<p><strong>ಯಲಹಂಕ</strong><strong>: ರಾಜಾನುಕುಂಟೆ ಗ್ರಾಮ ಪಂಚಾಯಿತಿ </strong><strong>ಸಭೆಗೆ ಹಾಜರಾಗದ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಶಾಸಕ ಎಸ್</strong><strong>.</strong><strong>ಆರ್</strong><strong>. </strong><strong>ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.</strong></p>.<p><strong>ರಾಜಾನುಕುಂಟೆ ಗ್ರಾಮಪಂಚಾಯಿತಿಯ 2024–25ನೇ </strong><strong>ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು</strong><strong>, ‘</strong><strong>ಗ್ರಾಮಸಭೆಯಲ್ಲಿ ಸಾರ್ವಜನಿಕರು ಮತ್ತು ರೈತರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಚರ್ಚೆಯಾಗುತ್ತವೆ. ಅವುಗಳಿಗೆ ಸೂಕ್ತಪರಿಹಾರ ನೀಡಲು ಕಂದಾಯ ಇಲಾಖೆಯ ಅಧಿಕಾರಿಗಳ ಹಾಜರಾತಿ ಅತ್ಯಗತ್ಯ. ಆದರೆ, ಹಿರಿಯ ಅಧಿಕಾರಿಗಳ </strong><strong>ಕುಂಟುನೆಪಗಳನ್ನು ಹೇಳಿ ಗ್ರಾಮಸಭೆಗಳಿಗೆ ಗೈರಾಗಿ, ನೆಪಮಾತ್ರಕ್ಕೆ ತಮ್ಮ ಸಿಬ್ಬಂದಿಯನ್ನು ಪ್ರತಿನಿಧಿಗಳನ್ನಾಗಿ ಕಳುಹಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</strong></p>.<p><strong>ಸವಲತ್ತುಗಳ ವಿತರಣೆ</strong><strong>: </strong><strong>ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ</strong><strong>, </strong><strong>ಅಂಗವಿಕಲರಿಗೆ ಸಹಾಯಧನದ ಚೆಕ್</strong><strong>, </strong><strong>ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಪುಸ್ತಕ ಮತ್ತು ಕ್ರೀಡಾ ಸಾಮಗ್ರಿಗಳ ಕಿಟ್ ವಿತರಿಸಿದರು. </strong><strong>ಎಸ್</strong><strong>.</strong><strong>ಎಸ್</strong><strong>.</strong><strong>ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್ ನೀಡಿದರು.</strong></p>.<p><strong>ರಾಜಾನುಕುಂಟೆ ಗ್ರಾಮದಲ್ಲಿ </strong><strong>ಸರ್ಕಾರಿ ಶಾಲೆಯಲ್ಲಿ ನಾಲ್ಕು ನೂತನ ಕೊಠಡಿಗಳನ್ನು ಉದ್ಘಾಟಿಸಿದರು</strong><strong>. </strong><strong>ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ </strong><strong>(</strong><strong>ಎಲ್</strong><strong>.</strong><strong>ಕೆಜಿ</strong><strong>)</strong><strong>ಆಂಗ್ಲಮಾಧ್ಯಮ ತರಗತಿಗೆ ಚಾಲನೆನೀಡಿದರು</strong><strong>.</strong></p>.<p><strong>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಪಟಾಲಪ್ಪ</strong><strong>, </strong><strong>ಉಪಾಧ್ಯಕ್ಷ ವೆಂಕಟೇಶ್</strong><strong>, </strong><strong>ಮಾಜಿ ಅಧ್ಯಕ್ಷರಾದ ಎಸ್</strong><strong>.</strong><strong>ಜಿ</strong><strong>.</strong><strong>ನರಸಿಂಹಮೂರ್ತಿ</strong><strong>, </strong><strong>ಅಂಬಿಕಾ ರಾಜೇಂದ್ರಕುಮಾರ್</strong><strong>, </strong><strong>ಕೆ</strong><strong>.</strong><strong>ವೀರಣ್ಣ</strong><strong>, </strong><strong>ಪಿಡಿಒ ನಾಗರಾಜ್</strong><strong>, </strong><strong>ಕಾರ್ಯದರ್ಶಿ ರಾಕೇಶ್</strong><strong>, </strong><strong>ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್</strong><strong>, </strong><strong>ಅದ್ದೆ ವಿಶ್ವನಾಥಪುರ ಮಂಜುನಾಥ್</strong><strong>, </strong><strong>ಎಂ</strong><strong>. </strong><strong>ಮೋಹನ್ ಕುಮಾರ್ ಉಪಸ್ಥಿತರಿದ್ದರು</strong><strong>.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ</strong><strong>: ರಾಜಾನುಕುಂಟೆ ಗ್ರಾಮ ಪಂಚಾಯಿತಿ </strong><strong>ಸಭೆಗೆ ಹಾಜರಾಗದ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಶಾಸಕ ಎಸ್</strong><strong>.</strong><strong>ಆರ್</strong><strong>. </strong><strong>ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.</strong></p>.<p><strong>ರಾಜಾನುಕುಂಟೆ ಗ್ರಾಮಪಂಚಾಯಿತಿಯ 2024–25ನೇ </strong><strong>ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು</strong><strong>, ‘</strong><strong>ಗ್ರಾಮಸಭೆಯಲ್ಲಿ ಸಾರ್ವಜನಿಕರು ಮತ್ತು ರೈತರಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಚರ್ಚೆಯಾಗುತ್ತವೆ. ಅವುಗಳಿಗೆ ಸೂಕ್ತಪರಿಹಾರ ನೀಡಲು ಕಂದಾಯ ಇಲಾಖೆಯ ಅಧಿಕಾರಿಗಳ ಹಾಜರಾತಿ ಅತ್ಯಗತ್ಯ. ಆದರೆ, ಹಿರಿಯ ಅಧಿಕಾರಿಗಳ </strong><strong>ಕುಂಟುನೆಪಗಳನ್ನು ಹೇಳಿ ಗ್ರಾಮಸಭೆಗಳಿಗೆ ಗೈರಾಗಿ, ನೆಪಮಾತ್ರಕ್ಕೆ ತಮ್ಮ ಸಿಬ್ಬಂದಿಯನ್ನು ಪ್ರತಿನಿಧಿಗಳನ್ನಾಗಿ ಕಳುಹಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.</strong></p>.<p><strong>ಸವಲತ್ತುಗಳ ವಿತರಣೆ</strong><strong>: </strong><strong>ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ</strong><strong>, </strong><strong>ಅಂಗವಿಕಲರಿಗೆ ಸಹಾಯಧನದ ಚೆಕ್</strong><strong>, </strong><strong>ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ಪುಸ್ತಕ ಮತ್ತು ಕ್ರೀಡಾ ಸಾಮಗ್ರಿಗಳ ಕಿಟ್ ವಿತರಿಸಿದರು. </strong><strong>ಎಸ್</strong><strong>.</strong><strong>ಎಸ್</strong><strong>.</strong><strong>ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್ ನೀಡಿದರು.</strong></p>.<p><strong>ರಾಜಾನುಕುಂಟೆ ಗ್ರಾಮದಲ್ಲಿ </strong><strong>ಸರ್ಕಾರಿ ಶಾಲೆಯಲ್ಲಿ ನಾಲ್ಕು ನೂತನ ಕೊಠಡಿಗಳನ್ನು ಉದ್ಘಾಟಿಸಿದರು</strong><strong>. </strong><strong>ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ </strong><strong>(</strong><strong>ಎಲ್</strong><strong>.</strong><strong>ಕೆಜಿ</strong><strong>)</strong><strong>ಆಂಗ್ಲಮಾಧ್ಯಮ ತರಗತಿಗೆ ಚಾಲನೆನೀಡಿದರು</strong><strong>.</strong></p>.<p><strong>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನಮ್ಮ ಪಟಾಲಪ್ಪ</strong><strong>, </strong><strong>ಉಪಾಧ್ಯಕ್ಷ ವೆಂಕಟೇಶ್</strong><strong>, </strong><strong>ಮಾಜಿ ಅಧ್ಯಕ್ಷರಾದ ಎಸ್</strong><strong>.</strong><strong>ಜಿ</strong><strong>.</strong><strong>ನರಸಿಂಹಮೂರ್ತಿ</strong><strong>, </strong><strong>ಅಂಬಿಕಾ ರಾಜೇಂದ್ರಕುಮಾರ್</strong><strong>, </strong><strong>ಕೆ</strong><strong>.</strong><strong>ವೀರಣ್ಣ</strong><strong>, </strong><strong>ಪಿಡಿಒ ನಾಗರಾಜ್</strong><strong>, </strong><strong>ಕಾರ್ಯದರ್ಶಿ ರಾಕೇಶ್</strong><strong>, </strong><strong>ಬಿಜೆಪಿ ಮುಖಂಡರಾದ ಚೊಕ್ಕನಹಳ್ಳಿ ವೆಂಕಟೇಶ್</strong><strong>, </strong><strong>ಅದ್ದೆ ವಿಶ್ವನಾಥಪುರ ಮಂಜುನಾಥ್</strong><strong>, </strong><strong>ಎಂ</strong><strong>. </strong><strong>ಮೋಹನ್ ಕುಮಾರ್ ಉಪಸ್ಥಿತರಿದ್ದರು</strong><strong>.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>