ನಾನು ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಈಗ ಕನ್ನಡ ಭವನ ನಿರ್ಮಾಣವಾಗಿದ್ದು ಕನ್ನಡಾಭಿಮಾನಗಳ ಆಸೆ ಈಡೇರಿದೆ.
ಸುರೇಶ ಚನಶೆಟ್ಟಿ ಜಿಲ್ಲಾಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು
ಭವನ ಏನೇನು ಒಳಗೊಂಡಿದೆ?
ಒಂದು ಎಕರೆ ಜಾಗದಲ್ಲಿ ಎರಡು ಅಂತಸ್ತಿನ ಸುಸಜ್ಜಿತವಾದ ಕನ್ನಡ ಭವನವು ಅನೇಕ ವಿಶೇಷತೆಗಳನ್ನು ಒಳಗೊಂಡಿದೆ. ನೆಲಮಹಡಿಯಲ್ಲಿ ಆರ್ಟ್ ಗ್ಯಾಲರಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿ ಮೊದಲನೇ ಮಹಡಿ ಗ್ರಂಥಾಲಯ ಅತಿಥಿಗಳು ಕಲಾವಿದರಿಗೆ ತಂಗಲು ಕೊಠಡಿಗಳು ಮೂರನೇ ಮಹಡಿಯಲ್ಲಿ ಏಕಕಾಲಕ್ಕೆ 500 ಜನ ಕುಳಿತುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾದ ಸಭಾ ಭವನ ನಿರ್ಮಿಸಲಾಗಿದೆ. ‘ಕನ್ನಡ ಭವನ ಒಟ್ಟು ₹8 ಕೋಟಿ ಮೊತ್ತದ ಯೋಜನೆಯಾಗಿದೆ. ಮೊದಲ ಹಂತದ ಯೋಜನೆ ಪೂರ್ಣಗೊಂಡಿದೆ. ಬಯಲು ರಂಗ ಮಂದಿರ ಸಭಾ ಭವನ ಕನ್ನಡ ವನ ನಿರ್ಮಿಸುವ ಯೋಜನೆ ಇದೆ. ಬರುವ ದಿನಗಳಲ್ಲಿ ಗ್ರಂಥಾಲಯದಲ್ಲಿ ನಾಡಿನ ಎಲ್ಲ ಲೇಖಕರ ಪುಸ್ತಕಗಳನ್ನ ಇರಿಸಲಾಗುವುದು. ಯಾರು ಬೇಕಾದರೂ ಬಂದು ಕನ್ನಡ ಸಾಹಿತ್ಯದ ಅಧ್ಯಯನ ಮಾಡಬಹುದು’ ಎಂದು ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.