<p><strong>ಬೀದರ್</strong>: ಕೇಂದ್ರ ಸಚಿವ ಭಗವಂತ ಖೂಬಾ ಅವರ ಪತ್ನಿ ಶೀಲಾ ಖೂಬಾ ಅವರು ನಗರದ ವಿವಿಧೆಡೆ ಸೋಮವಾರ ಪ್ರಚಾರ ಕಾರ್ಯ ಕೈಗೊಂಡರು.</p>.<p>ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತೆಯರೊಂದಿಗೆ ಇಲ್ಲಿನ ಶಿವನಗರ ಉತ್ತರ– ದಕ್ಷಿಣ, ಕೆ.ಇ.ಬಿ ಕಾಲೊನಿ, ಗುರುನಗರ, ವಿದ್ಯಾನಗರ ಸೇರಿದಂತೆ ಇತರೆ ಕಡೆಗಳಲ್ಲಿ ಪತಿ ಪರ ಪ್ರಚಾರ ನಡೆಸಿದರು.</p>.<p>‘ಭಗವಂತ ಖೂಬಾ ಅವರು ನಿಮ್ಮ ಮನೆಯ ಮಗನಾಗಿ ಕಳೆದ ಹತ್ತು ವರ್ಷಗಳಿಂದ ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ನನ್ನ ಪತಿಯ ಪ್ರಾಮಾಣಿಕ ಕೆಲಸ ನೋಡಿ ಮೋದಿಯವರು ಮಂತ್ರಿ ಮಾಡಿದ್ದಾರೆ. ಯಾರಿಗೂ ಮೋಸ ಮಾಡುವ, ಸುಳ್ಳು ಹೇಳುವ ಕೆಲಸ ಅವರು ಮಾಡುವುದಿಲ್ಲ. ನೇರ ಮಾತನಾಡುವ ವ್ಯಕ್ತಿಯಾಗಿದ್ದಾರೆ’ ಎಂದು ಶೀಲಾ ಖೂಬಾ ಹೇಳಿದರು.</p>.<p>ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲುಂಬಿಣಿ ಗೌತಮ, ಪ್ರಮುಖರಾದ ಶಕುಂತಲಾ ಬೆಲ್ದಾಳೆ, ಪ್ರಸನ್ನ ಲಕ್ಷ್ಮಿ ದೇಶಪಾಂಡೆ, ಸರಸ್ವತಿ, ಮಹಾನಂದ ಪಾಟೀಲ, ಯೋಗೇಶ್ವರಿ ಸೋನಕಾಂಬಳೆ, ಉಲ್ಕಾವತಿ, ಸುನೀತಾ, ಹೇಮಾ ತುಕ್ಕಾರಡ್ಡೆ, ಮಯಾದೇವಿ ಸಿಂಧನಕೇರಾ, ಮಹಾನಂದ ಕೋಟೆ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಕೇಂದ್ರ ಸಚಿವ ಭಗವಂತ ಖೂಬಾ ಅವರ ಪತ್ನಿ ಶೀಲಾ ಖೂಬಾ ಅವರು ನಗರದ ವಿವಿಧೆಡೆ ಸೋಮವಾರ ಪ್ರಚಾರ ಕಾರ್ಯ ಕೈಗೊಂಡರು.</p>.<p>ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತೆಯರೊಂದಿಗೆ ಇಲ್ಲಿನ ಶಿವನಗರ ಉತ್ತರ– ದಕ್ಷಿಣ, ಕೆ.ಇ.ಬಿ ಕಾಲೊನಿ, ಗುರುನಗರ, ವಿದ್ಯಾನಗರ ಸೇರಿದಂತೆ ಇತರೆ ಕಡೆಗಳಲ್ಲಿ ಪತಿ ಪರ ಪ್ರಚಾರ ನಡೆಸಿದರು.</p>.<p>‘ಭಗವಂತ ಖೂಬಾ ಅವರು ನಿಮ್ಮ ಮನೆಯ ಮಗನಾಗಿ ಕಳೆದ ಹತ್ತು ವರ್ಷಗಳಿಂದ ಯಾವುದೇ ರೀತಿಯ ಭ್ರಷ್ಟಾಚಾರವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ನನ್ನ ಪತಿಯ ಪ್ರಾಮಾಣಿಕ ಕೆಲಸ ನೋಡಿ ಮೋದಿಯವರು ಮಂತ್ರಿ ಮಾಡಿದ್ದಾರೆ. ಯಾರಿಗೂ ಮೋಸ ಮಾಡುವ, ಸುಳ್ಳು ಹೇಳುವ ಕೆಲಸ ಅವರು ಮಾಡುವುದಿಲ್ಲ. ನೇರ ಮಾತನಾಡುವ ವ್ಯಕ್ತಿಯಾಗಿದ್ದಾರೆ’ ಎಂದು ಶೀಲಾ ಖೂಬಾ ಹೇಳಿದರು.</p>.<p>ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಲುಂಬಿಣಿ ಗೌತಮ, ಪ್ರಮುಖರಾದ ಶಕುಂತಲಾ ಬೆಲ್ದಾಳೆ, ಪ್ರಸನ್ನ ಲಕ್ಷ್ಮಿ ದೇಶಪಾಂಡೆ, ಸರಸ್ವತಿ, ಮಹಾನಂದ ಪಾಟೀಲ, ಯೋಗೇಶ್ವರಿ ಸೋನಕಾಂಬಳೆ, ಉಲ್ಕಾವತಿ, ಸುನೀತಾ, ಹೇಮಾ ತುಕ್ಕಾರಡ್ಡೆ, ಮಯಾದೇವಿ ಸಿಂಧನಕೇರಾ, ಮಹಾನಂದ ಕೋಟೆ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>