<p><strong>ಹುಲಸೂರ</strong>: 2018ರಲ್ಲಿ ಹುಲಸೂರ ತಾಲ್ಲೂಕಾಗಿ ರಚನೆಯಾದರೂ, ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಹುಲಸೂರಿಗೆ ಈತನಕ ತಾಲ್ಲೂಕು ಆಸ್ಪತ್ರೆ ಮಂಜೂರಾಗಿಲ್ಲ. ಹೀಗಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಮೇಲೆ ತಾಲ್ಲೂಕಿನ ರೋಗಿಗಳ ಭಾರ ಬಿದ್ದಿದೆ.</p>.<p>30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇದಾಗಿದ್ದು, 27 ಕಾಯಂ ಸಿಬ್ಬಂದಿ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ 14 ಮಂದಿ ಕಾಯಂ ಹಾಗೂ 17 ಜನ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಇರುವ ಸಿಬ್ಬಂದಿ ಮೇಲೆ ಕಾರ್ಯದೊತ್ತಡ ಹೆಚ್ಚಾಗಿದೆ. ಅದರ ಪರಿಣಾಮ ರೋಗಿಗಳ ಚಿಕಿತ್ಸೆಯ ಮೇಲಾಗುತ್ತಿದೆ!</p>.<p>ನಿತ್ಯ 30- 40 ಹಳ್ಳಿಗಳು, ನೆರೆ ರಾಜ್ಯದ ಗಡಿ ಭಾಗದ ಜನರೂ ಸೇರಿದಂತೆ 400ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಸುಮಾರು 600 ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳನ್ನು ಬಸವಕಲ್ಯಾಣ ತಾಲ್ಲೂಕು ಆಸ್ಪತ್ರೆ ಹಾಗೂ ಬೀದರ್ ಜಿಲ್ಲಾ ಆಸ್ಪತ್ರೆಗೆ ಹೋಗುವಂತೆ ಶಿಫಾರಸು ಮಾಡಲಾಗುತ್ತಿದೆ.</p>.<p><strong>ಇಲ್ಲಿ ಕೆಲಸ, ಅಲ್ಲಿ ವಾಸ:</strong></p>.<p>‘ಸಮುದಾಯ ಆರೋಗ್ಯ ಕೇಂದ್ರದ ಬಹುತೇಕ ವೈದ್ಯರು ದೂರದ ಬಸವಕಲ್ಯಾಣ ಸೇರಿದಂತೆ ತಮ್ಮ ಸ್ವಂತ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಬೆಳಿಗ್ಗೆ ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಲ್ಲ. ಸಂಜೆಯೂ ಬೇಗ ಹೊರಟು ಹೋಗುತ್ತಿದ್ದಾರೆ. ಸಂಜೆಯಿಂದ ಮರುದಿನ ಬೆಳಿಗ್ಗೆ ತನಕ ಒಬ್ಬ ವೈದ್ಯರಷ್ಟೇ ಆಸ್ಪತ್ರೆಯಲ್ಲಿ ಇರುತ್ತಾರೆ. ತುರ್ತು ಚಿಕಿತ್ಸೆಗೆ ಜನರು ಪ್ರತಿದಿನವೂ ಪರದಾಡುವಂತಾಗಿದೆ’ ಎಂಬ ಆರೋಪಗಳು ಕೇಳಿಬಂದಿವೆ.</p>.<p><strong>ಹೊರಗಿನ ಔಷಧ!:</strong></p>.<p>ಹುಲಸೂರಿಗೆ ಒಂದೆಡೆ ತಾಲ್ಲೂಕು ಆಸ್ಪತ್ರೆಯೂ ಇಲ್ಲ. ಮತ್ತೊಂದೆಡೆ ರೋಗಿಗಳಿಗೆ ಸೂಕ್ತ ಔಷಧವೂ ಸಿಗುತ್ತಿಲ್ಲ. ವೈದ್ಯರು ಹೊರಗಿನಿಂದ ಔಷಧ ತರುವಂತೆ ಚೀಟಿ ಬರೆದುಕೊಡುತ್ತಿದ್ದಾರೆ ಎಂದು ರೋಗಿಗಳು ದೂರುತ್ತಾರೆ.</p>.<p><strong>ಹೆಸರಿಗಷ್ಟೇ 24x7:</strong></p>.<p>ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಪ್ರತಿದಿನ ಬೆಳಿಗ್ಗೆ ಬಂದು ಸಂಜೆ ಹೋಗುತ್ತಾರೆ. ಹೀಗಾಗಿ ತಾಲ್ಲೂಕಿನ ರಾತ್ರಿ ವೇಳೆ ವೈದ್ಯರು ಸಿಗಲ್ಲ. ಸರ್ಕಾರಿ ಕಚೇರಿಗಳಂತೆ ಬೆಳಿಗ್ಗೆ 9 ಗಂಟೆ ನಂತರ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳು ಆರಂಭವಾಗುತ್ತವೆ. ಅಷ್ಟರಲ್ಲಿ ಯಾರಾದರೂ ತುರ್ತು ಚಿಕಿತ್ಸೆ ಅಗತ್ಯ ಇದ್ದರೆ ಖಾಸಗಿ ಆಸ್ಪತ್ರೆಗಳನ್ನೇ ಮೊರೆಹೋಗುವಂತಾಗಿದೆ.</p>.<p><strong>ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ:</strong></p>.<p>ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳಿಗೆ 40 ಹೆಚ್ಚು ಹೆರಿಗೆಗಳಾಗುತ್ತವೆ. ಸ್ತ್ರೀರೋಗ ತಜ್ಞೆಯರು , ದಾದಿಯರು ಇಲ್ಲದೇ ರೋಗಿಗಳು ಬಸವಕಲ್ಯಾಣ, ಭಾಲ್ಕಿ, ಬೀದರ್, ನೆರೆ ರಾಜ್ಯದ ಲಾತೂರ್, ಉಮರ್ಗಾ, ನೀಲಂಗಾ, ಉದಗಿರ ಪಟ್ಟಣಗಳ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತಿದ್ದಾರೆ. ‘ಹೆರಿಗೆ ರೋಗಿಗಳನ್ನು ಜಿಲ್ಲಾ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಬದಲು ಇಲ್ಲಿಯೇ ಚಿಕಿತ್ಸೆ ಕೊಡಲು ಸೌಲಭ್ಯ ಹೆಚ್ಚಿಸಬೇಕು’ ಎಂದು ಗರ್ಭಿಣಿ ಮಗಳ ತಾಯಿ ಸವಿತಾ ಸಂಜೀವ ಒತ್ತಾಯಿಸುತ್ತಾರೆ.</p>.<p><strong>ಬಳಕೆಯಾಗದ ಆಂಬುಲೆನ್ಸ್:</strong></p>.<p>ಆಸ್ಪತ್ರೆಗೆ ಆಂಬುಲೆನ್ಸ್ ಮಂಜೂರಾಗಿದೆ ಆದರೆ, ಚಾಲಕರ ನೇಮಕವಾದ ಕಾರಣ, ತುರ್ತು ಸಂದರ್ಭದಲ್ಲಿ ಬಳಕೆಗೆ ಆಂಬುಲೆನ್ಸ್ ಸೇವೆ ಸಿಗದಂತಾಗಿದೆ. ಆಯುಷ್ ಇಲಾಖೆಯಿಂದ ನಿರ್ಮಿಸಿರುವ ಯೋಗಾಭ್ಯಾಸ ಕೇಂದ್ರವು ಯೋಗ ತರಬೇತುದಾರರಿಲ್ಲದೇ ಕುಡುಕರ ತಾಣವಾಗಿ ಮಾರ್ಪಟ್ಟಿದೆ.</p>.<p><strong>ಮೇಲ್ದರ್ಜೆಗೇರಲಿ:</strong></p>.<p>ಹುಲಸೂರ ಪಟ್ಟಣ ತಾಲ್ಲೂಕು ದಿನೇದಿನೆ ಬೆಳೆಯುತ್ತಿದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿ, ಅಗತ್ಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.</p>.<p><strong>ಪ್ರಶಸ್ತಿ ಪಡೆದ ಆರೋಗ್ಯ ಕೇಂದ್ರ:</strong></p>.<p>ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಆಸ್ಪತ್ರೆಯ ಒಳಾಂಗಣ ಶುಚಿತ್ವ, ಹೊರಾಂಗಣ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣದಲ್ಲಿ ಈ ಸಮುದಾಯ ಆರೋಗ್ಯ ಕೇಂದವು ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದು, ‘ಕಾಯಕಲ್ಪ’ ಪ್ರಶಸ್ತಿಗೆ ಭಾಜನವಾಗಿದೆ.</p>.<p>ತಾಲ್ಲೂಕು ಆಸ್ಪತ್ರೆ ಅಲ್ಲದಿದ್ದರೂ ಜನರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತಮ ಕಾರ್ಯನಿರ್ವಹಣೆಗಾಗಿ ನಮ್ಮ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ ಬಂದಿದೆಡಾ.ಶಶಿಕಾಂತ್ ಕನ್ನಾಡೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸಂಜೆಯ ನಂತರ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿಲ್ಲದ್ದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಆಸ್ಪತ್ರೆಯ ಎಲ್ಲ ವೈದ್ಯರು ಪಟ್ಟಣದಲ್ಲಿಯೇ ನೆಲೆಸುವಂತೆ ಕ್ರಮಕೈಗೊಳ್ಳಬೇಕುನಾಗೇಶ್ ಮೇತ್ರೆ ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ಜಿಲ್ಲಾಡಳಿತ ಸಾರ್ವಜನಿಕರ ಒಳಿತಕ್ಕಾಗಿ ತಕ್ಷಣ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸಿ ವೈದ್ಯರನ್ನು ನೇಮಿಸಬೇಕು.ಮಲ್ಲಿಕಾರ್ಜುನ ಧಬಾಲೇ ಜಿ.ಪಂ.ಮಾಜಿ ಸದಸ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳ್ಳೆಯ ಗುಣಮಟ್ಟದ ಸೂಕ್ತ ಚಿಕಿತ್ಸೆ ಸಿಗುತ್ತಿದ್ದು ಔಷಧ ಮಾತ್ರ ಹೊರಗಿನಿಂದ ತರಬೇಕಾಗಿದೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸೇವೆ ಸಿಗುತ್ತಿಲ್ಲಬಸಮ್ಮಾ ಕುಂಬಾರ ರೋಗಿಯೊಬ್ಬರ ಪತ್ನಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ</strong>: 2018ರಲ್ಲಿ ಹುಲಸೂರ ತಾಲ್ಲೂಕಾಗಿ ರಚನೆಯಾದರೂ, ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಹುಲಸೂರಿಗೆ ಈತನಕ ತಾಲ್ಲೂಕು ಆಸ್ಪತ್ರೆ ಮಂಜೂರಾಗಿಲ್ಲ. ಹೀಗಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಮೇಲೆ ತಾಲ್ಲೂಕಿನ ರೋಗಿಗಳ ಭಾರ ಬಿದ್ದಿದೆ.</p>.<p>30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇದಾಗಿದ್ದು, 27 ಕಾಯಂ ಸಿಬ್ಬಂದಿ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ 14 ಮಂದಿ ಕಾಯಂ ಹಾಗೂ 17 ಜನ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಇರುವ ಸಿಬ್ಬಂದಿ ಮೇಲೆ ಕಾರ್ಯದೊತ್ತಡ ಹೆಚ್ಚಾಗಿದೆ. ಅದರ ಪರಿಣಾಮ ರೋಗಿಗಳ ಚಿಕಿತ್ಸೆಯ ಮೇಲಾಗುತ್ತಿದೆ!</p>.<p>ನಿತ್ಯ 30- 40 ಹಳ್ಳಿಗಳು, ನೆರೆ ರಾಜ್ಯದ ಗಡಿ ಭಾಗದ ಜನರೂ ಸೇರಿದಂತೆ 400ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಸುಮಾರು 600 ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳನ್ನು ಬಸವಕಲ್ಯಾಣ ತಾಲ್ಲೂಕು ಆಸ್ಪತ್ರೆ ಹಾಗೂ ಬೀದರ್ ಜಿಲ್ಲಾ ಆಸ್ಪತ್ರೆಗೆ ಹೋಗುವಂತೆ ಶಿಫಾರಸು ಮಾಡಲಾಗುತ್ತಿದೆ.</p>.<p><strong>ಇಲ್ಲಿ ಕೆಲಸ, ಅಲ್ಲಿ ವಾಸ:</strong></p>.<p>‘ಸಮುದಾಯ ಆರೋಗ್ಯ ಕೇಂದ್ರದ ಬಹುತೇಕ ವೈದ್ಯರು ದೂರದ ಬಸವಕಲ್ಯಾಣ ಸೇರಿದಂತೆ ತಮ್ಮ ಸ್ವಂತ ಗ್ರಾಮಗಳಲ್ಲಿ ನೆಲೆಸಿದ್ದಾರೆ. ಬೆಳಿಗ್ಗೆ ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಲ್ಲ. ಸಂಜೆಯೂ ಬೇಗ ಹೊರಟು ಹೋಗುತ್ತಿದ್ದಾರೆ. ಸಂಜೆಯಿಂದ ಮರುದಿನ ಬೆಳಿಗ್ಗೆ ತನಕ ಒಬ್ಬ ವೈದ್ಯರಷ್ಟೇ ಆಸ್ಪತ್ರೆಯಲ್ಲಿ ಇರುತ್ತಾರೆ. ತುರ್ತು ಚಿಕಿತ್ಸೆಗೆ ಜನರು ಪ್ರತಿದಿನವೂ ಪರದಾಡುವಂತಾಗಿದೆ’ ಎಂಬ ಆರೋಪಗಳು ಕೇಳಿಬಂದಿವೆ.</p>.<p><strong>ಹೊರಗಿನ ಔಷಧ!:</strong></p>.<p>ಹುಲಸೂರಿಗೆ ಒಂದೆಡೆ ತಾಲ್ಲೂಕು ಆಸ್ಪತ್ರೆಯೂ ಇಲ್ಲ. ಮತ್ತೊಂದೆಡೆ ರೋಗಿಗಳಿಗೆ ಸೂಕ್ತ ಔಷಧವೂ ಸಿಗುತ್ತಿಲ್ಲ. ವೈದ್ಯರು ಹೊರಗಿನಿಂದ ಔಷಧ ತರುವಂತೆ ಚೀಟಿ ಬರೆದುಕೊಡುತ್ತಿದ್ದಾರೆ ಎಂದು ರೋಗಿಗಳು ದೂರುತ್ತಾರೆ.</p>.<p><strong>ಹೆಸರಿಗಷ್ಟೇ 24x7:</strong></p>.<p>ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಪ್ರತಿದಿನ ಬೆಳಿಗ್ಗೆ ಬಂದು ಸಂಜೆ ಹೋಗುತ್ತಾರೆ. ಹೀಗಾಗಿ ತಾಲ್ಲೂಕಿನ ರಾತ್ರಿ ವೇಳೆ ವೈದ್ಯರು ಸಿಗಲ್ಲ. ಸರ್ಕಾರಿ ಕಚೇರಿಗಳಂತೆ ಬೆಳಿಗ್ಗೆ 9 ಗಂಟೆ ನಂತರ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳು ಆರಂಭವಾಗುತ್ತವೆ. ಅಷ್ಟರಲ್ಲಿ ಯಾರಾದರೂ ತುರ್ತು ಚಿಕಿತ್ಸೆ ಅಗತ್ಯ ಇದ್ದರೆ ಖಾಸಗಿ ಆಸ್ಪತ್ರೆಗಳನ್ನೇ ಮೊರೆಹೋಗುವಂತಾಗಿದೆ.</p>.<p><strong>ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗಳ ಮೊರೆ:</strong></p>.<p>ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳಿಗೆ 40 ಹೆಚ್ಚು ಹೆರಿಗೆಗಳಾಗುತ್ತವೆ. ಸ್ತ್ರೀರೋಗ ತಜ್ಞೆಯರು , ದಾದಿಯರು ಇಲ್ಲದೇ ರೋಗಿಗಳು ಬಸವಕಲ್ಯಾಣ, ಭಾಲ್ಕಿ, ಬೀದರ್, ನೆರೆ ರಾಜ್ಯದ ಲಾತೂರ್, ಉಮರ್ಗಾ, ನೀಲಂಗಾ, ಉದಗಿರ ಪಟ್ಟಣಗಳ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತಿದ್ದಾರೆ. ‘ಹೆರಿಗೆ ರೋಗಿಗಳನ್ನು ಜಿಲ್ಲಾ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುವ ಬದಲು ಇಲ್ಲಿಯೇ ಚಿಕಿತ್ಸೆ ಕೊಡಲು ಸೌಲಭ್ಯ ಹೆಚ್ಚಿಸಬೇಕು’ ಎಂದು ಗರ್ಭಿಣಿ ಮಗಳ ತಾಯಿ ಸವಿತಾ ಸಂಜೀವ ಒತ್ತಾಯಿಸುತ್ತಾರೆ.</p>.<p><strong>ಬಳಕೆಯಾಗದ ಆಂಬುಲೆನ್ಸ್:</strong></p>.<p>ಆಸ್ಪತ್ರೆಗೆ ಆಂಬುಲೆನ್ಸ್ ಮಂಜೂರಾಗಿದೆ ಆದರೆ, ಚಾಲಕರ ನೇಮಕವಾದ ಕಾರಣ, ತುರ್ತು ಸಂದರ್ಭದಲ್ಲಿ ಬಳಕೆಗೆ ಆಂಬುಲೆನ್ಸ್ ಸೇವೆ ಸಿಗದಂತಾಗಿದೆ. ಆಯುಷ್ ಇಲಾಖೆಯಿಂದ ನಿರ್ಮಿಸಿರುವ ಯೋಗಾಭ್ಯಾಸ ಕೇಂದ್ರವು ಯೋಗ ತರಬೇತುದಾರರಿಲ್ಲದೇ ಕುಡುಕರ ತಾಣವಾಗಿ ಮಾರ್ಪಟ್ಟಿದೆ.</p>.<p><strong>ಮೇಲ್ದರ್ಜೆಗೇರಲಿ:</strong></p>.<p>ಹುಲಸೂರ ಪಟ್ಟಣ ತಾಲ್ಲೂಕು ದಿನೇದಿನೆ ಬೆಳೆಯುತ್ತಿದ್ದು, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿ, ಅಗತ್ಯ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.</p>.<p><strong>ಪ್ರಶಸ್ತಿ ಪಡೆದ ಆರೋಗ್ಯ ಕೇಂದ್ರ:</strong></p>.<p>ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಆಸ್ಪತ್ರೆಯ ಒಳಾಂಗಣ ಶುಚಿತ್ವ, ಹೊರಾಂಗಣ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣದಲ್ಲಿ ಈ ಸಮುದಾಯ ಆರೋಗ್ಯ ಕೇಂದವು ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದು, ‘ಕಾಯಕಲ್ಪ’ ಪ್ರಶಸ್ತಿಗೆ ಭಾಜನವಾಗಿದೆ.</p>.<p>ತಾಲ್ಲೂಕು ಆಸ್ಪತ್ರೆ ಅಲ್ಲದಿದ್ದರೂ ಜನರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತಮ ಕಾರ್ಯನಿರ್ವಹಣೆಗಾಗಿ ನಮ್ಮ ಆರೋಗ್ಯ ಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ ಬಂದಿದೆಡಾ.ಶಶಿಕಾಂತ್ ಕನ್ನಾಡೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸಂಜೆಯ ನಂತರ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿಲ್ಲದ್ದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಆಸ್ಪತ್ರೆಯ ಎಲ್ಲ ವೈದ್ಯರು ಪಟ್ಟಣದಲ್ಲಿಯೇ ನೆಲೆಸುವಂತೆ ಕ್ರಮಕೈಗೊಳ್ಳಬೇಕುನಾಗೇಶ್ ಮೇತ್ರೆ ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ಜಿಲ್ಲಾಡಳಿತ ಸಾರ್ವಜನಿಕರ ಒಳಿತಕ್ಕಾಗಿ ತಕ್ಷಣ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಗೆ ಮೇಲ್ದರ್ಜೆಗೇರಿಸಿ ವೈದ್ಯರನ್ನು ನೇಮಿಸಬೇಕು.ಮಲ್ಲಿಕಾರ್ಜುನ ಧಬಾಲೇ ಜಿ.ಪಂ.ಮಾಜಿ ಸದಸ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳ್ಳೆಯ ಗುಣಮಟ್ಟದ ಸೂಕ್ತ ಚಿಕಿತ್ಸೆ ಸಿಗುತ್ತಿದ್ದು ಔಷಧ ಮಾತ್ರ ಹೊರಗಿನಿಂದ ತರಬೇಕಾಗಿದೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸೇವೆ ಸಿಗುತ್ತಿಲ್ಲಬಸಮ್ಮಾ ಕುಂಬಾರ ರೋಗಿಯೊಬ್ಬರ ಪತ್ನಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>