<p><strong>ಬೆಂಗಳೂರು:</strong> ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಹಗರಣದ ವಿಷಯವು ವಿಧಾನಮಂಡಲ ಅಧಿವೇಶನದ ಎರಡನೇ ದಿನವೂ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.</p>.<p>ಎರಡೂ ಸದನಗಳಲ್ಲಿ ಚರ್ಚೆ ಮುಂದುವರಿಸಿದ ಬಿಜೆಪಿ ಸದಸ್ಯರು, ‘ಪ್ರಕರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.</p>.<p>ವಿಧಾನಸಭೆಯಲ್ಲಿ ಮಂಗಳವಾರವೂ ಚರ್ಚೆ ಮುಂದುವರಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹89 ಕೋಟಿ ಮೊತ್ತದ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ನಿಗಮವು ಕ್ರಿಯಾಯೋಜನೆಯನ್ನು ಅನುಮೋದಿಸಿ ಐದು ತಿಂಗಳಾದರೂ ಹಣ ಬಳಸಿರಲಿಲ್ಲ. ಹಣಕಾಸು ಇಲಾಖೆಯ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿಯವರು ಏಕೆ ಪ್ರಗತಿ ಪರಿಶೀಲನೆ ನಡೆಸಿರಲಿಲ್ಲ. ಈ ವೈಫಲ್ಯದ ಹೊಣೆಯನ್ನು ಸಿದ್ದರಾಮಯ್ಯ ಅವರೇ ಹೊರಬೇಕಲ್ಲವೇ’ ಎಂದು ಪ್ರಶ್ನಿಸಿದರು.</p>.<p>‘ಈ ವರ್ಷದ ಬಜೆಟ್ ಸಿದ್ಧಪಡಿಸಲು ಮುಖ್ಯಮಂತ್ರಿಯವರು ಇಲಾಖಾವಾರು ಪೂರ್ವಭಾವಿ ಸಭೆ ನಡೆಸಿದ್ದರು. ಹಿಂದಿನ ವರ್ಷದ ಅನುದಾನವನ್ನು ಬಾಕಿ ಉಳಿಸಿಕೊಂಡ ಬಗ್ಗೆ ಅಧಿಕಾರಿಗಳನ್ನು ಏಕೆ ಪ್ರಶ್ನಿಸಲಿಲ್ಲ? ನಿಗಮದ ಅಧಿಕಾರಿ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಈ ಹಗರಣ ಹೊರ ಬರುತ್ತಲೇ ಇರಲಿಲ್ಲ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ಲೂಟಿ ಆಗಿರುವುದರ ಹೊಣೆಯನ್ನು ಮುಖ್ಯಮಂತ್ರಿಯವರೇ ಹೊರಬೇಕು’ ಎಂದು ಆಗ್ರಹಿಸಿದರು.</p>.<p>ಬಿಜೆಪಿಯ ಬಿ.ವೈ.ವಿಜಯೇಂದ್ರ ಮಾತನಾಡಿ, ಲೂಟಿ ಮಾಡಿದ ಹಣವನ್ನು ಹೊರ ರಾಜ್ಯಗಳಿಗೆ ಸಾಗಿಸಲಾಗಿದೆ. ಇಷ್ಟೆಲ್ಲ ಆದರೂ ಸರ್ಕಾರದ ಗಮನಕ್ಕೆ ಬರಲಿಲ್ಲ. ಲೆಕ್ಕಾಧಿಕಾರಿಯ ಆತ್ಮಹತ್ಯೆ ಬಳಿಕ, ಒತ್ತಡ ಹೆಚ್ಚಾದಾಗ ಎಸ್ಐಟಿ ರಚನೆ ಮಾಡಲಾಯಿತು ಎಂದರು. ಆಗ ಮಧ್ಯ ಪ್ರವೇಶಿದ ಗೃಹ ಸಚಿವ ಪರಮೇಶ್ವರ ಅವರು, ಹಗರಣ ಗೊತ್ತಾದ ತಕ್ಷಣವೇ ಮುಖ್ಯಮಂತ್ರಿ ಎಸ್ಐಟಿ ರಚಿಸಿದರು ಎಂದು ಸಮಜಾಯಿಷಿ ನೀಡಿದರು.</p>.<p>‘ಈ ಹಣ ಯಾವ ಚುನಾವಣೆಗಳಿಗೆ ಹೋಗಿದೆ ಹೇಳಿ. ಬಳ್ಳಾರಿಯಲ್ಲಿ ಖರ್ಚು ಮಾಡಿದ್ದೀರೋ ಅಮೇಠಿಯಲ್ಲಿ ಖರ್ಚು ಮಾಡಿದ್ದೀರೊ? ಮುಖ್ಯಮಂತ್ರಿ ಪಾತ್ರ ಇಲ್ಲ ಎನ್ನುವುದಾದರೆ ಹೈಕಮಾಂಡ್ ಪಾತ್ರ ಇದೆಯೇ ಹೇಳಿ’ ಎಂದು ಬಿಜೆಪಿಯ ವಿ.ಸುನಿಲ್ಕುಮಾರ್ ಪ್ರಶ್ನಿಸಿದಾಗ, ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು. ಬಿಜೆಪಿ–ಕಾಂಗ್ರೆಸ್ ಸದಸ್ಯರ ಮಧ್ಯೆ ಗದ್ದಲದಲ್ಲಿ ಧಿಕ್ಕಾರಗಳ ಘೋಷಣೆ ಮೊಳಗಿತು. ಪೀಠದಲ್ಲಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕಲಾಪವನ್ನು ಮುಂದೂಡಿದರು.</p>.<p>ಆರಗ ಜ್ಞಾನೇಂದ್ರ ಮಾತನಾಡುವಾಗ ಕಾಂಗ್ರೆಸ್ನ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮಧ್ಯ ಪ್ರವೇಶಿಸಿ ಆಗಾಗ್ಗೆ ಅಡಚಣೆ ಮಾಡಿದ್ದರಿಂದ ಕಾಂಗ್ರೆಸ್– ಬಿಜೆಪಿ ಮಧ್ಯೆ ಪದೇ ಪದೇ ಮಾತಿನ ಜಟಾಪಟಿ ನಡೆಯಿತು.</p>.<p> <strong>‘ಶಿಥಿಲ ಆಡಳಿತ ದುರ್ಬಲ ಸಿಎಂ’</strong> </p><p>‘ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಖಡಕ್ ಆಡಳಿತ ನೀಡಿದ್ದರು. ಆದರೆ ಈ ಬಾರಿ ಜಾಳು ಜಾಳು ಆಡಳಿತ. ಮುಖ್ಯಮಂತ್ರಿ ಬಗ್ಗೆ ಯಾರಲ್ಲೂ ಭಯ ಶ್ರದ್ಧೆ ಇಲ್ಲವಾಗಿದೆ. ಏಕೆ ಹೀಗಾಗಿದೆ? ನಿಮ್ಮ ನೇತೃತ್ವದ ಸರ್ಕಾರ ಇರುವಾಗಲೇ ದಲಿತರ ಹಣವನ್ನು ಹರಿದು ತಿಂದಿದ್ದಾರೆ. ಆದರೆ ನೀವು ಕೈಚೆಲ್ಲಿ ಕೂತಿದ್ದೀರಿ. ಅಸಹಾಯಕರಾಗಿದ್ದೀರಿ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಹೇಳಿದರು. </p><p><strong>ಹೌದಾ ಹುಲಿಯಾ ಏಕೆ ಹೀಗಾದ್ರಿ?</strong></p><p> ‘ಹೌದಾ ಹುಲಿಯಾ ಎಂದು ಕರೆಸಿಕೊಳ್ಳುವ ನೀವು ಈಗ ಏಕೆ ಹೀಗಾಗಿದ್ದೀರಿ? ಎರಡು ದಿನಗಳಿಂದ ಮೌನಕ್ಕೆ ಶರಣಾಗಿದ್ದೀರಿ. ನನ್ನ ಅವಧಿಯಲ್ಲಿ ಹೀಗಾಯಿತಲ್ಲ ಎಂದು ಕೊರಗುತ್ತಿದ್ದೀರಾ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ಸಿದ್ದರಾಮಯ್ಯ ಅವರ ಕಾಲೆಳೆದರು.</p><p><strong>ಅಪ್ಪಾಜಿ ಸಂಸ್ಕೃತಿ ನಡೆಯಲ್ಲ</strong></p><p> ‘ವಿರೋಧ ಪಕ್ಷದ ನಾಯಕ ಅಶೋಕ ನಿನ್ನೆ ಚೆನ್ನಾಗಿ ಮಾತನಾಡಿದರು. ಈಗ ಅವರು ಸ್ವತಂತ್ರ ಸ್ವಾಭಿಮಾನಿ ನಾಯಕರಾಗಿ ಮಾತನಾಡಿದ್ದಾರೆ. ಅಪ್ಪಾಜಿ ಎಂದು ಹೇಳುವುದು ಬಿಟ್ಟಿದ್ದಾರೆ. ಅಪ್ಪ–ಮಕ್ಕಳ ಹಂಗಿಲ್ಲದ ಕಾರಣ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದು ಸದನವನ್ನು ನಗೆಗಡಲಲ್ಲಿ ತೇಲಿಸಿತು. ‘ಇನ್ನು ಅಪ್ಪಾಜಿ ಸಂಸ್ಕೃತಿ ನಡೆಯುವುದಿಲ್ಲ. ನಿಮ್ಮ ನಿಮ್ಮ ತಂದೆಗೆ ಅಪ್ಪಾಜಿ ಅನ್ನಿ ಯಾರ್ಯಾರಿಗೋ ಅಪ್ಪಾಜಿ ಅನ್ನಬೇಕಾಗಿಲ್ಲ’ ಎಂದು ಹೇಳಿದರು.</p><p> <strong>‘ನೈತಿಕತೆ ಬಗ್ಗೆ ಮಾತಾಡುವ ಅಧಿಕಾರ ನಿಮಗಿಲ್ಲ’</strong> </p><p>‘ನೀವು ಗೃಹ ಸಚಿವರಾಗಿದ್ದಾಗಲೇ ಪಿಎಸ್ಐ ಹಗರಣ ನಡೆದಿದ್ದು. ಆಗ ನೀವು ರಾಜೀನಾಮೆ ಕೊಟ್ಟಿದ್ದಿರಾ? ನೈತಿಕತೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವೇ ಇಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಹಗರಣದ ವಿಷಯವು ವಿಧಾನಮಂಡಲ ಅಧಿವೇಶನದ ಎರಡನೇ ದಿನವೂ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು.</p>.<p>ಎರಡೂ ಸದನಗಳಲ್ಲಿ ಚರ್ಚೆ ಮುಂದುವರಿಸಿದ ಬಿಜೆಪಿ ಸದಸ್ಯರು, ‘ಪ್ರಕರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.</p>.<p>ವಿಧಾನಸಭೆಯಲ್ಲಿ ಮಂಗಳವಾರವೂ ಚರ್ಚೆ ಮುಂದುವರಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹89 ಕೋಟಿ ಮೊತ್ತದ ಹಗರಣ ನಡೆದಿದೆ ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ನಿಗಮವು ಕ್ರಿಯಾಯೋಜನೆಯನ್ನು ಅನುಮೋದಿಸಿ ಐದು ತಿಂಗಳಾದರೂ ಹಣ ಬಳಸಿರಲಿಲ್ಲ. ಹಣಕಾಸು ಇಲಾಖೆಯ ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿಯವರು ಏಕೆ ಪ್ರಗತಿ ಪರಿಶೀಲನೆ ನಡೆಸಿರಲಿಲ್ಲ. ಈ ವೈಫಲ್ಯದ ಹೊಣೆಯನ್ನು ಸಿದ್ದರಾಮಯ್ಯ ಅವರೇ ಹೊರಬೇಕಲ್ಲವೇ’ ಎಂದು ಪ್ರಶ್ನಿಸಿದರು.</p>.<p>‘ಈ ವರ್ಷದ ಬಜೆಟ್ ಸಿದ್ಧಪಡಿಸಲು ಮುಖ್ಯಮಂತ್ರಿಯವರು ಇಲಾಖಾವಾರು ಪೂರ್ವಭಾವಿ ಸಭೆ ನಡೆಸಿದ್ದರು. ಹಿಂದಿನ ವರ್ಷದ ಅನುದಾನವನ್ನು ಬಾಕಿ ಉಳಿಸಿಕೊಂಡ ಬಗ್ಗೆ ಅಧಿಕಾರಿಗಳನ್ನು ಏಕೆ ಪ್ರಶ್ನಿಸಲಿಲ್ಲ? ನಿಗಮದ ಅಧಿಕಾರಿ ಪಿ. ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಈ ಹಗರಣ ಹೊರ ಬರುತ್ತಲೇ ಇರಲಿಲ್ಲ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣ ಲೂಟಿ ಆಗಿರುವುದರ ಹೊಣೆಯನ್ನು ಮುಖ್ಯಮಂತ್ರಿಯವರೇ ಹೊರಬೇಕು’ ಎಂದು ಆಗ್ರಹಿಸಿದರು.</p>.<p>ಬಿಜೆಪಿಯ ಬಿ.ವೈ.ವಿಜಯೇಂದ್ರ ಮಾತನಾಡಿ, ಲೂಟಿ ಮಾಡಿದ ಹಣವನ್ನು ಹೊರ ರಾಜ್ಯಗಳಿಗೆ ಸಾಗಿಸಲಾಗಿದೆ. ಇಷ್ಟೆಲ್ಲ ಆದರೂ ಸರ್ಕಾರದ ಗಮನಕ್ಕೆ ಬರಲಿಲ್ಲ. ಲೆಕ್ಕಾಧಿಕಾರಿಯ ಆತ್ಮಹತ್ಯೆ ಬಳಿಕ, ಒತ್ತಡ ಹೆಚ್ಚಾದಾಗ ಎಸ್ಐಟಿ ರಚನೆ ಮಾಡಲಾಯಿತು ಎಂದರು. ಆಗ ಮಧ್ಯ ಪ್ರವೇಶಿದ ಗೃಹ ಸಚಿವ ಪರಮೇಶ್ವರ ಅವರು, ಹಗರಣ ಗೊತ್ತಾದ ತಕ್ಷಣವೇ ಮುಖ್ಯಮಂತ್ರಿ ಎಸ್ಐಟಿ ರಚಿಸಿದರು ಎಂದು ಸಮಜಾಯಿಷಿ ನೀಡಿದರು.</p>.<p>‘ಈ ಹಣ ಯಾವ ಚುನಾವಣೆಗಳಿಗೆ ಹೋಗಿದೆ ಹೇಳಿ. ಬಳ್ಳಾರಿಯಲ್ಲಿ ಖರ್ಚು ಮಾಡಿದ್ದೀರೋ ಅಮೇಠಿಯಲ್ಲಿ ಖರ್ಚು ಮಾಡಿದ್ದೀರೊ? ಮುಖ್ಯಮಂತ್ರಿ ಪಾತ್ರ ಇಲ್ಲ ಎನ್ನುವುದಾದರೆ ಹೈಕಮಾಂಡ್ ಪಾತ್ರ ಇದೆಯೇ ಹೇಳಿ’ ಎಂದು ಬಿಜೆಪಿಯ ವಿ.ಸುನಿಲ್ಕುಮಾರ್ ಪ್ರಶ್ನಿಸಿದಾಗ, ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು. ಬಿಜೆಪಿ–ಕಾಂಗ್ರೆಸ್ ಸದಸ್ಯರ ಮಧ್ಯೆ ಗದ್ದಲದಲ್ಲಿ ಧಿಕ್ಕಾರಗಳ ಘೋಷಣೆ ಮೊಳಗಿತು. ಪೀಠದಲ್ಲಿದ್ದ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಕಲಾಪವನ್ನು ಮುಂದೂಡಿದರು.</p>.<p>ಆರಗ ಜ್ಞಾನೇಂದ್ರ ಮಾತನಾಡುವಾಗ ಕಾಂಗ್ರೆಸ್ನ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮಧ್ಯ ಪ್ರವೇಶಿಸಿ ಆಗಾಗ್ಗೆ ಅಡಚಣೆ ಮಾಡಿದ್ದರಿಂದ ಕಾಂಗ್ರೆಸ್– ಬಿಜೆಪಿ ಮಧ್ಯೆ ಪದೇ ಪದೇ ಮಾತಿನ ಜಟಾಪಟಿ ನಡೆಯಿತು.</p>.<p> <strong>‘ಶಿಥಿಲ ಆಡಳಿತ ದುರ್ಬಲ ಸಿಎಂ’</strong> </p><p>‘ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಖಡಕ್ ಆಡಳಿತ ನೀಡಿದ್ದರು. ಆದರೆ ಈ ಬಾರಿ ಜಾಳು ಜಾಳು ಆಡಳಿತ. ಮುಖ್ಯಮಂತ್ರಿ ಬಗ್ಗೆ ಯಾರಲ್ಲೂ ಭಯ ಶ್ರದ್ಧೆ ಇಲ್ಲವಾಗಿದೆ. ಏಕೆ ಹೀಗಾಗಿದೆ? ನಿಮ್ಮ ನೇತೃತ್ವದ ಸರ್ಕಾರ ಇರುವಾಗಲೇ ದಲಿತರ ಹಣವನ್ನು ಹರಿದು ತಿಂದಿದ್ದಾರೆ. ಆದರೆ ನೀವು ಕೈಚೆಲ್ಲಿ ಕೂತಿದ್ದೀರಿ. ಅಸಹಾಯಕರಾಗಿದ್ದೀರಿ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಹೇಳಿದರು. </p><p><strong>ಹೌದಾ ಹುಲಿಯಾ ಏಕೆ ಹೀಗಾದ್ರಿ?</strong></p><p> ‘ಹೌದಾ ಹುಲಿಯಾ ಎಂದು ಕರೆಸಿಕೊಳ್ಳುವ ನೀವು ಈಗ ಏಕೆ ಹೀಗಾಗಿದ್ದೀರಿ? ಎರಡು ದಿನಗಳಿಂದ ಮೌನಕ್ಕೆ ಶರಣಾಗಿದ್ದೀರಿ. ನನ್ನ ಅವಧಿಯಲ್ಲಿ ಹೀಗಾಯಿತಲ್ಲ ಎಂದು ಕೊರಗುತ್ತಿದ್ದೀರಾ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ಸಿದ್ದರಾಮಯ್ಯ ಅವರ ಕಾಲೆಳೆದರು.</p><p><strong>ಅಪ್ಪಾಜಿ ಸಂಸ್ಕೃತಿ ನಡೆಯಲ್ಲ</strong></p><p> ‘ವಿರೋಧ ಪಕ್ಷದ ನಾಯಕ ಅಶೋಕ ನಿನ್ನೆ ಚೆನ್ನಾಗಿ ಮಾತನಾಡಿದರು. ಈಗ ಅವರು ಸ್ವತಂತ್ರ ಸ್ವಾಭಿಮಾನಿ ನಾಯಕರಾಗಿ ಮಾತನಾಡಿದ್ದಾರೆ. ಅಪ್ಪಾಜಿ ಎಂದು ಹೇಳುವುದು ಬಿಟ್ಟಿದ್ದಾರೆ. ಅಪ್ಪ–ಮಕ್ಕಳ ಹಂಗಿಲ್ಲದ ಕಾರಣ ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದು ಸದನವನ್ನು ನಗೆಗಡಲಲ್ಲಿ ತೇಲಿಸಿತು. ‘ಇನ್ನು ಅಪ್ಪಾಜಿ ಸಂಸ್ಕೃತಿ ನಡೆಯುವುದಿಲ್ಲ. ನಿಮ್ಮ ನಿಮ್ಮ ತಂದೆಗೆ ಅಪ್ಪಾಜಿ ಅನ್ನಿ ಯಾರ್ಯಾರಿಗೋ ಅಪ್ಪಾಜಿ ಅನ್ನಬೇಕಾಗಿಲ್ಲ’ ಎಂದು ಹೇಳಿದರು.</p><p> <strong>‘ನೈತಿಕತೆ ಬಗ್ಗೆ ಮಾತಾಡುವ ಅಧಿಕಾರ ನಿಮಗಿಲ್ಲ’</strong> </p><p>‘ನೀವು ಗೃಹ ಸಚಿವರಾಗಿದ್ದಾಗಲೇ ಪಿಎಸ್ಐ ಹಗರಣ ನಡೆದಿದ್ದು. ಆಗ ನೀವು ರಾಜೀನಾಮೆ ಕೊಟ್ಟಿದ್ದಿರಾ? ನೈತಿಕತೆ ಬಗ್ಗೆ ಮಾತನಾಡಲು ನಿಮಗೆ ಅಧಿಕಾರವೇ ಇಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ಜ್ಞಾನೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>