<p><strong>ಬೆಂಗಳೂರು</strong>: ನಮ್ಮ ಮೆಟ್ರೊ ತನ್ನ ಕಾರಿಡಾರ್ಗಳ ಮಾರ್ಗವನ್ನು 118 ಕಿ.ಮೀ ವಿಸ್ತರಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲು ಟೆಂಡರ್ ಆಹ್ವಾನಿಸಿದೆ.</p>.<p>ಮಾರ್ಚ್ 27ರವರೆಗೆ ಬಿಡ್ಗಳನ್ನು ಸಲ್ಲಿಸಲು ಅವಕಾಶವಿದ್ದು, ಅಂದೇ ಅವುಗಳನ್ನು ತೆರೆಯಲಾಗುವುದು. ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲು ಗಡುವು ನೀಡಲಾಗುವುದು ಎಂದು ಟೆಂಡರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>‘ಈ ಕಾರ್ಯಸಾಧ್ಯತಾ ವರದಿಯೊಂದಿಗೆ ನಿರ್ಮಾಣದ ಅಂದಾಜು ವೆಚ್ಚ, ಸಂಚಾರ ಸರ್ವೆ, ಮೆಟ್ರೊ ಮಾರ್ಗಗಳ ಅಲೈನ್ಮೆಂಟ್, ಭೂಸ್ವಾಧೀನ, ಭೂಮಿ ಪಡೆಯಲು ಎದುರಾಗುವ ಸಮಸ್ಯೆಗಳೂ ಸೇರಿದಂತೆ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸುವಂತೆ ಹೇಳಲಾಗಿದೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದರು.</p>.<p>‘ಇದು ಯೋಜನೆಯ ಮೊದಲ ಹೆಜ್ಜೆಯಾಗಿದ್ದು, ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರ ಒಪ್ಪಿದ ನಂತರ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗುತ್ತದೆ’ ಎಂದರು.</p>.<p>ನಮ್ಮ ಮೆಟ್ರೊದ 4ನೇ ಹಂತದಲ್ಲಿ 61 ಕಿ.ಮೀ. ನ ನಾಲ್ಕು ವಿಸ್ತರಣಾ ಮಾರ್ಗ, 68 ಕಿ.ಮೀ ಉದ್ದ ಹೊಸ ಒಂದು ಮಾರ್ಗವನ್ನು ಸರ್ಕಾರ ಜನವರಿಯಲ್ಲಿ ಪ್ರಸ್ತಾಪಿಸಿತ್ತು. ಇದರಲ್ಲಿದ್ದ ತುಮಕೂರು ರಸ್ತೆಯಲ್ಲಿನ ಮಾದಾವರದಿಂದ ಕುಣಿಗಲ್ ಕ್ರಾಸ್ವರೆಗಿನ 11 ಕಿ.ಮೀ ಮಾರ್ಗವನ್ನು ಕಾರ್ಯಸಾಧ್ಯತಾ ವರದಿ ಟೆಂಡರ್ನಲ್ಲಿ ಕೈಬಿಡಲಾಗಿದೆ.</p>.<p><strong>ಪ್ಯಾಕೇಜ್–1</strong></p>.<p>50 ಕಿ.ಮೀ: ಚಲ್ಲಘಟ್ಟದಿಂದ ಬಿಡದಿ, ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆ.</p>.<p><strong>ಪ್ಯಾಕೇಜ್–2</strong></p>.<p>68 ಕಿ.ಮೀ: ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ಜಿಗಣಿ– ಆನೇಕಲ್– ಅತ್ತಿಬೆಲೆ– ಸರ್ಜಾಪುರ– ವರ್ತೂರು– ಕಾಡುಗೋಡಿ ವೃಕ್ಷ ಉದ್ಯಾನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಮ್ಮ ಮೆಟ್ರೊ ತನ್ನ ಕಾರಿಡಾರ್ಗಳ ಮಾರ್ಗವನ್ನು 118 ಕಿ.ಮೀ ವಿಸ್ತರಿಸಲು ಕಾರ್ಯಸಾಧ್ಯತಾ ವರದಿ ತಯಾರಿಸಲು ಟೆಂಡರ್ ಆಹ್ವಾನಿಸಿದೆ.</p>.<p>ಮಾರ್ಚ್ 27ರವರೆಗೆ ಬಿಡ್ಗಳನ್ನು ಸಲ್ಲಿಸಲು ಅವಕಾಶವಿದ್ದು, ಅಂದೇ ಅವುಗಳನ್ನು ತೆರೆಯಲಾಗುವುದು. ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲು ಗಡುವು ನೀಡಲಾಗುವುದು ಎಂದು ಟೆಂಡರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>‘ಈ ಕಾರ್ಯಸಾಧ್ಯತಾ ವರದಿಯೊಂದಿಗೆ ನಿರ್ಮಾಣದ ಅಂದಾಜು ವೆಚ್ಚ, ಸಂಚಾರ ಸರ್ವೆ, ಮೆಟ್ರೊ ಮಾರ್ಗಗಳ ಅಲೈನ್ಮೆಂಟ್, ಭೂಸ್ವಾಧೀನ, ಭೂಮಿ ಪಡೆಯಲು ಎದುರಾಗುವ ಸಮಸ್ಯೆಗಳೂ ಸೇರಿದಂತೆ ಎಲ್ಲ ರೀತಿಯ ಮಾಹಿತಿಯನ್ನು ಒದಗಿಸುವಂತೆ ಹೇಳಲಾಗಿದೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದರು.</p>.<p>‘ಇದು ಯೋಜನೆಯ ಮೊದಲ ಹೆಜ್ಜೆಯಾಗಿದ್ದು, ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರ ಒಪ್ಪಿದ ನಂತರ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲಾಗುತ್ತದೆ’ ಎಂದರು.</p>.<p>ನಮ್ಮ ಮೆಟ್ರೊದ 4ನೇ ಹಂತದಲ್ಲಿ 61 ಕಿ.ಮೀ. ನ ನಾಲ್ಕು ವಿಸ್ತರಣಾ ಮಾರ್ಗ, 68 ಕಿ.ಮೀ ಉದ್ದ ಹೊಸ ಒಂದು ಮಾರ್ಗವನ್ನು ಸರ್ಕಾರ ಜನವರಿಯಲ್ಲಿ ಪ್ರಸ್ತಾಪಿಸಿತ್ತು. ಇದರಲ್ಲಿದ್ದ ತುಮಕೂರು ರಸ್ತೆಯಲ್ಲಿನ ಮಾದಾವರದಿಂದ ಕುಣಿಗಲ್ ಕ್ರಾಸ್ವರೆಗಿನ 11 ಕಿ.ಮೀ ಮಾರ್ಗವನ್ನು ಕಾರ್ಯಸಾಧ್ಯತಾ ವರದಿ ಟೆಂಡರ್ನಲ್ಲಿ ಕೈಬಿಡಲಾಗಿದೆ.</p>.<p><strong>ಪ್ಯಾಕೇಜ್–1</strong></p>.<p>50 ಕಿ.ಮೀ: ಚಲ್ಲಘಟ್ಟದಿಂದ ಬಿಡದಿ, ರೇಷ್ಮೆ ಸಂಸ್ಥೆಯಿಂದ ಹಾರೋಹಳ್ಳಿ ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆ.</p>.<p><strong>ಪ್ಯಾಕೇಜ್–2</strong></p>.<p>68 ಕಿ.ಮೀ: ಕಾಳೇನ ಅಗ್ರಹಾರದಿಂದ (ಗೊಟ್ಟಿಗೆರೆ) ಜಿಗಣಿ– ಆನೇಕಲ್– ಅತ್ತಿಬೆಲೆ– ಸರ್ಜಾಪುರ– ವರ್ತೂರು– ಕಾಡುಗೋಡಿ ವೃಕ್ಷ ಉದ್ಯಾನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>