<p><strong>ಆನೇಕಲ್ : </strong>ಪಟ್ಟಣದ ಏಕೈಕ ಪಾರ್ಕ್ ರಾಜ್ಕುಮಾರ್ ಉದ್ಯಾನದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಮಕ್ಕಳು ಆಟವಾಡಲು ಹಾಗೂ ಹಿರಿಯರು ವಾಯುವಿಹಾರ ಮಾಡಲು ಸಮಸ್ಯೆಯಾಗಿದೆ.</p>.<p>ಭಾರಿ ಮಳೆಯಿಂದ ನೀರು ಉದ್ಯಾನದಲ್ಲಿ ಹರಿದು, ಉದ್ಯಾನದ ತುಂಬಾ ನೀರು ತುಂಬಿದೆ. ಇದರಿಂದಾಗಿ ಪ್ರತಿ ದಿನ ಇಲ್ಲಿ ಬರುತ್ತಿದ್ದ ಸಾರ್ವಜನಿಕರಿಗೆ ಮತ್ತು ಮಕ್ಕಳು ಒಂದು ವಾರದಿಂದ ಇತ್ತ ಬಂದಿಲ್ಲ.</p>.<p>ಮಳೆ ನೀರನ್ನು ಉದ್ಯಾನದಿಂದ ಹೊರ ಹಾಕಿ, ಉದ್ಯಾನ ಬಳಕೆ ಮುಕ್ತಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<p>ಉದ್ಯಾನ ಸುಸಜ್ಜಿತಗೊಳಿಸಿ, ಮಳೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ವಾಯುವಿಹಾರಿ ಚಿಕ್ಕಣ್ಣ ಆಗ್ರಹಿಸಿದ್ದಾರೆ.</p>.<p>ಮಳೆಯಿಂದಾಗಿ ಉದ್ಯಾನದಲ್ಲಿ ನೀರು ತುಂಬಿದೆ. ಈ ಬಗ್ಗೆ ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಪುರಸಭೆ ಸದಸ್ಯ ಎನ್.ಎಸ್.ಪದ್ಮನಾಭ ತಿಳಿಸಿದ್ದಾರೆ.</p>.<div><blockquote>ಮಳೆ ಬಂದಾಗ ಪದೇ ಪದೇ ಉದ್ಯಾನದಲ್ಲಿ ನೀರು ನಿಲ್ಲುತ್ತಿದೆ. ಕೆರೆಯ ಅಂಗಳದಲ್ಲಿ ಉದ್ಯಾನವನ್ನು ನಿರ್ಮಿಸಿರುವುದರಿಂದ ಈ ಸಮಸ್ಯೆಯಿದೆ. ಉದ್ಯಾನದಲ್ಲಿ ಹರಿಯುವ ಮಳೆಯ ನೀರು ಸಮೀಪದ ಕಲ್ಯಾಣಿಗೆ ಹರಿಯುವಂತೆ ಮಾಡಲು ಚಿಂತನೆ ಮಾಡಲಾಗಿದೆ</blockquote><span class="attribution">- ರಾಜೇಶ್, ಪುರಸಭೆ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್ : </strong>ಪಟ್ಟಣದ ಏಕೈಕ ಪಾರ್ಕ್ ರಾಜ್ಕುಮಾರ್ ಉದ್ಯಾನದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಮಕ್ಕಳು ಆಟವಾಡಲು ಹಾಗೂ ಹಿರಿಯರು ವಾಯುವಿಹಾರ ಮಾಡಲು ಸಮಸ್ಯೆಯಾಗಿದೆ.</p>.<p>ಭಾರಿ ಮಳೆಯಿಂದ ನೀರು ಉದ್ಯಾನದಲ್ಲಿ ಹರಿದು, ಉದ್ಯಾನದ ತುಂಬಾ ನೀರು ತುಂಬಿದೆ. ಇದರಿಂದಾಗಿ ಪ್ರತಿ ದಿನ ಇಲ್ಲಿ ಬರುತ್ತಿದ್ದ ಸಾರ್ವಜನಿಕರಿಗೆ ಮತ್ತು ಮಕ್ಕಳು ಒಂದು ವಾರದಿಂದ ಇತ್ತ ಬಂದಿಲ್ಲ.</p>.<p>ಮಳೆ ನೀರನ್ನು ಉದ್ಯಾನದಿಂದ ಹೊರ ಹಾಕಿ, ಉದ್ಯಾನ ಬಳಕೆ ಮುಕ್ತಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.</p>.<p>ಉದ್ಯಾನ ಸುಸಜ್ಜಿತಗೊಳಿಸಿ, ಮಳೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ವಾಯುವಿಹಾರಿ ಚಿಕ್ಕಣ್ಣ ಆಗ್ರಹಿಸಿದ್ದಾರೆ.</p>.<p>ಮಳೆಯಿಂದಾಗಿ ಉದ್ಯಾನದಲ್ಲಿ ನೀರು ತುಂಬಿದೆ. ಈ ಬಗ್ಗೆ ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಪುರಸಭೆ ಸದಸ್ಯ ಎನ್.ಎಸ್.ಪದ್ಮನಾಭ ತಿಳಿಸಿದ್ದಾರೆ.</p>.<div><blockquote>ಮಳೆ ಬಂದಾಗ ಪದೇ ಪದೇ ಉದ್ಯಾನದಲ್ಲಿ ನೀರು ನಿಲ್ಲುತ್ತಿದೆ. ಕೆರೆಯ ಅಂಗಳದಲ್ಲಿ ಉದ್ಯಾನವನ್ನು ನಿರ್ಮಿಸಿರುವುದರಿಂದ ಈ ಸಮಸ್ಯೆಯಿದೆ. ಉದ್ಯಾನದಲ್ಲಿ ಹರಿಯುವ ಮಳೆಯ ನೀರು ಸಮೀಪದ ಕಲ್ಯಾಣಿಗೆ ಹರಿಯುವಂತೆ ಮಾಡಲು ಚಿಂತನೆ ಮಾಡಲಾಗಿದೆ</blockquote><span class="attribution">- ರಾಜೇಶ್, ಪುರಸಭೆ ಮುಖ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>