<p><strong>ಬೆಂಗಳೂರು</strong>: ನಗರದ ಹಲವು ಶುದ್ಧ ನೀರಿನ ಘಟಕಗಳಲ್ಲಿ ನೀರಿನ ಬೆಲೆಯನ್ನು ₹ 5ರಿಂದ ₹ 10ಕ್ಕೆ ಏರಿಕೆ ಮಾಡಲಾಗಿದೆ. ಶುದ್ಧ ನೀರು ಖರೀದಿಸುವವರು ದುಪ್ಪಟ್ಟು ದರ ನೀಡಬೇಕಾಗಿದೆ.</p>.<p>ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿರುವ ಹಲವು ಶುದ್ಧ ನೀರಿನ ಘಟಕಗಳಲ್ಲಿ ಜುಲೈನಲ್ಲಿಯೇ ಏರಿಸಲಾಗಿತ್ತು. ಇದೀಗ ಆರ್ಟಿ ನಗರ, ಹೆಬ್ಬಾಳ ಸುತ್ತಮುತ್ತ ಖಾಸಗಿ ಏಜೆನ್ಸಿ ಘಟಕಗಳಲ್ಲಿ ಬೆಲೆ ದುಪ್ಪಟ್ಟಾಗಿದೆ.</p>.<p>‘ವಿದ್ಯುತ್ ದರ ಏರಿಕೆಯಾಗಿದ್ದು ಘಟಕಗಳ ನಿರ್ವಹಣೆಗೆ ಹೆಚ್ಚಿನ ಹೊರೆ ಬಿದ್ದಿದೆ. ಅಲ್ಲದೇ ಫಿಲ್ಟರ್, ಕೆಮಿಕಲ್ ಸಹ ದುಬಾರಿ ಆಗಿರುವ ಕಾರಣಕ್ಕೆ 20 ಲೀಟರ್ ನೀರಿನ ಬೆಲೆಯನ್ನು ₹ 10ಕ್ಕೆ ಏರಿಕೆ ಮಾಡಲಾಗಿದೆ. ಆರ್ಟಿ ನಗರ ವ್ಯಾಪ್ತಿಯ ಘಟಕಗಳಲ್ಲಿ ಸೆ.1ರಿಂದ ಹೊಸ ದರ ಜಾರಿಗೆ ಬರಲಿದೆ’ ಎಂಬ ಫಲಕವನ್ನು ಘಟಕಗಳ ಎದುರು ಅಳವಡಿಸಲಾಗಿದೆ. </p>.<p>ಕುಡಿಯುವ ನೀರಿಗಾಗಿ ಘಟಕಗಳನ್ನು ಅವಲಂಬಿಸಿರುವ ಜನರು ನಿತ್ಯವೂ ₹ 5 ನಾಣ್ಯ ಬಳಸಿ 20 ಲೀಟರ್ ನೀರು ಪಡೆಯುತ್ತಿದ್ದರು. ಇದೀಗ ₹ 5 ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p>.<p>ಮಧ್ಯಮ ವರ್ಗದ ಜನರು, ಹೋಟೆಲ್ ಸಿಬ್ಬಂದಿ ಇದೇ ನೀರನ್ನು ಕೊಂಡೊಯ್ಯುತ್ತಿದ್ದರು. ಇದೀಗ ಅವರೂ ದುಪ್ಪಟ್ಟು ಹಣ ಪಾವತಿಸಬೇಕಾದ ಸ್ಥಿತಿ ಬಂದಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡರು. ಮೊದಲಿದಷ್ಟೇ ದರ ನಿಗದಿ ಪಡಿಸಬೇಕು ಎಂದು ಕೋರಿದ್ದಾರೆ.</p>.<p><strong>ಪರಿಶೀಲನೆ:</strong> ‘ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವನ್ನು ಸಂಘ–ಸಂಸ್ಥೆಗಳು ಅಳವಡಿಸಿವೆ. ಅವು ಬೆಲೆ ಹೆಚ್ಚಿಸಿರಬಹುದು. ಬಿಬಿಎಂಪಿಯಿಂದ ನಿರ್ವಹಣೆ ಮಾಡುವ ಘಟಕಗಳಲ್ಲಿ ನೀರಿನ ಬೆಲೆ ಹೆಚ್ಚಳವಾಗಿಲ್ಲ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಹಲವು ಶುದ್ಧ ನೀರಿನ ಘಟಕಗಳಲ್ಲಿ ನೀರಿನ ಬೆಲೆಯನ್ನು ₹ 5ರಿಂದ ₹ 10ಕ್ಕೆ ಏರಿಕೆ ಮಾಡಲಾಗಿದೆ. ಶುದ್ಧ ನೀರು ಖರೀದಿಸುವವರು ದುಪ್ಪಟ್ಟು ದರ ನೀಡಬೇಕಾಗಿದೆ.</p>.<p>ರಾಜಾಜಿನಗರ, ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿರುವ ಹಲವು ಶುದ್ಧ ನೀರಿನ ಘಟಕಗಳಲ್ಲಿ ಜುಲೈನಲ್ಲಿಯೇ ಏರಿಸಲಾಗಿತ್ತು. ಇದೀಗ ಆರ್ಟಿ ನಗರ, ಹೆಬ್ಬಾಳ ಸುತ್ತಮುತ್ತ ಖಾಸಗಿ ಏಜೆನ್ಸಿ ಘಟಕಗಳಲ್ಲಿ ಬೆಲೆ ದುಪ್ಪಟ್ಟಾಗಿದೆ.</p>.<p>‘ವಿದ್ಯುತ್ ದರ ಏರಿಕೆಯಾಗಿದ್ದು ಘಟಕಗಳ ನಿರ್ವಹಣೆಗೆ ಹೆಚ್ಚಿನ ಹೊರೆ ಬಿದ್ದಿದೆ. ಅಲ್ಲದೇ ಫಿಲ್ಟರ್, ಕೆಮಿಕಲ್ ಸಹ ದುಬಾರಿ ಆಗಿರುವ ಕಾರಣಕ್ಕೆ 20 ಲೀಟರ್ ನೀರಿನ ಬೆಲೆಯನ್ನು ₹ 10ಕ್ಕೆ ಏರಿಕೆ ಮಾಡಲಾಗಿದೆ. ಆರ್ಟಿ ನಗರ ವ್ಯಾಪ್ತಿಯ ಘಟಕಗಳಲ್ಲಿ ಸೆ.1ರಿಂದ ಹೊಸ ದರ ಜಾರಿಗೆ ಬರಲಿದೆ’ ಎಂಬ ಫಲಕವನ್ನು ಘಟಕಗಳ ಎದುರು ಅಳವಡಿಸಲಾಗಿದೆ. </p>.<p>ಕುಡಿಯುವ ನೀರಿಗಾಗಿ ಘಟಕಗಳನ್ನು ಅವಲಂಬಿಸಿರುವ ಜನರು ನಿತ್ಯವೂ ₹ 5 ನಾಣ್ಯ ಬಳಸಿ 20 ಲೀಟರ್ ನೀರು ಪಡೆಯುತ್ತಿದ್ದರು. ಇದೀಗ ₹ 5 ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.</p>.<p>ಮಧ್ಯಮ ವರ್ಗದ ಜನರು, ಹೋಟೆಲ್ ಸಿಬ್ಬಂದಿ ಇದೇ ನೀರನ್ನು ಕೊಂಡೊಯ್ಯುತ್ತಿದ್ದರು. ಇದೀಗ ಅವರೂ ದುಪ್ಪಟ್ಟು ಹಣ ಪಾವತಿಸಬೇಕಾದ ಸ್ಥಿತಿ ಬಂದಿದೆ ಎಂದು ಗ್ರಾಹಕರು ಅಳಲು ತೋಡಿಕೊಂಡರು. ಮೊದಲಿದಷ್ಟೇ ದರ ನಿಗದಿ ಪಡಿಸಬೇಕು ಎಂದು ಕೋರಿದ್ದಾರೆ.</p>.<p><strong>ಪರಿಶೀಲನೆ:</strong> ‘ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವನ್ನು ಸಂಘ–ಸಂಸ್ಥೆಗಳು ಅಳವಡಿಸಿವೆ. ಅವು ಬೆಲೆ ಹೆಚ್ಚಿಸಿರಬಹುದು. ಬಿಬಿಎಂಪಿಯಿಂದ ನಿರ್ವಹಣೆ ಮಾಡುವ ಘಟಕಗಳಲ್ಲಿ ನೀರಿನ ಬೆಲೆ ಹೆಚ್ಚಳವಾಗಿಲ್ಲ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>