<p><strong>ಔರಾದ್</strong>: ಪಟ್ಟಣದ ಸಾರ್ವಜನಿಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ, ಹಿರಿಯ ವೈದ್ಯ ಡಾ. ಸಿದ್ಧಾರ್ಥ ಸೇರಿದಂತೆ ಆರು ಜನ ತಜ್ಞ ವೈದ್ಯರು ‘ಡಿ’ ಗ್ರೂಪ್ ನೌಕರರ ಜತೆಗೂಡಿ ಶನಿವಾರ ಮಧ್ಯಾಹ್ನ ಸ್ವಚ್ಛ ಮಾಡಿದ್ದಾರೆ.</p>.<p>ಔರಾದ್ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಮಸ್ಯೆ ಕುರಿತು ಪ್ರಜಾವಾಣಿ ನಿರಂತರವಾಗಿ ವರದಿ ಪ್ರಕಟಿಸಿತ್ತು. </p>.<p>ವೈದ್ಯರು ಸಿಬ್ಬಂದಿಯೊಂದಿಗೆ ಸೇರಿ ಆಸ್ಪತ್ರೆ ಆವರಣ, ಹೊರ ರೋಗಿಗಗಳ ವಿಭಾಗ, ವೈದ್ಯರ ಕೊಠಡಿ ಸೇರಿದಂತೆ ಆಸ್ಪತ್ರೆಯ ಎಲ್ಲೆಡೆಯ ಕಸ–ಕಡ್ಡಿ, ಪ್ಲಾಸ್ಟಿಕ್ ತೆಗೆದು ಸ್ವಚ್ಛಗೊಳಿಸಿದ್ದಾರೆ. ಗೋಡೆಗಳನ್ನೂ ಬ್ರಶ್ನಿಂದ ಸ್ವಚ್ಛ ಮಾಡಿದ್ದಾರೆ. </p>.<p>‘ಪ್ರಜಾವಾಣಿಯಲ್ಲಿ ಆಸ್ಪತ್ರೆ ಸಮಸ್ಯೆ ಕುರಿತು ನಿರಂತರ ವರದಿ ಬಂದಿರುವುದನ್ನು ನಾವು ಗಮನಿಸಿದ್ದೇವೆ. ಅದರಲ್ಲೂ ಸ್ವಚ್ಛತೆ ಇಲ್ಲದಿರುವುದು ಹೆಚ್ಚು ವರದಿಗಳು ಬಂದಿದೆ. ಇದನ್ನು ನೋಡಿ ನಾವೇ ಸ್ವಚ್ಛತೆಗೆ ಮುಂದಾಗಬೇಕು ಎಂದು ಸಂಕಲ್ಪ ಮಾಡಿದ್ದೇವೆ. ನಮ್ಮ ಆಸ್ಪತ್ರೆ ಎಲ್ಲ ಆರು ಜನ ವೈದ್ಯರು, ಸಿಬ್ಬಂದಿ, ಡಿ ಗ್ರೂಪ್ ನೌಕರರ ಜತೆ ಸೇರಿ ಶೌಚಾಲಯದಿಂದ ಆಸ್ಪತ್ರೆ ಎಲ್ಲ ವಿಭಾಗ, ಆವರಣ ಸ್ವಚ್ಛ ಮಾಡಿದ್ದೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ ತಿಳಿಸಿದರು.</p>.<p>‘ನಮ್ಮ ಸ್ವಚ್ಛತಾ ಅಭಿಯಾನ ಇಷ್ಟಕ್ಕೆ ಮುಗಿಯಲ್ಲ. ಪ್ರತಿ ತಿಂಗಳು ನಾಲ್ಕನೇ ಶನಿವಾರ ಮಧ್ಯಾಹ್ನದ ನಂತರ ಸ್ವಚ್ಛ ಮಾಡಲು ಮುಂದಾಗುತ್ತೇವೆ. ಆಸ್ಪತ್ರೆ ಎಲ್ಲ ಸಿಬ್ಬಂದಿ ಇದಕ್ಕೆ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್</strong>: ಪಟ್ಟಣದ ಸಾರ್ವಜನಿಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ, ಹಿರಿಯ ವೈದ್ಯ ಡಾ. ಸಿದ್ಧಾರ್ಥ ಸೇರಿದಂತೆ ಆರು ಜನ ತಜ್ಞ ವೈದ್ಯರು ‘ಡಿ’ ಗ್ರೂಪ್ ನೌಕರರ ಜತೆಗೂಡಿ ಶನಿವಾರ ಮಧ್ಯಾಹ್ನ ಸ್ವಚ್ಛ ಮಾಡಿದ್ದಾರೆ.</p>.<p>ಔರಾದ್ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಮಸ್ಯೆ ಕುರಿತು ಪ್ರಜಾವಾಣಿ ನಿರಂತರವಾಗಿ ವರದಿ ಪ್ರಕಟಿಸಿತ್ತು. </p>.<p>ವೈದ್ಯರು ಸಿಬ್ಬಂದಿಯೊಂದಿಗೆ ಸೇರಿ ಆಸ್ಪತ್ರೆ ಆವರಣ, ಹೊರ ರೋಗಿಗಗಳ ವಿಭಾಗ, ವೈದ್ಯರ ಕೊಠಡಿ ಸೇರಿದಂತೆ ಆಸ್ಪತ್ರೆಯ ಎಲ್ಲೆಡೆಯ ಕಸ–ಕಡ್ಡಿ, ಪ್ಲಾಸ್ಟಿಕ್ ತೆಗೆದು ಸ್ವಚ್ಛಗೊಳಿಸಿದ್ದಾರೆ. ಗೋಡೆಗಳನ್ನೂ ಬ್ರಶ್ನಿಂದ ಸ್ವಚ್ಛ ಮಾಡಿದ್ದಾರೆ. </p>.<p>‘ಪ್ರಜಾವಾಣಿಯಲ್ಲಿ ಆಸ್ಪತ್ರೆ ಸಮಸ್ಯೆ ಕುರಿತು ನಿರಂತರ ವರದಿ ಬಂದಿರುವುದನ್ನು ನಾವು ಗಮನಿಸಿದ್ದೇವೆ. ಅದರಲ್ಲೂ ಸ್ವಚ್ಛತೆ ಇಲ್ಲದಿರುವುದು ಹೆಚ್ಚು ವರದಿಗಳು ಬಂದಿದೆ. ಇದನ್ನು ನೋಡಿ ನಾವೇ ಸ್ವಚ್ಛತೆಗೆ ಮುಂದಾಗಬೇಕು ಎಂದು ಸಂಕಲ್ಪ ಮಾಡಿದ್ದೇವೆ. ನಮ್ಮ ಆಸ್ಪತ್ರೆ ಎಲ್ಲ ಆರು ಜನ ವೈದ್ಯರು, ಸಿಬ್ಬಂದಿ, ಡಿ ಗ್ರೂಪ್ ನೌಕರರ ಜತೆ ಸೇರಿ ಶೌಚಾಲಯದಿಂದ ಆಸ್ಪತ್ರೆ ಎಲ್ಲ ವಿಭಾಗ, ಆವರಣ ಸ್ವಚ್ಛ ಮಾಡಿದ್ದೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ ತಿಳಿಸಿದರು.</p>.<p>‘ನಮ್ಮ ಸ್ವಚ್ಛತಾ ಅಭಿಯಾನ ಇಷ್ಟಕ್ಕೆ ಮುಗಿಯಲ್ಲ. ಪ್ರತಿ ತಿಂಗಳು ನಾಲ್ಕನೇ ಶನಿವಾರ ಮಧ್ಯಾಹ್ನದ ನಂತರ ಸ್ವಚ್ಛ ಮಾಡಲು ಮುಂದಾಗುತ್ತೇವೆ. ಆಸ್ಪತ್ರೆ ಎಲ್ಲ ಸಿಬ್ಬಂದಿ ಇದಕ್ಕೆ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>