<p><strong>ಬೆಂಗಳೂರು</strong>: ‘ಜನರನ್ನು ಕಾದು, ಅವರ ಜೀವನಕ್ಕೆ ಮಾರ್ಗದರ್ಶನ ಮಾಡಬೇಕಾದ ಸರ್ಕಾರಗಳೇ ಮದ್ಯಪಾನ ಮಾಡುವಂತೆ ಪ್ರೋತ್ಸಾಹ ನೀಡುತ್ತಿರುವುದು ದುರದೃಷ್ಟಕರ ಸಂಗತಿ’ ಎಂದು ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು. </p>.<p>ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.</p>.<p>‘ಸಿದ್ದರಾಮಯ್ಯ ಅವರ ಸರ್ಕಾರವು ಅಬಕಾರಿ ಸುಂಕದಿಂದಲೇ ₹ 50 ಸಾವಿರ ಕೋಟಿ ಸಂಗ್ರಹದ ಗುರಿ ಹಾಕಿಕೊಂಡಿದೆ. ಇದರಿಂದಾಗಿ ಐದನೇ ಬಾರಿ ಮದ್ಯದ ದರ ಹೆಚ್ಚಿಸಲಾಗಿದೆ. ತಡರಾತ್ರಿವರೆಗೂ ಮದ್ಯದ ಮಳಿಗೆಗಳು ಬಾಗಿಲು ತೆರೆದಿದ್ದರೂ ಅವುಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಜನರು ಮದ್ಯಪಾನದಂತಹ ವ್ಯಸನಕ್ಕೆ ಒಳಗಾಗಿ, ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. </p>.<p>‘ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಧೂಮಪಾನದಿಂದ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ತಂಬಾಕಿನಲ್ಲಿ ಇರುವ ‘ನಿಕೋಟಿನ್’ ರಾಸಾಯನಿಕ ಅತ್ಯಂತ ಅಪಾಯಕಾರಿಯಾಗಿದೆ. ಸಿಗರೇಟ್ನಲ್ಲಿ 90 ಬಗೆಯ ರಾಸಾಯನಿಕಗಳು ಇರುತ್ತವೆ. ಇವುಗಳಲ್ಲಿ ‘ಕಾರ್ಬನ್ ಮೊನಾಕ್ಸೈಡ್’ ಸಾವಿಗೆ ಕಾರಣವಾಗುತ್ತದೆ. ಮದ್ಯದಲ್ಲಿ ‘ಎಥೆನಾಲ್’ ಇರಲಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಬದಲಾದ ಜೀವನಶೈಲಿ, ಆಹಾರ ಪದ್ಧತಿಯಿಂದ ಚಿಕ್ಕ ವಯಸ್ಸಿಯಲ್ಲಿಯೇ ಹೃದಯಾಘಾತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು. </p>.<p>ಇಳಕಲ್ನ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನದ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ದೇಹವು ದೇವ ಮಂದಿರವಾಗಿದೆ. ಅದನ್ನು ಕಸದ ತೊಟ್ಟಿ ಮಾಡದೆ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಹೇಳಿದರು.</p>.<p><strong>‘ಮೊಬೈಲ್ ವ್ಯಸನವೂ ಅಪಾಯಕಾರಿ’ </strong></p><p>‘ಮೊಬೈಲ್ ಬಳಕೆಯೂ ಇತ್ತೀಚೆಗೆ ವ್ಯಸನವಾಗಿ ಮಾರ್ಪಟ್ಟಿದೆ. ಒಂದೂವರೆ ಎರಡು ತಿಂಗಳ ಮಗುವಿಗೂ ಅತ್ತಾಗ ಮೊಬೈಲ್ ನೀಡಲಾಗುತ್ತಿದೆ. ಇದು ಭವಿಷ್ಯದಲ್ಲಿ ವ್ಯಸನವಾಗಿ ಮಾರ್ಪಡಲಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ನಂತಹ ಡಿಜಿಟಲ್ ಸಾಧನಗಳ ವ್ಯಸನಕ್ಕೆ ಒಳಗಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ವ್ಯಸನವೂ ಹೆಚ್ಚುತ್ತಿದ್ದು ರಾತ್ರಿ 9 ಗಂಟೆಯ ನಂತರ ಎಂ.ಜಿ.ರಸ್ತೆ ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸಲು ಭಯ ಪಡಬೇಕಾಗಿದೆ. ಕೆಲವರು ಗಾಂಜಾ ಸೇವಿಸಿ ವಾಹನಗಳನ್ನು ಓಡಿಸುತ್ತಿದ್ದು ನಿಂತ ವಾಹನಕ್ಕೂ ಗುದ್ದುತ್ತಿದ್ದಾರೆ’ ಎಂದು ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು. </p><p>‘ಬೆಂಗಳೂರು ಸುತ್ತಮುತ್ತ 400 ರೆಸಾರ್ಟ್ಗಳಿವೆ. ಅವು ಶನಿವಾರ ಮತ್ತು ಭಾನುವಾರ ಭರ್ತಿಯಾಗುತ್ತಿವೆ. ಯಾವುದೇ ವ್ಯವಸನಕ್ಕೆ ಒಳಗಾದರೂ ಅವುಗಳಿಂದ ಹೊರ ಬರಲು ಚಿಕಿತ್ಸೆಗಿಂತ ದೃಢ ಮನಸ್ಸು ಮುಖ್ಯ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಜನರನ್ನು ಕಾದು, ಅವರ ಜೀವನಕ್ಕೆ ಮಾರ್ಗದರ್ಶನ ಮಾಡಬೇಕಾದ ಸರ್ಕಾರಗಳೇ ಮದ್ಯಪಾನ ಮಾಡುವಂತೆ ಪ್ರೋತ್ಸಾಹ ನೀಡುತ್ತಿರುವುದು ದುರದೃಷ್ಟಕರ ಸಂಗತಿ’ ಎಂದು ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು. </p>.<p>ಮಹಾಂತ ಶಿವಯೋಗಿಗಳ ಜಯಂತಿ ಪ್ರಯುಕ್ತ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.</p>.<p>‘ಸಿದ್ದರಾಮಯ್ಯ ಅವರ ಸರ್ಕಾರವು ಅಬಕಾರಿ ಸುಂಕದಿಂದಲೇ ₹ 50 ಸಾವಿರ ಕೋಟಿ ಸಂಗ್ರಹದ ಗುರಿ ಹಾಕಿಕೊಂಡಿದೆ. ಇದರಿಂದಾಗಿ ಐದನೇ ಬಾರಿ ಮದ್ಯದ ದರ ಹೆಚ್ಚಿಸಲಾಗಿದೆ. ತಡರಾತ್ರಿವರೆಗೂ ಮದ್ಯದ ಮಳಿಗೆಗಳು ಬಾಗಿಲು ತೆರೆದಿದ್ದರೂ ಅವುಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದರಿಂದಾಗಿ ಜನರು ಮದ್ಯಪಾನದಂತಹ ವ್ಯಸನಕ್ಕೆ ಒಳಗಾಗಿ, ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು. </p>.<p>‘ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಧೂಮಪಾನದಿಂದ ಕ್ಯಾನ್ಸರ್ನಂತಹ ಮಾರಣಾಂತಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ತಂಬಾಕಿನಲ್ಲಿ ಇರುವ ‘ನಿಕೋಟಿನ್’ ರಾಸಾಯನಿಕ ಅತ್ಯಂತ ಅಪಾಯಕಾರಿಯಾಗಿದೆ. ಸಿಗರೇಟ್ನಲ್ಲಿ 90 ಬಗೆಯ ರಾಸಾಯನಿಕಗಳು ಇರುತ್ತವೆ. ಇವುಗಳಲ್ಲಿ ‘ಕಾರ್ಬನ್ ಮೊನಾಕ್ಸೈಡ್’ ಸಾವಿಗೆ ಕಾರಣವಾಗುತ್ತದೆ. ಮದ್ಯದಲ್ಲಿ ‘ಎಥೆನಾಲ್’ ಇರಲಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಬದಲಾದ ಜೀವನಶೈಲಿ, ಆಹಾರ ಪದ್ಧತಿಯಿಂದ ಚಿಕ್ಕ ವಯಸ್ಸಿಯಲ್ಲಿಯೇ ಹೃದಯಾಘಾತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು. </p>.<p>ಇಳಕಲ್ನ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನದ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ದೇಹವು ದೇವ ಮಂದಿರವಾಗಿದೆ. ಅದನ್ನು ಕಸದ ತೊಟ್ಟಿ ಮಾಡದೆ ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಹೇಳಿದರು.</p>.<p><strong>‘ಮೊಬೈಲ್ ವ್ಯಸನವೂ ಅಪಾಯಕಾರಿ’ </strong></p><p>‘ಮೊಬೈಲ್ ಬಳಕೆಯೂ ಇತ್ತೀಚೆಗೆ ವ್ಯಸನವಾಗಿ ಮಾರ್ಪಟ್ಟಿದೆ. ಒಂದೂವರೆ ಎರಡು ತಿಂಗಳ ಮಗುವಿಗೂ ಅತ್ತಾಗ ಮೊಬೈಲ್ ನೀಡಲಾಗುತ್ತಿದೆ. ಇದು ಭವಿಷ್ಯದಲ್ಲಿ ವ್ಯಸನವಾಗಿ ಮಾರ್ಪಡಲಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ನಂತಹ ಡಿಜಿಟಲ್ ಸಾಧನಗಳ ವ್ಯಸನಕ್ಕೆ ಒಳಗಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ವ್ಯಸನವೂ ಹೆಚ್ಚುತ್ತಿದ್ದು ರಾತ್ರಿ 9 ಗಂಟೆಯ ನಂತರ ಎಂ.ಜಿ.ರಸ್ತೆ ಬ್ರಿಗೇಡ್ ರಸ್ತೆಯಲ್ಲಿ ಸಂಚರಿಸಲು ಭಯ ಪಡಬೇಕಾಗಿದೆ. ಕೆಲವರು ಗಾಂಜಾ ಸೇವಿಸಿ ವಾಹನಗಳನ್ನು ಓಡಿಸುತ್ತಿದ್ದು ನಿಂತ ವಾಹನಕ್ಕೂ ಗುದ್ದುತ್ತಿದ್ದಾರೆ’ ಎಂದು ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು. </p><p>‘ಬೆಂಗಳೂರು ಸುತ್ತಮುತ್ತ 400 ರೆಸಾರ್ಟ್ಗಳಿವೆ. ಅವು ಶನಿವಾರ ಮತ್ತು ಭಾನುವಾರ ಭರ್ತಿಯಾಗುತ್ತಿವೆ. ಯಾವುದೇ ವ್ಯವಸನಕ್ಕೆ ಒಳಗಾದರೂ ಅವುಗಳಿಂದ ಹೊರ ಬರಲು ಚಿಕಿತ್ಸೆಗಿಂತ ದೃಢ ಮನಸ್ಸು ಮುಖ್ಯ’ ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>