ಕೆಂಗೇರಿ: ಪರಿಸರ ರಕ್ಷಣೆ ಎಲ್ಲರ ವೈಯಕ್ತಿಕ ಜವಾಬ್ದಾರಿ. ಈ ಕಾರ್ಯಕ್ಕೆ ಅನ್ಯರ ಸಹಕಾರ ನಿರೀಕ್ಷೆ ಸಲ್ಲದು ಎಂದು ಪರಿಸರ ಪ್ರೇಮಿ ಬಡಮಾರನಹಳ್ಳಿ ಪೊರಕೆ ಮಂಜಪ್ಪ ಹೇಳಿದರು.
ಪರಿಸರ ಸೇನೆ ಮತ್ತು ಜಗಯೋಗಾಲಯ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಯೋಗ ಶಿಬಿರ ಹಾಗೂ ಶ್ರಮದಾನ ಕಾರ್ಯಕ್ರಮದಲ್ಲಿ ಭೀಮನಕುಪ್ಪೆ ಕೆರೆ ಸ್ವಚ್ಛಗೊಳಿಸಿ ಅವರು ಮಾತನಾಡಿದರು.
‘ಸಂಘಟನೆಯ ವತಿಯಿಂದ ಪ್ರತಿ ತಿಂಗಳ ನಾಲ್ಕನೇ ಶನಿವಾರ ಶ್ರಮದಾನ ಹಾಗೂ ಯೋಗ ಶಿಬಿರ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ನೂರಾರು ಸಸಿಗಳನ್ನು ನೆಡಲಾಗುತ್ತಿದೆ. ಕೆರೆಗಳ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಆಸಕ್ತ ಪರಿಸರ ಪ್ರೇಮಿಗಳು ಮೊಬೈಲ್ ಸಂಖ್ಯೆ 8095623071 ಸಂಪರ್ಕಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಬಹುದು’ ಎಂದು ಮನವಿ ಮಾಡಿದರು.
ಸ್ಥಳೀಯರ ಸಹಕಾರದೊಂದಿಗೆ ಶಿರಾ ತಾಲೂಕಿನ ಐದು ಗ್ರಾಮಗಳನ್ನು ಕೆಲ ತಿಂಗಳಲ್ಲಿ ಸಂಪೂರ್ಣ ಸ್ವಚ್ಫ ಗ್ರಾಮವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಯೋಗ ಶಿಕ್ಷಕಿ ತೇಜಸ್ವಿನಿ, ವೃಕ್ಷಾಸನ ಪ್ರದರ್ಶಿಸಿದರು. ಕ್ರಮ ಬದ್ಧ ಯೋಗಾಸನದ ಬಗ್ಗೆ ಮಾಹಿತಿ ಹಂಚಿಕೊಂಡರು.