ಇದು ಮಹಾನಗರ ಪಾಲಿಕೆ ಕಟ್ಟಡವಾಗಿದ್ದು ದುರಸ್ತಿಗೊಳಿಸುವಂತೆ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ. ಹೊಸ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ಇದು ಸ್ಥಳಾಂತರವಾಗಲಿದ್ದು ಆಗ ಸಮಸ್ಯೆ ಬಗೆಹರಿಯಲಿದೆ.
ಬಸವರಾಜ ನಾಗರಳ, ತಹಶೀಲ್ದಾರ್ ಬೆಳಗಾವಿ
ತಹಶೀಲ್ದಾರ್ ಕಚೇರಿ ಸೋರುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು.
ಅಶೋಕ ದುಡಗುಂಟಿ, ಆಯುಕ್ತ, ಮಹಾನಗರ ಪಾಲಿಕೆ ಬೆಳಗಾವಿ
ಡಿಡಿಪಿಐ ಕಚೇರಿ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಯವರು ₹25 ಲಕ್ಷದ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಹೊಸದಾಗಿ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೂ ಕ್ರಮ ವಹಿಸಲಾಗುವುದು.
ಮೋಹನಕುಮಾರ ಹಂಚಾಟೆ, ಡಿಡಿಪಿಐ, ಬೆಳಗಾವಿ
ಮಳೆಯಿಂದ ಸೋರುತ್ತಿರುವ ಬೆಳಗಾವಿಯ ತಹಶೀಲ್ದಾರ್ ಕಚೇರಿ ವರಾಂಡದ ನೆಲ ಒದ್ದೆಯಾಗಿದೆ –ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ