<p><strong>ಬೀದರ್</strong>: ‘ವಚನ ಸಾಹಿತ್ಯದ ಪ್ರಚಾರ, ಪ್ರಸಾರಕ್ಕೆ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಕೊಡುಗೆ ಬಹಳ ದೊಡ್ಡದು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.</p>.<p>ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ 165ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜಯಂತಿ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಹಳಕಟ್ಟಿ ಅವರು ಅವರ ಉಸಿರು ಇರುವವರೆಗೆ ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ಪ್ರಸಾರ ಮಾಡಿದ್ದಾರೆ. ವಚನ ಸಾಹಿತ್ಯದ ಬೆಳಕು ಜಗತ್ತಿಗೆ ತಲುಪಿಸಿದ್ದಾರೆ ಎಂದರು.</p>.<p>ವ್ಯಕ್ತಿಯು ಪಂಚಾ'ಗ, ಜ್ಯೋತಿಷ್ಯ ಶಾಸ್ತ್ರ, ಕಂದಾಚಾರಗಳನ್ನು ನಂಬಲಾರದೇ ಮಾನಸಿಕ ಮತ್ತು ಆತ್ಮ ಬಲದಿಂದ ಬದುಕು ಸಾಗಿಸಬೇಕು. ಪ್ರತಿಯೊಬ್ಬರೂ ನಕಾರಾತ್ಮಕ ಭಾವನೆಗಳಿಂದ ದೂರವಿದ್ದು, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಅಂತರಂಗ, ಬಹಿರಂಗ ಶುದ್ಧೀಕರಣಗೊಳಿಸಬೇಕು. ಶರಣರ ಸತ್ಸಂಗದಲ್ಲಿ ಇರಬೇಕು ಎಂದು ತಿಳಿಸಿದರು.</p>.<p>ವೈದ್ಯೆ ಡಾ. ವಿಜಯಶ್ರೀ ಬಶೆಟ್ಟಿ ಕಾರ್ಯಕ್ರಮ ಉದ್ಛಾಟಿಸಿ, ಹಳಕಟ್ಟಿಯವರು ಕಡು ಬಡತನದಲ್ಲಿ ಹುಟ್ಟಿದ್ದರು. ಹಳೆಯ ಬಟ್ಟೆಗಳನ್ನು ಧರಿಸಿ ಸಮಾಜಮುಖಿ ಕಾರ್ಯ ಮಾಡಿದ್ದರು. ವಚನ ಸಾಹಿತ್ಯದ ಪ್ರಸಾರಕ್ಕೆ ಶಿವಾನುಭವ ಪತ್ರಿಕೆ ಪ್ರಕಟಿಸುತ್ತಿದ್ದರು ಎಂದು ಹೇಳಿದರು.</p>.<p>ವೈದ್ಯೆ ಡಾ. ದೇವಿಕಾ ನಾಗೂರೆ ಮಾತನಾಡಿ, ಹಳಕಟ್ಟಿಯವರು ವೃತ್ತಿಯಲ್ಲಿ ಸರ್ಕಾರಿ ವಕೀಲರಾಗಿದ್ದರು. ಸುಮಾರು ಹತ್ತು ಸಾವಿರ ವಚನಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಅಂದು ಬಾಸಿನ್ ಮಿಶನ್ ನವರು ವಚನಗಳನ್ನು ಪ್ರಕಟಿಸಲು ನಿರಾಕರಿಸಿದಾಗ ಸ್ವತಃ ಹಳಕಟ್ಟಿಯವರು ಅವರ ಮನೆಯನ್ನು ಮಾರಾಟ ಮಾಡಿ ಮುದ್ರಿಸಿದ್ದರು ಎಂದು ತಿಳಿಸಿದರು.</p>.<p>ನಿರಂಜನ ಸ್ವಾಮೀಜಿ ಬದುಕಿನ ಮೌಲ್ಯದ ಕುರಿತು ಪ್ರವಚನ ಮಾಡಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ವಿಜಯಲಕ್ಷ್ಮಿ ವಚನ ಚಿಂತನೆ ನೀಡಿದರು. ಮಹೇಶ ಮಜಗೆ ಮತ್ತು ಉದಯಕುಮಾರ ಜೀರ್ಗೆ ಅವರನ್ನು ಸನ್ಮಾನಿಸಲಾಯಿತು. ಆರತಿ ಸಂದೀಪ ಏಕೆಳ್ಳೆ ಗುರುಬಸವ ಪೂಜೆ ನೆರವೇರಿಸಿದರು. ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ. ಎಸ್.ಬಿ. ಬಿರಾದಾರ, ಮಹಾಲಿಂಗ ಸ್ವಾಮೀಜಿ, ಉಮಾಕಾಂತ ಮೀಸೆ ಹಾಜರಿದ್ದರು. ಬೋಗಾರ ಮತ್ತು ಚನ್ನಬಸಪ್ಪ ನೌಬಾದೆ ವಚನ ಸಂಗೀತ ನಡೆಸಿಕೊಟ್ಟರು. ಶಿಕ್ಷಕಿ ಶಿವಲೀಲಾ ನಿರ್ದೇಶನದ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ‘ಸತ್ಯಂ ಶಿವಂ ಸುಂದರಂ’ ನೃತ್ಯರೂಪಕ ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ವಚನ ಸಾಹಿತ್ಯದ ಪ್ರಚಾರ, ಪ್ರಸಾರಕ್ಕೆ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಕೊಡುಗೆ ಬಹಳ ದೊಡ್ಡದು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದರು.</p>.<p>ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ 165ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಜಯಂತಿ ಉತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಹಳಕಟ್ಟಿ ಅವರು ಅವರ ಉಸಿರು ಇರುವವರೆಗೆ ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ಪ್ರಸಾರ ಮಾಡಿದ್ದಾರೆ. ವಚನ ಸಾಹಿತ್ಯದ ಬೆಳಕು ಜಗತ್ತಿಗೆ ತಲುಪಿಸಿದ್ದಾರೆ ಎಂದರು.</p>.<p>ವ್ಯಕ್ತಿಯು ಪಂಚಾ'ಗ, ಜ್ಯೋತಿಷ್ಯ ಶಾಸ್ತ್ರ, ಕಂದಾಚಾರಗಳನ್ನು ನಂಬಲಾರದೇ ಮಾನಸಿಕ ಮತ್ತು ಆತ್ಮ ಬಲದಿಂದ ಬದುಕು ಸಾಗಿಸಬೇಕು. ಪ್ರತಿಯೊಬ್ಬರೂ ನಕಾರಾತ್ಮಕ ಭಾವನೆಗಳಿಂದ ದೂರವಿದ್ದು, ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಅಂತರಂಗ, ಬಹಿರಂಗ ಶುದ್ಧೀಕರಣಗೊಳಿಸಬೇಕು. ಶರಣರ ಸತ್ಸಂಗದಲ್ಲಿ ಇರಬೇಕು ಎಂದು ತಿಳಿಸಿದರು.</p>.<p>ವೈದ್ಯೆ ಡಾ. ವಿಜಯಶ್ರೀ ಬಶೆಟ್ಟಿ ಕಾರ್ಯಕ್ರಮ ಉದ್ಛಾಟಿಸಿ, ಹಳಕಟ್ಟಿಯವರು ಕಡು ಬಡತನದಲ್ಲಿ ಹುಟ್ಟಿದ್ದರು. ಹಳೆಯ ಬಟ್ಟೆಗಳನ್ನು ಧರಿಸಿ ಸಮಾಜಮುಖಿ ಕಾರ್ಯ ಮಾಡಿದ್ದರು. ವಚನ ಸಾಹಿತ್ಯದ ಪ್ರಸಾರಕ್ಕೆ ಶಿವಾನುಭವ ಪತ್ರಿಕೆ ಪ್ರಕಟಿಸುತ್ತಿದ್ದರು ಎಂದು ಹೇಳಿದರು.</p>.<p>ವೈದ್ಯೆ ಡಾ. ದೇವಿಕಾ ನಾಗೂರೆ ಮಾತನಾಡಿ, ಹಳಕಟ್ಟಿಯವರು ವೃತ್ತಿಯಲ್ಲಿ ಸರ್ಕಾರಿ ವಕೀಲರಾಗಿದ್ದರು. ಸುಮಾರು ಹತ್ತು ಸಾವಿರ ವಚನಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಅಂದು ಬಾಸಿನ್ ಮಿಶನ್ ನವರು ವಚನಗಳನ್ನು ಪ್ರಕಟಿಸಲು ನಿರಾಕರಿಸಿದಾಗ ಸ್ವತಃ ಹಳಕಟ್ಟಿಯವರು ಅವರ ಮನೆಯನ್ನು ಮಾರಾಟ ಮಾಡಿ ಮುದ್ರಿಸಿದ್ದರು ಎಂದು ತಿಳಿಸಿದರು.</p>.<p>ನಿರಂಜನ ಸ್ವಾಮೀಜಿ ಬದುಕಿನ ಮೌಲ್ಯದ ಕುರಿತು ಪ್ರವಚನ ಮಾಡಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿನಿ ವಿಜಯಲಕ್ಷ್ಮಿ ವಚನ ಚಿಂತನೆ ನೀಡಿದರು. ಮಹೇಶ ಮಜಗೆ ಮತ್ತು ಉದಯಕುಮಾರ ಜೀರ್ಗೆ ಅವರನ್ನು ಸನ್ಮಾನಿಸಲಾಯಿತು. ಆರತಿ ಸಂದೀಪ ಏಕೆಳ್ಳೆ ಗುರುಬಸವ ಪೂಜೆ ನೆರವೇರಿಸಿದರು. ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ. ಎಸ್.ಬಿ. ಬಿರಾದಾರ, ಮಹಾಲಿಂಗ ಸ್ವಾಮೀಜಿ, ಉಮಾಕಾಂತ ಮೀಸೆ ಹಾಜರಿದ್ದರು. ಬೋಗಾರ ಮತ್ತು ಚನ್ನಬಸಪ್ಪ ನೌಬಾದೆ ವಚನ ಸಂಗೀತ ನಡೆಸಿಕೊಟ್ಟರು. ಶಿಕ್ಷಕಿ ಶಿವಲೀಲಾ ನಿರ್ದೇಶನದ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ‘ಸತ್ಯಂ ಶಿವಂ ಸುಂದರಂ’ ನೃತ್ಯರೂಪಕ ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>