<p><strong>ಬೀದರ್</strong>: ಲೋಕಸಭೆ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿವೆ. ಅಷ್ಟರಲ್ಲಾಗಲೇ ಬಿಜೆಪಿಯಲ್ಲಿ ಟಿಕೆಟ್ಗೆ ಭಾರಿ ಪೈಪೋಟಿ ಶುರುವಾಗಿದೆ.</p>.<p>ಬೀದರ್ ಲೋಕಸಭಾ ಕ್ಷೇತ್ರದಿಂದ ಕಳೆದೆರಡು ಚುನಾವಣೆಗಳಲ್ಲಿ ಗೆದ್ದಿರುವ ಭಗವಂತ ಖೂಬಾ ಅವರು ಸದ್ಯ ಕೇಂದ್ರದಲ್ಲಿ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾಗಿದ್ದಾರೆ. ಆದರೆ, ಅವರ ತವರಲ್ಲೇ ಟಿಕೆಟ್ಗಾಗಿ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಇಷ್ಟೇ ಅಲ್ಲ, ಮತ್ತೊಂದು ಅವಧಿಗೆ ಭಗವಂತ ಖೂಬಾ ಅವರಿಗೆ ಟಿಕೆಟ್ ಕೊಡದಂತೆ ಸ್ವಪಕ್ಷೀಯ ಶಾಸಕರೇ ಆಗ್ರಹಿಸಿದ್ದಾರೆ.</p>.<p>ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ನಡೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶಾಸಕರಾದ ಪ್ರಭು ಚವಾಣ್, ಶರಣು ಸಲಗರ ಅವರು ಖೂಬಾ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಡಾ.ಸಿದ್ದು ಪಾಟೀಲ ಕೂಡ ಅದಕ್ಕೆ ದನಿಗೂಡಿಸಿದ್ದಾರೆ ಎಂದು ತಿಳಿದು ಬಂದಿದೆ. </p>.<p>ಭಗವಂತ ಖೂಬಾ ಅವರು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರು ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ ಎನ್ನುವುದು ಅವರ ವಿರುದ್ಧವಿರುವ ಪ್ರಮುಖ ಆರೋಪ. ವಿಧಾನಸಭಾ ಚುನಾವಣೆಯಲ್ಲಿ ಔರಾದ್ ಶಾಸಕ ಪ್ರಭು ಚವಾಣ್ ವಿರುದ್ಧ ಕೆಲಸ ಮಾಡಿದ್ದಾರೆ ಎನ್ನುವುದು ಇನ್ನೊಂದು ಗಂಭೀರ ಆರೋಪ. ಸ್ವತಃ ಇದನ್ನು ಚವಾಣ್ ಅವರೇ ಹಲವು ಸಲ ಬಹಿರಂಗವಾಗಿ ದೂರಿದ್ದಾರೆ. ಬೆಂಗಳೂರಿನ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.</p>.<p>ಔರಾದ್ ತಾಲ್ಲೂಕು ವ್ಯಾಪ್ತಿಯಲ್ಲಿ ಇತ್ತೀಚೆಗೆ ಖೂಬಾ ನೇತೃತ್ವದಲ್ಲಿ ನಡೆದ ಭಾರತ ವಿಕಸಿತ ಸಂಕಲ್ಪ ಯಾತ್ರೆಯಿಂದ ಚವಾಣ್ ದೂರವೇ ಉಳಿದಿದ್ದರು. ‘ಒಂದುವೇಳೆ ಖೂಬಾ ಅವರಿಗೆ ಟಿಕೆಟ್ ಸಿಕ್ಕರೂ ಅವರ ಪರ ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. ವರಿಷ್ಠರಿಗೂ ದೂರು ಕೊಟ್ಟಿದ್ದಾರೆ. ಇನ್ನು, ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಟಿಕೆಟ್ ಹಂಚಿಕೆ ವಿಚಾರದಲ್ಲಿ ಮರಾಠ ಸಮಾಜವನ್ನು ಪರಿಗಣಿಸಬೇಕೆಂದು ಹೇಳುವುದರ ಮೂಲಕ ಖೂಬಾ ಅವರ ಬದಲು ಅನ್ಯರಿಗೆ ಟಿಕೆಟ್ ಕೊಡಬೇಕೆಂದು ಅಪ್ರತ್ಯಕ್ಷವಾಗಿ ಹೇಳಿದ್ದಾರೆ. ಮಾಜಿ ಶಾಸಕ ಸುಭಾಷ ಕಲ್ಲೂರ ಕೂಡ ವಿರೋಧದ ದನಿ ಎತ್ತಿದ್ದಾರೆ. ಖೂಬಾ ಅವರನ್ನು ವಿರೋಧಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬುಧವಾರ ನಡೆದ ಘಟನೆ ಕೂಡ ಅವರಿಗೆ ತೀವ್ರ ಹಿನ್ನಡೆ ಉಂಟು ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<p><strong>ಆಕಾಂಕ್ಷಿಗಳ್ಯಾರು?:</strong></p><p>ಬೀದರ್ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಹಲವರು ತುದಿಗಾಲ ಮೇಲೆ ನಿಂತಿದ್ದಾರೆ. ಅದಕ್ಕಾಗಿ ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ. ವರಿಷ್ಠರನ್ನು ಭೇಟಿ ಮಾಡುವುದು, ಮುಖಂಡರನ್ನು ಒಲಿಸಿಕೊಳ್ಳುವುದು, ಕಾರ್ಯಕರ್ತರ ವಿಶ್ವಾಸ ಗಳಿಸುವ ಕೆಲಸ ಜೋರಾಗಿ ನಡೆಯುತ್ತಿದೆ.</p>.<p>ಸದ್ಯ ಬಿಜೆಪಿಯಲ್ಲಿ ಹತ್ತು ಜನ ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವುದರಿಂದ ತನಗೇ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಭಗವಂತ ಖೂಬಾ ಇದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ.</p>.<p>ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಗುಂಡಪ್ಪಾ ವಕೀಲ ಹಾಗೂ ಸುಭಾಷ ಗುತ್ತೇದಾರ ಕೂಡ ಟಿಕೆಟ್ ಆಕಾಂಕ್ಷಿಗಳೆಂದು ಹೇಳಿಕೊಂಡಿದ್ದಾರೆ. ಆದರೆ, ಅದಕ್ಕೆ ಪೂರಕವಾಗಿ ತಳಮಟ್ಟದಲ್ಲಿ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಗುತ್ತಿಗೆದಾರ ವೃತ್ತಿಯಿಂದ ರಾಜಕಾರಣಕ್ಕೆ ದುಮುಕಿರುವ ಗುರುನಾಥ ಕೊಳ್ಳೂರ ಅವರು ಟಿಕೆಟ್ಗಾಗಿ ಭಾರಿ ಲಾಬಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಬಹುತೇಕ ಸಭೆ, ಸಮಾರಂಭಗಳಿಗೆ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡುತ್ತಿದ್ದಾರೆ. ಅಟಲ್ ಫೌಂಡೇಶನ್ ಹುಟ್ಟು ಹಾಕಿ ಅದರ ಮೂಲಕ ಜನರ ನಡುವೆ ಗುರುತಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ವಿವಿಧ ಮಠಾಧೀಶರನ್ನು ಕರೆಸಿಕೊಂಡು, ಆ ಮೂಲಕ ತಾವೂ ಪ್ರಬಲ ಆಕಾಂಕ್ಷಿ ಎಂದು ಸಾರಿದ್ದಾರೆ. ಆದರೆ, ಬಿಜೆಪಿಯಲ್ಲಿ ಯುವಕರು, ಮಧ್ಯ ವಯಸ್ಕರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ವಯಸ್ಸಿನ ಮಾನದಂಡ ಮುಖ್ಯವಾಗಿ ಪರಿಗಣಿಸಿದರೆ ಇವರೆಲ್ಲರ ಸಾಧ್ಯತೆ ಕ್ಷೀಣಿಸಬಹುದು. ಇನ್ನೂ, ಈ ಎಲ್ಲರೂ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತಹ ಛಾಪು ಕೂಡ ಹೊಂದಿಲ್ಲ.</p>.<p>ಇನ್ನು, ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿರುವ ಪಕ್ಷದ ಇನ್ನೊಬ್ಬ ಮುಖಂಡ ಈಶ್ವರ ಸಿಂಗ್ ಠಾಕೂರ್ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದುಳಿದ ವರ್ಗಗಳಿಗೆ ಸೇರಿದ ಇವರು, ಪಕ್ಷದಲ್ಲಿ ತಳಹಂತದಿಂದ ಮೇಲೆ ಬಂದವರು. ನಿಷ್ಠಾವಂತ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಸಂಘ ಪರಿವಾರದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಿಂದುತ್ವದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ಕಳೆದ ಚುನಾವಣೆಯಲ್ಲಿ ನಿರಾಯಾಸವಾಗಿ ಟಿಕೆಟ್ ದೊರಕಿತ್ತು. ಈ ಸಲ ಅವರ ದಾರಿ ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅವರು ಪ್ರಯತ್ನವನ್ನು ಮಾತ್ರ ನಿಲ್ಲಿಸಿಲ್ಲ.</p>.<p>ಯುವ ಮುಖಂಡ ಚನ್ನಬಸವ ಬಳತೆ ಕೂಡ ಆಕಾಂಕ್ಷಿಗಳಲ್ಲಿ ಪ್ರಮುಖರು. ಬಿಇ, ಎಂಟೆಕ್ ಪದವೀಧರರಾಗಿರುವ ಅವರು ಪಿಡಬ್ಲ್ಯೂಡಿಯಲ್ಲಿ 11 ವರ್ಷ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಸಚಿವ ಈಶ್ವರ ಬಿ. ಖಂಡ್ರೆಯವರ ಜೊತೆಗೆ ಕೆಲಸ ಮಾಡಿದ್ದರು. ಅವರ ದೂರದ ಸಂಬಂಧಿಕರು ಹೌದು.</p>.<p>ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕಳೆದ ನವೆಂಬರ್ನಲ್ಲಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಠಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಯುವಕರ ಕೋಟಾದಡಿ ಟಿಕೆಟ್ ಸಿಗುವ ಭರವಸೆಯೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವೇ ತಿಂಗಳ ಹಿಂದೆ ಬಿಜೆಪಿ ಸೇರಿದರೂ ಆಕಾಂಕ್ಷಿಗಳ ಸಾಲಿನಲ್ಲಿ ಇವರ ಹೆಸರು ಮುನ್ನಲೆಯಲ್ಲಿದೆ. ಇನ್ನೊಬ್ಬ ಎಂಜಿನಿಯರಿಂಗ್ ಪದವೀಧರ ನಾಗರಾಜ ಕರ್ಪೂರ ಕೂಡ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ. ಸ್ವಾತಂತ್ರ್ಯ ಹೋರಾಟ, ನಿಜಾಮನ ವಿರುದ್ಧದ ಹೋರಾಟದಲ್ಲಿ ಇವರ ತಾತ ಚಂದ್ರಶೇಖರ ಪಾಟೀಲ ಹೋರಾಡಿದ್ದರು. ಅವರ ಹೆಸರು ಹಾಗೂ ಪಕ್ಷದಲ್ಲಿನ ಸಂಘಟನೆಯ ಕೆಲಸ ಗುರುತಿಸಿ ಆದ್ಯತೆ ನೀಡಬೇಕೆಂಬುದು ಇವರ ವಾದ. ಕೆಲಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ಯುವಕರು, ಮಧ್ಯ ವಯಸ್ಕರಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವುದರಿಂದ ಅವಕಾಶ ಒಲಿಯಬಹುದು ಎಂಬ ನಿರೀಕ್ಷೆ ಇಬ್ಬರದು.</p>.<p>ಮರಾಠ ಸಮಾಜದಿಂದ ನಂದಕುಮಾರ ಸಾಳುಂಕೆ ಹಾಗೂ ಪದ್ಮಾಕರ ಪಾಟೀಲ ಅವರ ಹೆಸರುಗಳು ಕೇಳಿ ಬರುತ್ತಿವೆ. ನಂದಕುಮಾರ ಎಂಜಿನಿಯರಿಂಗ್ ಪದವೀಧರರು. ಭಾಲ್ಕಿ ಇವರ ಹುಟ್ಟೂರು. ಕರ್ಮಭೂಮಿ ಪುಣೆ. ಕಟ್ಟಡ ನಿರ್ಮಾಣ ಕ್ಷೇತ್ರ, ರಿಯಲ್ ಎಸ್ಟೇಟ್ ಇವರ ಮುಖ್ಯ ವೃತ್ತಿ. ‘ಜಿಲ್ಲೆಯಲ್ಲಿ ಲಿಂಗಾಯತರ ನಂತರ ಮರಾಠರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಜಕ್ಕೆ ಆದ್ಯತೆ ಕೊಡಬೇಕು’ ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ. ಇದೇ ರೀತಿಯ ವಾದವನ್ನು ಪದ್ಮಾಕರ ಪಾಟೀಲ ಅವರು ಮುಂದಿಟ್ಟಿದ್ದಾರೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅನೇಕ ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ಇಷ್ಟೇ ಅಲ್ಲದೇ, ಇನ್ನೂ ಕೆಲವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಒಂದುವೇಳೆ ಮರಾಠರಿಗೆ ಟಿಕೆಟ್ ಕೊಡುವುದು ಖಾತ್ರಿಯಾದರೆ ಸಾಳುಂಕೆ ಅವರಿಗೆ ಸಿಗುವ ಸಾಧ್ಯತೆ ಹೆಚ್ಚು. ಪಕ್ಷದಲ್ಲಿ ಸಕ್ರಿಯರಾಗಿರುವುದು ಮತ್ತು ಮಧ್ಯ ವಯಸ್ಕರಾಗಿರುವುದು ಅವರಿಗೆ ಪೂರಕವಾದ ಅಂಶ. ಇಷ್ಟು ಜನ ಆಕಾಂಕ್ಷಿಗಳಿದ್ದರೂ ಸಹ ಅಚ್ಚರಿಯ ಹೊಸ ಮುಖವನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತವೆ ಬಿಜೆಪಿಯ ಮೂಲಗಳು.</p>.<p>ಘಟಾನುಘಟಿಗಳನ್ನು ಸೋಲಿಸಿರುವ ಖೂಬಾ ಭಗವಂತ ಖೂಬಾ ಅವರು ಹಿಂದಿನ ಎರಡು ಚುನಾವಣೆಗಳಲ್ಲಿ ಘಟಾನುಘಟಿಗಳಿಗೆ ಸೋಲಿನ ರುಚಿ ತೋರಿಸಿ ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದವರು. 2014ರಲ್ಲಿ ಖೂಬಾ ಅವರು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರನ್ನು ಸೋಲಿಸಿ ಸಂಸತ್ತು ಪ್ರವೇಶಿಸಿದ್ದರು. 2019ರ ಚುನಾವಣೆಯಲ್ಲಿ ಈಶ್ವರ ಬಿ. ಖಂಡ್ರೆಯವರನ್ನು ಸೋಲಿಸಿದ್ದರು. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಪ್ರಬಲ ನಾಯಕರನ್ನು ಸೋಲಿಸಿರುವ ಖೂಬಾ ಅವರು ಅತೀವ ಆತ್ಮವಿಶ್ವಾಸದಲ್ಲಿದ್ದಾರೆ. ‘ನನ್ನ ವಿರುದ್ಧ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿದರೂ ಸೋಲಿಸುವೆ’ ಎಂದು ಹೇಳಿಕೊಂಡಿದ್ದಾರೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಮೋದಿ ಅವರ ಅಲೆಯಲ್ಲಿ ಖೂಬಾ ಗೆದ್ದಿದ್ದರು ಎನ್ನುವುದು ಗಮನಾರ್ಹ.</p>.<p> ಪ್ರಧಾನಿ ಮೋದಿ ನಿಕಟವರ್ತಿಗಳಲ್ಲಿ ಖೂಬಾ (ಖೂಬಾ ಚಿತ್ರ ಇದರೊಂದಿಗೆ ಬಳಸಿ) ಕೇಂದ್ರ ಸಚಿವ ಭಗವಂತ ಖೂಬಾ ಅವರು ಬಿಜೆಪಿಯ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಫಸಲ್ ಬಿಮಾ ಸೇರಿದಂತೆ ಕೇಂದ್ರದ ಹಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಯೋಜನೆಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಮನ ಗೆದ್ದು ಅವರ ನಿಕಟವರ್ತಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ಕೇಂದ್ರದಲ್ಲಿ ಬಹಳ ಬೇಗ ಮಂತ್ರಿ ಸ್ಥಾನ ಒಲಿದಿದೆ. ‘ಗೆಲ್ಲಿಸಿದವರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಸ್ಥಳೀಯವಾಗಿ ಕೆಲವು ಮುಖಂಡರು ಅವರ ವಿರುದ್ಧ ಟೀಕೆ ಮಾಡಿದ್ದಾರೆ. ಅವರಿಗೆ ಟಿಕೆಟ್ ಕೊಡುವುದಕ್ಕೂ ವಿರೋಧಿಸುತ್ತಿದ್ದಾರೆ. ಪಕ್ಷದ ಶಾಸಕರು ಕೂಡ ಅದರಲ್ಲಿ ಸೇರಿದ್ದಾರೆ. ಆದರೆ ತಳಮಟ್ಟದಲ್ಲಿ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಕಾಣಿಸುತ್ತಿಲ್ಲ. ಅವರು ಸಂಸದರಾದ ನಂತರ ಜಿಲ್ಲೆಗೆ 14 ಹೊಸ ರೈಲುಗಳನ್ನು ತಂದಿದ್ದಾರೆ. ಕೆಲವು ರೈಲುಗಳ ಸೇವೆ ವಿಸ್ತರಿಸಿದ್ದಾರೆ. ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ಕೊಟ್ಟಿದ್ದು ಆ ಕೆಲಸ ನಡೆಯುತ್ತಿದೆ. ಸಿಪೆಟ್ ತಾತ್ಕಾಲಿಕವಾಗಿ ಆರಂಭಿಸಿದ್ದಾರೆ. ಸೈನಿಕ ಶಾಲೆ ಮಂಜೂರು ಮಾಡಿಸಿದ್ದಾರೆ. ಈ ಹಿಂದೆ ನಿಂತು ಹೋಗಿದ್ದ ನಾಗರಿಕ ವಿಮಾನಯಾನ ಸೇವೆ ಪುನಃ ಆರಂಭಿಸಿದ್ದರು. ಈಗ ಪುನಃ ವಿಮಾನ ಸೇವೆ ನಿಂತು ಹೋಗಿದ್ದು ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಹೊಸ ವಿಮಾನ ಸೇವೆ ಆರಂಭಿಸುವ ಭರವಸೆ ಕೊಟ್ಟಿದ್ದಾರೆ. ಪಾಸ್ಪೋರ್ಟ್ ಸೇವಾ ಕೇಂದ್ರ ನಾಲ್ಕು ಹೆದ್ದಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಬೀದರ್–ಕೊಳಾರ ಬೈಪಾಸ್ ಬೀದರ್ ಮಟ್ಟಿಗೆ ದೊಡ್ಡ ಕೆಲಸವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೃತ ಯೋಜನೆಯಡಿ ₹275 ಕೋಟಿ ಯುಜಿಡಿ ಕಾಮಗಾರಿ ₹125 ಕೋಟಿಯಲ್ಲಿ ಮನೆ ಮನೆಗೆ ಅನಿಲ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. 100 ಓಪನ್ ಜಿಮ್ ಕಾಮಗಾರಿಯೂ ನಡೆಯುತ್ತಿದೆ. ಇದೆಲ್ಲ ಖೂಬಾ ಅವರಿಗೆ ಪ್ಲಸ್ ಪಾಯಿಂಟ್. ಆದರೆ ಮುಖಂಡರು ಕಾರ್ಯಕರ್ತರೊಂದಿಗೆ ಒರಟಾಗಿ ನಡೆದುಕೊಳ್ಳುತ್ತಾರೆ. ಎರಡನೇ ಹಂತದ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ ಎನ್ನುವುದು ಅವರ ವಿರುದ್ಧದ ಆರೋಪಗಳು. ಇದು ಅವರ ಮೈನಸ್ ಪಾಯಿಂಟ್.</p>.<p>ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು? ಭಗವಂತ ಖೂಬಾ ಗುರುನಾಥ ಕೊಳ್ಳೂರ ಚನ್ನಬಸವ ಬಳತೆ ನಾಗರಾಜ ಕರ್ಪೂರ ಈಶ್ವರ ಸಿಂಗ್ ಠಾಕೂರ್ ಸುಭಾಷ ಕಲ್ಲೂರ ಗುಂಡಪ್ಪಾ ವಕೀಲ ಸುಭಾಷ ಗುತ್ತೇದಾರ ನಂದಕುಮಾರ ಸಾಳುಂಕೆ ಪದ್ಮಾಕರ ಪಾಟೀಲ</p>.<p> ಯಾಕಿಷ್ಟು ಪೈಪೋಟಿ? ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಗೆಲುವು ಸಾಧಿಸಿದೆ. ಬಿಜೆಪಿಯ ಶಕ್ತಿ ಹೆಚ್ಚಾಗಿದೆ. ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ನೆಲೆ ಗಟ್ಟಿ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಈ ಸಲವೂ ಅವರ ಅಲೆಯಲ್ಲಿ ಸುಲಭವಾಗಿ ಗೆಲುವಿನ ದಡ ಸೇರಬಹುದು ಎಂಬ ನಿರೀಕ್ಷೆ ಇದೆ. ಟಿಕೆಟ್ ಗಿಟ್ಟಿಸಿದರೆ ಸಂಸದರಾದಂತೆ ಎಂಬ ಭಾವನೆ ಇದೆ. ಹೀಗಾಗಿ ನಾಯಕರು ಟಿಕೆಟ್ಗಾಗಿ ಪೈಪೋಟಿ ಲಾಬಿಯನ್ನು ದೊಡ್ಡ ಮಟ್ಟದಲ್ಲಿ ನಡೆಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಲೋಕಸಭೆ ಚುನಾವಣೆಗೆ ಇನ್ನೂ ಮೂರು ತಿಂಗಳು ಬಾಕಿ ಉಳಿದಿವೆ. ಅಷ್ಟರಲ್ಲಾಗಲೇ ಬಿಜೆಪಿಯಲ್ಲಿ ಟಿಕೆಟ್ಗೆ ಭಾರಿ ಪೈಪೋಟಿ ಶುರುವಾಗಿದೆ.</p>.<p>ಬೀದರ್ ಲೋಕಸಭಾ ಕ್ಷೇತ್ರದಿಂದ ಕಳೆದೆರಡು ಚುನಾವಣೆಗಳಲ್ಲಿ ಗೆದ್ದಿರುವ ಭಗವಂತ ಖೂಬಾ ಅವರು ಸದ್ಯ ಕೇಂದ್ರದಲ್ಲಿ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾಗಿದ್ದಾರೆ. ಆದರೆ, ಅವರ ತವರಲ್ಲೇ ಟಿಕೆಟ್ಗಾಗಿ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಇಷ್ಟೇ ಅಲ್ಲ, ಮತ್ತೊಂದು ಅವಧಿಗೆ ಭಗವಂತ ಖೂಬಾ ಅವರಿಗೆ ಟಿಕೆಟ್ ಕೊಡದಂತೆ ಸ್ವಪಕ್ಷೀಯ ಶಾಸಕರೇ ಆಗ್ರಹಿಸಿದ್ದಾರೆ.</p>.<p>ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ನಡೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಶಾಸಕರಾದ ಪ್ರಭು ಚವಾಣ್, ಶರಣು ಸಲಗರ ಅವರು ಖೂಬಾ ಅವರಿಗೆ ಟಿಕೆಟ್ ನೀಡದಂತೆ ಒತ್ತಾಯಿಸಿದ್ದಾರೆ. ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಡಾ.ಸಿದ್ದು ಪಾಟೀಲ ಕೂಡ ಅದಕ್ಕೆ ದನಿಗೂಡಿಸಿದ್ದಾರೆ ಎಂದು ತಿಳಿದು ಬಂದಿದೆ. </p>.<p>ಭಗವಂತ ಖೂಬಾ ಅವರು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅವರು ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ ಎನ್ನುವುದು ಅವರ ವಿರುದ್ಧವಿರುವ ಪ್ರಮುಖ ಆರೋಪ. ವಿಧಾನಸಭಾ ಚುನಾವಣೆಯಲ್ಲಿ ಔರಾದ್ ಶಾಸಕ ಪ್ರಭು ಚವಾಣ್ ವಿರುದ್ಧ ಕೆಲಸ ಮಾಡಿದ್ದಾರೆ ಎನ್ನುವುದು ಇನ್ನೊಂದು ಗಂಭೀರ ಆರೋಪ. ಸ್ವತಃ ಇದನ್ನು ಚವಾಣ್ ಅವರೇ ಹಲವು ಸಲ ಬಹಿರಂಗವಾಗಿ ದೂರಿದ್ದಾರೆ. ಬೆಂಗಳೂರಿನ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.</p>.<p>ಔರಾದ್ ತಾಲ್ಲೂಕು ವ್ಯಾಪ್ತಿಯಲ್ಲಿ ಇತ್ತೀಚೆಗೆ ಖೂಬಾ ನೇತೃತ್ವದಲ್ಲಿ ನಡೆದ ಭಾರತ ವಿಕಸಿತ ಸಂಕಲ್ಪ ಯಾತ್ರೆಯಿಂದ ಚವಾಣ್ ದೂರವೇ ಉಳಿದಿದ್ದರು. ‘ಒಂದುವೇಳೆ ಖೂಬಾ ಅವರಿಗೆ ಟಿಕೆಟ್ ಸಿಕ್ಕರೂ ಅವರ ಪರ ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. ವರಿಷ್ಠರಿಗೂ ದೂರು ಕೊಟ್ಟಿದ್ದಾರೆ. ಇನ್ನು, ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಟಿಕೆಟ್ ಹಂಚಿಕೆ ವಿಚಾರದಲ್ಲಿ ಮರಾಠ ಸಮಾಜವನ್ನು ಪರಿಗಣಿಸಬೇಕೆಂದು ಹೇಳುವುದರ ಮೂಲಕ ಖೂಬಾ ಅವರ ಬದಲು ಅನ್ಯರಿಗೆ ಟಿಕೆಟ್ ಕೊಡಬೇಕೆಂದು ಅಪ್ರತ್ಯಕ್ಷವಾಗಿ ಹೇಳಿದ್ದಾರೆ. ಮಾಜಿ ಶಾಸಕ ಸುಭಾಷ ಕಲ್ಲೂರ ಕೂಡ ವಿರೋಧದ ದನಿ ಎತ್ತಿದ್ದಾರೆ. ಖೂಬಾ ಅವರನ್ನು ವಿರೋಧಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬುಧವಾರ ನಡೆದ ಘಟನೆ ಕೂಡ ಅವರಿಗೆ ತೀವ್ರ ಹಿನ್ನಡೆ ಉಂಟು ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>.<p><strong>ಆಕಾಂಕ್ಷಿಗಳ್ಯಾರು?:</strong></p><p>ಬೀದರ್ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಹಲವರು ತುದಿಗಾಲ ಮೇಲೆ ನಿಂತಿದ್ದಾರೆ. ಅದಕ್ಕಾಗಿ ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ. ವರಿಷ್ಠರನ್ನು ಭೇಟಿ ಮಾಡುವುದು, ಮುಖಂಡರನ್ನು ಒಲಿಸಿಕೊಳ್ಳುವುದು, ಕಾರ್ಯಕರ್ತರ ವಿಶ್ವಾಸ ಗಳಿಸುವ ಕೆಲಸ ಜೋರಾಗಿ ನಡೆಯುತ್ತಿದೆ.</p>.<p>ಸದ್ಯ ಬಿಜೆಪಿಯಲ್ಲಿ ಹತ್ತು ಜನ ಪ್ರಬಲ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವುದರಿಂದ ತನಗೇ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಭಗವಂತ ಖೂಬಾ ಇದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ.</p>.<p>ಮಾಜಿ ಶಾಸಕರಾದ ಸುಭಾಷ ಕಲ್ಲೂರ, ಗುಂಡಪ್ಪಾ ವಕೀಲ ಹಾಗೂ ಸುಭಾಷ ಗುತ್ತೇದಾರ ಕೂಡ ಟಿಕೆಟ್ ಆಕಾಂಕ್ಷಿಗಳೆಂದು ಹೇಳಿಕೊಂಡಿದ್ದಾರೆ. ಆದರೆ, ಅದಕ್ಕೆ ಪೂರಕವಾಗಿ ತಳಮಟ್ಟದಲ್ಲಿ ಯಾವುದೇ ಕೆಲಸಗಳನ್ನು ಮಾಡುತ್ತಿಲ್ಲ. ಗುತ್ತಿಗೆದಾರ ವೃತ್ತಿಯಿಂದ ರಾಜಕಾರಣಕ್ಕೆ ದುಮುಕಿರುವ ಗುರುನಾಥ ಕೊಳ್ಳೂರ ಅವರು ಟಿಕೆಟ್ಗಾಗಿ ಭಾರಿ ಲಾಬಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಬಹುತೇಕ ಸಭೆ, ಸಮಾರಂಭಗಳಿಗೆ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡುತ್ತಿದ್ದಾರೆ. ಅಟಲ್ ಫೌಂಡೇಶನ್ ಹುಟ್ಟು ಹಾಕಿ ಅದರ ಮೂಲಕ ಜನರ ನಡುವೆ ಗುರುತಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ವಿವಿಧ ಮಠಾಧೀಶರನ್ನು ಕರೆಸಿಕೊಂಡು, ಆ ಮೂಲಕ ತಾವೂ ಪ್ರಬಲ ಆಕಾಂಕ್ಷಿ ಎಂದು ಸಾರಿದ್ದಾರೆ. ಆದರೆ, ಬಿಜೆಪಿಯಲ್ಲಿ ಯುವಕರು, ಮಧ್ಯ ವಯಸ್ಕರಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ವಯಸ್ಸಿನ ಮಾನದಂಡ ಮುಖ್ಯವಾಗಿ ಪರಿಗಣಿಸಿದರೆ ಇವರೆಲ್ಲರ ಸಾಧ್ಯತೆ ಕ್ಷೀಣಿಸಬಹುದು. ಇನ್ನೂ, ಈ ಎಲ್ಲರೂ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೇಳಿಕೊಳ್ಳುವಂತಹ ಛಾಪು ಕೂಡ ಹೊಂದಿಲ್ಲ.</p>.<p>ಇನ್ನು, ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿರುವ ಪಕ್ಷದ ಇನ್ನೊಬ್ಬ ಮುಖಂಡ ಈಶ್ವರ ಸಿಂಗ್ ಠಾಕೂರ್ ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದುಳಿದ ವರ್ಗಗಳಿಗೆ ಸೇರಿದ ಇವರು, ಪಕ್ಷದಲ್ಲಿ ತಳಹಂತದಿಂದ ಮೇಲೆ ಬಂದವರು. ನಿಷ್ಠಾವಂತ ಕಾರ್ಯಕರ್ತ ಎಂದು ಗುರುತಿಸಿಕೊಂಡಿದ್ದಾರೆ. ಸಂಘ ಪರಿವಾರದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಿಂದುತ್ವದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ಕಳೆದ ಚುನಾವಣೆಯಲ್ಲಿ ನಿರಾಯಾಸವಾಗಿ ಟಿಕೆಟ್ ದೊರಕಿತ್ತು. ಈ ಸಲ ಅವರ ದಾರಿ ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅವರು ಪ್ರಯತ್ನವನ್ನು ಮಾತ್ರ ನಿಲ್ಲಿಸಿಲ್ಲ.</p>.<p>ಯುವ ಮುಖಂಡ ಚನ್ನಬಸವ ಬಳತೆ ಕೂಡ ಆಕಾಂಕ್ಷಿಗಳಲ್ಲಿ ಪ್ರಮುಖರು. ಬಿಇ, ಎಂಟೆಕ್ ಪದವೀಧರರಾಗಿರುವ ಅವರು ಪಿಡಬ್ಲ್ಯೂಡಿಯಲ್ಲಿ 11 ವರ್ಷ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಸಚಿವ ಈಶ್ವರ ಬಿ. ಖಂಡ್ರೆಯವರ ಜೊತೆಗೆ ಕೆಲಸ ಮಾಡಿದ್ದರು. ಅವರ ದೂರದ ಸಂಬಂಧಿಕರು ಹೌದು.</p>.<p>ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕಳೆದ ನವೆಂಬರ್ನಲ್ಲಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಠಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಯುವಕರ ಕೋಟಾದಡಿ ಟಿಕೆಟ್ ಸಿಗುವ ಭರವಸೆಯೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವೇ ತಿಂಗಳ ಹಿಂದೆ ಬಿಜೆಪಿ ಸೇರಿದರೂ ಆಕಾಂಕ್ಷಿಗಳ ಸಾಲಿನಲ್ಲಿ ಇವರ ಹೆಸರು ಮುನ್ನಲೆಯಲ್ಲಿದೆ. ಇನ್ನೊಬ್ಬ ಎಂಜಿನಿಯರಿಂಗ್ ಪದವೀಧರ ನಾಗರಾಜ ಕರ್ಪೂರ ಕೂಡ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ. ಸ್ವಾತಂತ್ರ್ಯ ಹೋರಾಟ, ನಿಜಾಮನ ವಿರುದ್ಧದ ಹೋರಾಟದಲ್ಲಿ ಇವರ ತಾತ ಚಂದ್ರಶೇಖರ ಪಾಟೀಲ ಹೋರಾಡಿದ್ದರು. ಅವರ ಹೆಸರು ಹಾಗೂ ಪಕ್ಷದಲ್ಲಿನ ಸಂಘಟನೆಯ ಕೆಲಸ ಗುರುತಿಸಿ ಆದ್ಯತೆ ನೀಡಬೇಕೆಂಬುದು ಇವರ ವಾದ. ಕೆಲಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿಯಲ್ಲಿ ಯುವಕರು, ಮಧ್ಯ ವಯಸ್ಕರಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವುದರಿಂದ ಅವಕಾಶ ಒಲಿಯಬಹುದು ಎಂಬ ನಿರೀಕ್ಷೆ ಇಬ್ಬರದು.</p>.<p>ಮರಾಠ ಸಮಾಜದಿಂದ ನಂದಕುಮಾರ ಸಾಳುಂಕೆ ಹಾಗೂ ಪದ್ಮಾಕರ ಪಾಟೀಲ ಅವರ ಹೆಸರುಗಳು ಕೇಳಿ ಬರುತ್ತಿವೆ. ನಂದಕುಮಾರ ಎಂಜಿನಿಯರಿಂಗ್ ಪದವೀಧರರು. ಭಾಲ್ಕಿ ಇವರ ಹುಟ್ಟೂರು. ಕರ್ಮಭೂಮಿ ಪುಣೆ. ಕಟ್ಟಡ ನಿರ್ಮಾಣ ಕ್ಷೇತ್ರ, ರಿಯಲ್ ಎಸ್ಟೇಟ್ ಇವರ ಮುಖ್ಯ ವೃತ್ತಿ. ‘ಜಿಲ್ಲೆಯಲ್ಲಿ ಲಿಂಗಾಯತರ ನಂತರ ಮರಾಠರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಜಕ್ಕೆ ಆದ್ಯತೆ ಕೊಡಬೇಕು’ ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ. ಇದೇ ರೀತಿಯ ವಾದವನ್ನು ಪದ್ಮಾಕರ ಪಾಟೀಲ ಅವರು ಮುಂದಿಟ್ಟಿದ್ದಾರೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅನೇಕ ವರ್ಷಗಳಿಂದ ಬಿಜೆಪಿಯಲ್ಲಿದ್ದಾರೆ. ಇಷ್ಟೇ ಅಲ್ಲದೇ, ಇನ್ನೂ ಕೆಲವರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಒಂದುವೇಳೆ ಮರಾಠರಿಗೆ ಟಿಕೆಟ್ ಕೊಡುವುದು ಖಾತ್ರಿಯಾದರೆ ಸಾಳುಂಕೆ ಅವರಿಗೆ ಸಿಗುವ ಸಾಧ್ಯತೆ ಹೆಚ್ಚು. ಪಕ್ಷದಲ್ಲಿ ಸಕ್ರಿಯರಾಗಿರುವುದು ಮತ್ತು ಮಧ್ಯ ವಯಸ್ಕರಾಗಿರುವುದು ಅವರಿಗೆ ಪೂರಕವಾದ ಅಂಶ. ಇಷ್ಟು ಜನ ಆಕಾಂಕ್ಷಿಗಳಿದ್ದರೂ ಸಹ ಅಚ್ಚರಿಯ ಹೊಸ ಮುಖವನ್ನು ಕಣಕ್ಕಿಳಿಸಿದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತವೆ ಬಿಜೆಪಿಯ ಮೂಲಗಳು.</p>.<p>ಘಟಾನುಘಟಿಗಳನ್ನು ಸೋಲಿಸಿರುವ ಖೂಬಾ ಭಗವಂತ ಖೂಬಾ ಅವರು ಹಿಂದಿನ ಎರಡು ಚುನಾವಣೆಗಳಲ್ಲಿ ಘಟಾನುಘಟಿಗಳಿಗೆ ಸೋಲಿನ ರುಚಿ ತೋರಿಸಿ ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದವರು. 2014ರಲ್ಲಿ ಖೂಬಾ ಅವರು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿಯೇ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಅವರನ್ನು ಸೋಲಿಸಿ ಸಂಸತ್ತು ಪ್ರವೇಶಿಸಿದ್ದರು. 2019ರ ಚುನಾವಣೆಯಲ್ಲಿ ಈಶ್ವರ ಬಿ. ಖಂಡ್ರೆಯವರನ್ನು ಸೋಲಿಸಿದ್ದರು. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಪ್ರಬಲ ನಾಯಕರನ್ನು ಸೋಲಿಸಿರುವ ಖೂಬಾ ಅವರು ಅತೀವ ಆತ್ಮವಿಶ್ವಾಸದಲ್ಲಿದ್ದಾರೆ. ‘ನನ್ನ ವಿರುದ್ಧ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿದರೂ ಸೋಲಿಸುವೆ’ ಎಂದು ಹೇಳಿಕೊಂಡಿದ್ದಾರೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಮೋದಿ ಅವರ ಅಲೆಯಲ್ಲಿ ಖೂಬಾ ಗೆದ್ದಿದ್ದರು ಎನ್ನುವುದು ಗಮನಾರ್ಹ.</p>.<p> ಪ್ರಧಾನಿ ಮೋದಿ ನಿಕಟವರ್ತಿಗಳಲ್ಲಿ ಖೂಬಾ (ಖೂಬಾ ಚಿತ್ರ ಇದರೊಂದಿಗೆ ಬಳಸಿ) ಕೇಂದ್ರ ಸಚಿವ ಭಗವಂತ ಖೂಬಾ ಅವರು ಬಿಜೆಪಿಯ ವರಿಷ್ಠರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಫಸಲ್ ಬಿಮಾ ಸೇರಿದಂತೆ ಕೇಂದ್ರದ ಹಲವು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಯೋಜನೆಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಮನ ಗೆದ್ದು ಅವರ ನಿಕಟವರ್ತಿಗಳಲ್ಲಿ ಗುರುತಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರಿಗೆ ಕೇಂದ್ರದಲ್ಲಿ ಬಹಳ ಬೇಗ ಮಂತ್ರಿ ಸ್ಥಾನ ಒಲಿದಿದೆ. ‘ಗೆಲ್ಲಿಸಿದವರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಸ್ಥಳೀಯವಾಗಿ ಕೆಲವು ಮುಖಂಡರು ಅವರ ವಿರುದ್ಧ ಟೀಕೆ ಮಾಡಿದ್ದಾರೆ. ಅವರಿಗೆ ಟಿಕೆಟ್ ಕೊಡುವುದಕ್ಕೂ ವಿರೋಧಿಸುತ್ತಿದ್ದಾರೆ. ಪಕ್ಷದ ಶಾಸಕರು ಕೂಡ ಅದರಲ್ಲಿ ಸೇರಿದ್ದಾರೆ. ಆದರೆ ತಳಮಟ್ಟದಲ್ಲಿ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಕಾಣಿಸುತ್ತಿಲ್ಲ. ಅವರು ಸಂಸದರಾದ ನಂತರ ಜಿಲ್ಲೆಗೆ 14 ಹೊಸ ರೈಲುಗಳನ್ನು ತಂದಿದ್ದಾರೆ. ಕೆಲವು ರೈಲುಗಳ ಸೇವೆ ವಿಸ್ತರಿಸಿದ್ದಾರೆ. ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ಕೊಟ್ಟಿದ್ದು ಆ ಕೆಲಸ ನಡೆಯುತ್ತಿದೆ. ಸಿಪೆಟ್ ತಾತ್ಕಾಲಿಕವಾಗಿ ಆರಂಭಿಸಿದ್ದಾರೆ. ಸೈನಿಕ ಶಾಲೆ ಮಂಜೂರು ಮಾಡಿಸಿದ್ದಾರೆ. ಈ ಹಿಂದೆ ನಿಂತು ಹೋಗಿದ್ದ ನಾಗರಿಕ ವಿಮಾನಯಾನ ಸೇವೆ ಪುನಃ ಆರಂಭಿಸಿದ್ದರು. ಈಗ ಪುನಃ ವಿಮಾನ ಸೇವೆ ನಿಂತು ಹೋಗಿದ್ದು ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಹೊಸ ವಿಮಾನ ಸೇವೆ ಆರಂಭಿಸುವ ಭರವಸೆ ಕೊಟ್ಟಿದ್ದಾರೆ. ಪಾಸ್ಪೋರ್ಟ್ ಸೇವಾ ಕೇಂದ್ರ ನಾಲ್ಕು ಹೆದ್ದಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಬೀದರ್–ಕೊಳಾರ ಬೈಪಾಸ್ ಬೀದರ್ ಮಟ್ಟಿಗೆ ದೊಡ್ಡ ಕೆಲಸವಾಗಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಮೃತ ಯೋಜನೆಯಡಿ ₹275 ಕೋಟಿ ಯುಜಿಡಿ ಕಾಮಗಾರಿ ₹125 ಕೋಟಿಯಲ್ಲಿ ಮನೆ ಮನೆಗೆ ಅನಿಲ ಗ್ಯಾಸ್ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. 100 ಓಪನ್ ಜಿಮ್ ಕಾಮಗಾರಿಯೂ ನಡೆಯುತ್ತಿದೆ. ಇದೆಲ್ಲ ಖೂಬಾ ಅವರಿಗೆ ಪ್ಲಸ್ ಪಾಯಿಂಟ್. ಆದರೆ ಮುಖಂಡರು ಕಾರ್ಯಕರ್ತರೊಂದಿಗೆ ಒರಟಾಗಿ ನಡೆದುಕೊಳ್ಳುತ್ತಾರೆ. ಎರಡನೇ ಹಂತದ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ ಎನ್ನುವುದು ಅವರ ವಿರುದ್ಧದ ಆರೋಪಗಳು. ಇದು ಅವರ ಮೈನಸ್ ಪಾಯಿಂಟ್.</p>.<p>ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಯಾರ್ಯಾರು? ಭಗವಂತ ಖೂಬಾ ಗುರುನಾಥ ಕೊಳ್ಳೂರ ಚನ್ನಬಸವ ಬಳತೆ ನಾಗರಾಜ ಕರ್ಪೂರ ಈಶ್ವರ ಸಿಂಗ್ ಠಾಕೂರ್ ಸುಭಾಷ ಕಲ್ಲೂರ ಗುಂಡಪ್ಪಾ ವಕೀಲ ಸುಭಾಷ ಗುತ್ತೇದಾರ ನಂದಕುಮಾರ ಸಾಳುಂಕೆ ಪದ್ಮಾಕರ ಪಾಟೀಲ</p>.<p> ಯಾಕಿಷ್ಟು ಪೈಪೋಟಿ? ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಗೆಲುವು ಸಾಧಿಸಿದೆ. ಬಿಜೆಪಿಯ ಶಕ್ತಿ ಹೆಚ್ಚಾಗಿದೆ. ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ನೆಲೆ ಗಟ್ಟಿ ಇದೆ. ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಈ ಹಿಂದಿನ ಎರಡೂ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಈ ಸಲವೂ ಅವರ ಅಲೆಯಲ್ಲಿ ಸುಲಭವಾಗಿ ಗೆಲುವಿನ ದಡ ಸೇರಬಹುದು ಎಂಬ ನಿರೀಕ್ಷೆ ಇದೆ. ಟಿಕೆಟ್ ಗಿಟ್ಟಿಸಿದರೆ ಸಂಸದರಾದಂತೆ ಎಂಬ ಭಾವನೆ ಇದೆ. ಹೀಗಾಗಿ ನಾಯಕರು ಟಿಕೆಟ್ಗಾಗಿ ಪೈಪೋಟಿ ಲಾಬಿಯನ್ನು ದೊಡ್ಡ ಮಟ್ಟದಲ್ಲಿ ನಡೆಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>