ಮಕ್ಕಳನ್ನು ಬೇರೆ ಕಡೆಗೆ ದಾಖಲಿಸಬೇಡಿ ಶಾಲೆ ದುರಸ್ತಿಗೆ ಎಲ್ಲಾ ಸಿದ್ಧತೆಗಳು ಮಾಡಿದ್ದೇವೆ ಎಂದು ಪೋಷಕರಿಗೆ ಮನವೊಲಿಸಿದರೂ ಅವರು ಕೇಳಲಿಲ್ಲ. ತಮ್ಮ ಮಕ್ಕಳ ಟಿ.ಸಿ ಪಡೆದುಕೊಂಡರು. ಈಗ ಇಬ್ಬರು ಮಕ್ಕಳು ಮಾತ್ರ ಇದ್ದಾರೆ.
–ಮುನಿರೆಡ್ಡಿ, ಶಾಲೆಯ ಮುಖ್ಯಶಿಕ್ಷಕ
ಬಿರುಕು ಬಿಟ್ಟ ಶಾಲೆ ಕಟ್ಟಡದ ಗೋಡೆ
ಇರುವ ಕೊಠಡಿಯಲ್ಲಿ ಪಾಠ ಮಕ್ಕಳ ಶಾಲಾ ವರ್ಗಾವಣೆ ಪ್ರಮಾಣಪತ್ರ ಕೊಡುವ ಮೊದಲು ನಮ್ಮನ್ನು ಸಂಪರ್ಕಿಸಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆ ಶಾಲೆಗೆ ಭೇಟಿ ನೀಡಿದ್ದೇವು. ಮುಖ್ಯಶಿಕ್ಷಕರಿಗೆ ನೊಟೀಸ್ ಜಾರಿಗೊಳಿಸಲಾಗಿದೆ. ಬೇರೆ ಶಾಲೆಗೆ ಹೋಗಿರುವ ಮಕ್ಕಳನ್ನು ಪುನಃ ದಾಖಲು ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಪೋಷಕರನ್ನೂ ಮನವೊಲಿಸುವ ಕಾರ್ಯಮಾಡುತ್ತಿದ್ದೇವೆ. ಇರುವ ಕೊಠಡಿಯಲ್ಲೆ ಪಾಠ ಪ್ರವಚನ ಮಾಡಬೇಕು ಬೇರೆ ದಾರಿಯಿಲ್ಲ.