<p><strong>ಬೀದರ್</strong>: ‘ಬುದ್ದ, ಬಸವ, ಅಂಬೇಡ್ಕರ್ ಮತ್ತು ಗಾಂಧಿ ಅವರಂತೆ ವೈಚಾರಿಕ ದೃಷ್ಟಿಕೋನವನ್ನು ಬಿತ್ತುತ್ತ ಸಮಾನತೆ, ಮಾನವೀಯತೆ ಮತ್ತು ಜೀವನಪ್ರೀತಿಯ ಮಂತ್ರ ಪಠಿಸಿ ಅದನ್ನು ಪ್ರೇರೇಪಿಸಿದವರು ಕುವೆಂಪು’ ಎಂದು ಬೀದರ್ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಜಗನ್ನಾಥ ಹೆಬ್ಬಾಳೆ ತಿಳಿಸಿದರು.</p>.<p>ನಗರದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.</p>.<p>ರಾಜ್ಯದಲ್ಲಿ ಜ್ಞಾನಪೀಠ ಹಾಗೂ ಸಾಹಿತ್ಯ ಪ್ರಶಸ್ತಿ ಪಡೆದವರಲ್ಲಿ ಕುವೆಂಪು ಅವರು ಮೊದಲಿಗರು. ತಮ್ಮ ಸಾಹಿತ್ಯದಲ್ಲಿ ಮೌಢ್ಯತೆ ಹಾಗೂ ಜಾತಿಯತೆಗೆ ಯಾವುದೇ ಸ್ಥಾನ ನೀಡಿಲ್ಲ. ಅವರು ಮನುಷ್ಯ ಜಾತಿ ಒಂದೇ ಎಂದು ಹೇಳಿದರು.</p>.<p>ಕೇಂದ್ರದ ಅತಿಥಿ ಉಪನ್ಯಾಸಕಿ ಸುನೀತಾ ಕೂಡ್ಲಿಕರ್ ಮಾತನಾಡಿ, ಕುವೆಂಪು ಅವರು ನೋಡುವ ದೃಷ್ಟಿ ವೈಚಾರಿಕತೆಯಿಂದ ಕೂಡಿರುತ್ತಿತ್ತು. ಅವರು ಸರ್ವರಿಗೂ ಸಮಬಾಳು ಎಂದು ತಮ್ಮ ಸಾಹಿತ್ಯದಲ್ಲಿಯೇ ಬರೆದಿದ್ದಾರೆ ಎಂದರು.</p>.<p>ಎಸ್.ಬಿ. ಕುಚಬಾಳ, ಕೇಂದ್ರದ ಉಪನ್ಯಾಸಕ ಗೋರಖನಾಥ, ಶಿವಶರಣಪ್ಪ ಗಣೇಶಪೂರ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ಬುದ್ದ, ಬಸವ, ಅಂಬೇಡ್ಕರ್ ಮತ್ತು ಗಾಂಧಿ ಅವರಂತೆ ವೈಚಾರಿಕ ದೃಷ್ಟಿಕೋನವನ್ನು ಬಿತ್ತುತ್ತ ಸಮಾನತೆ, ಮಾನವೀಯತೆ ಮತ್ತು ಜೀವನಪ್ರೀತಿಯ ಮಂತ್ರ ಪಠಿಸಿ ಅದನ್ನು ಪ್ರೇರೇಪಿಸಿದವರು ಕುವೆಂಪು’ ಎಂದು ಬೀದರ್ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಜಗನ್ನಾಥ ಹೆಬ್ಬಾಳೆ ತಿಳಿಸಿದರು.</p>.<p>ನಗರದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶ್ವ ಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.</p>.<p>ರಾಜ್ಯದಲ್ಲಿ ಜ್ಞಾನಪೀಠ ಹಾಗೂ ಸಾಹಿತ್ಯ ಪ್ರಶಸ್ತಿ ಪಡೆದವರಲ್ಲಿ ಕುವೆಂಪು ಅವರು ಮೊದಲಿಗರು. ತಮ್ಮ ಸಾಹಿತ್ಯದಲ್ಲಿ ಮೌಢ್ಯತೆ ಹಾಗೂ ಜಾತಿಯತೆಗೆ ಯಾವುದೇ ಸ್ಥಾನ ನೀಡಿಲ್ಲ. ಅವರು ಮನುಷ್ಯ ಜಾತಿ ಒಂದೇ ಎಂದು ಹೇಳಿದರು.</p>.<p>ಕೇಂದ್ರದ ಅತಿಥಿ ಉಪನ್ಯಾಸಕಿ ಸುನೀತಾ ಕೂಡ್ಲಿಕರ್ ಮಾತನಾಡಿ, ಕುವೆಂಪು ಅವರು ನೋಡುವ ದೃಷ್ಟಿ ವೈಚಾರಿಕತೆಯಿಂದ ಕೂಡಿರುತ್ತಿತ್ತು. ಅವರು ಸರ್ವರಿಗೂ ಸಮಬಾಳು ಎಂದು ತಮ್ಮ ಸಾಹಿತ್ಯದಲ್ಲಿಯೇ ಬರೆದಿದ್ದಾರೆ ಎಂದರು.</p>.<p>ಎಸ್.ಬಿ. ಕುಚಬಾಳ, ಕೇಂದ್ರದ ಉಪನ್ಯಾಸಕ ಗೋರಖನಾಥ, ಶಿವಶರಣಪ್ಪ ಗಣೇಶಪೂರ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>