<p>ಬೆಂಗಳೂರು: ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುವವರ ಜತೆಗೆ ಮನೋವೈದ್ಯಕೀಯ ತುರ್ತುಸ್ಥಿತಿಯ ದಾಖಲಾತಿಯಲ್ಲಿಯೂ ಏರಿಕೆ ಯಾಗುತ್ತಿದೆ ಎನ್ನುವುದು ಇಲ್ಲಿನ ಕಡಬಮ್ಸ್ ಆಸ್ಪತ್ರೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.</p><p>ಜೆ.ಪಿ.ನಗರದಲ್ಲಿರುವ ಈ ಆಸ್ಪತ್ರೆಯು ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಏಳು ತಿಂಗಳ ರೋಗಿಗಳ ನೋಂದಣಿ ಆಧರಿಸಿ ಆಸ್ಪತ್ರೆಯು ಅಧ್ಯಯನ ನಡೆಸಿದೆ. ಈ ಅವಧಿಯಲ್ಲಿ 19,118 ಮಂದಿ ಒಳ ರೋಗಿಗಳು ಹಾಗೂ ಹೊರ ರೋಗಿಗಳಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅವರ ಪರಿಸ್ಥಿತಿ ಹಾಗೂ ಅವರು ಎದುರಿಸುತ್ತಿದ್ದ ಸಮಸ್ಯೆಯನ್ನು ವಿಶ್ಲೇಷಿಸಿರುವ ಆಸ್ಪತ್ರೆಯ ವೈದ್ಯರು, ಶೇ 30ರಷ್ಟು ರೋಗಿಗಳಿಗೆ ತುರ್ತುಸೇವೆ ಕಲ್ಪಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರಲ್ಲಿ ಪ್ರತಿ ತಿಂಗಳು ಸರಾಸರಿ 18 ರಿಂದ 20 ಮಂದಿಗೆ ಆಂಬುಲೆನ್ಸ್ ಸೇವೆ ಅಗತ್ಯ ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ. </p><p>ಒಳ ರೋಗಿಗಳಾಗಿ ದಾಖಲಾದವರು ಹಾಗೂ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದವರಲ್ಲಿ ವ್ಯಥೆಗೆ ಒಳಪಟ್ಟವರು, ಕೌಟುಂಬಿಕ ಸಮಸ್ಯೆಗೆ ಒಳಗಾದವರು, ಶೈಕ್ಷಣಿಕ ಒತ್ತಡಕ್ಕೆ ಒಳಗಾದವರು, ಆತ್ಮಹತ್ಯೆಯ ಆಲೋಚನೆ ಮಾಡುತ್ತಿರು<br>ವವರು, ಮಾದಕ ವಸ್ತುಗಳ ಸೇವನೆಯ<br>ವ್ಯಸನಕ್ಕೆ ಒಳಗಾದವರು, ಜ್ಞಾಪಕ ಶಕ್ತಿ<br>ತೊಂದರೆ ಇರುವವರು, ಆರ್ಥಿಕ ಒತ್ತಡದಲ್ಲಿ ಇರುವವರು ಸೇರಿದ್ದಾರೆ. </p><p><strong>ಯುವಜನರೇ ಅಧಿಕ: ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲಾಗುತ್ತಿರುವವರಲ್ಲಿ ಯುವಜನರೇ ಅಧಿಕ ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ. ಒಟ್ಟಾರೆ ದಾಖಲಾತಿಯಲ್ಲಿ ಶೇ 34.6ರಷ್ಟು ಮಂದಿ 30ರಿಂದ 40 ವರ್ಷದವರಾಗಿದ್ದಾರೆ. ಶೇ 28.8ರಷ್ಟು ಮಂದಿ 20ರಿಂದ 30 ವರ್ಷದೊಳಗಿನವರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಖಿನ್ನತೆಗೆ ಒಳಗಾದವರು,<br>ಮಾದಕ ವ್ಯಸನದಿಂದ ಸಮಸ್ಯೆ ಎದುರಿಸುತ್ತಿರುವವರು ಆಗಿದ್ದಾರೆ. </strong></p><p>‘ಮನೋವೈದ್ಯಕೀಯ ತುರ್ತುಸ್ಥಿತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮನೋರೋಗಗಳಿಗೆ ಒಳಗಾಗಿ, ದಾಖಲಾಗುತ್ತಿರುವುದು ಕಳವಳಕಾರಿ. ವೃತ್ತಿ ಮತ್ತು ವೈಯುಕ್ತಿಕ ಜೀವನದ ಮಧ್ಯೆ ಸಮತೋಲನ ತರಲಾರದೆ ವಿವಿಧ ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ತುರ್ತುಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಮೂಲಕ ಉಲ್ಬಣಗೊಳ್ಳು ತ್ತಿರುವ ಮಾನಸಿಕ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ತಡೆಯಬೇಕು’ ಎಂದು ಕಡಬಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಸುನೀಲ್ ತಿಳಿಸಿದರು.</p><p><strong>ದಾಖಲಾದವರಲ್ಲಿ ಪುರುಷರೇ ಅಧಿಕ</strong></p><p>ಒಳ ರೋಗಿಗಳು ಹಾಗೂ ಹೊರ ರೋಗಿಗಳಾಗಿ ಕಡಬಮ್ಸ್ ಆಸ್ಪತ್ರೆಗೆ ಕಳೆದ ಏಳು ತಿಂಗಳಲ್ಲಿ ಭೇಟಿ ನೀಡಿದವರಲ್ಲಿ ಪುರುಷರ ಸಂಖ್ಯೆ ಶೇ 60ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಶೇ 40ರಷ್ಟಿದೆ.<br>ಶೇ 69ರಷ್ಟು ರೋಗಿಗಳು ಸಮಯಕ್ಕೆ ಸರಿಯಾಗಿ ಮನೋವೈದ್ಯರನ್ನು ಸಂಪರ್ಕಿಸುತ್ತಿಲ್ಲ. ಇದರಿಂದಾಗಿ ಅವರಲ್ಲಿನ ಸಮಸ್ಯೆ ಉಲ್ಬಣಿಸಿ, ಅವರ ಜತೆಗೆ ಇತರರಿಗೂ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಅಧ್ಯಯನ ವರದಿಯಲ್ಲಿ ವಿಶ್ಲೇಷಿಸಲಾಗಿದೆ. </p><p>‘ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪ್ಪು ಗ್ರಹಿಕೆಗಳು ಮತ್ತು ಮೂಢನಂಬಿಕೆಗಳಿವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಮನೋವೈದ್ಯಕೀಯ ಚಿಕಿತ್ಸೆ ಪಡೆಯಲು ಹಲವು ತೊಡಕುಗಳಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸಿದಲ್ಲಿ ಸಹಜ ಸ್ಥಿತಿಗೆ ತರಲು ಸಾಧ್ಯವಾಗುತ್ತದೆ’ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಹಿರಿಯ ಮನೋವೈದ್ಯೆ<br>ಡಾ. ನೇಹಾ ಕಡಬಮ್ ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುವವರ ಜತೆಗೆ ಮನೋವೈದ್ಯಕೀಯ ತುರ್ತುಸ್ಥಿತಿಯ ದಾಖಲಾತಿಯಲ್ಲಿಯೂ ಏರಿಕೆ ಯಾಗುತ್ತಿದೆ ಎನ್ನುವುದು ಇಲ್ಲಿನ ಕಡಬಮ್ಸ್ ಆಸ್ಪತ್ರೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.</p><p>ಜೆ.ಪಿ.ನಗರದಲ್ಲಿರುವ ಈ ಆಸ್ಪತ್ರೆಯು ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ಏಳು ತಿಂಗಳ ರೋಗಿಗಳ ನೋಂದಣಿ ಆಧರಿಸಿ ಆಸ್ಪತ್ರೆಯು ಅಧ್ಯಯನ ನಡೆಸಿದೆ. ಈ ಅವಧಿಯಲ್ಲಿ 19,118 ಮಂದಿ ಒಳ ರೋಗಿಗಳು ಹಾಗೂ ಹೊರ ರೋಗಿಗಳಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅವರ ಪರಿಸ್ಥಿತಿ ಹಾಗೂ ಅವರು ಎದುರಿಸುತ್ತಿದ್ದ ಸಮಸ್ಯೆಯನ್ನು ವಿಶ್ಲೇಷಿಸಿರುವ ಆಸ್ಪತ್ರೆಯ ವೈದ್ಯರು, ಶೇ 30ರಷ್ಟು ರೋಗಿಗಳಿಗೆ ತುರ್ತುಸೇವೆ ಕಲ್ಪಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗುವವರಲ್ಲಿ ಪ್ರತಿ ತಿಂಗಳು ಸರಾಸರಿ 18 ರಿಂದ 20 ಮಂದಿಗೆ ಆಂಬುಲೆನ್ಸ್ ಸೇವೆ ಅಗತ್ಯ ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ. </p><p>ಒಳ ರೋಗಿಗಳಾಗಿ ದಾಖಲಾದವರು ಹಾಗೂ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದವರಲ್ಲಿ ವ್ಯಥೆಗೆ ಒಳಪಟ್ಟವರು, ಕೌಟುಂಬಿಕ ಸಮಸ್ಯೆಗೆ ಒಳಗಾದವರು, ಶೈಕ್ಷಣಿಕ ಒತ್ತಡಕ್ಕೆ ಒಳಗಾದವರು, ಆತ್ಮಹತ್ಯೆಯ ಆಲೋಚನೆ ಮಾಡುತ್ತಿರು<br>ವವರು, ಮಾದಕ ವಸ್ತುಗಳ ಸೇವನೆಯ<br>ವ್ಯಸನಕ್ಕೆ ಒಳಗಾದವರು, ಜ್ಞಾಪಕ ಶಕ್ತಿ<br>ತೊಂದರೆ ಇರುವವರು, ಆರ್ಥಿಕ ಒತ್ತಡದಲ್ಲಿ ಇರುವವರು ಸೇರಿದ್ದಾರೆ. </p><p><strong>ಯುವಜನರೇ ಅಧಿಕ: ಮಾನಸಿಕ ಅನಾರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲಾಗುತ್ತಿರುವವರಲ್ಲಿ ಯುವಜನರೇ ಅಧಿಕ ಎನ್ನುವುದು ಈ ಅಧ್ಯಯನದಿಂದ ದೃಢಪಟ್ಟಿದೆ. ಒಟ್ಟಾರೆ ದಾಖಲಾತಿಯಲ್ಲಿ ಶೇ 34.6ರಷ್ಟು ಮಂದಿ 30ರಿಂದ 40 ವರ್ಷದವರಾಗಿದ್ದಾರೆ. ಶೇ 28.8ರಷ್ಟು ಮಂದಿ 20ರಿಂದ 30 ವರ್ಷದೊಳಗಿನವರಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಖಿನ್ನತೆಗೆ ಒಳಗಾದವರು,<br>ಮಾದಕ ವ್ಯಸನದಿಂದ ಸಮಸ್ಯೆ ಎದುರಿಸುತ್ತಿರುವವರು ಆಗಿದ್ದಾರೆ. </strong></p><p>‘ಮನೋವೈದ್ಯಕೀಯ ತುರ್ತುಸ್ಥಿತಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮನೋರೋಗಗಳಿಗೆ ಒಳಗಾಗಿ, ದಾಖಲಾಗುತ್ತಿರುವುದು ಕಳವಳಕಾರಿ. ವೃತ್ತಿ ಮತ್ತು ವೈಯುಕ್ತಿಕ ಜೀವನದ ಮಧ್ಯೆ ಸಮತೋಲನ ತರಲಾರದೆ ವಿವಿಧ ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯ ತುರ್ತುಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಮೂಲಕ ಉಲ್ಬಣಗೊಳ್ಳು ತ್ತಿರುವ ಮಾನಸಿಕ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ತಡೆಯಬೇಕು’ ಎಂದು ಕಡಬಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ಸುನೀಲ್ ತಿಳಿಸಿದರು.</p><p><strong>ದಾಖಲಾದವರಲ್ಲಿ ಪುರುಷರೇ ಅಧಿಕ</strong></p><p>ಒಳ ರೋಗಿಗಳು ಹಾಗೂ ಹೊರ ರೋಗಿಗಳಾಗಿ ಕಡಬಮ್ಸ್ ಆಸ್ಪತ್ರೆಗೆ ಕಳೆದ ಏಳು ತಿಂಗಳಲ್ಲಿ ಭೇಟಿ ನೀಡಿದವರಲ್ಲಿ ಪುರುಷರ ಸಂಖ್ಯೆ ಶೇ 60ರಷ್ಟಿದ್ದರೆ, ಮಹಿಳೆಯರ ಸಂಖ್ಯೆ ಶೇ 40ರಷ್ಟಿದೆ.<br>ಶೇ 69ರಷ್ಟು ರೋಗಿಗಳು ಸಮಯಕ್ಕೆ ಸರಿಯಾಗಿ ಮನೋವೈದ್ಯರನ್ನು ಸಂಪರ್ಕಿಸುತ್ತಿಲ್ಲ. ಇದರಿಂದಾಗಿ ಅವರಲ್ಲಿನ ಸಮಸ್ಯೆ ಉಲ್ಬಣಿಸಿ, ಅವರ ಜತೆಗೆ ಇತರರಿಗೂ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಅಧ್ಯಯನ ವರದಿಯಲ್ಲಿ ವಿಶ್ಲೇಷಿಸಲಾಗಿದೆ. </p><p>‘ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪ್ಪು ಗ್ರಹಿಕೆಗಳು ಮತ್ತು ಮೂಢನಂಬಿಕೆಗಳಿವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಮನೋವೈದ್ಯಕೀಯ ಚಿಕಿತ್ಸೆ ಪಡೆಯಲು ಹಲವು ತೊಡಕುಗಳಿವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸಿದಲ್ಲಿ ಸಹಜ ಸ್ಥಿತಿಗೆ ತರಲು ಸಾಧ್ಯವಾಗುತ್ತದೆ’ ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕಿ ಹಾಗೂ ಹಿರಿಯ ಮನೋವೈದ್ಯೆ<br>ಡಾ. ನೇಹಾ ಕಡಬಮ್ ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>