<p><strong>ಬಸವಕಲ್ಯಾಣ:</strong> ‘ಸ್ವಾವಲಂಬನೆ ಕಲಿಸುವುದು ಶಿಕ್ಷಣದ ಉದ್ದೇಶ ಆಗಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ ಹೇಳಿದರು.</p>.<p>ನಗರದ ಪುಣ್ಯಕೋಟಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಎಸ್ಎಲ್ಸಿ, ಪಿಯುನಲ್ಲಿ ಹೆ್ಚಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಸೂರ್ಯಕಾಂತ ಶೀಲವಂತ ಮಾತನಾಡಿ, ‘ಸತತ ಪರಿಶ್ರಮದಿಂದ ಯಶಸ್ಸು ದೊರಕಬಲ್ಲದು. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರಿದಾಗ ಮಾತ್ರ ತಂದೆ ತಾಯಿ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ಬರುತ್ತದೆ’ ಎಂದು ಹೇಳಿದರು.</p>.<p>ಸಂಸ್ಥೆ ಕೋಶಾಧ್ಯಕ್ಷ ಶಶಿಕಾಂತ ಶೀಲವಂತ, ನಿರ್ದೇಶಕಿ ಸುರೇಖಾ ಶೀಲವಂತ, ಪ್ರತಿಭಾ ಬಸವರಾಜ, ಮಾಯಾದೇವಿ ಸುಖದೇವ, ಅಶ್ವಿನಕುಮಾರ, ಮಾಲಶ್ರೀ ದಶರಥ ಮಾತನಾಡಿದರು.</p>.<p>ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 577 ಅಂಕ ಪಡೆದ ಮಂಜುಳಾ ಗುಂಡಪ್ಪ ಮತ್ತು ವಾಣಿಜ್ಯ ವಿಭಾಗದಲ್ಲಿ 570 ಅಂಕ ಪಡೆದ ಸಾಗರ ಸೀತಾರಾಮ ಇವರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಅವರ ಪಾಲಕರನ್ನೂ ಗೌರವಿಸಲಾಯಿತು.</p>.<p>ಉಪನ್ಯಾಸಕರಾದ ಅಶೋಕ ಪೋತೆ, ಪ್ರಫುಲಕುಮಾರ, ಮಹಾದೇವಿ ದಾಸೂರೆ, ಸ್ವಪ್ನಾ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ‘ಸ್ವಾವಲಂಬನೆ ಕಲಿಸುವುದು ಶಿಕ್ಷಣದ ಉದ್ದೇಶ ಆಗಬೇಕು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ ಹೇಳಿದರು.</p>.<p>ನಗರದ ಪುಣ್ಯಕೋಟಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಎಸ್ಎಲ್ಸಿ, ಪಿಯುನಲ್ಲಿ ಹೆ್ಚಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಸೂರ್ಯಕಾಂತ ಶೀಲವಂತ ಮಾತನಾಡಿ, ‘ಸತತ ಪರಿಶ್ರಮದಿಂದ ಯಶಸ್ಸು ದೊರಕಬಲ್ಲದು. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರಿದಾಗ ಮಾತ್ರ ತಂದೆ ತಾಯಿ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ಬರುತ್ತದೆ’ ಎಂದು ಹೇಳಿದರು.</p>.<p>ಸಂಸ್ಥೆ ಕೋಶಾಧ್ಯಕ್ಷ ಶಶಿಕಾಂತ ಶೀಲವಂತ, ನಿರ್ದೇಶಕಿ ಸುರೇಖಾ ಶೀಲವಂತ, ಪ್ರತಿಭಾ ಬಸವರಾಜ, ಮಾಯಾದೇವಿ ಸುಖದೇವ, ಅಶ್ವಿನಕುಮಾರ, ಮಾಲಶ್ರೀ ದಶರಥ ಮಾತನಾಡಿದರು.</p>.<p>ದ್ವಿತೀಯ ಪಿಯು ಕಲಾ ವಿಭಾಗದಲ್ಲಿ 577 ಅಂಕ ಪಡೆದ ಮಂಜುಳಾ ಗುಂಡಪ್ಪ ಮತ್ತು ವಾಣಿಜ್ಯ ವಿಭಾಗದಲ್ಲಿ 570 ಅಂಕ ಪಡೆದ ಸಾಗರ ಸೀತಾರಾಮ ಇವರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಅವರ ಪಾಲಕರನ್ನೂ ಗೌರವಿಸಲಾಯಿತು.</p>.<p>ಉಪನ್ಯಾಸಕರಾದ ಅಶೋಕ ಪೋತೆ, ಪ್ರಫುಲಕುಮಾರ, ಮಹಾದೇವಿ ದಾಸೂರೆ, ಸ್ವಪ್ನಾ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.<br><br></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>