<p><strong>ಬೀದರ್</strong>: ‘ತಾಲ್ಲೂಕಿನ ಹಳ್ಳದಕೇರಿಯಲ್ಲಿ ಅರಣ್ಯ ಇಲಾಖೆಯವರು ಖಾಸಗಿ ಜಾಗೆಯಲ್ಲಿನ ಮನೆ ನೆಲಸಮ ಮಾಡಿದ್ದಾರೆ‘ ಎಂದು ಬಹುಜನ ಸಮಾಜ ಪಕ್ಷ ದೂರಿದೆ.</p>.<p>ಈ ಬಗ್ಗೆ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ್ದಾರೆ.</p>.<p>‘ಅರಣ್ಯ ಇಲಾಖೆಯವರು ಕಳೆದ ಡಿ.14ರಂದು ಹಳ್ಳದಕೇರಿ ಸರ್ವೆ ನಂ.99ರ ಖಾತೆ 3ರಲ್ಲಿ ಇರುವ ಮನೆಗಳನ್ನು ನೆಲಸಮ ಮಾಡಿದ್ದಾರೆ. ಇದು ಖಾಸಗಿ ಜಮೀನು. ಇಲ್ಲಿ ಬಡವರು ನಿವೇಶನ ಖರೀದಿ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಅರಣ್ಯ ಇಲಾಖೆಯವರ ದಬ್ಬಾಳಿಕೆಯಿಂದಾಗಿ ಈ ಜನರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಪರಿಶೀಲಿಸಿ ತೊಂದರೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಆಗಿರುವ ನಷ್ಟ ಭರಿಸಿಕೊಡಬೇಕು’ ಎಂದು ಆಗ್ರಹಿಸಿದರು.</p>.<p>ಬಿಎಸ್ಪಿ ರಾಜ್ಯ ಕಾರ್ಯದರ್ಶಿ ದತ್ತು ಸೂರ್ಯವಂಶಿ, ಮುಖಂಡ ದತ್ತಪ್ಪ ಭಂಡಾರಿ, ಸಂಜೀವಕುಮಾರ ಮೇಧಾ, ಗುಣವಂತ ಸೂರ್ಯವಂಶಿ, ಉಮೇಶ ಗುತ್ತೆದಾರ, ನಾಗೇಶ್ ಬಂಗಾರೆ, ಅಶೋಕ ಮಂಠಾಳಕರ್, ಅಬ್ದುಲ್ ಶೇಖ್, ಅಮೀರ್ ಅಹ್ಮದ್, ಶಾಮ ಶರ್ಮಾ, ಯೇಸುದಾಸ, ಧನರಾಜ, ಸಂಜುಕುಮಾರ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ತಾಲ್ಲೂಕಿನ ಹಳ್ಳದಕೇರಿಯಲ್ಲಿ ಅರಣ್ಯ ಇಲಾಖೆಯವರು ಖಾಸಗಿ ಜಾಗೆಯಲ್ಲಿನ ಮನೆ ನೆಲಸಮ ಮಾಡಿದ್ದಾರೆ‘ ಎಂದು ಬಹುಜನ ಸಮಾಜ ಪಕ್ಷ ದೂರಿದೆ.</p>.<p>ಈ ಬಗ್ಗೆ ಪಕ್ಷದ ಮುಖಂಡರು ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ್ದಾರೆ.</p>.<p>‘ಅರಣ್ಯ ಇಲಾಖೆಯವರು ಕಳೆದ ಡಿ.14ರಂದು ಹಳ್ಳದಕೇರಿ ಸರ್ವೆ ನಂ.99ರ ಖಾತೆ 3ರಲ್ಲಿ ಇರುವ ಮನೆಗಳನ್ನು ನೆಲಸಮ ಮಾಡಿದ್ದಾರೆ. ಇದು ಖಾಸಗಿ ಜಮೀನು. ಇಲ್ಲಿ ಬಡವರು ನಿವೇಶನ ಖರೀದಿ ಮಾಡಿ ಮನೆ ಕಟ್ಟಿಕೊಂಡಿದ್ದಾರೆ. ಆದರೆ ಅರಣ್ಯ ಇಲಾಖೆಯವರ ದಬ್ಬಾಳಿಕೆಯಿಂದಾಗಿ ಈ ಜನರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಪರಿಶೀಲಿಸಿ ತೊಂದರೆ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಆಗಿರುವ ನಷ್ಟ ಭರಿಸಿಕೊಡಬೇಕು’ ಎಂದು ಆಗ್ರಹಿಸಿದರು.</p>.<p>ಬಿಎಸ್ಪಿ ರಾಜ್ಯ ಕಾರ್ಯದರ್ಶಿ ದತ್ತು ಸೂರ್ಯವಂಶಿ, ಮುಖಂಡ ದತ್ತಪ್ಪ ಭಂಡಾರಿ, ಸಂಜೀವಕುಮಾರ ಮೇಧಾ, ಗುಣವಂತ ಸೂರ್ಯವಂಶಿ, ಉಮೇಶ ಗುತ್ತೆದಾರ, ನಾಗೇಶ್ ಬಂಗಾರೆ, ಅಶೋಕ ಮಂಠಾಳಕರ್, ಅಬ್ದುಲ್ ಶೇಖ್, ಅಮೀರ್ ಅಹ್ಮದ್, ಶಾಮ ಶರ್ಮಾ, ಯೇಸುದಾಸ, ಧನರಾಜ, ಸಂಜುಕುಮಾರ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>