<p><strong>ಬೀದರ್</strong>: ‘ಮಾದಿಗ ಸಮಾಜದವರಿಗೆ ರಾಜಕೀಯ ಶಕ್ತಿ ತುಂಬಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಭರವಸೆ ನೀಡಿದರು.</p>.<p>ಮಾದಿಗ ಸಮಾಜ ಸಮನ್ವಯ ಸಮಿತಿಯಿಂದ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.</p>.<p>ಮಾದಿಗ ಸಮಾಜ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಇದಕ್ಕೆ ರಾಜಕೀಯ ಶಕ್ತಿ ತುಂಬುವ ಅಗತ್ಯವಿದೆ. ಸಮಾಜದವರಿಗೆ ರಾಜಕೀಯ ಸ್ಥಾನಮಾನ ಕೊಡಿಸುವ ವಿಚಾರವಾಗಿ ಶೀಘ್ರದಲ್ಲೇ ಪಕ್ಷದ ನಾಯಕರ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಮಾದಿಗ ಸಮಾಜದ ಹಲವು ಮುಖಂಡರು ಮಾತನಾಡುತ್ತ ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕಡೆಯೂ ಸಮಾಜದವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಎಲ್ಲ ಪಕ್ಷಗಳು ಮಾದಿಗರನ್ನು ಕಡೆಗಣಿಸಿವೆ. ಇದಕ್ಕೆ ಕಾರಣವೇನು ಎಂಬುದನ್ನು ಗುರುತಿಸಬೇಕು ಹೊರತು ಬೇರೆಯವರನ್ನು ದೂರುವುದು ಸರಿಯಲ್ಲ. ನಮ್ಮಿಂದ ಎಲ್ಲಿ ತಪ್ಪಾಗಿದೆ. ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿಳಿದು, ಸುಧಾರಿಸಿಕೊಂಡು ಹೋಗಬೇಕಿದೆ ಎಂದು ಕಿವಿಮಾತು ಹೇಳಿದರು.</p>.<p>ನನ್ನ ಬೆಂಬಲಕ್ಕೆ ಸಮಾಜ ಸದಾ ನಿಂತಿದೆ. ನಾನು ಸಮಾಜದ ಜೊತೆಗಿರುವೆ. ಸಮಾಜದಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿ ಅದರ ಅಭಿವೃದ್ಧಿಗೆ ಶ್ರಮಿಸುವೆ ಎಂದು ಭರವಸೆ ಕೊಟ್ಟಾಗ ಕರತಾಡನ ಮುಗಿಲು ಮುಟ್ಟಿತು.</p>.<p>ಹಣ ಇಲ್ಲದಿದ್ದರೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ಮಾತಿದೆ. ಹಣ ಇಲ್ಲ ಎಂದರೆ ಜನ ಬೆಂಬಲವಾದರೂ ಇರಬೇಕು. ರಾಜಕೀಯ ಎನ್ನುವುದು ಪವರ್ ಗೇಮ್. ಯಾರು ಇದನ್ನು ಚೆನ್ನಾಗಿ ಆಡುತ್ತಾರೆ ಅವರು ಗೆಲ್ಲುತ್ತಾರೆ. ಅಧಿಕಾರ ಸಿಕ್ಕಿಲ್ಲ ಎನ್ನುವುದಕ್ಕಿಂತ ಯಾವ ಕಾರಣಕ್ಕೆ ಸಿಕ್ಕಿಲ್ಲ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.</p>.<p>ಸಮಿತಿ ಮುಖಂಡರಾದ ಚಂದ್ರಕಾಂತ ಹಿಪ್ಪಳಗಾಂವ್, ರಾಜು ಕಡ್ಯಾಳ, ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ ಕೌಡಿಯಾಳ್, ರೋಹಿದಾಸ ಘೋಡೆ, ಅರ್ಜುನ ಕನಕ, ಶ್ಯಾಮ ನಾಟೇಕರ್, ಸಂಜಯ ಜಾಹಗೀರದಾರ್, ರಾಜು ಬಾಗವಾನ್ ಮಾತನಾಡಿ, ರಾಜಕೀಯವಾಗಿ ಸಮಾಜ ಕಡೆಗಣನೆಗೆ ಒಳಗಾಗಿದೆ. ಅದಕ್ಕೆ ರಾಜಕೀಯ ಶಕ್ತಿ ಬೇಕಿದೆ. ನಿಗಮ ಮಂಡಳಿಗಳಲ್ಲಿ ಸಮಾಜದವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸಮಾಜದವರಿಗೆ ಟಿಕೆಟ್ ಕೊಡಿಸಲು ಸಚಿವರು ಶ್ರಮಿಸಬೇಕು. ಶೀಘ್ರದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್, ಪ್ರಮುಖರಾದ ಅಭಿ ಕಾಳೆ, ಜಾಫೆಟ್ ಕಡ್ಯಾಳ, ಸುಮಂತ ಕಟ್ಟಿಮನಿ, ಸುಕನ್ಯಾ ರೇಷ್ಮಾ, ರಾಮದಾಸ ಮುಖೇಡಕರ್, ಶಿವರಾಜ ಬಂಬುಳಗಿ, ಹಣಮಂತ ಸೂರ್ಯವಂಶಿ, ಗೋಪಿಕೃಷ್ಣ, ಮನೋಹರ ಮೈಸೆ, ವಿಜಯಕುಮಾರ ಹಿಪ್ಪಳಗಾಂವ್, ಕಮಲಾಕರ ಹೆಗಡೆ ಮತ್ತಿತರರು ಹಾಜರಿದ್ದರು.</p>.<p> <strong>‘ರಾಜಕೀಯಕ್ಕೆ ಬರದಿರಿ’ </strong></p><p>‘ಸಮಾಜಕ್ಕೆ ಹಕ್ಕುಗಳನ್ನು ಕೊಡಿಸಲು ಹೋರಾಟ ಮಾಡುವವರು ರಾಜಕೀಯ ಕ್ಷೇತ್ರಕ್ಕೆ ಬರಬೇಡಿ. ರಾಜಕೀಯದತ್ತ ಮುಖ ಮಾಡಬೇಡಿ’ ಎಂದು ಸಚಿವ ಆರ್.ಬಿ. ತಿಮ್ಮಾಪೂರ ಮನವಿ ಮಾಡಿದರು. ಹೋರಾಟಗಾರರಿಗೆ ಇತಿಮಿತಿ ಇರುತ್ತದೆ. ಅವರು ಸಮಾಜಕ್ಕಾಗಿ ಹೋರಾಡಬೇಕು. ರಾಜಕೀಯ ನಾಯಕರಿಗೆ ಎಲ್ಲ ಸಮಾಜದವರು ಬೇಕಾಗುತ್ತದೆ. ಸಮಾಜದ ಅಭಿವೃದ್ಧಿ ರಾಜಕೀಯ ಬಲ ಕೊಡಲು ಹೋರಾಟಗಾರರು ಹೋರಾಡಬೇಕು ಎಂದು ತಿಳಿಸಿದರು.</p>.<p><strong>‘ಮೀಸಲು ಬೇಡಿಕೆ ಈಡೇರಿಕೆಗೆ ಶ್ರಮ’</strong> </p><p>‘ಹೊಸ ವೈನ್ಶಾಪ್ ಅಬಕಾರಿ ಇಲಾಖೆಯಿಂದ ಇತರೆ ಅಂಗಡಿಗಳನ್ನು ಕೊಡಲು ನಿರ್ಧರಿಸಿದರೆ ಮೀಸಲಾತಿ ಕೊಡಲಾಗುವುದು. ಬರುವ ದಿನಗಳಲ್ಲಿ ಸಿಎಲ್2 ಸಿಎಲ್7 ಅಂಗಡಿಗಳನ್ನು ನೀಡುವಾಗ ಮೀಸಲಾತಿ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ’ ಎಂದು ಸಚಿವ ಆರ್.ಬಿ. ತಿಮ್ಮಾಪೂರ್ ಭರವಸೆ ಕೊಟ್ಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ಮಾದಿಗ ಸಮಾಜದವರಿಗೆ ರಾಜಕೀಯ ಶಕ್ತಿ ತುಂಬಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ’ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಭರವಸೆ ನೀಡಿದರು.</p>.<p>ಮಾದಿಗ ಸಮಾಜ ಸಮನ್ವಯ ಸಮಿತಿಯಿಂದ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.</p>.<p>ಮಾದಿಗ ಸಮಾಜ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಇದಕ್ಕೆ ರಾಜಕೀಯ ಶಕ್ತಿ ತುಂಬುವ ಅಗತ್ಯವಿದೆ. ಸಮಾಜದವರಿಗೆ ರಾಜಕೀಯ ಸ್ಥಾನಮಾನ ಕೊಡಿಸುವ ವಿಚಾರವಾಗಿ ಶೀಘ್ರದಲ್ಲೇ ಪಕ್ಷದ ನಾಯಕರ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.</p>.<p>ಕಾರ್ಯಕ್ರಮದಲ್ಲಿ ಮಾದಿಗ ಸಮಾಜದ ಹಲವು ಮುಖಂಡರು ಮಾತನಾಡುತ್ತ ಕಲ್ಯಾಣ ಕರ್ನಾಟಕದ 41 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕಡೆಯೂ ಸಮಾಜದವರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ. ಎಲ್ಲ ಪಕ್ಷಗಳು ಮಾದಿಗರನ್ನು ಕಡೆಗಣಿಸಿವೆ. ಇದಕ್ಕೆ ಕಾರಣವೇನು ಎಂಬುದನ್ನು ಗುರುತಿಸಬೇಕು ಹೊರತು ಬೇರೆಯವರನ್ನು ದೂರುವುದು ಸರಿಯಲ್ಲ. ನಮ್ಮಿಂದ ಎಲ್ಲಿ ತಪ್ಪಾಗಿದೆ. ಎಲ್ಲಿ ಎಡವಿದ್ದೇವೆ ಎನ್ನುವುದನ್ನು ತಿಳಿದು, ಸುಧಾರಿಸಿಕೊಂಡು ಹೋಗಬೇಕಿದೆ ಎಂದು ಕಿವಿಮಾತು ಹೇಳಿದರು.</p>.<p>ನನ್ನ ಬೆಂಬಲಕ್ಕೆ ಸಮಾಜ ಸದಾ ನಿಂತಿದೆ. ನಾನು ಸಮಾಜದ ಜೊತೆಗಿರುವೆ. ಸಮಾಜದಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿ ಅದರ ಅಭಿವೃದ್ಧಿಗೆ ಶ್ರಮಿಸುವೆ ಎಂದು ಭರವಸೆ ಕೊಟ್ಟಾಗ ಕರತಾಡನ ಮುಗಿಲು ಮುಟ್ಟಿತು.</p>.<p>ಹಣ ಇಲ್ಲದಿದ್ದರೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬ ಮಾತಿದೆ. ಹಣ ಇಲ್ಲ ಎಂದರೆ ಜನ ಬೆಂಬಲವಾದರೂ ಇರಬೇಕು. ರಾಜಕೀಯ ಎನ್ನುವುದು ಪವರ್ ಗೇಮ್. ಯಾರು ಇದನ್ನು ಚೆನ್ನಾಗಿ ಆಡುತ್ತಾರೆ ಅವರು ಗೆಲ್ಲುತ್ತಾರೆ. ಅಧಿಕಾರ ಸಿಕ್ಕಿಲ್ಲ ಎನ್ನುವುದಕ್ಕಿಂತ ಯಾವ ಕಾರಣಕ್ಕೆ ಸಿಕ್ಕಿಲ್ಲ ಎನ್ನುವುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.</p>.<p>ಸಮಿತಿ ಮುಖಂಡರಾದ ಚಂದ್ರಕಾಂತ ಹಿಪ್ಪಳಗಾಂವ್, ರಾಜು ಕಡ್ಯಾಳ, ಫರ್ನಾಂಡಿಸ್ ಹಿಪ್ಪಳಗಾಂವ್, ವಿಜಯಕುಮಾರ ಕೌಡಿಯಾಳ್, ರೋಹಿದಾಸ ಘೋಡೆ, ಅರ್ಜುನ ಕನಕ, ಶ್ಯಾಮ ನಾಟೇಕರ್, ಸಂಜಯ ಜಾಹಗೀರದಾರ್, ರಾಜು ಬಾಗವಾನ್ ಮಾತನಾಡಿ, ರಾಜಕೀಯವಾಗಿ ಸಮಾಜ ಕಡೆಗಣನೆಗೆ ಒಳಗಾಗಿದೆ. ಅದಕ್ಕೆ ರಾಜಕೀಯ ಶಕ್ತಿ ಬೇಕಿದೆ. ನಿಗಮ ಮಂಡಳಿಗಳಲ್ಲಿ ಸಮಾಜದವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸಮಾಜದವರಿಗೆ ಟಿಕೆಟ್ ಕೊಡಿಸಲು ಸಚಿವರು ಶ್ರಮಿಸಬೇಕು. ಶೀಘ್ರದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.</p>.<p>ನಗರಸಭೆ ಅಧ್ಯಕ್ಷ ಮೊಹಮ್ಮದ್ ಗೌಸ್, ಪ್ರಮುಖರಾದ ಅಭಿ ಕಾಳೆ, ಜಾಫೆಟ್ ಕಡ್ಯಾಳ, ಸುಮಂತ ಕಟ್ಟಿಮನಿ, ಸುಕನ್ಯಾ ರೇಷ್ಮಾ, ರಾಮದಾಸ ಮುಖೇಡಕರ್, ಶಿವರಾಜ ಬಂಬುಳಗಿ, ಹಣಮಂತ ಸೂರ್ಯವಂಶಿ, ಗೋಪಿಕೃಷ್ಣ, ಮನೋಹರ ಮೈಸೆ, ವಿಜಯಕುಮಾರ ಹಿಪ್ಪಳಗಾಂವ್, ಕಮಲಾಕರ ಹೆಗಡೆ ಮತ್ತಿತರರು ಹಾಜರಿದ್ದರು.</p>.<p> <strong>‘ರಾಜಕೀಯಕ್ಕೆ ಬರದಿರಿ’ </strong></p><p>‘ಸಮಾಜಕ್ಕೆ ಹಕ್ಕುಗಳನ್ನು ಕೊಡಿಸಲು ಹೋರಾಟ ಮಾಡುವವರು ರಾಜಕೀಯ ಕ್ಷೇತ್ರಕ್ಕೆ ಬರಬೇಡಿ. ರಾಜಕೀಯದತ್ತ ಮುಖ ಮಾಡಬೇಡಿ’ ಎಂದು ಸಚಿವ ಆರ್.ಬಿ. ತಿಮ್ಮಾಪೂರ ಮನವಿ ಮಾಡಿದರು. ಹೋರಾಟಗಾರರಿಗೆ ಇತಿಮಿತಿ ಇರುತ್ತದೆ. ಅವರು ಸಮಾಜಕ್ಕಾಗಿ ಹೋರಾಡಬೇಕು. ರಾಜಕೀಯ ನಾಯಕರಿಗೆ ಎಲ್ಲ ಸಮಾಜದವರು ಬೇಕಾಗುತ್ತದೆ. ಸಮಾಜದ ಅಭಿವೃದ್ಧಿ ರಾಜಕೀಯ ಬಲ ಕೊಡಲು ಹೋರಾಟಗಾರರು ಹೋರಾಡಬೇಕು ಎಂದು ತಿಳಿಸಿದರು.</p>.<p><strong>‘ಮೀಸಲು ಬೇಡಿಕೆ ಈಡೇರಿಕೆಗೆ ಶ್ರಮ’</strong> </p><p>‘ಹೊಸ ವೈನ್ಶಾಪ್ ಅಬಕಾರಿ ಇಲಾಖೆಯಿಂದ ಇತರೆ ಅಂಗಡಿಗಳನ್ನು ಕೊಡಲು ನಿರ್ಧರಿಸಿದರೆ ಮೀಸಲಾತಿ ಕೊಡಲಾಗುವುದು. ಬರುವ ದಿನಗಳಲ್ಲಿ ಸಿಎಲ್2 ಸಿಎಲ್7 ಅಂಗಡಿಗಳನ್ನು ನೀಡುವಾಗ ಮೀಸಲಾತಿ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಶ್ರಮಿಸುವೆ’ ಎಂದು ಸಚಿವ ಆರ್.ಬಿ. ತಿಮ್ಮಾಪೂರ್ ಭರವಸೆ ಕೊಟ್ಟರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>