ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕದಲ್ಲಿನ ಎರೆಹುಳು ಗೊಬ್ಬರ ತಯಾರಿಕ ಘಟಕ
ಅಂಕಿ ಅಂಶ 31 ನಗರಸಭೆ ವಾರ್ಡ್ಗಳ ಸಂಖ್ಯೆ 1.25 ಲಕ್ಷ ಜನಸಂಖ್ಯೆ 35–40 ಟನ್ ನಿತ್ಯ ಉತ್ಪಾದನೆ ಆಗುವ ಕಸ 205 ಪೌರಕಾರ್ಮಿಕರು
ಕಸದ ಸಮಸ್ಯೆಗೆ ಪರಿಹಾರ ಕಸವನ್ನು ರಸವನ್ನಾಗಿ ಪರಿವರ್ತಿಸಿ ಕೃಷಿ ಬಳಕೆಗೆ ಯೋಗ್ಯವಾಗುವಂತೆ ಮಾಡಲು ಮೂಲದಲ್ಲೇ ಕಸ ವಿಂಗಡಣೆ ಮಾಡಿ ಕೊಡುವುದೊಂದೇ ಈಗ ಸದ್ಯಕ್ಕೆ ನಮ್ಮ ಮುಂದೆ ಇರುವ ಏಕೈಕ ಮಾರ್ಗವಾಗಿದೆ
ದಿವಾಕರ್ ನಾಗ್ ಪರಿಸರವಾದಿ
ಬಳಕೆ ಆಗದ 35 ಟನ್ ಕಸ
ವಡ್ಡರಪಾಳ್ಯ ಗ್ರಾಮದಲ್ಲಿ ಘನತ್ಯಾಜ್ಯ ವಸ್ತು ಸಂಸ್ಕರಣ ಘಟಕದಲ್ಲಿ ಪ್ರತಿ ನಿತ್ಯ 6 ಟನ್ ಗೊಬ್ಬರ ಮತ್ತು ಸುಮಾರು ಮುಕ್ಕಾಲು ಟನ್ ಎರೆ ಹುಳು ಗೊಬ್ಬರ ತಯಾರಿಸಲಾಗುತ್ತಿದೆ. ಆದರೆ ಇದಕ್ಕೆ ಬಳಕೆಯಾಗದೆ ನಿತ್ಯ 35 ಸಾವಿರ ಟನ್ ಕಸ ಉಳಿಯುತ್ತಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಇಲ್ಲಿಂದ ಹೊರಗೆ ಸಾಗಿಸಿ ಗೊಬ್ಬರವಾಗಿ ಪರಿವರ್ತಿಸಲು ಖಾಸಗಿ ಕಂಪನಿಯೊಂದಕ್ಕೆ ₹3 ಕೋಟಿಗಳಿಗೆ ಟಂಡರ್ ನೀಡಲಾಗಿದೆ. ಆದರೆ ಇಷ್ಟೊಂದು ಬೃಹತ್ ಪ್ಲಾಸ್ಟಿಕ್ ಯುಕ್ತ ಕಸದ ರಾಶಿಯನ್ನು ತೆರವು ಮಾಡುವುದು ಹೇಗೆ ಎನ್ನುವುದಕ್ಕೆ ಟೆಂಡರ್ ಪಡೆದವರಿಗು ಉತ್ತರ ದೊರೆಯದೆ ಇನ್ನೂ ಹಾಗೆಯೇ ರಾಶಿ ಉಳಿದಿದೆ ಎನ್ನುತ್ತಾರೆ ಪೌರಕಾರ್ಮಿಕರು.