<p><strong>ಪಾಶ್ಚಾಪುರ (ಬೆಳಗಾವಿ ಜಿಲ್ಲೆ):</strong> ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಮಂಗಳವಾರ ಮೊಹರಂ ಹಬ್ಬದ ಮೆರವಣಿಗೆ ವೇಳೆ ಭಕ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.</p><p>ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂ ಭಕ್ತರು ಐದು ಡೋಲಿಗಳನ್ನು ಹೊತ್ತು ಸಾಗಿದ್ದರು. ಇಕ್ಕಟ್ಟಾದ ರಸ್ತೆಗಳಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಐದೂ ಡೋಲಿಗಳು ಒಂದೇ ಕಡೆ ಸೇರಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.</p><p>ಗುಂಪಾಗಿ ಸೇರಿದ ಯುವಜನರು ಬೇಗ ಮುಂದೆ ಸಾಗಲಿಲ್ಲ. ಈ ವೇಳೆ ಪೊಲೀಸರು ಜನರನ್ನು ಮುಂದಕ್ಕೆ ತಳ್ಳತೊಡಗಿದರು. ಆಗ ಯುವಕರ ಗುಂಪು ಪೊಲೀಸರನ್ನೇ ಹಿಂದಕ್ಕೆ ತಳ್ಳಿತು. ಕೋಪಗೊಂಡ ಪೊಲೀಸರು ಲಾಠಿಚಾರ್ಜ್ ಮಾಡಿ ಯುವಕರನ್ನು ಓಡಿಸಿದರು ಎಂದು ಮೂಲಗಳು ತಿಳಿಸಿವೆ.</p><p>‘ಕರ್ತವ್ಯದಲ್ಲಿ ನಿರತ ಕಾನ್ಸ್ಟೆಬಲ್ ಮೇಲೆ ಯುವಕರು ದಾಳಿ ಮಾಡಿದ್ದಾರೆ. ಅವರನ್ನು ಓಡಿಸಲು ಕಾನ್ಸ್ಟೆಬಲ್ ಎರಡೇಟು ಹೊಡೆದಿದ್ದಾರೆ. ಇದು ಲಾಠಿ ಚಾರ್ಜ್ ಅಲ್ಲ’ ಎಂದು ಹುಕ್ಕೇರಿ ಇನ್ಸ್ಪೆಕ್ಟರ್ ರಮೇಶ ಛಾಯಾಗೋಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p><p>ನಂತರ ಹಬ್ಬ ಸಾಂಗವಾಗಿ ನೆರವೇರಿದೆ. ಹೆಚ್ಚಿನ ಭದ್ರತೆಗಾಗಿ ಗ್ರಾಮದಲ್ಲಿ ಎರಡು ಡಿ.ಆರ್. ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಶ್ಚಾಪುರ (ಬೆಳಗಾವಿ ಜಿಲ್ಲೆ):</strong> ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಮಂಗಳವಾರ ಮೊಹರಂ ಹಬ್ಬದ ಮೆರವಣಿಗೆ ವೇಳೆ ಭಕ್ತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.</p><p>ಗ್ರಾಮದ ಪ್ರಮುಖ ಬೀದಿಗಳಲ್ಲಿ ಮುಸ್ಲಿಂ ಭಕ್ತರು ಐದು ಡೋಲಿಗಳನ್ನು ಹೊತ್ತು ಸಾಗಿದ್ದರು. ಇಕ್ಕಟ್ಟಾದ ರಸ್ತೆಗಳಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ನೂಕು ನುಗ್ಗಲು ಉಂಟಾಯಿತು. ಐದೂ ಡೋಲಿಗಳು ಒಂದೇ ಕಡೆ ಸೇರಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು.</p><p>ಗುಂಪಾಗಿ ಸೇರಿದ ಯುವಜನರು ಬೇಗ ಮುಂದೆ ಸಾಗಲಿಲ್ಲ. ಈ ವೇಳೆ ಪೊಲೀಸರು ಜನರನ್ನು ಮುಂದಕ್ಕೆ ತಳ್ಳತೊಡಗಿದರು. ಆಗ ಯುವಕರ ಗುಂಪು ಪೊಲೀಸರನ್ನೇ ಹಿಂದಕ್ಕೆ ತಳ್ಳಿತು. ಕೋಪಗೊಂಡ ಪೊಲೀಸರು ಲಾಠಿಚಾರ್ಜ್ ಮಾಡಿ ಯುವಕರನ್ನು ಓಡಿಸಿದರು ಎಂದು ಮೂಲಗಳು ತಿಳಿಸಿವೆ.</p><p>‘ಕರ್ತವ್ಯದಲ್ಲಿ ನಿರತ ಕಾನ್ಸ್ಟೆಬಲ್ ಮೇಲೆ ಯುವಕರು ದಾಳಿ ಮಾಡಿದ್ದಾರೆ. ಅವರನ್ನು ಓಡಿಸಲು ಕಾನ್ಸ್ಟೆಬಲ್ ಎರಡೇಟು ಹೊಡೆದಿದ್ದಾರೆ. ಇದು ಲಾಠಿ ಚಾರ್ಜ್ ಅಲ್ಲ’ ಎಂದು ಹುಕ್ಕೇರಿ ಇನ್ಸ್ಪೆಕ್ಟರ್ ರಮೇಶ ಛಾಯಾಗೋಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p><p>ನಂತರ ಹಬ್ಬ ಸಾಂಗವಾಗಿ ನೆರವೇರಿದೆ. ಹೆಚ್ಚಿನ ಭದ್ರತೆಗಾಗಿ ಗ್ರಾಮದಲ್ಲಿ ಎರಡು ಡಿ.ಆರ್. ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>