<p><strong>ಬೆಂಗಳೂರು</strong>: ಪಂಡಿತ್ ಬಿಮಲೇಂದು ಮುಖರ್ಜಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಕೈಲಾಸ್ ಸಂಗೀತ ಟ್ರಸ್ಟ್ ಇದೇ 26ರಂದು ಸಂಜೆ 6 ಗಂಟೆಗೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ‘ಆಚಾರ್ಯ ದೇವೋ ಭವ’ ಶೀರ್ಷಿಕೆಯಡಿ ಸಂಗೀತ ಕಛೇರಿ ಹಮ್ಮಿಕೊಂಡಿದೆ.</p>.<p>ಬಿಮಲೇಂದು ಮುಖರ್ಜಿ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ಇತರ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಕೌಶಿಕಿ ಚಕ್ರವರ್ತಿ ಅವರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಅವರಿಗೆ ಇಶಾನ್ ಘೋಷ್, ಮುರದ್ ಅಲಿ ಖಾನ್ ಹಾಗೂ ತನ್ಮಯ್ ಡಿಯೋಚಕೆ ವಾದ್ಯ ಸಹಕಾರ ನೀಡಲಿದ್ದಾರೆ. </p>.<p>ಸಿತಾರ್ ವಾದಕಿ ಅನುಪಮಾ ಭಾಗವತ್ ಅವರಿಂದಲೂ ಸಂಗೀತ ಕಛೇರಿ ನಡೆಯಲಿದ್ದು, ಅವರಿಗೆ ತಬಲಾದಲ್ಲಿ ಮೇಘಶ್ಯಾಮ್ ಕೇಶವ್ ಸಾಥ್ ನೀಡುತ್ತಾರೆ. ಕಾರ್ಯಕ್ರಮದ ಪಾಸ್ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯವಿವೆ.</p>.<p>ಬಿಮಲೇಂದು ಮುಖರ್ಜಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಟ್ರಸ್ಟ್, ಇದೇ ಜುಲೈನಿಂದ 2025ರ ಜನವರಿವರೆಗೆ ಬೆಂಗಳೂರು, ಪುಣೆ, ಹೈದರಾಬಾದ್ ಹಾಗೂ ಇತರ ನಗರಗಳಲ್ಲಿ ಸಂಗೀತೋತ್ಸವ ನಡೆಸಲು ನಿರ್ಧರಿಸಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪಂಡಿತ್ ಬಿಮಲೇಂದು ಮುಖರ್ಜಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಕೈಲಾಸ್ ಸಂಗೀತ ಟ್ರಸ್ಟ್ ಇದೇ 26ರಂದು ಸಂಜೆ 6 ಗಂಟೆಗೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ‘ಆಚಾರ್ಯ ದೇವೋ ಭವ’ ಶೀರ್ಷಿಕೆಯಡಿ ಸಂಗೀತ ಕಛೇರಿ ಹಮ್ಮಿಕೊಂಡಿದೆ.</p>.<p>ಬಿಮಲೇಂದು ಮುಖರ್ಜಿ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ಇತರ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗಾಯಕಿ ಕೌಶಿಕಿ ಚಕ್ರವರ್ತಿ ಅವರು ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ಅವರಿಗೆ ಇಶಾನ್ ಘೋಷ್, ಮುರದ್ ಅಲಿ ಖಾನ್ ಹಾಗೂ ತನ್ಮಯ್ ಡಿಯೋಚಕೆ ವಾದ್ಯ ಸಹಕಾರ ನೀಡಲಿದ್ದಾರೆ. </p>.<p>ಸಿತಾರ್ ವಾದಕಿ ಅನುಪಮಾ ಭಾಗವತ್ ಅವರಿಂದಲೂ ಸಂಗೀತ ಕಛೇರಿ ನಡೆಯಲಿದ್ದು, ಅವರಿಗೆ ತಬಲಾದಲ್ಲಿ ಮೇಘಶ್ಯಾಮ್ ಕೇಶವ್ ಸಾಥ್ ನೀಡುತ್ತಾರೆ. ಕಾರ್ಯಕ್ರಮದ ಪಾಸ್ಗಳು ‘ಬುಕ್ ಮೈ ಶೋ’ದಲ್ಲಿ ಲಭ್ಯವಿವೆ.</p>.<p>ಬಿಮಲೇಂದು ಮುಖರ್ಜಿ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಟ್ರಸ್ಟ್, ಇದೇ ಜುಲೈನಿಂದ 2025ರ ಜನವರಿವರೆಗೆ ಬೆಂಗಳೂರು, ಪುಣೆ, ಹೈದರಾಬಾದ್ ಹಾಗೂ ಇತರ ನಗರಗಳಲ್ಲಿ ಸಂಗೀತೋತ್ಸವ ನಡೆಸಲು ನಿರ್ಧರಿಸಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>