<p><strong>ಬಸವಕಲ್ಯಾಣ:</strong> ತಾಲ್ಲೂಕಿನ ಕೊಹಿನೂರನಲ್ಲಿ ಗುರುವಾರ ಎರಡು ಕೆರೆ ಒಡೆದು ಆಗಿರುವ ಹಾನಿಯ ಪುನರ್ ಸಮೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.</p>.<p>ಜಿ.ಪಂ ಮಾಜಿ ಸದಸ್ಯ ಆನಂದ ಪಾಟೀಲ ಮಾತನಾಡಿ, ‘ತಿಂಗಳ ಹಿಂದೆ ಅತಿವೃಷ್ಟಿಯಿಂದ ಅಟ್ಟೂರ ಮತ್ತು ಕೊಹಿನೂರ ಕೆರೆಗಳು ಒಡೆದು ನೂರಾರು ಎಕರೆಯಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಬಾವಿಗಳು ಮುಚ್ಚಿವೆ. ಹೀಗಾಗಿ ರೈತರು ಸಂಕಟ ಅನುಭವಿಸುತ್ತಿದ್ದರೂ ಸಮೀಕ್ಷೆಗೆ ವಿಳಂಬ ಮಾಡಲಾಗಿದೆ’ ಎಂದು ಹೇಳಿದರು.</p>.<p>‘300 ರೈತರು ಹಾನಿ ಅನುಭವಿಸಿದರೂ ಇದುವರೆಗೆ ಬರೀ 100 ರೈತರ ಪಟ್ಟಿ ಮಾತ್ರ ಸಿದ್ಧಪಡಿಸಲಾಗಿದೆ. ನಷ್ಟಕ್ಕೊಳಗಾದ ಅನೇಕ ರೈತರ ಹೆಸರು ಕೈಬಿಟ್ಟಿವೆ. ಏನೂ ಆಗದವರ ಹೆಸರುಗಳು ಸೇರ್ಪಡೆ ಆಗಿವೆ. ಆದ್ದರಿಂದ ಈ ಕಾರ್ಯದಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ’ ಎಂದು ಹೇಳಿದರು.</p>.<p>‘ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಈ ಬಗ್ಗೆ ತಕ್ಷಣ ಗಮನಹರಿಸಿ ನ್ಯಾಯ ನೀಡದಿದ್ದರೆ, ಉಗ್ರ ಹೋರಾಟ ಕೈಗೊಳ್ಳಲಾಗುವುದು' ಎಂದು ಅವರು ಎಚ್ಚರಿಸಿದ್ದಾರೆ.</p>.<p>ಮುಖಂಡರಾದ ಮಲ್ಲಿಕಾರ್ಜುನ ಹಡಪದ, ಪರಶುರಾಮ ಜಡಗೆ, ಬಲಭಿಮ ಅಣಕಲ, ಸಂಜೀವಕುಮಾರ ಪಾಟೀಲ, ಪ್ರಶಾಂತ ಲಕಮಾಜಿ, ಚಂದ್ರು ಮುನೋಳೆ, ವೀರಣ್ಣ ಮೂಲಗೆ, ಸೋಮಣ್ಣ ಕಲೋಜಿ, ಅನೀಲ ಮಣಕೋಜಿ, ಜಾಲಿಂದರ ಶಹಾಜಿ, ಪಾರ್ವತಿಬಾಯಿ, ಶಾಂತಮ್ಮ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ತಾಲ್ಲೂಕಿನ ಕೊಹಿನೂರನಲ್ಲಿ ಗುರುವಾರ ಎರಡು ಕೆರೆ ಒಡೆದು ಆಗಿರುವ ಹಾನಿಯ ಪುನರ್ ಸಮೀಕ್ಷೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.</p>.<p>ಜಿ.ಪಂ ಮಾಜಿ ಸದಸ್ಯ ಆನಂದ ಪಾಟೀಲ ಮಾತನಾಡಿ, ‘ತಿಂಗಳ ಹಿಂದೆ ಅತಿವೃಷ್ಟಿಯಿಂದ ಅಟ್ಟೂರ ಮತ್ತು ಕೊಹಿನೂರ ಕೆರೆಗಳು ಒಡೆದು ನೂರಾರು ಎಕರೆಯಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಬಾವಿಗಳು ಮುಚ್ಚಿವೆ. ಹೀಗಾಗಿ ರೈತರು ಸಂಕಟ ಅನುಭವಿಸುತ್ತಿದ್ದರೂ ಸಮೀಕ್ಷೆಗೆ ವಿಳಂಬ ಮಾಡಲಾಗಿದೆ’ ಎಂದು ಹೇಳಿದರು.</p>.<p>‘300 ರೈತರು ಹಾನಿ ಅನುಭವಿಸಿದರೂ ಇದುವರೆಗೆ ಬರೀ 100 ರೈತರ ಪಟ್ಟಿ ಮಾತ್ರ ಸಿದ್ಧಪಡಿಸಲಾಗಿದೆ. ನಷ್ಟಕ್ಕೊಳಗಾದ ಅನೇಕ ರೈತರ ಹೆಸರು ಕೈಬಿಟ್ಟಿವೆ. ಏನೂ ಆಗದವರ ಹೆಸರುಗಳು ಸೇರ್ಪಡೆ ಆಗಿವೆ. ಆದ್ದರಿಂದ ಈ ಕಾರ್ಯದಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದೆ’ ಎಂದು ಹೇಳಿದರು.</p>.<p>‘ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಈ ಬಗ್ಗೆ ತಕ್ಷಣ ಗಮನಹರಿಸಿ ನ್ಯಾಯ ನೀಡದಿದ್ದರೆ, ಉಗ್ರ ಹೋರಾಟ ಕೈಗೊಳ್ಳಲಾಗುವುದು' ಎಂದು ಅವರು ಎಚ್ಚರಿಸಿದ್ದಾರೆ.</p>.<p>ಮುಖಂಡರಾದ ಮಲ್ಲಿಕಾರ್ಜುನ ಹಡಪದ, ಪರಶುರಾಮ ಜಡಗೆ, ಬಲಭಿಮ ಅಣಕಲ, ಸಂಜೀವಕುಮಾರ ಪಾಟೀಲ, ಪ್ರಶಾಂತ ಲಕಮಾಜಿ, ಚಂದ್ರು ಮುನೋಳೆ, ವೀರಣ್ಣ ಮೂಲಗೆ, ಸೋಮಣ್ಣ ಕಲೋಜಿ, ಅನೀಲ ಮಣಕೋಜಿ, ಜಾಲಿಂದರ ಶಹಾಜಿ, ಪಾರ್ವತಿಬಾಯಿ, ಶಾಂತಮ್ಮ ಮತ್ತಿತರರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>