ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಆಹಾರದ ಪೊಟ್ಟಣ್ಣಗಳನ್ನು ವಿತರಿಸುತ್ತಿರುವ ರೋಟಿ ಚಾರಿಟಿ ಟ್ರಸ್ಟ್ನ ಸೈಯ್ಯದ್ ಗುಲಾಬ್ –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್.ಜಿ.
ಪ್ರತಿನಿತ್ಯ ಬಿಸಿ–ಬಿಸಿ ಊಟ ವಿತರಿಸುವ ಗುಲಾಬ್ ಅವರು ಕೆಲಸ ಶ್ಲಾಘನೀಯ.ನಮ್ಮಂತಹ ನೂರಾರು ಬಡವರಿಗೆ ನಿರ್ಗತಿಕರಿಗೆ ಒಂದು ಹೊತ್ತಿನ ಊಟ ಸಿಗುತ್ತಿದೆ.
ಶಾರದಮ್ಮ ರೋಗಿಯ ಸಂಬಂಧಿ
‘ಹಸಿವಿಗೆ ಜಾತಿ–ಧರ್ಮವಿಲ್ಲ’
‘ಹಸಿವಿಗೆ ಯಾವುದೇ ರೀತಿಯ ಜಾತಿ–ಧರ್ಮ ಇಲ್ಲ. ಹೊಟ್ಟೆ ಹಸಿದು ಬಂದವರಿಗೆ ಯಾವುದೇ ರೀತಿಯ ತಾರತಮ್ಯ ಮಾಡದೇ ಆಹಾರ ವಿತರಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ಆಸ್ಪತ್ರೆಗಳ ಮುಂಭಾಗದಲ್ಲಿ ಉಚಿತ ಆಹಾರ ವಿತರಿಸುವ ಯೋಚನೆ ಇದೆ’ ಎಂದು ಸೈಯ್ಯದ್ ಗುಲಾಬ್ ತಿಳಿಸಿದರು. ‘ವೈದ್ಯರ ಸಲಹೆಯಂತೆ ರೋಗಿಗಳಿಗೆ ಬೇಕಾದ ಗೀ ರೈಸ್ ಪುಲಾವ್ ಅನ್ನ ಸಾಂಬರ್ ಸೇರಿದಂತೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸಿ ವಿತರಿಸುತ್ತಿದ್ದೇನೆ’ ಎಂದರು.