<p><strong>ಬೆಂಗಳೂರು:</strong> ‘ನನ್ನ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಬದಲಿ ನಿವೇಶನ ಮಂಜೂರಾತಿ ಮಾಡಿರುವ ತೀರ್ಮಾನ ನನ್ನ ಅವಧಿಯಲ್ಲಿ ಆಗಿಲ್ಲ. ನಾನು ಈ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p>.<p>ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪದ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ ನನ್ನ ಪತ್ನಿಯ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಅನಧಿಕೃತವಾಗಿ ಒತ್ತುವರಿ ಮಾಡಿ, ಬಡಾವಣೆ ನಿರ್ಮಿಸಿತ್ತು. ಅದಕ್ಕೆ ಪರಿಹಾರವಾಗಿ 38,284 ಚದರ ಅಡಿ ವಿಸ್ತೀರ್ಣದ ಬದಲಿ ನಿವೇಶನಗಳನ್ನು ನೀಡಿದ್ದಾರೆ. ಇದರಲ್ಲಿ ಅಕ್ರಮ ಎಲ್ಲಿದೆ’ ಎಂದು ಪ್ರಶ್ನಿಸಿದರು.</p>.<p>‘2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಮ್ಮ ಕುಟುಂಬದ ಜಮೀನನ್ನು ಮುಡಾ ಒತ್ತುವರಿ ಮಾಡಿಕೊಂಡಿರುವ ವಿಷಯವನ್ನು ಪತ್ನಿ ನನ್ನ ಗಮನಕ್ಕೆ ತಂದಿದ್ದರು. ಬದಲಿ ಜಮೀನು ಕೋರಿ ಅರ್ಜಿ ಸಲ್ಲಿಸಿರುವ ವಿಷಯವನ್ನೂ ಹೇಳಿದ್ದರು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಾನು ತೀರ್ಮಾನ ಕೈಗೊಳ್ಳುವುದಿಲ್ಲ ಎಂಬುದಾಗಿ ನೇರವಾಗಿ ಹೇಳಿದ್ದೆ’ ಎಂದರು.</p>.<p>‘ಮುಡಾ ಅಧಿಕಾರಿಗಳನ್ನು ಕರೆಸಿ, ನನ್ನ ಪತ್ನಿ ಪರ್ಯಾಯ ಜಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳದಂತೆಯೂ ಸೂಚಿಸಿದ್ದೆ. ಪ್ರಾಧಿಕಾರವು ಸ್ವಂತ ವಿವೇಚನೆಯಿಂದ ಏನಾದರೂ ತೀರ್ಮಾನ ಕೈಗೊಳ್ಳಲಿ ಎಂದು ಆಗಲೇ ಹೇಳಿದ್ದೆ. ಬದಲಿ ನಿವೇಶನ ಹಂಚಿಕೆಯಲ್ಲಿ ನಾನಾಗಲೀ, ನನ್ನ ಪತ್ನಿಯಾಗಲೀ ಅಥವಾ ಬಾಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರಾಗಲೀ ಯಾವುದೇ ಪಾತ್ರವನ್ನೂ ವಹಿಸಿಲ್ಲ’ ಎಂದು ಹೇಳಿದರು.</p>.<p>‘ಪಾರ್ವತಿ ಅವರಿಗೆ 3 ಎಕರೆ 16 ಗುಂಟೆ ಜಮೀನಿಗೆ ಶೇಕಡ 50:50ರ ಅನುಪಾತದಲ್ಲಿ ಪರಿಹಾರ ರೂಪದಲ್ಲಿ ಬದಲಿ ನಿವೇಶನ ನೀಡುವ ನಿರ್ಧಾರವನ್ನು ಮುಡಾ ಆಡಳಿತ ಮಂಡಳಿ 2020ರಲ್ಲಿ ಕೈಗೊಂಡಿತ್ತು. ಆಗ, ಬಿಜೆಪಿ ಶಾಸಕರಾಗಿದ್ದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ನ ಜೆಡಿಎಸ್ ಸದಸ್ಯರಾಗಿದ್ದ ಮರಿತಿಬ್ಬೇಗೌಡ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿ, ನಿರ್ಣಯವನ್ನು ಅನುಮೋದಿಸಿದ್ದರು’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.</p>.<p>ಅರ್ಧ ಪರಿಹಾರ: ‘ಮುಡಾ ಇದೇ ರೀತಿಯಲ್ಲಿ ಸುಂದರಮ್ಮ ಎಂಬವರ 2 ಎಕರೆ 17 ಗುಂಟೆ ಜಮೀನನ್ನು ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿತ್ತು. ಅವರಿಗೆ ಜಮೀನಿನ ಪೂರ್ಣ ವಿಸ್ತೀರ್ಣದಷ್ಟು ಬದಲಿ ಜಮೀನು ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆ ಪ್ರಕಾರವೇ ಪೂರ್ಣ ವಿಸ್ತೀರ್ಣದಷ್ಟು ಬದಲಿ ನಿವೇಶನ ನೀಡಲಾಗಿತ್ತು. ನಮ್ಮ ಕುಟುಂಬಕ್ಕೆ ಅರ್ಧದಷ್ಟು ಪರಿಹಾರವನ್ನು ಮಾತ್ರ ನೀಡಿದೆ’ ಎಂದು ಸಿದ್ದರಾಮಯ್ಯ ಹೇಳಿದರು.</p>.<p>‘ಬದಲಿ ನಿವೇಶನವನ್ನು ಯಾವ ಬಡಾವಣೆಯಲ್ಲಿ ನೀಡಬೇಕು ಎಂಬ ಆಯ್ಕೆಯನ್ನು ನಮ್ಮ ಕುಟುಂಬದ ಯಾರೊಬ್ಬರೂ ಮುಡಾ ಮುಂದೆ ಇಟ್ಟಿರಲಿಲ್ಲ. ಬೇರೆ ಬಡಾವಣೆಗಳಲ್ಲಿ ನಿವೇಶನಗಳ ಲಭ್ಯತೆ ಇಲ್ಲದ ಕಾರಣದಿಂದ ವಿಜಯನಗರ ಬಡಾವಣೆಯಲ್ಲಿ ನೀಡಿದ್ದಾರೆ’ ಎಂದರು.</p>.<p>ಭೂಸ್ವಾಧೀನ ಪ್ರಕ್ರಿಯೆಯಿಂದ ಜಮೀನನ್ನು ಕೈಬಿಟ್ಟ ಬಳಿಕ ತಮ್ಮ ಬಾಮೈದ ಮಲ್ಲಿಕಾರ್ಜುನಸ್ವಾಮಿ ಖರೀದಿಸಿದ್ದರು. ಬಳಿಕ ಪಾರ್ವತಿ ಅವರಿಗೆ ದಾನಪತ್ರದ ಮೂಲಕ ನೀಡಿದ್ದರು. ಖರೀದಿ, ವರ್ಗಾವಣೆ, ಪರಿಹಾರ ಕೋರಿರುವುದು, ಬದಲಿ ನಿವೇಶನ ಹಂಚಿಕೆ ಯಾವ ಪ್ರಕ್ರಿಯೆಯಲ್ಲೂ ಕಾನೂನು ಉಲ್ಲಂಘಿಸಿಲ್ಲ ಎಂದು ತಿಳಿಸಿದರು.</p>.<p><strong>‘ಜೆಡಿಎಸ್ ಬಿಜೆಪಿಯವರೂ ಪಡೆದಿದ್ದಾರೆ’</strong></p><p> ‘ನನ್ನ ಪತ್ನಿ ಪಾರ್ವತಿ ಅವರೊಬ್ಬರೇ ಮುಡಾದಿಂದ ಬದಲಿ ನಿವೇಶನ ಪಡೆದಿಲ್ಲ. ವಿಧಾನ ಪರಿಷತ್ನ ಜೆಡಿಎಸ್ ಸದಸ್ಯ ಸಿ.ಎನ್. ಮಂಜೇಗೌಡ ಮಾಜಿ ಸಚಿವ ಸಾ.ರಾ. ಮಹೇಶ್ ಶಾಸಕ ಜಿ.ಟಿ. ದೇವೇಗೌಡ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಸೇರಿದಂತೆ ವಿರೋಧ ಪಕ್ಷಗಳ ಹಲವರು ಬದಲಿ ನಿವೇಶನ ಪಡೆದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಮುಡಾದಲ್ಲಿ ಒಟ್ಟು 1328 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಶೇ 50:50ರ ಅನುಪಾತದ ಪರಿಹಾರ ರೂಪದಲ್ಲಿ 909 ನಿವೇಶನ ಪ್ರೋತ್ಸಾಹ ರೂಪದಲ್ಲಿ 350 ನಿವೇಶನ ಮತ್ತು ಹಂಚಿಕೆಯಲ್ಲಿನ ಸಮಸ್ಯೆ ನಿವಾರಣೆಗೆ 109 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ’ ಎಂದರು.</p>.<p><strong>- ‘ರಾಜ್ಯಪಾಲರಿಗೆ ಉತ್ತರ ನೀಡಿರುವೆ’</strong></p><p> ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವರದಿ ಕೇಳಿದರು. ಎಲ್ಲ ದಾಖಲೆಗಳ ಸಮೇತ ಉತ್ತರ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘2013ರ ವಿಧಾನಸಭಾ ಚುನಾವಣೆಯಲ್ಲಿ ಕಣ್ತಪ್ಪಿನಿಂದಾಗಿ ಈ ಜಮೀನಿನ ಮಾಹಿತಿಯನ್ನು ನಾಮಪತ್ರದ ಜತೆಗಿನ ಪ್ರಮಾಣಪತ್ರದಲ್ಲಿ ನೀಡಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಲೋಕಾಯುಕ್ತರಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ನೀಡಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನನ್ನ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಬದಲಿ ನಿವೇಶನ ಮಂಜೂರಾತಿ ಮಾಡಿರುವ ತೀರ್ಮಾನ ನನ್ನ ಅವಧಿಯಲ್ಲಿ ಆಗಿಲ್ಲ. ನಾನು ಈ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.</p>.<p>ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪದ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ ನನ್ನ ಪತ್ನಿಯ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಜಮೀನನ್ನು ಮುಡಾ ಅನಧಿಕೃತವಾಗಿ ಒತ್ತುವರಿ ಮಾಡಿ, ಬಡಾವಣೆ ನಿರ್ಮಿಸಿತ್ತು. ಅದಕ್ಕೆ ಪರಿಹಾರವಾಗಿ 38,284 ಚದರ ಅಡಿ ವಿಸ್ತೀರ್ಣದ ಬದಲಿ ನಿವೇಶನಗಳನ್ನು ನೀಡಿದ್ದಾರೆ. ಇದರಲ್ಲಿ ಅಕ್ರಮ ಎಲ್ಲಿದೆ’ ಎಂದು ಪ್ರಶ್ನಿಸಿದರು.</p>.<p>‘2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಮ್ಮ ಕುಟುಂಬದ ಜಮೀನನ್ನು ಮುಡಾ ಒತ್ತುವರಿ ಮಾಡಿಕೊಂಡಿರುವ ವಿಷಯವನ್ನು ಪತ್ನಿ ನನ್ನ ಗಮನಕ್ಕೆ ತಂದಿದ್ದರು. ಬದಲಿ ಜಮೀನು ಕೋರಿ ಅರ್ಜಿ ಸಲ್ಲಿಸಿರುವ ವಿಷಯವನ್ನೂ ಹೇಳಿದ್ದರು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಾನು ತೀರ್ಮಾನ ಕೈಗೊಳ್ಳುವುದಿಲ್ಲ ಎಂಬುದಾಗಿ ನೇರವಾಗಿ ಹೇಳಿದ್ದೆ’ ಎಂದರು.</p>.<p>‘ಮುಡಾ ಅಧಿಕಾರಿಗಳನ್ನು ಕರೆಸಿ, ನನ್ನ ಪತ್ನಿ ಪರ್ಯಾಯ ಜಮೀನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳದಂತೆಯೂ ಸೂಚಿಸಿದ್ದೆ. ಪ್ರಾಧಿಕಾರವು ಸ್ವಂತ ವಿವೇಚನೆಯಿಂದ ಏನಾದರೂ ತೀರ್ಮಾನ ಕೈಗೊಳ್ಳಲಿ ಎಂದು ಆಗಲೇ ಹೇಳಿದ್ದೆ. ಬದಲಿ ನಿವೇಶನ ಹಂಚಿಕೆಯಲ್ಲಿ ನಾನಾಗಲೀ, ನನ್ನ ಪತ್ನಿಯಾಗಲೀ ಅಥವಾ ಬಾಮೈದ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಅವರಾಗಲೀ ಯಾವುದೇ ಪಾತ್ರವನ್ನೂ ವಹಿಸಿಲ್ಲ’ ಎಂದು ಹೇಳಿದರು.</p>.<p>‘ಪಾರ್ವತಿ ಅವರಿಗೆ 3 ಎಕರೆ 16 ಗುಂಟೆ ಜಮೀನಿಗೆ ಶೇಕಡ 50:50ರ ಅನುಪಾತದಲ್ಲಿ ಪರಿಹಾರ ರೂಪದಲ್ಲಿ ಬದಲಿ ನಿವೇಶನ ನೀಡುವ ನಿರ್ಧಾರವನ್ನು ಮುಡಾ ಆಡಳಿತ ಮಂಡಳಿ 2020ರಲ್ಲಿ ಕೈಗೊಂಡಿತ್ತು. ಆಗ, ಬಿಜೆಪಿ ಶಾಸಕರಾಗಿದ್ದ ಎಸ್.ಎ. ರಾಮದಾಸ್, ಎಲ್. ನಾಗೇಂದ್ರ, ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ನ ಜೆಡಿಎಸ್ ಸದಸ್ಯರಾಗಿದ್ದ ಮರಿತಿಬ್ಬೇಗೌಡ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಭಾಗವಹಿಸಿ, ನಿರ್ಣಯವನ್ನು ಅನುಮೋದಿಸಿದ್ದರು’ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.</p>.<p>ಅರ್ಧ ಪರಿಹಾರ: ‘ಮುಡಾ ಇದೇ ರೀತಿಯಲ್ಲಿ ಸುಂದರಮ್ಮ ಎಂಬವರ 2 ಎಕರೆ 17 ಗುಂಟೆ ಜಮೀನನ್ನು ಒತ್ತುವರಿ ಮಾಡಿ ಬಡಾವಣೆ ನಿರ್ಮಿಸಿತ್ತು. ಅವರಿಗೆ ಜಮೀನಿನ ಪೂರ್ಣ ವಿಸ್ತೀರ್ಣದಷ್ಟು ಬದಲಿ ಜಮೀನು ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆ ಪ್ರಕಾರವೇ ಪೂರ್ಣ ವಿಸ್ತೀರ್ಣದಷ್ಟು ಬದಲಿ ನಿವೇಶನ ನೀಡಲಾಗಿತ್ತು. ನಮ್ಮ ಕುಟುಂಬಕ್ಕೆ ಅರ್ಧದಷ್ಟು ಪರಿಹಾರವನ್ನು ಮಾತ್ರ ನೀಡಿದೆ’ ಎಂದು ಸಿದ್ದರಾಮಯ್ಯ ಹೇಳಿದರು.</p>.<p>‘ಬದಲಿ ನಿವೇಶನವನ್ನು ಯಾವ ಬಡಾವಣೆಯಲ್ಲಿ ನೀಡಬೇಕು ಎಂಬ ಆಯ್ಕೆಯನ್ನು ನಮ್ಮ ಕುಟುಂಬದ ಯಾರೊಬ್ಬರೂ ಮುಡಾ ಮುಂದೆ ಇಟ್ಟಿರಲಿಲ್ಲ. ಬೇರೆ ಬಡಾವಣೆಗಳಲ್ಲಿ ನಿವೇಶನಗಳ ಲಭ್ಯತೆ ಇಲ್ಲದ ಕಾರಣದಿಂದ ವಿಜಯನಗರ ಬಡಾವಣೆಯಲ್ಲಿ ನೀಡಿದ್ದಾರೆ’ ಎಂದರು.</p>.<p>ಭೂಸ್ವಾಧೀನ ಪ್ರಕ್ರಿಯೆಯಿಂದ ಜಮೀನನ್ನು ಕೈಬಿಟ್ಟ ಬಳಿಕ ತಮ್ಮ ಬಾಮೈದ ಮಲ್ಲಿಕಾರ್ಜುನಸ್ವಾಮಿ ಖರೀದಿಸಿದ್ದರು. ಬಳಿಕ ಪಾರ್ವತಿ ಅವರಿಗೆ ದಾನಪತ್ರದ ಮೂಲಕ ನೀಡಿದ್ದರು. ಖರೀದಿ, ವರ್ಗಾವಣೆ, ಪರಿಹಾರ ಕೋರಿರುವುದು, ಬದಲಿ ನಿವೇಶನ ಹಂಚಿಕೆ ಯಾವ ಪ್ರಕ್ರಿಯೆಯಲ್ಲೂ ಕಾನೂನು ಉಲ್ಲಂಘಿಸಿಲ್ಲ ಎಂದು ತಿಳಿಸಿದರು.</p>.<p><strong>‘ಜೆಡಿಎಸ್ ಬಿಜೆಪಿಯವರೂ ಪಡೆದಿದ್ದಾರೆ’</strong></p><p> ‘ನನ್ನ ಪತ್ನಿ ಪಾರ್ವತಿ ಅವರೊಬ್ಬರೇ ಮುಡಾದಿಂದ ಬದಲಿ ನಿವೇಶನ ಪಡೆದಿಲ್ಲ. ವಿಧಾನ ಪರಿಷತ್ನ ಜೆಡಿಎಸ್ ಸದಸ್ಯ ಸಿ.ಎನ್. ಮಂಜೇಗೌಡ ಮಾಜಿ ಸಚಿವ ಸಾ.ರಾ. ಮಹೇಶ್ ಶಾಸಕ ಜಿ.ಟಿ. ದೇವೇಗೌಡ ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಸೇರಿದಂತೆ ವಿರೋಧ ಪಕ್ಷಗಳ ಹಲವರು ಬದಲಿ ನಿವೇಶನ ಪಡೆದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಮುಡಾದಲ್ಲಿ ಒಟ್ಟು 1328 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಶೇ 50:50ರ ಅನುಪಾತದ ಪರಿಹಾರ ರೂಪದಲ್ಲಿ 909 ನಿವೇಶನ ಪ್ರೋತ್ಸಾಹ ರೂಪದಲ್ಲಿ 350 ನಿವೇಶನ ಮತ್ತು ಹಂಚಿಕೆಯಲ್ಲಿನ ಸಮಸ್ಯೆ ನಿವಾರಣೆಗೆ 109 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ’ ಎಂದರು.</p>.<p><strong>- ‘ರಾಜ್ಯಪಾಲರಿಗೆ ಉತ್ತರ ನೀಡಿರುವೆ’</strong></p><p> ‘ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವರದಿ ಕೇಳಿದರು. ಎಲ್ಲ ದಾಖಲೆಗಳ ಸಮೇತ ಉತ್ತರ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘2013ರ ವಿಧಾನಸಭಾ ಚುನಾವಣೆಯಲ್ಲಿ ಕಣ್ತಪ್ಪಿನಿಂದಾಗಿ ಈ ಜಮೀನಿನ ಮಾಹಿತಿಯನ್ನು ನಾಮಪತ್ರದ ಜತೆಗಿನ ಪ್ರಮಾಣಪತ್ರದಲ್ಲಿ ನೀಡಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಲೋಕಾಯುಕ್ತರಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ನೀಡಿದ್ದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>