<p><strong>ಬೆಂಗಳೂರು</strong>/ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿಗೆ (ಡಿಎಚ್ಒ) ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ರಾಮಯ್ಯ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ₹7 ಲಕ್ಷ ವಂಚಿಸಿದ್ದು, ಈ ಸಂಬಂಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>2023 ಆಗಸ್ಟ್ನಲ್ಲಿ ಘಟನೆ ನಡೆದಿದ್ದರೂ, ಡಿಎಚ್ಒ ಡಾ.ಜಯಶ್ರೀ ಎಮ್ಮಿ ಅವರು, ಜುಲೈ 8ರಂದು (ಸೋಮವಾರ) ಪ್ರಕರಣ ದಾಖಲಿಸಿದ್ದಾರೆ.</p>.<p>‘ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.</p>.<p>‘ಬಾಗಲಕೋಟೆ ಡಿಎಚ್ಒ ಆಗಿ ಜಯಶ್ರೀ ಅವರು 2022ರ ಜನವರಿ 14ರಿಂದ ಕೆಲಸ ಮಾಡುತ್ತಿದ್ದಾರೆ. 2023ರ ಆಗಸ್ಟ್ 11ಕ್ಕೆ ಅದೇ ಹುದ್ದೆಗೆ ಡಾ.ರಾಜಕುಮಾರ್ ಯರಗಲ್ ಅವರನ್ನು ( ಕಾಂಗ್ರೆಸ್ ಶಾಸಕ ಎಚ್.ವೈ. ಮೇಟಿ ಅಳಿಯ) ವರ್ಗಾವಣೆ ಮಾಡಲಾಗಿತ್ತು. ಜಯಶ್ರೀ ರಜೆಯಲ್ಲಿದ್ದಾಗ ಆಗಸ್ಟ್ 14ರಂದು ರಾಜಕುಮಾರ ಕಚೇರಿಗೆ ಬಂದು ವರದಿ ಮಾಡಿಕೊಂಡಿದ್ದರು. ರಜೆಯಿಂದ ವಾಪಸ್ ಬಂದಿದ್ದ ಜಯಶ್ರೀ ಅಧಿಕಾರ ಹಸ್ತಾಂತರಿಸದೇ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಡಿಎಚ್ಒ ಹುದ್ದೆಯಲ್ಲಿ ಜಯಶ್ರೀ ಅವರೇ ಮುಂದುವರೆಯುವಂತೆ ಕೆಎಟಿ ಆಗಸ್ಟ್ 17ರಂದು ಆದೇಶಿಸಿತ್ತು. ಆಗಸ್ಟ್ 22ರಂದು ಹಿರಿಯ ಅಧಿಕಾರಿಗಳು ಭೇಟಿಗೆಂದು ಬೆಂಗಳೂರಿಗೆ ಡಿಎಚ್ಒ ಬಂದಿದ್ದರು. ಅವರಿಗೆ 78294 72126/91640 06691 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ದ ವ್ಯಕ್ತಿ, ರಾಮಯ್ಯ ಎಂದು ಪರಿಚಯಿಸಿಕೊಂಡಿದ್ದರು. ನಿವೃತ್ತ ಕೆಎಎಸ್ ಅಧಿಕಾರಿ ಆಗಿದ್ದು, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಪರಿಚಯಿಸಿಕೊಂಡು ನೆರವು ನೀಡುವುದಾಗಿ ಹೇಳಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ರಾಜಕುಮಾರ್ ಅವರು ಹೈಕೋರ್ಟ್ಗೆ ಮೊರೆ ಹೋದರೆ ತೊಂದರೆ ಆಗಲಿದೆ’ ಎಂದು ಜಯಶ್ರೀಗೆ ತಿಳಿಸಿದ್ದ ಕರೆ ಮಾಡಿದ ವ್ಯಕ್ತಿ, ಹಣ ನೀಡಿದರೆ ನಿಮ್ಮ ಪರವಾಗಿ ಆದೇಶ ಮಾಡಿಸುವುದಾಗಿ ಆಮಿಷ ಒಡ್ಡಿದ್ದರು. ಅದಾದ ಮೇಲೆ ಜಯಶ್ರೀ ಅವರು ಹಂತಹಂತವಾಗಿ ₹7 ಲಕ್ಷವನ್ನು ಫೋನ್ ಪೇ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿದ್ದರು. ಕೆಲವು ದಿನಗಳ ಬಳಿಕ ಜಯಶ್ರೀ ಅವರು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆಗ ತಾವು ವಂಚನೆಗೆ ಒಳಗಾಗಿರುವುದು ಪತ್ತೆಯಾಗಿತ್ತು’ ಎಂದು ಪೊಲೀಸರು ಹೇಳಿದರು.</p>.<p>ಅಧಿಕಾರ ಹಸ್ತಾಂತರಿಸದೇ ಜಯಶ್ರೀ ಕೆಎಟಿ ಮೊರೆ ಹೋಗಿದ್ದನ್ನು ಗಮನಿಸಿ ವಂಚನೆ ಎಸಗಲಾಗಿದೆ ಎಂದು ಪೊಲೀಸರು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಲು ಡಾ.ಜಯಶ್ರೀ ಎಮ್ಮಿ ನಿರಾಕರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>/ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿಗೆ (ಡಿಎಚ್ಒ) ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ರಾಮಯ್ಯ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ ₹7 ಲಕ್ಷ ವಂಚಿಸಿದ್ದು, ಈ ಸಂಬಂಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>2023 ಆಗಸ್ಟ್ನಲ್ಲಿ ಘಟನೆ ನಡೆದಿದ್ದರೂ, ಡಿಎಚ್ಒ ಡಾ.ಜಯಶ್ರೀ ಎಮ್ಮಿ ಅವರು, ಜುಲೈ 8ರಂದು (ಸೋಮವಾರ) ಪ್ರಕರಣ ದಾಖಲಿಸಿದ್ದಾರೆ.</p>.<p>‘ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.</p>.<p>‘ಬಾಗಲಕೋಟೆ ಡಿಎಚ್ಒ ಆಗಿ ಜಯಶ್ರೀ ಅವರು 2022ರ ಜನವರಿ 14ರಿಂದ ಕೆಲಸ ಮಾಡುತ್ತಿದ್ದಾರೆ. 2023ರ ಆಗಸ್ಟ್ 11ಕ್ಕೆ ಅದೇ ಹುದ್ದೆಗೆ ಡಾ.ರಾಜಕುಮಾರ್ ಯರಗಲ್ ಅವರನ್ನು ( ಕಾಂಗ್ರೆಸ್ ಶಾಸಕ ಎಚ್.ವೈ. ಮೇಟಿ ಅಳಿಯ) ವರ್ಗಾವಣೆ ಮಾಡಲಾಗಿತ್ತು. ಜಯಶ್ರೀ ರಜೆಯಲ್ಲಿದ್ದಾಗ ಆಗಸ್ಟ್ 14ರಂದು ರಾಜಕುಮಾರ ಕಚೇರಿಗೆ ಬಂದು ವರದಿ ಮಾಡಿಕೊಂಡಿದ್ದರು. ರಜೆಯಿಂದ ವಾಪಸ್ ಬಂದಿದ್ದ ಜಯಶ್ರೀ ಅಧಿಕಾರ ಹಸ್ತಾಂತರಿಸದೇ ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಮೊರೆ ಹೋಗಿದ್ದರು. ಡಿಎಚ್ಒ ಹುದ್ದೆಯಲ್ಲಿ ಜಯಶ್ರೀ ಅವರೇ ಮುಂದುವರೆಯುವಂತೆ ಕೆಎಟಿ ಆಗಸ್ಟ್ 17ರಂದು ಆದೇಶಿಸಿತ್ತು. ಆಗಸ್ಟ್ 22ರಂದು ಹಿರಿಯ ಅಧಿಕಾರಿಗಳು ಭೇಟಿಗೆಂದು ಬೆಂಗಳೂರಿಗೆ ಡಿಎಚ್ಒ ಬಂದಿದ್ದರು. ಅವರಿಗೆ 78294 72126/91640 06691 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ದ ವ್ಯಕ್ತಿ, ರಾಮಯ್ಯ ಎಂದು ಪರಿಚಯಿಸಿಕೊಂಡಿದ್ದರು. ನಿವೃತ್ತ ಕೆಎಎಸ್ ಅಧಿಕಾರಿ ಆಗಿದ್ದು, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಪರಿಚಯಿಸಿಕೊಂಡು ನೆರವು ನೀಡುವುದಾಗಿ ಹೇಳಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ರಾಜಕುಮಾರ್ ಅವರು ಹೈಕೋರ್ಟ್ಗೆ ಮೊರೆ ಹೋದರೆ ತೊಂದರೆ ಆಗಲಿದೆ’ ಎಂದು ಜಯಶ್ರೀಗೆ ತಿಳಿಸಿದ್ದ ಕರೆ ಮಾಡಿದ ವ್ಯಕ್ತಿ, ಹಣ ನೀಡಿದರೆ ನಿಮ್ಮ ಪರವಾಗಿ ಆದೇಶ ಮಾಡಿಸುವುದಾಗಿ ಆಮಿಷ ಒಡ್ಡಿದ್ದರು. ಅದಾದ ಮೇಲೆ ಜಯಶ್ರೀ ಅವರು ಹಂತಹಂತವಾಗಿ ₹7 ಲಕ್ಷವನ್ನು ಫೋನ್ ಪೇ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿದ್ದರು. ಕೆಲವು ದಿನಗಳ ಬಳಿಕ ಜಯಶ್ರೀ ಅವರು ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ ರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆಗ ತಾವು ವಂಚನೆಗೆ ಒಳಗಾಗಿರುವುದು ಪತ್ತೆಯಾಗಿತ್ತು’ ಎಂದು ಪೊಲೀಸರು ಹೇಳಿದರು.</p>.<p>ಅಧಿಕಾರ ಹಸ್ತಾಂತರಿಸದೇ ಜಯಶ್ರೀ ಕೆಎಟಿ ಮೊರೆ ಹೋಗಿದ್ದನ್ನು ಗಮನಿಸಿ ವಂಚನೆ ಎಸಗಲಾಗಿದೆ ಎಂದು ಪೊಲೀಸರು ಹೇಳಿದರು. ಈ ಕುರಿತು ಪ್ರತಿಕ್ರಿಯಿಸಲು ಡಾ.ಜಯಶ್ರೀ ಎಮ್ಮಿ ನಿರಾಕರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>