‘ಕರ್ನಾಟಕ ಖಾಸಗಿ ವನ್ಯಜೀವಿ ಧಾಮ ನಿಯಮ–2018’ರ ಪ್ರಕಾರ ಸಂರಕ್ಷಿತ ಅರಣ್ಯದ ಪಕ್ಕದಲ್ಲಿರುವ ಜಾಗದ ಮಾಲೀಕರು ಈ ಧಾಮಗಳನ್ನು ಸ್ಥಾಪಿಸಬಹುದು. ಪರಿಸರ ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಇಲ್ಲಿನ ಶೇ 5 ಜಾಗದಲ್ಲಿ ಕಟ್ಟಡ (ರೆಸಾರ್ಟ್ಗಳು, ಹೋಟೆಲ್ಗಳು, ಹೋಮ್ಸ್ಟೇಗಳು) ಕಟ್ಟಬಹುದು. ಉಳಿದ ಜಾಗವನ್ನು ಸಸ್ಯ ಸಂಪತ್ತು ಹಾಗೂ ಪ್ರಾಣಿಗಳಿಗೆ ಮೀಸಲಿಡಬೇಕು. ಕೃಷಿ, ತೋಟಗಾರಿಕೆ, ಪ್ಲಾಂಟೇಷನ್ಗಳಲ್ಲಿ ಇದನ್ನು ಸ್ಥಾಪಿಸಬಹುದು. ಅರಣ್ಯ, ವನ್ಯಜೀವಿ ಹಾಗೂ ಪರಿಸರಕ್ಕೆ ಸಂಬಂಧಿಸಿದ ಎಲ್ಲ ಕಾನೂನುಗಳು ಈ ಧಾಮಗಳಿಗೆ ಅನ್ವಯವಾಗಲಿವೆ. ಒಂದು ವೇಳೆ ವನ್ಯಜೀವಿಗಳಿಂದ ಮನುಷ್ಯರಿಗೆ ಹಾಗೂ ಆಸ್ತಿಗೆ ಹಾನಿ ಉಂಟಾದರೆ ಮಾಲೀಕರಿಗೆ, ನೌಕರರು ಅಥವಾ ಅತಿಥಿಗಳಿಗೆ ಹಾನಿ ಉಂಟಾದರೆ ಪರಿಹಾರ ನೀಡಲು ಅವಕಾಶ ಇಲ್ಲ.