<p><strong>ಆನೇಕಲ್: ಹತ್ತು ದಿನಗಳ ಒಳಗೆ ಮೂರು ಜನರನ್ನು ಕೊಂದ </strong>ಕಾಡಾನೆ ಮಕ್ನಾ (ದಂತವಿಲ್ಲದ ಗಂಡಾನೆ) ಸೆರೆ ಹಿಡಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಪಳಗಿಸುತ್ತಿದ್ದಾರೆ.</p>.<p>ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪುಂಡಾನೆ ಮಂಗಳವಾರ ಇಡೀ ದಿನವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಸೀಗೆಕಟ್ಟೆಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾಗಿರುವ ಕ್ರಾಲ್ನಲ್ಲಿ ಕಳೆಯಿತು. </p>.<p>ಕ್ರಾಲ್ನಿಂದ ಹೊರ ಬರಲು ಮಕ್ನಾ ದಿಮ್ಮಿಗಳನ್ನು ಒದೆಯುವುದು, ಮೇಲೇರಲು ಪ್ರಯತ್ನಿಸುತ್ತಿದೆ. ನಿಂತಲ್ಲಿ ನಿಲ್ಲದೇ ಅಸಹನೆಯಿಂದ ಅತ್ತಿಂದಿತ್ತ ಓಡಾಡುತ್ತಿದೆ. </p>.<p>ಗೋಣಿ, ಬಸ್ರಿ ಮರದ ರೆಂಬೆ, ಎಲೆ ಮತ್ತು ಬಿದಿರನ್ನು ಆಹಾರವಾಗಿ ನೀಡಲಾಗುತ್ತಿದೆ. ಆನೆ ಪಳಗಿಸಲು ಒಬ್ಬ ಮಾವುತ ಮತ್ತು ಕಾವಡಿ ನಿಯೋಜಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸ್ವಚ್ಛತೆಗೆ ಗಮನ ಹರಿಸಲಾಗಿದೆ. ಬೆಳಗ್ಗೆ ಬಿಸಿ ನೀರು ಹಾಕಿ ಶಾಖ ನೀಡಲಾಗುತ್ತಿದೆ.</p>.<p>ಸಾಮಾನ್ಯವಾಗಿ ಆನೆ ಪಳಗಿಸಲು ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು. ಒಂದು ತಿಂಗಳು ದುಬಾರೆಯಿಂದ ಬಂದಿರುವ ಪರಿಣಿತರು ತರಬೇತಿ ನೀಡಲಿದ್ದಾರೆ. ನಂತರ ಆನೆ ಪಳಗಿಸಿ ಜೈವಿಕ ಉದ್ಯಾನದ ಆನೆಗಳ ಜೊತೆಗೂಡಿಸಬೇಕಾಗುತ್ತದೆ. ಇದೊಂದು ಸವಾಲಿನ ಕೆಲಸವಾಗಿದೆ. ಅತ್ಯಂತ ಎಚ್ಚರಿಕೆಯಿಂದ ಕಾಡಾನೆ ಪಳಗಿಸಬೇಕಾಗುತ್ತದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮತ್ತೊಂದು ಪುಂಡಾನೆ ‘ಕೋಳಿ ಒಂಟೆ’ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಇಡೀ ದಿನ ಗಸ್ತು ನಡೆಸಿದರೂ ಅದರ ಸುಳಿವು ಸಿಗಲಿಲ್ಲ. ಹಾಗಾಗಿ ಕಾರ್ಯಾಚರಣೆಗೆ ದಿನ ನಿಗದಿಯಾಗಿಲ್ಲ. ಆನೆ ಇರುವ ಜಾಗ ಪತ್ತೆಯಾಗುತ್ತಿದ್ದಂತೆಯೇ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಎಂಟು ಕುಮ್ಕಿ (ತರಬೇತಿ ಪಡೆದ ಪಳಗಿದ ಆನೆ) ಆನೆಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಮುಂದಿನ ಕಾರ್ಯಾಚರಣೆಗಾಗಿ ಕಾಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: ಹತ್ತು ದಿನಗಳ ಒಳಗೆ ಮೂರು ಜನರನ್ನು ಕೊಂದ </strong>ಕಾಡಾನೆ ಮಕ್ನಾ (ದಂತವಿಲ್ಲದ ಗಂಡಾನೆ) ಸೆರೆ ಹಿಡಿದಿರುವ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಪಳಗಿಸುತ್ತಿದ್ದಾರೆ.</p>.<p>ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಪುಂಡಾನೆ ಮಂಗಳವಾರ ಇಡೀ ದಿನವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನದ ಸೀಗೆಕಟ್ಟೆಯಲ್ಲಿ ಮರದ ದಿಮ್ಮಿಗಳಿಂದ ನಿರ್ಮಿಸಲಾಗಿರುವ ಕ್ರಾಲ್ನಲ್ಲಿ ಕಳೆಯಿತು. </p>.<p>ಕ್ರಾಲ್ನಿಂದ ಹೊರ ಬರಲು ಮಕ್ನಾ ದಿಮ್ಮಿಗಳನ್ನು ಒದೆಯುವುದು, ಮೇಲೇರಲು ಪ್ರಯತ್ನಿಸುತ್ತಿದೆ. ನಿಂತಲ್ಲಿ ನಿಲ್ಲದೇ ಅಸಹನೆಯಿಂದ ಅತ್ತಿಂದಿತ್ತ ಓಡಾಡುತ್ತಿದೆ. </p>.<p>ಗೋಣಿ, ಬಸ್ರಿ ಮರದ ರೆಂಬೆ, ಎಲೆ ಮತ್ತು ಬಿದಿರನ್ನು ಆಹಾರವಾಗಿ ನೀಡಲಾಗುತ್ತಿದೆ. ಆನೆ ಪಳಗಿಸಲು ಒಬ್ಬ ಮಾವುತ ಮತ್ತು ಕಾವಡಿ ನಿಯೋಜಿಸಲಾಗಿದೆ. ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸ್ವಚ್ಛತೆಗೆ ಗಮನ ಹರಿಸಲಾಗಿದೆ. ಬೆಳಗ್ಗೆ ಬಿಸಿ ನೀರು ಹಾಕಿ ಶಾಖ ನೀಡಲಾಗುತ್ತಿದೆ.</p>.<p>ಸಾಮಾನ್ಯವಾಗಿ ಆನೆ ಪಳಗಿಸಲು ಮೂರರಿಂದ ನಾಲ್ಕು ತಿಂಗಳು ಬೇಕಾಗಬಹುದು. ಒಂದು ತಿಂಗಳು ದುಬಾರೆಯಿಂದ ಬಂದಿರುವ ಪರಿಣಿತರು ತರಬೇತಿ ನೀಡಲಿದ್ದಾರೆ. ನಂತರ ಆನೆ ಪಳಗಿಸಿ ಜೈವಿಕ ಉದ್ಯಾನದ ಆನೆಗಳ ಜೊತೆಗೂಡಿಸಬೇಕಾಗುತ್ತದೆ. ಇದೊಂದು ಸವಾಲಿನ ಕೆಲಸವಾಗಿದೆ. ಅತ್ಯಂತ ಎಚ್ಚರಿಕೆಯಿಂದ ಕಾಡಾನೆ ಪಳಗಿಸಬೇಕಾಗುತ್ತದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಮತ್ತೊಂದು ಪುಂಡಾನೆ ‘ಕೋಳಿ ಒಂಟೆ’ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ಇಡೀ ದಿನ ಗಸ್ತು ನಡೆಸಿದರೂ ಅದರ ಸುಳಿವು ಸಿಗಲಿಲ್ಲ. ಹಾಗಾಗಿ ಕಾರ್ಯಾಚರಣೆಗೆ ದಿನ ನಿಗದಿಯಾಗಿಲ್ಲ. ಆನೆ ಇರುವ ಜಾಗ ಪತ್ತೆಯಾಗುತ್ತಿದ್ದಂತೆಯೇ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಬಂದಿರುವ ಎಂಟು ಕುಮ್ಕಿ (ತರಬೇತಿ ಪಡೆದ ಪಳಗಿದ ಆನೆ) ಆನೆಗಳು ಮತ್ತು ಸಿಬ್ಬಂದಿ ಬನ್ನೇರುಘಟ್ಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಮುಂದಿನ ಕಾರ್ಯಾಚರಣೆಗಾಗಿ ಕಾಯುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>