<p><strong>ಬೊಮ್ಮನಹಳ್ಳಿ:</strong> ಎಚ್ಎಸ್ಆರ್ ಬಡಾವಣೆಯಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡುವ ಆದೇಶವನ್ನು ವಾಪಸ್ ಪಡೆಯುವಂತೆ ಶಾಸಕ ಸತೀಶ್ ರೆಡ್ಡಿ ಸರ್ಕಾರವನ್ನು ಆಗ್ರಹಿಸಿದರು.</p>.<p>ಎಚ್ಎಸ್ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ‘ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ’ ಆಯೋಜಿಸಿದ್ದ ನಾಗರಿಕ ಪ್ರತಿರೋಧ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಹತ್ತು ವರ್ಷಗಳಿಂದಲೂ ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣಗೊಳಿಸುವ ಪ್ರಯತ್ನ ನಡೆದಿದೆ. ಹಿಂದಿನ ಯಾವ ಸರ್ಕಾರಗಳೂ ಇದಕ್ಕೆ ಆಸ್ಪದ ನೀಡಿರಲಿಲ್ಲ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆಗಾಗಿ ಪ್ರಶ್ನೆ ಕಳುಹಿಸಿದ್ದರೂ, ಬೇಕೆಂದೇ ಚರ್ಚೆಗೆ ತೆಗೆದುಕೊಳ್ಳಲಿಲ್ಲ ಮತ್ತು ಉತ್ತರವನ್ನೂ ನೀಡಿಲ್ಲ’ ಎಂದು ಸತೀಶ್ ರೆಡ್ಡಿ ಆರೋಪಿಸಿದರು.</p>.<p>‘ಬಿಡಿಎ ಕಾಂಪ್ಲೆಕ್ಸ್ಗಳನ್ನು ಗುತ್ತಿಗೆಗೆ ನೀಡಿರುವ ಪ್ರಕ್ರಿಯೆ ಹಿಂದೆ ಸರ್ಕಾರದ ಮಂತ್ರಿಯೊಬ್ಬರಿದ್ದಾರೆ. ಎಂ-ಫಾರ್ ಕಂಪನಿಯಲ್ಲಿ ಕೆಲವು ಮಂತ್ರಿಗಳೂ ಪಾಲುದಾರರು. ಆ ಕಾರಣಕ್ಕಾಗಿಯೇ ಶೈತ್ಯಾಗಾರದಲ್ಲಿದ್ದ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಹೊರಟಿದ್ದಾರೆ, ಯಾವ ಕಾರಣಕ್ಕೂ ಈ ಕಾಂಪ್ಲೆಕ್ಸ್ ಗುತ್ತಿಗೆಗೆ ನೀಡಲು ಬಿಡುವುದಿಲ್ಲ’ ಎಂದರು.</p>.<p>ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಆರ್.ಎಂ.ಎನ್.ರಮೇಶ್ , ‘ಈ ಭಾಗದ ರೈತರು ಬಿಡಿಎಗೆ ವಸತಿ ಉದ್ದೇಶಕ್ಕೆ ನೀಡಿದ್ದಾರೆ. ರೈತರು ಕೊಟ್ಟ ಆಸ್ತಿಯನ್ನು ಖಾಸಗಿ ಕಂಪನಿಗೆ ಕೊಡುವುದು ರೈತರಿಗೆ ಮಾಡುವ ದ್ರೋಹ’ ಎಂದರು.</p>.<p>ಹೆಚ್ಎಸ್ಆರ್ ಬಡಾವಣೆಯ ನಿವಾಸಿಗಳ ಸಂಘದ ಮುಖ್ಯಸ್ಥೆ ಡಾ.ಶಾಂತ ಮಾತನಾಡಿ ‘ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಖಾಸಗಿಯವರಿಗೆ ನೀಡುವುದು ಸರಿಯಲ್ಲ. ಇಲ್ಲಿ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವುದರಿಂದ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಲಿದ್ದು, ಪರಿಸರವೂ ಹಾಳಾಗುತ್ತದೆ’ ಎಂದರು.</p>.<p>ಬಿಜೆಪಿ ಮುಖಂಡರಾದ ಮುರಳೀಧರ್, ಸೈಯದ್ ಸಲಾಂ, ನಿವಾಸಿಗಳ ಸಂಘದ ಅಧ್ಯಕ್ಷ ಬಿ.ಎನ್.ಎಸ್.ರೆಡ್ಡಿ, ಹೋರಾಟ ಸಮಿತಿ ಮುಖಂಡ ನಾಗೇಶ್, ದಲಿತ ಮುಖಂಡ ಚಂದ್ರಪ್ಪ, ಕೋರಮಂಗಲ ಧನಪಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೊಮ್ಮನಹಳ್ಳಿ:</strong> ಎಚ್ಎಸ್ಆರ್ ಬಡಾವಣೆಯಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡುವ ಆದೇಶವನ್ನು ವಾಪಸ್ ಪಡೆಯುವಂತೆ ಶಾಸಕ ಸತೀಶ್ ರೆಡ್ಡಿ ಸರ್ಕಾರವನ್ನು ಆಗ್ರಹಿಸಿದರು.</p>.<p>ಎಚ್ಎಸ್ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್ನಲ್ಲಿ ಮಂಗಳವಾರ ‘ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ’ ಆಯೋಜಿಸಿದ್ದ ನಾಗರಿಕ ಪ್ರತಿರೋಧ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>‘ಹತ್ತು ವರ್ಷಗಳಿಂದಲೂ ಬಿಡಿಎ ಕಾಂಪ್ಲೆಕ್ಸ್ ಖಾಸಗೀಕರಣಗೊಳಿಸುವ ಪ್ರಯತ್ನ ನಡೆದಿದೆ. ಹಿಂದಿನ ಯಾವ ಸರ್ಕಾರಗಳೂ ಇದಕ್ಕೆ ಆಸ್ಪದ ನೀಡಿರಲಿಲ್ಲ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಚರ್ಚೆಗಾಗಿ ಪ್ರಶ್ನೆ ಕಳುಹಿಸಿದ್ದರೂ, ಬೇಕೆಂದೇ ಚರ್ಚೆಗೆ ತೆಗೆದುಕೊಳ್ಳಲಿಲ್ಲ ಮತ್ತು ಉತ್ತರವನ್ನೂ ನೀಡಿಲ್ಲ’ ಎಂದು ಸತೀಶ್ ರೆಡ್ಡಿ ಆರೋಪಿಸಿದರು.</p>.<p>‘ಬಿಡಿಎ ಕಾಂಪ್ಲೆಕ್ಸ್ಗಳನ್ನು ಗುತ್ತಿಗೆಗೆ ನೀಡಿರುವ ಪ್ರಕ್ರಿಯೆ ಹಿಂದೆ ಸರ್ಕಾರದ ಮಂತ್ರಿಯೊಬ್ಬರಿದ್ದಾರೆ. ಎಂ-ಫಾರ್ ಕಂಪನಿಯಲ್ಲಿ ಕೆಲವು ಮಂತ್ರಿಗಳೂ ಪಾಲುದಾರರು. ಆ ಕಾರಣಕ್ಕಾಗಿಯೇ ಶೈತ್ಯಾಗಾರದಲ್ಲಿದ್ದ ಯೋಜನೆಯನ್ನು ತರಾತುರಿಯಲ್ಲಿ ಜಾರಿಗೆ ತರಲು ಹೊರಟಿದ್ದಾರೆ, ಯಾವ ಕಾರಣಕ್ಕೂ ಈ ಕಾಂಪ್ಲೆಕ್ಸ್ ಗುತ್ತಿಗೆಗೆ ನೀಡಲು ಬಿಡುವುದಿಲ್ಲ’ ಎಂದರು.</p>.<p>ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಆರ್.ಎಂ.ಎನ್.ರಮೇಶ್ , ‘ಈ ಭಾಗದ ರೈತರು ಬಿಡಿಎಗೆ ವಸತಿ ಉದ್ದೇಶಕ್ಕೆ ನೀಡಿದ್ದಾರೆ. ರೈತರು ಕೊಟ್ಟ ಆಸ್ತಿಯನ್ನು ಖಾಸಗಿ ಕಂಪನಿಗೆ ಕೊಡುವುದು ರೈತರಿಗೆ ಮಾಡುವ ದ್ರೋಹ’ ಎಂದರು.</p>.<p>ಹೆಚ್ಎಸ್ಆರ್ ಬಡಾವಣೆಯ ನಿವಾಸಿಗಳ ಸಂಘದ ಮುಖ್ಯಸ್ಥೆ ಡಾ.ಶಾಂತ ಮಾತನಾಡಿ ‘ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಖಾಸಗಿಯವರಿಗೆ ನೀಡುವುದು ಸರಿಯಲ್ಲ. ಇಲ್ಲಿ ಬೃಹತ್ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವುದರಿಂದ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಲಿದ್ದು, ಪರಿಸರವೂ ಹಾಳಾಗುತ್ತದೆ’ ಎಂದರು.</p>.<p>ಬಿಜೆಪಿ ಮುಖಂಡರಾದ ಮುರಳೀಧರ್, ಸೈಯದ್ ಸಲಾಂ, ನಿವಾಸಿಗಳ ಸಂಘದ ಅಧ್ಯಕ್ಷ ಬಿ.ಎನ್.ಎಸ್.ರೆಡ್ಡಿ, ಹೋರಾಟ ಸಮಿತಿ ಮುಖಂಡ ನಾಗೇಶ್, ದಲಿತ ಮುಖಂಡ ಚಂದ್ರಪ್ಪ, ಕೋರಮಂಗಲ ಧನಪಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>