<p><strong>ಹುಲಸೂರ:</strong> ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ಶುಕ್ರವಾರ ಇಲ್ಲಿನ ತಾಲ್ಲೂಕ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. </p>.<p>ಈ ವೇಳೆ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಅಧ್ಯಕ್ಷ ಸಿದ್ರಾಮ ಕಾಮಣ್ಣ, ‘ಅರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು, ಸಂಬಂಧಿಸಿದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.</p>.<p>ಕೆಕೆಆರ್ಟಿಸಿ ಬಸವಕಲ್ಯಾಣ ಘಟಕದ ವ್ಯವಸ್ಥಾಪಕ ನಯಿಮ್ ಸಾಬ್ ಮಾತನಾಡಿ, ‘ಶಕ್ತಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ನಿತ್ಯ ದಿನಾಲು 19 ಸಾವಿರ ಸಲ ಮಹಿಳೆಯರು ಸಂಚರಿಸಿದ್ದು ಸರ್ಕಾರದಿಂದ ₹20.59 ಕೋಟಿ ಸಂದಾಯವಾಗಿದೆ’ ಎಂದರು.</p>.<p>‘ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪ ಚಾಲಕರು ಬಸ್ ನಿಲ್ಲಿಸುವುದಿಲ್ಲ ಹಾಗೂ ವಿವಿಧ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಸರಿಯಿಲ್ಲ ಎಂದು ಜನರು ದೂರುತ್ತಿದ್ದಾರೆ’ ಎಂದು ಸದಸ್ಯರು ತಿಳಿಸಿದಾಗ, ‘ಪ್ರಕರಣಗಳ ಬಗ್ಗೆ ಗಮನಿಸುತ್ತೇವೆ’ ಎಂದು ಹೇಳಿದರು.</p>.<p>‘ಶೀಘ್ರ ಹುಲಸೂರ - ಬಸವಕಲ್ಯಾಣ ಸಿಟಿ ಬಸ್ ಆರಂಭ ಮಾಡಲಿದ್ದೇವೆ. ಮಹಿಳೆಯರು ಮೊಬೈಲ್ನಲ್ಲೂ ಆಧಾರ್ ಸಂಖ್ಯೆ ತೋರಿಸಿ ಪ್ರಯಾಣಿಸಬಹುದು’ ಎಂದು ತಿಳಿಸಿದರು.</p>.<p>ಆಹಾರ ಶಿರಸ್ಥೇದಾರ್ ಪ್ರದೀಪಕುಮಾರ ಮಾತನಾಡಿ, ‘ತಾಲ್ಲೂಕಿನಲ್ಲಿ 8847 ಅರ್ಹ ಬಿಪಿಎಲ್ ಕಾರ್ಡ್ಗಳಿದ್ದು, 8806 ಕಾರ್ಡ್ದಾರರಿಗೆ ಹಣ ಸಂದಾಯವಾಗುತ್ತಿದೆ. ಇ–ಕೆವೈಸಿ ಮಾಡಿಸದವರಿಗೆ ಹಣ ಬಂದಿಲ್ಲ. ಕೆಲ ನ್ಯಾಯಬೆಲೆ ಅಂಗಡಿ ಉಸ್ತುವಾರಿಗಳು ತಮಗೆ ಅನುಕೂಲವಾದ ಸಮಯಕ್ಕೆ ಅಂಗಡಿ ತೆರೆದು ಅಕ್ಕಿ ವಿತರಣೆ ಮಾಡುತ್ತಿರುವುದರಿಂದ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ’ ಎಂದು ಸಮಿತಿ ಸದಸ್ಯರು ಹೇಳಿದರು.</p>.<p>ಜೆಸ್ಕಾಂ ಅಧಿಕಾರಿ ಮಹೇಶ ಪಾಟೀಲ ,ಮಾತನಾಡಿ, ‘ಗೃಹಜ್ಯೋತಿ ಯೋಜನೆಯಡಿ 8479 ಜನರು ಹೆಸರನ್ನು ನೋಂದಾಯಿಸಿಕೊಂಡು 7329 ಜನ ಸರ್ಕಾರದ ಲಾಭ ಪಡೆಯುತ್ತಿದ್ದಾರೆ. 1150 ಗ್ರಾಹಕರು ನೋಂದಾಯಿಸಿ ಕೊಂಡಿಲ್ಲ’ ಎಂದರು. </p>.<p>‘ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನಲ್ಲಿ ಬಂದ 9304 ಅರ್ಜಿಗಳಲ್ಲಿ 706 ಬಾಕಿ ಉಳಿದಿವೆ’ ಎಂದು ಸಿಡಿಪಿಒ ಗೌತಮ ಸಿಂಧೆ ತಿಳಿಸಿದರು. ಮುಂದಿನ ಸಭೆಯೊಳಗೆ ಎಲ್ಲ ಅರ್ಜಿ ವಿಲೇವಾರಿ ಮಾಡಿ ಅರ್ಹರಿಗೆ ಯೋಜನೆ ಲಾಭ ಮುಟ್ಟಿಸಬೇಕು ಎಂದು ಸಮಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ ತಾಕೀತು ಮಾಡಿದರು.</p>.<p>ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹದೇವ ಬಾಬಳಗಿ ಮಾತನಾಡಿದರು.</p>.<p>ಸಮಿತಿಯ ಅಧ್ಯಕ್ಷ ಸಿದ್ರಾಮ ಕಾಮಣ್ಣ ಹಾಗೂ ಸಮಿತಿಯ ನೂತನ 14 ಸದಸ್ಯರಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು.</p>.<p>ತಹಶೀಲ್ದಾರ್ ಶಿವಾನಂದ್ ಮೇತ್ರೆ, ನರೇಗಾ ಸಹಾಯಕ ನಿರ್ದೇಶಕ ಮಹಾದೇವ ಜಮ್ಮು, ಸಮಿತಿ ಸದಸ್ಯರಾದ ವೆಂಕಟೇಶ್ ಗುತ್ತಿಗೆದಾರ, ತ್ರಿಂಬಕ ಜೀವಾಯಿ, ವಿನಾಯಕ ಪವಾರ, ಈಶ್ವರ ಮೇತ್ರೆ, ಶಿವಕುಮಾರ ಕೋಳಿ, ಪ್ರಥಮ ಜಾಧವ, ಮುಕೇಶ ಪಾಟಿಲ, ಸುನಿಲ ಪಾಟೀಲ, ಮಹೇಶ ಪಾಟಿಲ, ಭಾಗವತ ಫುಂಡೆ ಸಮಿತಿ ಸದಸ್ಯರು ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಸೇರಿದಂತೆ ಇನ್ನಿತರರು ಈ ಸಭೆಯಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಕುರಿತು ಶುಕ್ರವಾರ ಇಲ್ಲಿನ ತಾಲ್ಲೂಕ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. </p>.<p>ಈ ವೇಳೆ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಅಧ್ಯಕ್ಷ ಸಿದ್ರಾಮ ಕಾಮಣ್ಣ, ‘ಅರ್ಹರಿಗೆ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು, ಸಂಬಂಧಿಸಿದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.</p>.<p>ಕೆಕೆಆರ್ಟಿಸಿ ಬಸವಕಲ್ಯಾಣ ಘಟಕದ ವ್ಯವಸ್ಥಾಪಕ ನಯಿಮ್ ಸಾಬ್ ಮಾತನಾಡಿ, ‘ಶಕ್ತಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ ನಿತ್ಯ ದಿನಾಲು 19 ಸಾವಿರ ಸಲ ಮಹಿಳೆಯರು ಸಂಚರಿಸಿದ್ದು ಸರ್ಕಾರದಿಂದ ₹20.59 ಕೋಟಿ ಸಂದಾಯವಾಗಿದೆ’ ಎಂದರು.</p>.<p>‘ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪ ಚಾಲಕರು ಬಸ್ ನಿಲ್ಲಿಸುವುದಿಲ್ಲ ಹಾಗೂ ವಿವಿಧ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಸರಿಯಿಲ್ಲ ಎಂದು ಜನರು ದೂರುತ್ತಿದ್ದಾರೆ’ ಎಂದು ಸದಸ್ಯರು ತಿಳಿಸಿದಾಗ, ‘ಪ್ರಕರಣಗಳ ಬಗ್ಗೆ ಗಮನಿಸುತ್ತೇವೆ’ ಎಂದು ಹೇಳಿದರು.</p>.<p>‘ಶೀಘ್ರ ಹುಲಸೂರ - ಬಸವಕಲ್ಯಾಣ ಸಿಟಿ ಬಸ್ ಆರಂಭ ಮಾಡಲಿದ್ದೇವೆ. ಮಹಿಳೆಯರು ಮೊಬೈಲ್ನಲ್ಲೂ ಆಧಾರ್ ಸಂಖ್ಯೆ ತೋರಿಸಿ ಪ್ರಯಾಣಿಸಬಹುದು’ ಎಂದು ತಿಳಿಸಿದರು.</p>.<p>ಆಹಾರ ಶಿರಸ್ಥೇದಾರ್ ಪ್ರದೀಪಕುಮಾರ ಮಾತನಾಡಿ, ‘ತಾಲ್ಲೂಕಿನಲ್ಲಿ 8847 ಅರ್ಹ ಬಿಪಿಎಲ್ ಕಾರ್ಡ್ಗಳಿದ್ದು, 8806 ಕಾರ್ಡ್ದಾರರಿಗೆ ಹಣ ಸಂದಾಯವಾಗುತ್ತಿದೆ. ಇ–ಕೆವೈಸಿ ಮಾಡಿಸದವರಿಗೆ ಹಣ ಬಂದಿಲ್ಲ. ಕೆಲ ನ್ಯಾಯಬೆಲೆ ಅಂಗಡಿ ಉಸ್ತುವಾರಿಗಳು ತಮಗೆ ಅನುಕೂಲವಾದ ಸಮಯಕ್ಕೆ ಅಂಗಡಿ ತೆರೆದು ಅಕ್ಕಿ ವಿತರಣೆ ಮಾಡುತ್ತಿರುವುದರಿಂದ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ’ ಎಂದು ಸಮಿತಿ ಸದಸ್ಯರು ಹೇಳಿದರು.</p>.<p>ಜೆಸ್ಕಾಂ ಅಧಿಕಾರಿ ಮಹೇಶ ಪಾಟೀಲ ,ಮಾತನಾಡಿ, ‘ಗೃಹಜ್ಯೋತಿ ಯೋಜನೆಯಡಿ 8479 ಜನರು ಹೆಸರನ್ನು ನೋಂದಾಯಿಸಿಕೊಂಡು 7329 ಜನ ಸರ್ಕಾರದ ಲಾಭ ಪಡೆಯುತ್ತಿದ್ದಾರೆ. 1150 ಗ್ರಾಹಕರು ನೋಂದಾಯಿಸಿ ಕೊಂಡಿಲ್ಲ’ ಎಂದರು. </p>.<p>‘ಗೃಹಲಕ್ಷ್ಮಿ ಯೋಜನೆಯಡಿ ತಾಲ್ಲೂಕಿನಲ್ಲಿ ಬಂದ 9304 ಅರ್ಜಿಗಳಲ್ಲಿ 706 ಬಾಕಿ ಉಳಿದಿವೆ’ ಎಂದು ಸಿಡಿಪಿಒ ಗೌತಮ ಸಿಂಧೆ ತಿಳಿಸಿದರು. ಮುಂದಿನ ಸಭೆಯೊಳಗೆ ಎಲ್ಲ ಅರ್ಜಿ ವಿಲೇವಾರಿ ಮಾಡಿ ಅರ್ಹರಿಗೆ ಯೋಜನೆ ಲಾಭ ಮುಟ್ಟಿಸಬೇಕು ಎಂದು ಸಮಿತಿ ಅಧ್ಯಕ್ಷ ಸಿದ್ರಾಮ ಕಾಮಣ್ಣ ತಾಕೀತು ಮಾಡಿದರು.</p>.<p>ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹದೇವ ಬಾಬಳಗಿ ಮಾತನಾಡಿದರು.</p>.<p>ಸಮಿತಿಯ ಅಧ್ಯಕ್ಷ ಸಿದ್ರಾಮ ಕಾಮಣ್ಣ ಹಾಗೂ ಸಮಿತಿಯ ನೂತನ 14 ಸದಸ್ಯರಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು.</p>.<p>ತಹಶೀಲ್ದಾರ್ ಶಿವಾನಂದ್ ಮೇತ್ರೆ, ನರೇಗಾ ಸಹಾಯಕ ನಿರ್ದೇಶಕ ಮಹಾದೇವ ಜಮ್ಮು, ಸಮಿತಿ ಸದಸ್ಯರಾದ ವೆಂಕಟೇಶ್ ಗುತ್ತಿಗೆದಾರ, ತ್ರಿಂಬಕ ಜೀವಾಯಿ, ವಿನಾಯಕ ಪವಾರ, ಈಶ್ವರ ಮೇತ್ರೆ, ಶಿವಕುಮಾರ ಕೋಳಿ, ಪ್ರಥಮ ಜಾಧವ, ಮುಕೇಶ ಪಾಟಿಲ, ಸುನಿಲ ಪಾಟೀಲ, ಮಹೇಶ ಪಾಟಿಲ, ಭಾಗವತ ಫುಂಡೆ ಸಮಿತಿ ಸದಸ್ಯರು ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳು ಸೇರಿದಂತೆ ಇನ್ನಿತರರು ಈ ಸಭೆಯಲ್ಲಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>