<p><strong>ವಿಜಯಪುರ (ದೇವನಹಳ್ಳಿ):</strong> ಕಳ್ಳರು ಸೋಮವಾರ ಮುಂಜಾನೆ ಇಲ್ಲಿಯ ಗುರಪ್ಪನಮಠದ ಓಂಕಾರೇಶ್ವರ ದೇವಾಲಯದಲ್ಲಿ ನಾಲ್ಕು ಹುಂಡಿಗಳಿಗೆ ಕನ್ನ ಹಾಕಿದ್ದಾರೆ.</p>.<p>ದೇವಾಲಯದ ಮೇಲೆ ಅಳವಡಿಸಿದ್ದ ತಗಡಿನ ಶೀಟ್ ಬೋಲ್ಟ್ ಬಿಚ್ಚಿ ದೇವಾಲಯದೊಳಗೆ ಇಳಿದ ಕಳ್ಳರು ದೇವಾಲಯದ ಮುಖ್ಯದ್ವಾರಕ್ಕೆ ಒಳಗಿನಿಂದ ಚಿಲಕ ಹಾಕಿದ್ದಾರೆ. ನಂತರ ದೇವಾಲಯದಲ್ಲಿದ್ದ ನಾಲ್ಕು ಹುಂಡಿಗಳ ಬೀಗ ಮುರಿದು ಹಣ ಕದ್ದು ಮೇಲ್ಛಾವಣಿಯ ಮೂಲಕ ಪರಾರಿಯಾಗಿದ್ದಾರೆ.</p><p>ಕಳೆದ ನಾಲ್ಕು ತಿಂಗಳಿನಿಂದ ಹುಂಡಿ ಕಾಣಿಕೆಯನ್ನು ಎಣಿಕೆ ಮಾಡಿರಲಿಲ್ಲ. ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿರಬಹುದೆಂದು ಆಡಳಿತ ಮಂಡಳಿಯವರು ಅಂದಾಜಿಸಿದ್ದಾರೆ.</p><p>ಸಂಕ್ರಾಂತಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲು ಭಾನುವಾರ ತಂದು ದೇವಾಲಯದಲ್ಲಿ ಇಟ್ಟಿದ್ದ ₹15 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಕಳ್ಳರು ಮುಟ್ಟಿಲ್ಲ.</p><p>ದೇವಾಲಯದ ಗರ್ಭಗುಡಿಯಲ್ಲಿರುವ ಪಾರ್ವತಿ ಮೂರ್ತಿಯ ಆಭರಣ ತೆಗೆಯುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ದೇವಿಗೆ ಹಾಕಿದ್ದ ಗಾಜಿನ ಬಳೆಗಳು ಒಡೆದಿವೆ.</p><p>ಸೋಮವಾರ ಬೆಳಗಿನ ಜಾವ ಅರ್ಚಕರ ಕುಟುಂಬದವರು ದೇವಾಲಯ ಶುಚಿಗೊಳಿಸಲು ಬಂದಾಗ ದೇವಾಲಯದ ಬೀಗ ತೆಗೆದು ಬಾಗಿಲು ತಳ್ಳುವ ಪ್ರಯತ್ನ ಮಾಡಿದ್ದಾರೆ. ಹಿಂದಿನಿಂದ ಚಿಲಕ ಹಾಕಿದ್ದರಿಂದ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ದೇವಾಲಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p><p>ಸ್ಥಳಕ್ಕೆ ಬಂದ ಪೊಲೀಸರು ಮೇಲ್ಛಾವಣಿಯ ಮೂಲಕ ಸ್ಥಳೀಯರೊಬ್ಬರನ್ನು ಇಳಿಸಿ ಒಳಗಿನಿಂದ ಹಾಕಿದ್ದ ಚಿಲಕ ತೆಗೆಸಿ ಬಾಗಿಲು ತೆರೆದು ಒಳ ಹೋಗಿ ನೋಡಿದಾಗ ಹುಂಡಿ ಕಳ್ಳತನ ಗೊತ್ತಾಗಿದೆ. ದೇವಾಲಯದ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ (ದೇವನಹಳ್ಳಿ):</strong> ಕಳ್ಳರು ಸೋಮವಾರ ಮುಂಜಾನೆ ಇಲ್ಲಿಯ ಗುರಪ್ಪನಮಠದ ಓಂಕಾರೇಶ್ವರ ದೇವಾಲಯದಲ್ಲಿ ನಾಲ್ಕು ಹುಂಡಿಗಳಿಗೆ ಕನ್ನ ಹಾಕಿದ್ದಾರೆ.</p>.<p>ದೇವಾಲಯದ ಮೇಲೆ ಅಳವಡಿಸಿದ್ದ ತಗಡಿನ ಶೀಟ್ ಬೋಲ್ಟ್ ಬಿಚ್ಚಿ ದೇವಾಲಯದೊಳಗೆ ಇಳಿದ ಕಳ್ಳರು ದೇವಾಲಯದ ಮುಖ್ಯದ್ವಾರಕ್ಕೆ ಒಳಗಿನಿಂದ ಚಿಲಕ ಹಾಕಿದ್ದಾರೆ. ನಂತರ ದೇವಾಲಯದಲ್ಲಿದ್ದ ನಾಲ್ಕು ಹುಂಡಿಗಳ ಬೀಗ ಮುರಿದು ಹಣ ಕದ್ದು ಮೇಲ್ಛಾವಣಿಯ ಮೂಲಕ ಪರಾರಿಯಾಗಿದ್ದಾರೆ.</p><p>ಕಳೆದ ನಾಲ್ಕು ತಿಂಗಳಿನಿಂದ ಹುಂಡಿ ಕಾಣಿಕೆಯನ್ನು ಎಣಿಕೆ ಮಾಡಿರಲಿಲ್ಲ. ಕಾರ್ತಿಕ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಹೋಗಿದ್ದಾರೆ. ಲಕ್ಷಾಂತರ ರೂಪಾಯಿ ಹಣ ಸಂಗ್ರಹವಾಗಿರಬಹುದೆಂದು ಆಡಳಿತ ಮಂಡಳಿಯವರು ಅಂದಾಜಿಸಿದ್ದಾರೆ.</p><p>ಸಂಕ್ರಾಂತಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲು ಭಾನುವಾರ ತಂದು ದೇವಾಲಯದಲ್ಲಿ ಇಟ್ಟಿದ್ದ ₹15 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಒಡವೆಗಳನ್ನು ಕಳ್ಳರು ಮುಟ್ಟಿಲ್ಲ.</p><p>ದೇವಾಲಯದ ಗರ್ಭಗುಡಿಯಲ್ಲಿರುವ ಪಾರ್ವತಿ ಮೂರ್ತಿಯ ಆಭರಣ ತೆಗೆಯುವ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ದೇವಿಗೆ ಹಾಕಿದ್ದ ಗಾಜಿನ ಬಳೆಗಳು ಒಡೆದಿವೆ.</p><p>ಸೋಮವಾರ ಬೆಳಗಿನ ಜಾವ ಅರ್ಚಕರ ಕುಟುಂಬದವರು ದೇವಾಲಯ ಶುಚಿಗೊಳಿಸಲು ಬಂದಾಗ ದೇವಾಲಯದ ಬೀಗ ತೆಗೆದು ಬಾಗಿಲು ತಳ್ಳುವ ಪ್ರಯತ್ನ ಮಾಡಿದ್ದಾರೆ. ಹಿಂದಿನಿಂದ ಚಿಲಕ ಹಾಕಿದ್ದರಿಂದ ಬಾಗಿಲು ತೆರೆಯಲು ಸಾಧ್ಯವಾಗಿಲ್ಲ. ದೇವಾಲಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.</p><p>ಸ್ಥಳಕ್ಕೆ ಬಂದ ಪೊಲೀಸರು ಮೇಲ್ಛಾವಣಿಯ ಮೂಲಕ ಸ್ಥಳೀಯರೊಬ್ಬರನ್ನು ಇಳಿಸಿ ಒಳಗಿನಿಂದ ಹಾಕಿದ್ದ ಚಿಲಕ ತೆಗೆಸಿ ಬಾಗಿಲು ತೆರೆದು ಒಳ ಹೋಗಿ ನೋಡಿದಾಗ ಹುಂಡಿ ಕಳ್ಳತನ ಗೊತ್ತಾಗಿದೆ. ದೇವಾಲಯದ ಆಡಳಿತ ಮಂಡಳಿಯವರು ಪೊಲೀಸರಿಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>