<p><strong>ಬೆಂಗಳೂರು:</strong> ‘ಮಠಗಳಲ್ಲಿ ಮಕ್ಕಳು ಬೀಡು ಹೂಡಬಹುದು, ಸಮಾಜದ ಸಂಪತ್ತು ಓರ್ವ ವ್ಯಕ್ತಿಯ ಪಾಲಾಗಬಹುದು ಎಂಬ ಕಾರಣಕ್ಕೆ ಮಠಾಧೀಶರಿಗೆ ವಿವಾಹ ನಿಷೇಧ ಮಾಡಲಾಗಿದೆ. ಆದರೆ, ಇದು ನಿಸರ್ಗ ತತ್ವಕ್ಕೆ ವಿರುದ್ಧವಾಗಿದೆ’ ಎಂದು ಸಾಮಾಜಿಕ ಚಿಂತಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡರು. </p>.<p>‘ಬಸವಣ್ಣ ಅವರ ಕಾಲದಲ್ಲಿ ಅವಿವಾಹಿತರು ಮಠಾಧೀಶರಾಗಿರಲಿಲ್ಲ. ವಿವಾಹಿತರೇ ಮಠಾಧೀಶರಾಗಿದ್ದರು. ಬಸವಣ್ಣ ಅವರು ತಮ್ಮ ವಚನದಲ್ಲಿ ‘ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು...’ ಎಂದು ಹೇಳಿದ್ದಾರೆ. ಅಂಬಿಗರ ಚೌಡಯ್ಯನ ವಚನದಲ್ಲಿ ಮಠಮಾನ್ಯಗಳ ಬಗ್ಗೆ ಕಠುವಾದ ಟೀಕೆಯಿದೆ. ಮಠಮಾನ್ಯಗಳು ನಮ್ಮ ಸಂಸ್ಕೃತಿಗೆ ಸಂಬಂಧಿಸಿವೆ. ಆದ್ದರಿಂದ ಇವುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿರಕ್ತ ಮಠಗಳು ಹೆಚ್ಚಿದ್ದು, ಸಾಂಸಾರಿಕ ಮಠಗಳ ಸಂಖ್ಯೆ ಕಡಿಮೆಯಿದೆ. ಸಮಾಜದ ಸಂಪತ್ತಾದ ಮಠಗಳು ವ್ಯಕ್ತಿಗೆ ಸೇರಿಹೋಗುತ್ತದೆ ಎಂಬ ಕಾರಣಕ್ಕೆ ಸ್ವಾಮಿಗಳು, ಜಂಗಮರಿಗೆ ವಿವಾಹದಿಂದ ವಂಚಿತರನ್ನಾಗಿ ಮಾಡಲಾಗಿದೆ. ಇದು ಸರಿಯಲ್ಲ’ ಎಂದು ಹೇಳಿದರು </p>.<p>‘ಮಠಮಾನ್ಯಗಳು ಸಾಮಾಜಿಕ ಬದುಕಿನಲ್ಲಿ ಏನು ನಡೆಯುತ್ತಿದೆ? ಯಾವುದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂಬುದನ್ನು ತಿಳಿದುಕೊಳ್ಳಬೇಕು. ಆಗ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದರು.</p>.<p>‘ಶಿಕ್ಷಣ ವ್ಯವಸ್ಥೆಯಲ್ಲಿಯೂ ಹಲವು ದೋಷಗಳಿವೆ. ಯುಜಿಸಿ ಪ್ರಾಧ್ಯಾಪಕರಿಗೆ ಲಕ್ಷಾಂತರ ರೂಪಾಯಿ ನೀಡಲಾಗುತ್ತಿದೆ. ಗೌರವ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರೆಂದು ಕರೆಸಿಕೊಂಡು, ಪಾಠ ಮಾಡುವವರಿಗೆ ಸೂಕ್ತ ವೇತನವಿಲ್ಲ. ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಅವರು, ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡುತ್ತಾರೆ? ಈ ಬಗ್ಗೆ ಹೋರಾಟಗಳು ನಡೆಸಿದ ಬಳಿಕ ವೇತನದಲ್ಲಿ ಸ್ವಲ್ಪ ಏರಿಕೆಕಂಡಿತು. ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ನಮ್ಮದೇ ಸರ್ಕಾರ ಅಂದುಕೊಳ್ಳಬೇಕು. ಕವಿಗಳು, ಬರಹಗಾರರು ವಿರೋಧ ಪಕ್ಷದ ರೀತಿ ಇರಬೇಕು’ ಎಂದು ಹೇಳಿದರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಅವರು ಪ್ರಾಸ್ತಾವಿಕ ಮಾತನಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮಠಗಳಲ್ಲಿ ಮಕ್ಕಳು ಬೀಡು ಹೂಡಬಹುದು, ಸಮಾಜದ ಸಂಪತ್ತು ಓರ್ವ ವ್ಯಕ್ತಿಯ ಪಾಲಾಗಬಹುದು ಎಂಬ ಕಾರಣಕ್ಕೆ ಮಠಾಧೀಶರಿಗೆ ವಿವಾಹ ನಿಷೇಧ ಮಾಡಲಾಗಿದೆ. ಆದರೆ, ಇದು ನಿಸರ್ಗ ತತ್ವಕ್ಕೆ ವಿರುದ್ಧವಾಗಿದೆ’ ಎಂದು ಸಾಮಾಜಿಕ ಚಿಂತಕ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡರು. </p>.<p>‘ಬಸವಣ್ಣ ಅವರ ಕಾಲದಲ್ಲಿ ಅವಿವಾಹಿತರು ಮಠಾಧೀಶರಾಗಿರಲಿಲ್ಲ. ವಿವಾಹಿತರೇ ಮಠಾಧೀಶರಾಗಿದ್ದರು. ಬಸವಣ್ಣ ಅವರು ತಮ್ಮ ವಚನದಲ್ಲಿ ‘ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು, ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು...’ ಎಂದು ಹೇಳಿದ್ದಾರೆ. ಅಂಬಿಗರ ಚೌಡಯ್ಯನ ವಚನದಲ್ಲಿ ಮಠಮಾನ್ಯಗಳ ಬಗ್ಗೆ ಕಠುವಾದ ಟೀಕೆಯಿದೆ. ಮಠಮಾನ್ಯಗಳು ನಮ್ಮ ಸಂಸ್ಕೃತಿಗೆ ಸಂಬಂಧಿಸಿವೆ. ಆದ್ದರಿಂದ ಇವುಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿರಕ್ತ ಮಠಗಳು ಹೆಚ್ಚಿದ್ದು, ಸಾಂಸಾರಿಕ ಮಠಗಳ ಸಂಖ್ಯೆ ಕಡಿಮೆಯಿದೆ. ಸಮಾಜದ ಸಂಪತ್ತಾದ ಮಠಗಳು ವ್ಯಕ್ತಿಗೆ ಸೇರಿಹೋಗುತ್ತದೆ ಎಂಬ ಕಾರಣಕ್ಕೆ ಸ್ವಾಮಿಗಳು, ಜಂಗಮರಿಗೆ ವಿವಾಹದಿಂದ ವಂಚಿತರನ್ನಾಗಿ ಮಾಡಲಾಗಿದೆ. ಇದು ಸರಿಯಲ್ಲ’ ಎಂದು ಹೇಳಿದರು </p>.<p>‘ಮಠಮಾನ್ಯಗಳು ಸಾಮಾಜಿಕ ಬದುಕಿನಲ್ಲಿ ಏನು ನಡೆಯುತ್ತಿದೆ? ಯಾವುದು ನಮ್ಮ ಸಂಸ್ಕೃತಿಗೆ ವಿರುದ್ಧವಾದದ್ದು ಎಂಬುದನ್ನು ತಿಳಿದುಕೊಳ್ಳಬೇಕು. ಆಗ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ’ ಎಂದರು.</p>.<p>‘ಶಿಕ್ಷಣ ವ್ಯವಸ್ಥೆಯಲ್ಲಿಯೂ ಹಲವು ದೋಷಗಳಿವೆ. ಯುಜಿಸಿ ಪ್ರಾಧ್ಯಾಪಕರಿಗೆ ಲಕ್ಷಾಂತರ ರೂಪಾಯಿ ನೀಡಲಾಗುತ್ತಿದೆ. ಗೌರವ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರೆಂದು ಕರೆಸಿಕೊಂಡು, ಪಾಠ ಮಾಡುವವರಿಗೆ ಸೂಕ್ತ ವೇತನವಿಲ್ಲ. ಜೀವನ ನಿರ್ವಹಣೆಯೇ ಕಷ್ಟವಾಗಿರುವಾಗ ಅವರು, ವಿದ್ಯಾರ್ಥಿಗಳಿಗೆ ಹೇಗೆ ಪಾಠ ಮಾಡುತ್ತಾರೆ? ಈ ಬಗ್ಗೆ ಹೋರಾಟಗಳು ನಡೆಸಿದ ಬಳಿಕ ವೇತನದಲ್ಲಿ ಸ್ವಲ್ಪ ಏರಿಕೆಕಂಡಿತು. ಯಾವುದೇ ಪಕ್ಷ ಅಧಿಕಾರದಲ್ಲಿ ಇದ್ದರೂ ನಮ್ಮದೇ ಸರ್ಕಾರ ಅಂದುಕೊಳ್ಳಬೇಕು. ಕವಿಗಳು, ಬರಹಗಾರರು ವಿರೋಧ ಪಕ್ಷದ ರೀತಿ ಇರಬೇಕು’ ಎಂದು ಹೇಳಿದರು. </p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಅವರು ಪ್ರಾಸ್ತಾವಿಕ ಮಾತನಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>