<p><strong>ಚನ್ನಮ್ಮನ ಕಿತ್ತೂರು</strong>: ಊರಿನ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಥಳಕು. ನಡುವೆ ಮಾತ್ರ ಕೊಳಕು...</p>.<p>ತಾಲ್ಲೂಕಿನ ದೇವಗಾಂವ ಗ್ರಾಮದಲ್ಲಿ ಲೋಕೋಪಯೋಗಿ ಕೈಗೊಂಡ ರಸ್ತೆ ನಿರ್ಮಾಣ ಕಾಮಗಾರಿಯ ನೋಟವಿದು.</p>.<p>‘ನಡುವೆ ರಸ್ತೆ ಕಾಮಗಾರಿ ಮಾಡದೇ ಹಾಗೇ ಬಿಟ್ಟ ಪರಿಣಾಮ, ಊರಲ್ಲಿ ವಾಹನ ಓಡಿದರೆ ಮನೆ ಎತ್ತರದವರೆಗೆ ದೂಳು ಹಾರುತ್ತಿದೆ. ಈ ದೂಳಿನಿಂದ ನಮಗೂ ಸಾಕಾಗಿ ಹೋಗಿದೆ’ ಎನ್ನುತ್ತಾರೆ ದೇವಗಾಂವ, ಶಿರಗಾಪುರ ಮತ್ತು ಹೊಸೂರ ಗ್ರಾಮಸ್ಥರು.</p>.<p>‘ಎರಡು ವರ್ಷಗಳ ಹಿಂದೆ ಕಾಮಗಾರಿ ಮಂಜೂರಾಗಿದೆ. ಆದರೆ, ಕಿತ್ತೂರು-ಬೀಡಿ ಮುಖ್ಯರಸ್ತೆ ಕೂಡುವವರೆಗೆ ಊರಿನ ಮೊದಲು ಹಾಗೂ ಊರು ಮುಗಿಯವವರೆಗಿನ ರಸ್ತೆಗೆ ಮಾತ್ರ ಡಾಂಬರು ಮೆತ್ತಲಾಗಿದೆ. ಮಧ್ಯದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿ ಹೋದ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಈ ಕಡೆ ಇನ್ನೂವರೆಗೆ ಮುಖಮಾಡಿಲ್ಲ’ ಎಂದು ಅವರು ದೂರಿದರು.</p>.<p><strong>₹ 6 ಕೋಟಿ ವೆಚ್ಚ:</strong> ‘₹6 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದೆ. ಇದರಲ್ಲಿ ನಾಯಿ ತೇಗೂರಿನಿಂದ ಖಾನಾಪುರ ಗಡಿಯವರೆಗೆ, ಬಸಾಪುರ ರಸ್ತೆ ಹಾಗೂ ದೇವಗಾಂವ ಗ್ರಾಮದಿಂದ ತವನಪ್ಪ ಅವಲಕ್ಕಿ ಪ್ರೌಢಶಾಲೆ ಬದಿಗಿನ ಸುಮಾರು ಮೂರು ಕಿ.ಮೀ ರಸ್ತೆ ಅಭಿವೃದ್ಧಿಪಡಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡುತ್ತದೆ.</p>.<p>‘ಹಿಂದಿನ ಶಾಸಕ ಮಹಾಂತೇಶ ದೊಡ್ಡಗೌಡರ ಅಧಿಕಾರವಧಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹೊಸ ಸರ್ಕಾರ ರಚನೆಯಾಗಿ ಒಂದು ವರ್ಷವಾಗುತ್ತ ಬಂದಿದೆ. ಆದರೂ, ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಯೋಗ ಕೂಡಿ ಬಂದಿಲ್ಲ. ಊರಿನ ಜನರಿಗೆ ತೊಂದರೆ ಮಾತ್ರ ತಪ್ಪಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.</p>.<p><strong>ನೀರಿನ ತಾಪತ್ರಯ: </strong>ಅರ್ದಂಬರ್ಧ ರಸ್ತೆ ಕಾಮಗಾರಿ ನಡೆಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ ಮಿರಜಕರ ಅವರನ್ನು ಕೇಳಿದರೆ, ಅವರು ನೀಡುವ ಉತ್ತರವೇ ತಮಾಷೆಯಾಗಿದೆ.</p>.<p>‘ಊರಲ್ಲಿ ನೀರಿನ ತೊಂದರೆ ಇದೆ. ಹೀಗಾಗಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೊಂಡಿಲ್ಲ. ಒಂದು ಬದಿಯ ರಸ್ತೆಗೆ ಹಾಕಲಾಗಿರುವ ಡಾಂಬರು ರಸ್ತೆಯ ಮೇಲೆ ಮತ್ತೊಂದು ಪದರು ಡಾಂಬರೀಕರಣ ಮಾಡಬೇಕಿದೆ’ ಎನ್ನುತ್ತಾರೆ ಅವರು.</p>.<p>‘ಈ ರಸ್ತೆ ಕಾಮಗಾರಿಯನ್ನು ಗುತ್ತಿಗೆಗೆ ನೀಡಲಾಗಿದೆ. ಅವರು ಇದ್ದ ಸಮಸ್ಯೆ ಬಗೆಹರಿಸಿಕೊಂಡು ಕಾಮಗಾರಿ ಪೂರೈಸುತ್ತಾರೆ. ಇವರೇಕೆ ನೀರಿನ ತೊಂದರೆ ಹೇಳುತ್ತಿದ್ದಾರೆ ಎನ್ನುವುದು ತಿಳಿಯದಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.</p>.<div><blockquote>ದೇವಗಾಂವ ಊರಿನ ರಸ್ತೆ ಕಾಮಗಾರಿ ಏಕೆ ವಿಳಂಬವಾಗಿದೆ ಎಂಬುದನ್ನು ವಿಚಾರಿಸುತ್ತೇನೆ. ಶೀಘ್ರ ಕಾಮಗಾರಿ ಆರಂಭಿಸುತ್ತೇವೆ.</blockquote><span class="attribution">– ಎಸ್.ಎಸ್.ಸೊಬರದ, ಕಾರ್ಯಕಾರಿ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಬೆಳಗಾವಿ</span></div>.<div><blockquote>ಊರ ಹೊರಗಿನ ಎರಡೂ ಬದಿಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅದೂ ಗುಣಮಟ್ಟದಿಂದ ಕೂಡಿಲ್ಲ. ಊರ ಮಧ್ಯದ ರಸ್ತೆ ಹಾಗೆ ಬಿಟ್ಟಿದ್ದರಿಂದ ದೂಳು ಹಾರುತ್ತಿದೆ.</blockquote><span class="attribution">– ವಿ.ಎಂ.ಮುಪ್ಪಿನಮಠ, ಗ್ರಾಮಸ್ಥ</span></div>.<div><blockquote>ತಾಲ್ಲೂಕಿನ ದೇಮಟ್ಟಿ ಮತ್ತು ಉಗರಖೋಡ ಗ್ರಾಮಗಳನ್ನು ಹೊರತುಪಡಿಸಿದರೆ ಬೇರೆ ಗ್ರಾಮಗಳಲ್ಲಿ ನೀರಿನ ತೊಂದರೆಯಿಲ್ಲ. ಸಮರ್ಪಕ ನೀರು ಸರಬರಾಜು ಇದೆ.</blockquote><span class="attribution">–ರವೀಂದ್ರ ಹಾದಿಮನಿ, ತಹಶೀಲ್ದಾರ್ ಚನ್ನಮ್ಮನ ಕಿತ್ತೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು</strong>: ಊರಿನ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಥಳಕು. ನಡುವೆ ಮಾತ್ರ ಕೊಳಕು...</p>.<p>ತಾಲ್ಲೂಕಿನ ದೇವಗಾಂವ ಗ್ರಾಮದಲ್ಲಿ ಲೋಕೋಪಯೋಗಿ ಕೈಗೊಂಡ ರಸ್ತೆ ನಿರ್ಮಾಣ ಕಾಮಗಾರಿಯ ನೋಟವಿದು.</p>.<p>‘ನಡುವೆ ರಸ್ತೆ ಕಾಮಗಾರಿ ಮಾಡದೇ ಹಾಗೇ ಬಿಟ್ಟ ಪರಿಣಾಮ, ಊರಲ್ಲಿ ವಾಹನ ಓಡಿದರೆ ಮನೆ ಎತ್ತರದವರೆಗೆ ದೂಳು ಹಾರುತ್ತಿದೆ. ಈ ದೂಳಿನಿಂದ ನಮಗೂ ಸಾಕಾಗಿ ಹೋಗಿದೆ’ ಎನ್ನುತ್ತಾರೆ ದೇವಗಾಂವ, ಶಿರಗಾಪುರ ಮತ್ತು ಹೊಸೂರ ಗ್ರಾಮಸ್ಥರು.</p>.<p>‘ಎರಡು ವರ್ಷಗಳ ಹಿಂದೆ ಕಾಮಗಾರಿ ಮಂಜೂರಾಗಿದೆ. ಆದರೆ, ಕಿತ್ತೂರು-ಬೀಡಿ ಮುಖ್ಯರಸ್ತೆ ಕೂಡುವವರೆಗೆ ಊರಿನ ಮೊದಲು ಹಾಗೂ ಊರು ಮುಗಿಯವವರೆಗಿನ ರಸ್ತೆಗೆ ಮಾತ್ರ ಡಾಂಬರು ಮೆತ್ತಲಾಗಿದೆ. ಮಧ್ಯದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿ ಹೋದ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಈ ಕಡೆ ಇನ್ನೂವರೆಗೆ ಮುಖಮಾಡಿಲ್ಲ’ ಎಂದು ಅವರು ದೂರಿದರು.</p>.<p><strong>₹ 6 ಕೋಟಿ ವೆಚ್ಚ:</strong> ‘₹6 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದೆ. ಇದರಲ್ಲಿ ನಾಯಿ ತೇಗೂರಿನಿಂದ ಖಾನಾಪುರ ಗಡಿಯವರೆಗೆ, ಬಸಾಪುರ ರಸ್ತೆ ಹಾಗೂ ದೇವಗಾಂವ ಗ್ರಾಮದಿಂದ ತವನಪ್ಪ ಅವಲಕ್ಕಿ ಪ್ರೌಢಶಾಲೆ ಬದಿಗಿನ ಸುಮಾರು ಮೂರು ಕಿ.ಮೀ ರಸ್ತೆ ಅಭಿವೃದ್ಧಿಪಡಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡುತ್ತದೆ.</p>.<p>‘ಹಿಂದಿನ ಶಾಸಕ ಮಹಾಂತೇಶ ದೊಡ್ಡಗೌಡರ ಅಧಿಕಾರವಧಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹೊಸ ಸರ್ಕಾರ ರಚನೆಯಾಗಿ ಒಂದು ವರ್ಷವಾಗುತ್ತ ಬಂದಿದೆ. ಆದರೂ, ಈ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು ಯೋಗ ಕೂಡಿ ಬಂದಿಲ್ಲ. ಊರಿನ ಜನರಿಗೆ ತೊಂದರೆ ಮಾತ್ರ ತಪ್ಪಿಲ್ಲ’ ಎನ್ನುತ್ತಾರೆ ಗ್ರಾಮಸ್ಥರು.</p>.<p><strong>ನೀರಿನ ತಾಪತ್ರಯ: </strong>ಅರ್ದಂಬರ್ಧ ರಸ್ತೆ ಕಾಮಗಾರಿ ನಡೆಸಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜೀವ ಮಿರಜಕರ ಅವರನ್ನು ಕೇಳಿದರೆ, ಅವರು ನೀಡುವ ಉತ್ತರವೇ ತಮಾಷೆಯಾಗಿದೆ.</p>.<p>‘ಊರಲ್ಲಿ ನೀರಿನ ತೊಂದರೆ ಇದೆ. ಹೀಗಾಗಿ ಕಾಂಕ್ರೀಟ್ ರಸ್ತೆ ಕಾಮಗಾರಿ ಕೈಗೊಂಡಿಲ್ಲ. ಒಂದು ಬದಿಯ ರಸ್ತೆಗೆ ಹಾಕಲಾಗಿರುವ ಡಾಂಬರು ರಸ್ತೆಯ ಮೇಲೆ ಮತ್ತೊಂದು ಪದರು ಡಾಂಬರೀಕರಣ ಮಾಡಬೇಕಿದೆ’ ಎನ್ನುತ್ತಾರೆ ಅವರು.</p>.<p>‘ಈ ರಸ್ತೆ ಕಾಮಗಾರಿಯನ್ನು ಗುತ್ತಿಗೆಗೆ ನೀಡಲಾಗಿದೆ. ಅವರು ಇದ್ದ ಸಮಸ್ಯೆ ಬಗೆಹರಿಸಿಕೊಂಡು ಕಾಮಗಾರಿ ಪೂರೈಸುತ್ತಾರೆ. ಇವರೇಕೆ ನೀರಿನ ತೊಂದರೆ ಹೇಳುತ್ತಿದ್ದಾರೆ ಎನ್ನುವುದು ತಿಳಿಯದಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.</p>.<div><blockquote>ದೇವಗಾಂವ ಊರಿನ ರಸ್ತೆ ಕಾಮಗಾರಿ ಏಕೆ ವಿಳಂಬವಾಗಿದೆ ಎಂಬುದನ್ನು ವಿಚಾರಿಸುತ್ತೇನೆ. ಶೀಘ್ರ ಕಾಮಗಾರಿ ಆರಂಭಿಸುತ್ತೇವೆ.</blockquote><span class="attribution">– ಎಸ್.ಎಸ್.ಸೊಬರದ, ಕಾರ್ಯಕಾರಿ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಬೆಳಗಾವಿ</span></div>.<div><blockquote>ಊರ ಹೊರಗಿನ ಎರಡೂ ಬದಿಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಅದೂ ಗುಣಮಟ್ಟದಿಂದ ಕೂಡಿಲ್ಲ. ಊರ ಮಧ್ಯದ ರಸ್ತೆ ಹಾಗೆ ಬಿಟ್ಟಿದ್ದರಿಂದ ದೂಳು ಹಾರುತ್ತಿದೆ.</blockquote><span class="attribution">– ವಿ.ಎಂ.ಮುಪ್ಪಿನಮಠ, ಗ್ರಾಮಸ್ಥ</span></div>.<div><blockquote>ತಾಲ್ಲೂಕಿನ ದೇಮಟ್ಟಿ ಮತ್ತು ಉಗರಖೋಡ ಗ್ರಾಮಗಳನ್ನು ಹೊರತುಪಡಿಸಿದರೆ ಬೇರೆ ಗ್ರಾಮಗಳಲ್ಲಿ ನೀರಿನ ತೊಂದರೆಯಿಲ್ಲ. ಸಮರ್ಪಕ ನೀರು ಸರಬರಾಜು ಇದೆ.</blockquote><span class="attribution">–ರವೀಂದ್ರ ಹಾದಿಮನಿ, ತಹಶೀಲ್ದಾರ್ ಚನ್ನಮ್ಮನ ಕಿತ್ತೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>