<p><strong>ಹುಲಸೂರ:</strong> 2018ರಲ್ಲೇ ಹುಲಸೂರು ತಾಲ್ಲೂಕು ರಚನೆಯಾದರೂ ತಾಲ್ಲೂಕು ಕೇಂದ್ರದಲ್ಲಿ ಈವರೆಗೂ ಕಾರ್ಯನಿರ್ವಹಿಸುತ್ತಿರುವುದು ಕೇವಲ ಮೂರೇ ಕಚೇರಿಗಳು. ಸಾರ್ವಜನಿಕರು, ರೈತರಿಗೆ ಅಗತ್ಯವಾಗಿ ಬೇಕಾದ ಸರ್ಕಾರಿ ಕಚೇರಿಗಳು ಇನ್ನೂ ಆರಂಭವಾಗದ್ದರಿಂದ ಅನಿವಾರ್ಯವಾಗಿ ಬಸವಕಲ್ಯಾಣಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.</p>.<p>ತಾಲ್ಲೂಕು ಕೇಂದ್ರದಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡದೆ ಬಸವಕಲ್ಯಾಣದಲ್ಲಿ ಮಾಡಿದ್ದು ಸಾರ್ವಜನಿಕರು, ಸಂಘ–ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಬಸವಕಲ್ಯಾಣದಲ್ಲೇ ಹುಲಸೂರ ತಾಲ್ಲೂಕನ್ನೂ ಸೇರಿಸಿ ಸಭೆ ನಡೆಸಲಾಗಿದೆ. ಇದು ಎರಡನೇ ಕೆಡಿಪಿ ಸಭೆ, ಪ್ರತಿ ಸಲವೂ ಬೇರೆ ತಾಲ್ಲೂಕಿನಲ್ಲೇ ಮಾಡುವುದಾದರೆ ಹುಲಸೂರ ತಾಲ್ಲೂಕಿನ ಅಗತ್ಯ ಏನಿದೆ, ಶಾಸಕರು ಎರಡು ತಾಲ್ಲೂಕಿಗೆ ಆದ್ಯತೆ ನೀಡಬೇಕು ಎಂಬುದು ಜನರ ಆಗ್ರಹ.</p>.<p>ಇನ್ನೂ ಆರಂಭವಾಗದ ಕಚೇರಿಗಳು: ಈ ವೇಳೆಗಾಗಲೇ ತಾಲ್ಲೂಕಿನಲ್ಲಿ ಸರ್ಕಾರದ 20ಕ್ಕೂ ಹೆಚ್ಚು ಇಲಾಖೆಗಳ ಕಚೇರಿಗಳು ಆರಂಭವಾಗಬೇಕಿತ್ತು. ಆದರೆ ತಹಶೀಲ್ದಾರ್ ಕಚೇರಿ, ಉಪಖಜಾನೆ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇದ್ದ ಕಚೇರಿಗಳಲ್ಲೂ ಶೌಚಾಲಯ, ಕುಡಿಯುವ ನೀರು, ಉತ್ತಮ ಕಟ್ಟಡ ಮುಂತಾದ ಸೌಲಭ್ಯಗಳ ಸಮಸ್ಯೆಗಳಿವೆ.</p>.<p>ಹುಲಸೂರ ಪಟ್ಟಣ ಮತ್ತು ಅದರ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುತಿಸಿಕೊಂಡಿರುವ ವಿವಿಧ ಪಕ್ಷಗಳ ಮುಖಂಡರು, ಮಾಜಿ ಶಾಸಕರು ಪಟ್ಟಣ ಅಭಿವೃದ್ಧಿಯತ್ತ ಆಸಕ್ತಿ ತೋರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.</p>.<p>ತಮ್ಮ ವಿವಿಧ ಕೆಲಸಗಳಿಗಾಗಿ ನಿತ್ಯ ಸಾವಿರಾರು ಜನ ತಹಶಿಲ್ದಾರ್ ಕಚೇರಿಗೆ ಬರುತ್ತಾರೆ. ಹತ್ತಾರು ಅಧಿಕಾರಿಗಳು, ಸಿಬ್ಬಂದಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಜನರಿಂದ ತುಂಬಿರುವ ತಹಶೀಲ್ದಾರ್ ಕಚೇರಿ ಜೋರು ಮಳೆಯಾದರೆ ಸೋರುತ್ತದೆ. ಸಿಬ್ಬಂದಿ, ಅಧಿಕಾರಿಗಳು ಆತಂಕದಲ್ಲೇ ಕೆಲಸ ಮಾಡಬೇಕು. ಸ್ಥಳಾವಕಾಶದ ಕೊರತೆಯೂ ಕಾಡುತ್ತಿದೆ. </p>.<p>‘ತಹಶೀಲ್ದಾರ್ ಕಚೇರಿಗೆ ಪ್ರತ್ಯೇಕ, ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಬೇಕು ಅಥವಾ ಸಾಕಷ್ಟು ಸ್ಥಳಾವಕಾಶ ಇರುವ ಕಡೆಗೆ ಕಚೇರಿಯನ್ನು ಸ್ಥಳಾಂತರಿಸಿನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಬೇಕು’ ಎನ್ನುವುದು ನೌಕರರ ಮನವಿ.</p>.<p><strong>ಬಸವಕಲ್ಯಾಣಗೆ ಅಲೆದಾಟ:</strong> ತಲ್ಲೂಕಿನ ಜನರು ಕೋರ್ಟ್ ಕೆಲಸ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ತೋಟಗಾರಿಕೆ, ಶಿಕ್ಷಣ ಮುಂತಾದ ಇಲಾಖೆಗಳ ಕೆಲಸಕ್ಕೆ ಬಸವಕಲ್ಯಾಣಕ್ಕೆ ಹೋಗಬೇಕು.</p>.<p>‘ಶಿಕ್ಷಣ ಇಲಾಖೆ ಅಧಿಕಾರಿಗಳು ಬಸವಕಲ್ಯಾಣದಲ್ಲಿ ಸಭೆ ಕರೆದರೆ ಶಿಕ್ಷಕರು ಇಡೀ ದಿನ ತೆರಳಬೇಕಾಗುವುದರಿಂದ ಶಾಲಾ ಚಟುವಟಿಕೆಗೆ ತೊಂದರೆಯಾಗುತ್ತದೆ. ಹುಲಸೂರಿನಲ್ಲಿ ಶಿಕ್ಷಣ ಇಲಾಖೆ ಶೀಘ್ರ ಕಚೇರಿ ತೆರೆಯಬೇಕು. ಶಾಸಕ ಶರಣು ಸಲಗರ ಅವರು ಹುಲಸೂರ, ಬಸವಕಲ್ಯಾಣ ಎರಡೂ ತಾಲ್ಲೂಕುಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಬೇಕು’ ಎಂದು ಲಹೂಜಿ ಶಕ್ತಿ ಸೇನಾ ಸಂಘಟನೆ ತಾಲ್ಲೂಕ ಅಧ್ಯಕ್ಷ ಅಜಿತ ಸೂರ್ಯವಂಶಿ ಹೇಳಿದರು.</p>.<p>‘ಹೋರಾಟದ ಮಾಡುವ ಮೂಲಕ ತಾಲ್ಲೂಕು ರಚನೆ ಆಗಿದೆ. ಆದರೆ ಇಲ್ಲಿ ನಡೆಯಬೇಕಾದ ಜನಸ್ಪಂದನ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ಇಲ್ಲಿಯೇ ನಡೆಯಬೇಕು ಹಾಗೂ ತಾಲ್ಲೂಕು ಅಸ್ತಿತ್ವಕ್ಕೆ ಬಂದು 6 ವರ್ಷ ಗತಿಸಿದರೂ ಸರ್ಕಾರ ಎಲ್ಲ ಇಲಾಖೆಗಳನ್ನು ಆರಂಭಿಸದಿರುವುದು ಬೇಸರದ ಸಂಗತಿ’ ಎನ್ನುತ್ತಾರೆ ಹುಲಸೂರ ಸಾಮಾಜಿಕ ಕಾರ್ಯಕರ್ತ ಪ್ರವೀಣ ಕಾಡಾದಿ.</p>.<div><blockquote>ಹುಲಸೂರ ತಾಲ್ಲೂಕಿಗೆ ಸಂಬಂಧಿಸಿದ ಇತರೆ ಕಚೇರಿ ಆರಂಭಿಸುವ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ತುರ್ತು ಬೇಕಾಗಿರುವ ಕೆಲ ಕಚೇರಿಗಳನ್ನಾದರೂ ಮಂಜೂರು ಮಾಡಬೇಕು </blockquote><span class="attribution">–ಎಂ.ಜಿ.ರಾಜೊಳೆ, ಸಂಚಾಲಕ ಹುಲಸೂರ ತಾಲ್ಲೂಕು ಹೋರಾಟ ಸಮಿತಿ</span></div>.<div><blockquote>ತಹಶೀಲ್ದಾರ್ ಕಚೇರಿ ಹಳೆಯದಾಗಿದ್ದು ಹೆಚ್ಚು ಮಳೆಯಾದರೆ ಸೋರುತ್ತದೆ </blockquote><span class="attribution">–ಶಿವಾನಂದ ಮೇತ್ರೆ, ತಹಶೀಲ್ದಾರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> 2018ರಲ್ಲೇ ಹುಲಸೂರು ತಾಲ್ಲೂಕು ರಚನೆಯಾದರೂ ತಾಲ್ಲೂಕು ಕೇಂದ್ರದಲ್ಲಿ ಈವರೆಗೂ ಕಾರ್ಯನಿರ್ವಹಿಸುತ್ತಿರುವುದು ಕೇವಲ ಮೂರೇ ಕಚೇರಿಗಳು. ಸಾರ್ವಜನಿಕರು, ರೈತರಿಗೆ ಅಗತ್ಯವಾಗಿ ಬೇಕಾದ ಸರ್ಕಾರಿ ಕಚೇರಿಗಳು ಇನ್ನೂ ಆರಂಭವಾಗದ್ದರಿಂದ ಅನಿವಾರ್ಯವಾಗಿ ಬಸವಕಲ್ಯಾಣಕ್ಕೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ.</p>.<p>ತಾಲ್ಲೂಕು ಕೇಂದ್ರದಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡದೆ ಬಸವಕಲ್ಯಾಣದಲ್ಲಿ ಮಾಡಿದ್ದು ಸಾರ್ವಜನಿಕರು, ಸಂಘ–ಸಂಸ್ಥೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಬಸವಕಲ್ಯಾಣದಲ್ಲೇ ಹುಲಸೂರ ತಾಲ್ಲೂಕನ್ನೂ ಸೇರಿಸಿ ಸಭೆ ನಡೆಸಲಾಗಿದೆ. ಇದು ಎರಡನೇ ಕೆಡಿಪಿ ಸಭೆ, ಪ್ರತಿ ಸಲವೂ ಬೇರೆ ತಾಲ್ಲೂಕಿನಲ್ಲೇ ಮಾಡುವುದಾದರೆ ಹುಲಸೂರ ತಾಲ್ಲೂಕಿನ ಅಗತ್ಯ ಏನಿದೆ, ಶಾಸಕರು ಎರಡು ತಾಲ್ಲೂಕಿಗೆ ಆದ್ಯತೆ ನೀಡಬೇಕು ಎಂಬುದು ಜನರ ಆಗ್ರಹ.</p>.<p>ಇನ್ನೂ ಆರಂಭವಾಗದ ಕಚೇರಿಗಳು: ಈ ವೇಳೆಗಾಗಲೇ ತಾಲ್ಲೂಕಿನಲ್ಲಿ ಸರ್ಕಾರದ 20ಕ್ಕೂ ಹೆಚ್ಚು ಇಲಾಖೆಗಳ ಕಚೇರಿಗಳು ಆರಂಭವಾಗಬೇಕಿತ್ತು. ಆದರೆ ತಹಶೀಲ್ದಾರ್ ಕಚೇರಿ, ಉಪಖಜಾನೆ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇದ್ದ ಕಚೇರಿಗಳಲ್ಲೂ ಶೌಚಾಲಯ, ಕುಡಿಯುವ ನೀರು, ಉತ್ತಮ ಕಟ್ಟಡ ಮುಂತಾದ ಸೌಲಭ್ಯಗಳ ಸಮಸ್ಯೆಗಳಿವೆ.</p>.<p>ಹುಲಸೂರ ಪಟ್ಟಣ ಮತ್ತು ಅದರ ವ್ಯಾಪ್ತಿಯ ಗ್ರಾಮಗಳಲ್ಲಿ ಗುರುತಿಸಿಕೊಂಡಿರುವ ವಿವಿಧ ಪಕ್ಷಗಳ ಮುಖಂಡರು, ಮಾಜಿ ಶಾಸಕರು ಪಟ್ಟಣ ಅಭಿವೃದ್ಧಿಯತ್ತ ಆಸಕ್ತಿ ತೋರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.</p>.<p>ತಮ್ಮ ವಿವಿಧ ಕೆಲಸಗಳಿಗಾಗಿ ನಿತ್ಯ ಸಾವಿರಾರು ಜನ ತಹಶಿಲ್ದಾರ್ ಕಚೇರಿಗೆ ಬರುತ್ತಾರೆ. ಹತ್ತಾರು ಅಧಿಕಾರಿಗಳು, ಸಿಬ್ಬಂದಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಜನರಿಂದ ತುಂಬಿರುವ ತಹಶೀಲ್ದಾರ್ ಕಚೇರಿ ಜೋರು ಮಳೆಯಾದರೆ ಸೋರುತ್ತದೆ. ಸಿಬ್ಬಂದಿ, ಅಧಿಕಾರಿಗಳು ಆತಂಕದಲ್ಲೇ ಕೆಲಸ ಮಾಡಬೇಕು. ಸ್ಥಳಾವಕಾಶದ ಕೊರತೆಯೂ ಕಾಡುತ್ತಿದೆ. </p>.<p>‘ತಹಶೀಲ್ದಾರ್ ಕಚೇರಿಗೆ ಪ್ರತ್ಯೇಕ, ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಬೇಕು ಅಥವಾ ಸಾಕಷ್ಟು ಸ್ಥಳಾವಕಾಶ ಇರುವ ಕಡೆಗೆ ಕಚೇರಿಯನ್ನು ಸ್ಥಳಾಂತರಿಸಿನೆಮ್ಮದಿಯಿಂದ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಡಬೇಕು’ ಎನ್ನುವುದು ನೌಕರರ ಮನವಿ.</p>.<p><strong>ಬಸವಕಲ್ಯಾಣಗೆ ಅಲೆದಾಟ:</strong> ತಲ್ಲೂಕಿನ ಜನರು ಕೋರ್ಟ್ ಕೆಲಸ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ತೋಟಗಾರಿಕೆ, ಶಿಕ್ಷಣ ಮುಂತಾದ ಇಲಾಖೆಗಳ ಕೆಲಸಕ್ಕೆ ಬಸವಕಲ್ಯಾಣಕ್ಕೆ ಹೋಗಬೇಕು.</p>.<p>‘ಶಿಕ್ಷಣ ಇಲಾಖೆ ಅಧಿಕಾರಿಗಳು ಬಸವಕಲ್ಯಾಣದಲ್ಲಿ ಸಭೆ ಕರೆದರೆ ಶಿಕ್ಷಕರು ಇಡೀ ದಿನ ತೆರಳಬೇಕಾಗುವುದರಿಂದ ಶಾಲಾ ಚಟುವಟಿಕೆಗೆ ತೊಂದರೆಯಾಗುತ್ತದೆ. ಹುಲಸೂರಿನಲ್ಲಿ ಶಿಕ್ಷಣ ಇಲಾಖೆ ಶೀಘ್ರ ಕಚೇರಿ ತೆರೆಯಬೇಕು. ಶಾಸಕ ಶರಣು ಸಲಗರ ಅವರು ಹುಲಸೂರ, ಬಸವಕಲ್ಯಾಣ ಎರಡೂ ತಾಲ್ಲೂಕುಗಳ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಬೇಕು’ ಎಂದು ಲಹೂಜಿ ಶಕ್ತಿ ಸೇನಾ ಸಂಘಟನೆ ತಾಲ್ಲೂಕ ಅಧ್ಯಕ್ಷ ಅಜಿತ ಸೂರ್ಯವಂಶಿ ಹೇಳಿದರು.</p>.<p>‘ಹೋರಾಟದ ಮಾಡುವ ಮೂಲಕ ತಾಲ್ಲೂಕು ರಚನೆ ಆಗಿದೆ. ಆದರೆ ಇಲ್ಲಿ ನಡೆಯಬೇಕಾದ ಜನಸ್ಪಂದನ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳು ಇಲ್ಲಿಯೇ ನಡೆಯಬೇಕು ಹಾಗೂ ತಾಲ್ಲೂಕು ಅಸ್ತಿತ್ವಕ್ಕೆ ಬಂದು 6 ವರ್ಷ ಗತಿಸಿದರೂ ಸರ್ಕಾರ ಎಲ್ಲ ಇಲಾಖೆಗಳನ್ನು ಆರಂಭಿಸದಿರುವುದು ಬೇಸರದ ಸಂಗತಿ’ ಎನ್ನುತ್ತಾರೆ ಹುಲಸೂರ ಸಾಮಾಜಿಕ ಕಾರ್ಯಕರ್ತ ಪ್ರವೀಣ ಕಾಡಾದಿ.</p>.<div><blockquote>ಹುಲಸೂರ ತಾಲ್ಲೂಕಿಗೆ ಸಂಬಂಧಿಸಿದ ಇತರೆ ಕಚೇರಿ ಆರಂಭಿಸುವ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ತುರ್ತು ಬೇಕಾಗಿರುವ ಕೆಲ ಕಚೇರಿಗಳನ್ನಾದರೂ ಮಂಜೂರು ಮಾಡಬೇಕು </blockquote><span class="attribution">–ಎಂ.ಜಿ.ರಾಜೊಳೆ, ಸಂಚಾಲಕ ಹುಲಸೂರ ತಾಲ್ಲೂಕು ಹೋರಾಟ ಸಮಿತಿ</span></div>.<div><blockquote>ತಹಶೀಲ್ದಾರ್ ಕಚೇರಿ ಹಳೆಯದಾಗಿದ್ದು ಹೆಚ್ಚು ಮಳೆಯಾದರೆ ಸೋರುತ್ತದೆ </blockquote><span class="attribution">–ಶಿವಾನಂದ ಮೇತ್ರೆ, ತಹಶೀಲ್ದಾರ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>