<p><strong>ಬೀದರ್:</strong> ‘ಕನ್ನಡ ಭಾಷೆ ಬೆಳೆಸುವ ಹೊಣೆಗಾರಿಕೆ ಬಹುಮುಖಿ ಆಗಬೇಕು. ಹೀಗಾದಾಗ ಕನ್ನಡ ಭಾಷೆ ಬೆಳೆಯಲು ಸಾಧ್ಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟರು.</p><p>ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಪ್ರೊ. ಜಗನ್ನಾಥ ಹೆಬ್ಬಾಳೆ ಅಭಿನಂದನ ಸಮಿತಿಯ ಸಹಯೋಗದಲ್ಲಿ ನಗರ ಹೊರವಲಯದ ಚಿಕ್ಕಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹೆಬ್ಬಾಳೆಯವರ ಅಭಿನಂದನ ಸಂಪುಟ ‘ಧರಿಯ ಸಿರಿ’ ಬಿಡುಗಡೆಗೊಳಿಸಿ ಮಾತನಾಡಿದರು. </p><p>ವಿದ್ಯಾವಂತರು, ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಕನ್ನಡವೇಕೆ ಬೆಳೆಯುತ್ತಿಲ್ಲ. ಕನ್ನಡ ಬೆಳೆಸಬೇಕಾದ ಸರ್ಕಾರಕ್ಕೆ, ಕನ್ನಡಿಗರಿಗೆ ಕನ್ನಡ ಬೇಕಿಲ್ಲ ಎಂದು ಹೇಳಿದರು.</p><p>ಕನ್ನಡ ಬೆಳೆಸುವಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಕೊಡುಗೆ ದೊಡ್ಡದಿದೆ. ನಿಜಾಮನ ಕಾಲದಲ್ಲಿ ಹೊರಗೆ ಉರ್ದು ನಾಮಫಲಕವಾಗಿ ಒಳಗೆ ಕನ್ನಡ ಕಲಿಸುತ್ತಿದ್ದರು. ಆ ಮಠ ನನಗೆ ಪ್ರೇರಣೆ. ಅದಕ್ಕಾಗಿಯೇ ನಾನು ಬೀದರ್ ಜಿಲ್ಲೆಯ ಪ್ರವಾಸವನ್ನು ಅಲ್ಲಿಂದಲೇ ಆರಂಭಿಸಿದ್ದೇನೆ ಎಂದು ತಿಳಿಸಿದರು.</p><p>ಜಗನ್ನಾಥ ಹೆಬ್ಬಾಳೆಯವರನ್ನು ನಾನು 35 ವರ್ಷಗಳಿಂದ ಬಲ್ಲೆ. ಕನ್ನಡಕ್ಕಾಗಿ ಸುಮಾರು 45 ವರ್ಷಗಳ ಕಾಲ ಕೆಲಸ ಮಾಡಿದ ಅವರನ್ನು ಗೌರವಿಸಬೇಕಾದುದು ಎಲ್ಲರ ಕರ್ತವ್ಯ. ಕನ್ನಡ ಭಾಷೆಯನ್ನು ಹೇಗೆ ಕಟ್ಟಬೇಕೆಂದು ಅವರು ತೋರಿಸಿದ್ದಾರೆ. ಅವರು ಲೇಖಕರು ಹೌದು, ಕನ್ನಡದ ಪರಿಚಾರಕರು ಹೌದು. ಕನ್ನಡದ ಪ್ರಸಾರಕ್ಕಾಗಿ ಕರ್ನಾಟಕ ಸಂಘವನ್ನು ಕಟ್ಟಿದ್ದಾರೆ. ಕಥೆ, ಕಾವ್ಯಗಳನ್ನು ಬರೆದಿದ್ದಾರೆ. ಅನೇಕ ವಿದ್ವಾಂಸರನ್ನು ಗಡಿ ಜಿಲ್ಲೆ ಬೀದರ್ಗೆ ಕರೆಸಿದ್ದಾರೆ. ಅನೇಕ ಆಡಳಿತಾತ್ಮಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪ್ರಾಧ್ಯಾಪಕರಾಗಿದ್ದರೂ ಪಾಠ–ಪ್ರವಚನಕ್ಕೆ ಸೀಮಿತರಾಗದೆ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </p><p>ಕಾರ್ಯಕ್ರಮ ಉದ್ಘಾಟಿಸಿ ಸಂಸದ ಸಾಗರ ಖಂಡ್ರೆ ಮಾತನಾಡಿ, ಹೆಬ್ಬಾಳೆ ಅವರು ಪಕ್ಷಾತೀತವಾಗಿ ಕನ್ನಡದ ಕೆಲಸ ಮಾಡಿದ್ದಾರೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ. ಬಹುತೇಕರು ಅವರ ಬಗ್ಗೆ ಇದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ ಎಂದರು.</p><p>ಹಿರಿಯರು ಮಾಡಿರುವ ಕೆಲಸದಿಂದ ಯುವಕರಾದವರು ಸಾಕಷ್ಟು ಕಲಿಯುವುದು ಇರುತ್ತದೆ. ಅದರಿಂದ ನಮಗೆ ಮಾರ್ಗದರ್ಶನ ಸಿಗುತ್ತದೆ. ಹಿರಿಯರ ಹೋರಾಟ, ಸಂಘಟನೆ, ವಿವಿಧ ಕ್ಷೇತ್ರಗಳಿಗೆ ಕೊಟ್ಟಿರುವ ಕೊಡುಗೆಗಳನ್ನು ಓದಿದರೆ ಅದರಿಂದ ಪ್ರೇರಣೆ ಪಡೆದು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.</p><p>ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ ಮಾತನಾಡಿ, ಕರ್ನಾಟಕ ಸಾಹಿತ್ಯ ಸಂಘದ ಪರ್ಯಾಯ ಹೆಸರು ಜಗನ್ನಾಥ ಹೆಬ್ಬಾಳೆ. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ದೊಡ್ಡದು ಎಂದು ಹೇಳಿದರು.</p><p>ಜಗನ್ನಾಥ ಹೆಬ್ಬಾಳೆ ಮಾತನಾಡಿ, ನನ್ನ ಪಾಲಿಗೆ ಕೆಆರ್ಇ ಸಂಸ್ಥೆ ನನ್ನ ಎರಡನೇ ತಾಯಿ. ನನ್ನ ಹೆಂಡತಿ, ನನ್ನ ಅತ್ತೆ–ಮಾವ ನನಗೆ ಅಪಾರ ಪ್ರೀತಿ ಕೊಟ್ಟು ನನ್ನ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕುಲಪತಿ ಆಗಬೇಕೆಂಬ ಕನಸಿದೆ. ಭಗವಂತನ ಆಶೀರ್ವಾದದಿಂದ ಅವಕಾಶ ಸಿಕ್ಕರೆ ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.</p><p>ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಬಸವಕಲ್ಯಾಣದ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಅಧ್ಯಕ್ಷೆ ಗಂಗಾಂಬಿಕೆ ಅಕ್ಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ ಹಾನಗಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಭಿನಂದನ ಸಂಪುಟದ ಪ್ರಧಾನ ಸಂಪಾದಕ ಕಲ್ಯಾಣರಾವ ಪಾಟೀಲ, ಶಂಭುಲಿಂಗ ಕಾಮಣ್ಣ, ಸಾವಿತ್ರಿ ಹೆಬ್ಬಾಳೆ, ಎಂಜಿನಿಯರ್ಗಳಾದ ಅಪ್ಪರಾವ ಗುನ್ನಳ್ಳಿ, ಶಿವರಾಜ ಸೂರೆ, ಚಂದ್ರಶೇಖರ ಹೆಬ್ಬಾಳೆ, ಅಭಿನಂದನ ಸಮಿತಿ ಕಾರ್ಯದರ್ಶಿ ಸಂಜೀವಕುಮಾರ ಜುಮ್ಮಾ, ಮಹಾದೇವಿ ಹೆಬ್ಬಾಳೆ, ರಾಜಕುಮಾರ ಹೆಬ್ಬಾಳೆ, ಮಹಾರುದ್ರ ಡಾಕುಳಗಿ ಹಾಜರಿದ್ದರು. ಶಿವಕುಮಾರ ಪಂಚಾಳ ಗೀತ ಗಾಯನ ನಡೆಸಿಕೊಟ್ಟರು. </p><p><strong>‘ಧರಿಯ ಸಿರಿ’ ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಕೃತಿ</strong></p><p>ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ ವಿಸಾಜಿ ಕೃತಿ ಕುರಿತು ಮಾತನಾಡಿ, ‘ಧರಿಯ ಸಿರಿ’ ಹೆಬ್ಬಾಳೆ ಅವರಿಗೆ ಸಂಬಂಧಿಸಿದ ಪುಸ್ತಕವಲ್ಲ. ಇದು ಬೀದರ್ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಕೃತಿಯಾಗಿದೆ. ಸಾಮಾನ್ಯವಾಗಿ ಅಭಿನಂದನ ಗ್ರಂಥದಲ್ಲಿ ವ್ಯಕ್ತಿಯ ವಿಜೃಂಭಣೆ ಢಾಳಾಗಿ ಇರುತ್ತದೆ. ಆದರೆ, ಇದು ಅದಕ್ಕೆ ವ್ಯತಿರಿಕ್ತವಾಗಿದೆ ಎಂದರು.</p><p>ಹೆಬ್ಬಾಳೆ ಅವರ ಒಡನಾಡಿಗಳು, ಗುರುಗಳು, ಕುಟುಂಬ, ಸಂಶೋಧನಾ ವಿದ್ಯಾರ್ಥಿಗಳು, ಹೆಬ್ಬಾಳೆ ಹಾಗೂ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿಯ ಅವಲೋಕನ ಮಾಡಿದ್ದಾರೆ. ಹೆಬ್ಬಾಳೆ ಅವರ ಜೀವನದಲ್ಲಿ ವಚನ ಚಳವಳಿ, ಶರಣ ಧರ್ಮದ ಮೌಲ್ಯಗಳಿವೆ. ಅವಿಭಕ್ತ ಕುಟುಂಬದ ಪ್ರಜ್ಞೆ, ಶ್ರಮ ಸಂಸ್ಕೃತಿ ಇದೆ ಎಂದು ವಿವರಿಸಿದರು.</p><p>ಎಷ್ಟೇ ಟೀಕೆಗಳು, ಆರೋಪಗಳು ಬಂದರೂ ಹೆಬ್ಬಾಳೆ ಅವರು ನಿರಂತರವಾಗಿ ಕನ್ನಡದ ಕೆಲಸ ಮಾಡುತ್ತ ಬಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಗೌರವದ ಜೊತೆಗೆ ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕಾಗುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ‘ಕನ್ನಡ ಭಾಷೆ ಬೆಳೆಸುವ ಹೊಣೆಗಾರಿಕೆ ಬಹುಮುಖಿ ಆಗಬೇಕು. ಹೀಗಾದಾಗ ಕನ್ನಡ ಭಾಷೆ ಬೆಳೆಯಲು ಸಾಧ್ಯ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟರು.</p><p>ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಪ್ರೊ. ಜಗನ್ನಾಥ ಹೆಬ್ಬಾಳೆ ಅಭಿನಂದನ ಸಮಿತಿಯ ಸಹಯೋಗದಲ್ಲಿ ನಗರ ಹೊರವಲಯದ ಚಿಕ್ಕಪೇಟೆಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಹೆಬ್ಬಾಳೆಯವರ ಅಭಿನಂದನ ಸಂಪುಟ ‘ಧರಿಯ ಸಿರಿ’ ಬಿಡುಗಡೆಗೊಳಿಸಿ ಮಾತನಾಡಿದರು. </p><p>ವಿದ್ಯಾವಂತರು, ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಕನ್ನಡವೇಕೆ ಬೆಳೆಯುತ್ತಿಲ್ಲ. ಕನ್ನಡ ಬೆಳೆಸಬೇಕಾದ ಸರ್ಕಾರಕ್ಕೆ, ಕನ್ನಡಿಗರಿಗೆ ಕನ್ನಡ ಬೇಕಿಲ್ಲ ಎಂದು ಹೇಳಿದರು.</p><p>ಕನ್ನಡ ಬೆಳೆಸುವಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಕೊಡುಗೆ ದೊಡ್ಡದಿದೆ. ನಿಜಾಮನ ಕಾಲದಲ್ಲಿ ಹೊರಗೆ ಉರ್ದು ನಾಮಫಲಕವಾಗಿ ಒಳಗೆ ಕನ್ನಡ ಕಲಿಸುತ್ತಿದ್ದರು. ಆ ಮಠ ನನಗೆ ಪ್ರೇರಣೆ. ಅದಕ್ಕಾಗಿಯೇ ನಾನು ಬೀದರ್ ಜಿಲ್ಲೆಯ ಪ್ರವಾಸವನ್ನು ಅಲ್ಲಿಂದಲೇ ಆರಂಭಿಸಿದ್ದೇನೆ ಎಂದು ತಿಳಿಸಿದರು.</p><p>ಜಗನ್ನಾಥ ಹೆಬ್ಬಾಳೆಯವರನ್ನು ನಾನು 35 ವರ್ಷಗಳಿಂದ ಬಲ್ಲೆ. ಕನ್ನಡಕ್ಕಾಗಿ ಸುಮಾರು 45 ವರ್ಷಗಳ ಕಾಲ ಕೆಲಸ ಮಾಡಿದ ಅವರನ್ನು ಗೌರವಿಸಬೇಕಾದುದು ಎಲ್ಲರ ಕರ್ತವ್ಯ. ಕನ್ನಡ ಭಾಷೆಯನ್ನು ಹೇಗೆ ಕಟ್ಟಬೇಕೆಂದು ಅವರು ತೋರಿಸಿದ್ದಾರೆ. ಅವರು ಲೇಖಕರು ಹೌದು, ಕನ್ನಡದ ಪರಿಚಾರಕರು ಹೌದು. ಕನ್ನಡದ ಪ್ರಸಾರಕ್ಕಾಗಿ ಕರ್ನಾಟಕ ಸಂಘವನ್ನು ಕಟ್ಟಿದ್ದಾರೆ. ಕಥೆ, ಕಾವ್ಯಗಳನ್ನು ಬರೆದಿದ್ದಾರೆ. ಅನೇಕ ವಿದ್ವಾಂಸರನ್ನು ಗಡಿ ಜಿಲ್ಲೆ ಬೀದರ್ಗೆ ಕರೆಸಿದ್ದಾರೆ. ಅನೇಕ ಆಡಳಿತಾತ್ಮಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಪ್ರಾಧ್ಯಾಪಕರಾಗಿದ್ದರೂ ಪಾಠ–ಪ್ರವಚನಕ್ಕೆ ಸೀಮಿತರಾಗದೆ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. </p><p>ಕಾರ್ಯಕ್ರಮ ಉದ್ಘಾಟಿಸಿ ಸಂಸದ ಸಾಗರ ಖಂಡ್ರೆ ಮಾತನಾಡಿ, ಹೆಬ್ಬಾಳೆ ಅವರು ಪಕ್ಷಾತೀತವಾಗಿ ಕನ್ನಡದ ಕೆಲಸ ಮಾಡಿದ್ದಾರೆ. ಇದು ನನ್ನೊಬ್ಬನ ಅಭಿಪ್ರಾಯವಲ್ಲ. ಬಹುತೇಕರು ಅವರ ಬಗ್ಗೆ ಇದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ ಎಂದರು.</p><p>ಹಿರಿಯರು ಮಾಡಿರುವ ಕೆಲಸದಿಂದ ಯುವಕರಾದವರು ಸಾಕಷ್ಟು ಕಲಿಯುವುದು ಇರುತ್ತದೆ. ಅದರಿಂದ ನಮಗೆ ಮಾರ್ಗದರ್ಶನ ಸಿಗುತ್ತದೆ. ಹಿರಿಯರ ಹೋರಾಟ, ಸಂಘಟನೆ, ವಿವಿಧ ಕ್ಷೇತ್ರಗಳಿಗೆ ಕೊಟ್ಟಿರುವ ಕೊಡುಗೆಗಳನ್ನು ಓದಿದರೆ ಅದರಿಂದ ಪ್ರೇರಣೆ ಪಡೆದು ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.</p><p>ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ ಮಾತನಾಡಿ, ಕರ್ನಾಟಕ ಸಾಹಿತ್ಯ ಸಂಘದ ಪರ್ಯಾಯ ಹೆಸರು ಜಗನ್ನಾಥ ಹೆಬ್ಬಾಳೆ. ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಇವರ ಕೊಡುಗೆ ದೊಡ್ಡದು ಎಂದು ಹೇಳಿದರು.</p><p>ಜಗನ್ನಾಥ ಹೆಬ್ಬಾಳೆ ಮಾತನಾಡಿ, ನನ್ನ ಪಾಲಿಗೆ ಕೆಆರ್ಇ ಸಂಸ್ಥೆ ನನ್ನ ಎರಡನೇ ತಾಯಿ. ನನ್ನ ಹೆಂಡತಿ, ನನ್ನ ಅತ್ತೆ–ಮಾವ ನನಗೆ ಅಪಾರ ಪ್ರೀತಿ ಕೊಟ್ಟು ನನ್ನ ಬೆಳವಣಿಗೆಗೆ ಕಾರಣರಾಗಿದ್ದಾರೆ. ಕುಲಪತಿ ಆಗಬೇಕೆಂಬ ಕನಸಿದೆ. ಭಗವಂತನ ಆಶೀರ್ವಾದದಿಂದ ಅವಕಾಶ ಸಿಕ್ಕರೆ ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.</p><p>ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಬಸವಕಲ್ಯಾಣದ ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರದ ಅಧ್ಯಕ್ಷೆ ಗಂಗಾಂಬಿಕೆ ಅಕ್ಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ ಹಾನಗಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಅಭಿನಂದನ ಸಂಪುಟದ ಪ್ರಧಾನ ಸಂಪಾದಕ ಕಲ್ಯಾಣರಾವ ಪಾಟೀಲ, ಶಂಭುಲಿಂಗ ಕಾಮಣ್ಣ, ಸಾವಿತ್ರಿ ಹೆಬ್ಬಾಳೆ, ಎಂಜಿನಿಯರ್ಗಳಾದ ಅಪ್ಪರಾವ ಗುನ್ನಳ್ಳಿ, ಶಿವರಾಜ ಸೂರೆ, ಚಂದ್ರಶೇಖರ ಹೆಬ್ಬಾಳೆ, ಅಭಿನಂದನ ಸಮಿತಿ ಕಾರ್ಯದರ್ಶಿ ಸಂಜೀವಕುಮಾರ ಜುಮ್ಮಾ, ಮಹಾದೇವಿ ಹೆಬ್ಬಾಳೆ, ರಾಜಕುಮಾರ ಹೆಬ್ಬಾಳೆ, ಮಹಾರುದ್ರ ಡಾಕುಳಗಿ ಹಾಜರಿದ್ದರು. ಶಿವಕುಮಾರ ಪಂಚಾಳ ಗೀತ ಗಾಯನ ನಡೆಸಿಕೊಟ್ಟರು. </p><p><strong>‘ಧರಿಯ ಸಿರಿ’ ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಕೃತಿ</strong></p><p>ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ವಿಕ್ರಮ ವಿಸಾಜಿ ಕೃತಿ ಕುರಿತು ಮಾತನಾಡಿ, ‘ಧರಿಯ ಸಿರಿ’ ಹೆಬ್ಬಾಳೆ ಅವರಿಗೆ ಸಂಬಂಧಿಸಿದ ಪುಸ್ತಕವಲ್ಲ. ಇದು ಬೀದರ್ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಕೃತಿಯಾಗಿದೆ. ಸಾಮಾನ್ಯವಾಗಿ ಅಭಿನಂದನ ಗ್ರಂಥದಲ್ಲಿ ವ್ಯಕ್ತಿಯ ವಿಜೃಂಭಣೆ ಢಾಳಾಗಿ ಇರುತ್ತದೆ. ಆದರೆ, ಇದು ಅದಕ್ಕೆ ವ್ಯತಿರಿಕ್ತವಾಗಿದೆ ಎಂದರು.</p><p>ಹೆಬ್ಬಾಳೆ ಅವರ ಒಡನಾಡಿಗಳು, ಗುರುಗಳು, ಕುಟುಂಬ, ಸಂಶೋಧನಾ ವಿದ್ಯಾರ್ಥಿಗಳು, ಹೆಬ್ಬಾಳೆ ಹಾಗೂ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿಯ ಅವಲೋಕನ ಮಾಡಿದ್ದಾರೆ. ಹೆಬ್ಬಾಳೆ ಅವರ ಜೀವನದಲ್ಲಿ ವಚನ ಚಳವಳಿ, ಶರಣ ಧರ್ಮದ ಮೌಲ್ಯಗಳಿವೆ. ಅವಿಭಕ್ತ ಕುಟುಂಬದ ಪ್ರಜ್ಞೆ, ಶ್ರಮ ಸಂಸ್ಕೃತಿ ಇದೆ ಎಂದು ವಿವರಿಸಿದರು.</p><p>ಎಷ್ಟೇ ಟೀಕೆಗಳು, ಆರೋಪಗಳು ಬಂದರೂ ಹೆಬ್ಬಾಳೆ ಅವರು ನಿರಂತರವಾಗಿ ಕನ್ನಡದ ಕೆಲಸ ಮಾಡುತ್ತ ಬಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಗೌರವದ ಜೊತೆಗೆ ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕಾಗುತ್ತದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>