<p><strong>ಭಾಲ್ಕಿ:</strong> ಕಣ್ಣಿಗೆ ಕಾಣುವ ನೈಜ ದೇವರು ಪಾಲಕರು ಆಗಿದ್ದು, ಪ್ರತಿಯೊಬ್ಬರು ಹೆತ್ತವರಲ್ಲಿಯೇ ಭಗವಂತನನ್ನು ಕಾಣಬೇಕು ಎಂದು ಬಸವಕಲ್ಯಾಣ ಗವಿಮಠದ ಅಭಿನವ ಘನಲಿಂಗ ಶಿವಾಚಾರ್ಯರು ಹೇಳಿದರು.</p>.<p>ಪಟ್ಟಣದ ಖಡಕೇಶ್ವರ ವಿದ್ಯಾ ಮಂದಿರದಲ್ಲಿ ಆಯೋಜಿಸಿದ್ದ ಮಾತೃ, ಪಿತೃ ಪಾದಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ವಕೀಲೆ ಆರತಿ ತಿವಾರಿ ಮಾತನಾಡಿ, ಸದ್ಯ ಮಕ್ಕಳಿಗೆ ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣ ಕೊಡುವುದು ಬಹಳಷ್ಟು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.</p>.<p>ಭಗುಸಿಂಗ್ ಜಾಧವ್ ಮಾತನಾಡಿ, ಪಾಲಕರು ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸುವುದರ ಮೂಲಕ ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕು ಎಂದರು.</p>.<p>ಬಿಆರ್ಪಿ ಶಕುಂತಲಾ ಸಾಲಿಮನಿ, ಸಿಆರ್ಪಿ ಅರ್ಚನಾ ಪವಾರ್, ಪ್ರಮುಖರಾದ ಸುಧೀರನಾಯಕ, ಪ್ರಭುರಾವ್ ಧೂಪೆ, ಅಶೋಕ ಲೋಖಂಡೆ, ಮುಖ್ಯಶಿಕ್ಷಕ ಶಿವಲಿಂಗ ಕುಂಬಾರ, ಚಂದ್ರಕಾಂತ ತಳವಾಡೆ, ದಯಾನಂದ ಪವಾರ್, ರೇಕುನಾಯಕ್, ಉಮಕಾಂತ ಮೇತ್ರೆ, ಮಹೇಶ ಶೀಲವಂತ, ಚಂದ್ರಕಾಂತ ಠಮಕೆ, ಆನಂದ ಕಲ್ಯಾಣೆ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ:</strong> ಕಣ್ಣಿಗೆ ಕಾಣುವ ನೈಜ ದೇವರು ಪಾಲಕರು ಆಗಿದ್ದು, ಪ್ರತಿಯೊಬ್ಬರು ಹೆತ್ತವರಲ್ಲಿಯೇ ಭಗವಂತನನ್ನು ಕಾಣಬೇಕು ಎಂದು ಬಸವಕಲ್ಯಾಣ ಗವಿಮಠದ ಅಭಿನವ ಘನಲಿಂಗ ಶಿವಾಚಾರ್ಯರು ಹೇಳಿದರು.</p>.<p>ಪಟ್ಟಣದ ಖಡಕೇಶ್ವರ ವಿದ್ಯಾ ಮಂದಿರದಲ್ಲಿ ಆಯೋಜಿಸಿದ್ದ ಮಾತೃ, ಪಿತೃ ಪಾದಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>ವಕೀಲೆ ಆರತಿ ತಿವಾರಿ ಮಾತನಾಡಿ, ಸದ್ಯ ಮಕ್ಕಳಿಗೆ ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣ ಕೊಡುವುದು ಬಹಳಷ್ಟು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.</p>.<p>ಭಗುಸಿಂಗ್ ಜಾಧವ್ ಮಾತನಾಡಿ, ಪಾಲಕರು ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ಕಲಿಸುವುದರ ಮೂಲಕ ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕು ಎಂದರು.</p>.<p>ಬಿಆರ್ಪಿ ಶಕುಂತಲಾ ಸಾಲಿಮನಿ, ಸಿಆರ್ಪಿ ಅರ್ಚನಾ ಪವಾರ್, ಪ್ರಮುಖರಾದ ಸುಧೀರನಾಯಕ, ಪ್ರಭುರಾವ್ ಧೂಪೆ, ಅಶೋಕ ಲೋಖಂಡೆ, ಮುಖ್ಯಶಿಕ್ಷಕ ಶಿವಲಿಂಗ ಕುಂಬಾರ, ಚಂದ್ರಕಾಂತ ತಳವಾಡೆ, ದಯಾನಂದ ಪವಾರ್, ರೇಕುನಾಯಕ್, ಉಮಕಾಂತ ಮೇತ್ರೆ, ಮಹೇಶ ಶೀಲವಂತ, ಚಂದ್ರಕಾಂತ ಠಮಕೆ, ಆನಂದ ಕಲ್ಯಾಣೆ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>