭಿತರಾಗಿದ್ದಾರೆ. ಒಂದು ಟ್ಯಾಂಕರ್ ₹400ರಿಂದ 500 ಕೊಟ್ಟು ಖರೀದಿ ಮಾಡಬೇಕಾಗಿದೆ.</p>.<p>ಚರಂಡಿ ವ್ಯವಸ್ಥೆ ಇಲ್ಲದೇ ಬಡಾವಣೆಯಲ್ಲಿ ಮನೆಗಳಿಂದ ಬರುವ ಕೊಳಚೆ ನೀರನ್ನು ಮನೆಯ ಪಕ್ಕದ ಖಾಲಿ ನೀವೇಶನಗಳಿಗೆ ಹರಿಸಲಾಗುತ್ತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ.</p>.<p>ಬಡಾವಣೆಯಲ್ಲಿ ಸಮರ್ಪಕ ರಸ್ತೆ ಇಲ್ಲದೆ ಓಡಾಡುವುದೇ ದೊಡ್ಡ ಸವಾಲಾಗಿದೆ. ಮಳೆಗಾಲದಲ್ಲಿ ಇಲ್ಲಿನ ಜನರಿಗೆ ನರಕ ದರ್ಶನ. ದ್ವಿಚಕ್ರ ವಾಹನ ಸವಾರರು ಮಳೆಗಾಲದಲ್ಲಿ ಕೆಸರಲ್ಲಿ ಬೀಳುವುದು ಸಹಜವಾಗಿದೆ.</p>.<p>ಬೀದಿದೀಪ ಇಲ್ಲದ ಕಾರಣ ಕತ್ತಲಾಗುತ್ತಿದ್ದಂತೆ ಜನ ಮನೆಯಿಂದ ಹೊರಬರಲು ಹೆದರುತ್ತಾರೆ. ಜತೆಗೆ ಬಡಾವಣೆ ಕಗ್ಗತ್ತಲು ಕವಿದಿರುವುದರಿಂದ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಮನೆಗಳ ಅಂಗಳದಲ್ಲಿ ನಿಲ್ಲಿಸುವ ಸುಮಾರು ದ್ವಿಚಕ್ರ ವಾಹನಗಳು ಕಳ್ಳರ ಪಾಲಾಗಿದೆ.</p>.<p>ಇತ್ತಿಚೆಗೆ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ಸುಮಾರು ₹2ಲಕ್ಷದ ಎರಡು ಜಾನುವಾರುಗಳು ಕಳ್ಳತನ ಮಾಡಲಾಗಿದೆ. ಈ ಸಂಬಂಧ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಹಸು ಕಳೆದುಕೊಂಡ ರಾಮಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು</strong>: ಕುಡಿಯುವ ನೀರು, ರಸ್ತೆ, ಬೀದಿದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ನಾಗರಿಕ ಸಮಾಜದ ವಾಸಕ್ಕೆ ಬೇಕಾದ ಮೂಲ ಸೌಕರ್ಯ ಇಲ್ಲದೆ ಪಾರ್ತಿಬನ್ ಬಡಾವಣೆ ಜನ ಪರಾಡುತ್ತಿದ್ದಾರೆ.</p>.<p>ಪಟ್ಟಣದ 22–23ನೇ ವಾರ್ಡ್ನ ಸುಮಾರು 60 ರಿಂದ 70 ಮನೆ ಹೊಂದಿರುವ ಪಾರ್ತಿಬನ್ ಬಡವಾಣೆಯಲ್ಲಿ ಸ್ವಚ್ಛತೆ ಇಲ್ಲದೆ ಮನೆಗಳ ಬಳಿ ಗಿಡಗೆಂಟೆಗಳು ಅಳೆತ್ತರ ಬೆಳೆದು ಹಾವುಗಳ ಕಾಟದಿಂದ ಇಲ್ಲಿನ ನಿವಾಸಿಗಳು ಭಯದಿಂದ ಜೀವನ ಸಾಗಿಸುತ್ತಿದ್ದಾರೆ.</p>.<p>10ರಿಂದ 15 ವರ್ಷಗಳಿಂದ ವಾಸ ಮಾಡುತ್ತಿರುವ ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸೌಕರ್ಯ ಇಲ್ಲದೇ ನೀರಿನ ಟ್ಯಾಂಕ್ ಮೇಲೆ ಅವಲಂಭಿತರಾಗಿದ್ದಾರೆ. ಒಂದು ಟ್ಯಾಂಕರ್ ₹400ರಿಂದ 500 ಕೊಟ್ಟು ಖರೀದಿ ಮಾಡಬೇಕಾಗಿದೆ.</p>.<p>ಚರಂಡಿ ವ್ಯವಸ್ಥೆ ಇಲ್ಲದೇ ಬಡಾವಣೆಯಲ್ಲಿ ಮನೆಗಳಿಂದ ಬರುವ ಕೊಳಚೆ ನೀರನ್ನು ಮನೆಯ ಪಕ್ಕದ ಖಾಲಿ ನೀವೇಶನಗಳಿಗೆ ಹರಿಸಲಾಗುತ್ತಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದೆ.</p>.<p>ಬಡಾವಣೆಯಲ್ಲಿ ಸಮರ್ಪಕ ರಸ್ತೆ ಇಲ್ಲದೆ ಓಡಾಡುವುದೇ ದೊಡ್ಡ ಸವಾಲಾಗಿದೆ. ಮಳೆಗಾಲದಲ್ಲಿ ಇಲ್ಲಿನ ಜನರಿಗೆ ನರಕ ದರ್ಶನ. ದ್ವಿಚಕ್ರ ವಾಹನ ಸವಾರರು ಮಳೆಗಾಲದಲ್ಲಿ ಕೆಸರಲ್ಲಿ ಬೀಳುವುದು ಸಹಜವಾಗಿದೆ.</p>.<p>ಬೀದಿದೀಪ ಇಲ್ಲದ ಕಾರಣ ಕತ್ತಲಾಗುತ್ತಿದ್ದಂತೆ ಜನ ಮನೆಯಿಂದ ಹೊರಬರಲು ಹೆದರುತ್ತಾರೆ. ಜತೆಗೆ ಬಡಾವಣೆ ಕಗ್ಗತ್ತಲು ಕವಿದಿರುವುದರಿಂದ ಕಳ್ಳಕಾಕರ ಕಾಟ ಹೆಚ್ಚಾಗಿದೆ. ಮನೆಗಳ ಅಂಗಳದಲ್ಲಿ ನಿಲ್ಲಿಸುವ ಸುಮಾರು ದ್ವಿಚಕ್ರ ವಾಹನಗಳು ಕಳ್ಳರ ಪಾಲಾಗಿದೆ.</p>.<p>ಇತ್ತಿಚೆಗೆ ಮನೆಯ ಅಂಗಳದಲ್ಲಿ ಕಟ್ಟಿಹಾಕಿದ್ದ ಸುಮಾರು ₹2ಲಕ್ಷದ ಎರಡು ಜಾನುವಾರುಗಳು ಕಳ್ಳತನ ಮಾಡಲಾಗಿದೆ. ಈ ಸಂಬಂಧ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಹಸು ಕಳೆದುಕೊಂಡ ರಾಮಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>