<p>ಬೀದರ್: ‘ಮಾದಿಗ ಸಮಾಜದವರಲ್ಲಿ ಐಕ್ಯತೆ ಮೂಡಿಸಲು ಮಾದಿಗ ಸಂಘಟನೆಗಳ ಬೃಹತ್ ಐಕ್ಯತೆ ಸಮಾವೇಶ ಫೆ. 29ರಂದು ನಗರದ ನೌಬಾದ್ ಸಮೀಪದ ಡಾ. ಬಾಬು ಜಗಜೀವನರಾಂ ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಮಾದಿಕ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್ ತಿಳಿಸಿದರು.</p>.<p>ಸಮಾಜದವರ ಸಾಂವಿಧಾನಿಕ ಹಕ್ಕುಗಳ ಕುರಿತು ಸಮಾವೇಶದಲ್ಲಿ ಜಾಗೃತಿ ಮೂಡಿಸಲಾಗುವುದು. ಆದ್ಯ ವಚನಕಾರ ಶಿವಶರಣ ಮಾದಾರ ಚೆನ್ನಯ್ಯನವರ 973ನೇ ಜಯಂತಿ ಉತ್ಸವ, ಅನ್ನದಾಸೋಹ ಮತ್ತು ದಿನದರ್ಶಿಕೆ ಬಿಡುಗಡೆ ಕೂಡ ಮಾಡಲಾಗುವುದು ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.</p>.<p>ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಹಂಪಿಯ ಪೂರ್ಣಾನಂದ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ಕೇಂದ್ರ ಸಚಿವ ನಾರಾಯಣಸ್ವಾಮಿ, ಸಮಾಜದ ಪ್ರಮುಖರು ಪಾಲ್ಗೊಳ್ಳುವರು ಎಂದು ತಿಳಿಸಿದರು.</p>.<p>ಮಾದಾರ ಚೆನ್ನಯ್ಯ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರಮೇಶ ಕಟ್ಟಿತೂಗಾಂವ ಮಾತನಾಡಿ, ನಾವು ಯಾವುದೇ ಪಕ್ಷದ ಹಿತೈಷಿಗಳಲ್ಲ. ಇದು ಸಮಾಜದ ಕಾರ್ಯಕ್ರಮ. ಹನ್ನೆರಡನೇ ಶತಮಾನದಲ್ಲಿ ಶರಣ ಮಾದಾರ ಚೆನ್ನಯ್ಯನವರು ದಾಸೋಹ ಸೇವೆ ಮೂಡುವುದರ ಮೂಲಕ ಹೆಸರಾಗಿದ್ದರು ಎಂದರು. </p>.<p>ಮಾದಾರ ಚೆನ್ನಯ್ಯನವರು ಗಂಜಿ ದಾಸೋಹ ಮಾಡುತ್ತಿದ್ದರು. ಅದನ್ನು ನೋಡಲು ಸ್ವತಃ ಬಸವಣ್ಣನವರು ಅವರ ಮನೆಗೆ ಹೋಗಿದ್ದರು. ಚೆನ್ನಯ್ಯನವರು ಗಂಜಿ ದಾಸೋಹ ನಡೆಸಿದ ಸ್ಥಳವೇ ಬಸವಕಲ್ಯಾಣದ ಗಂಜಿ ಕೆರೆ. ಅಲ್ಲೀಗ ಕಟ್ಟಡಗಳು ತಲೆ ಎತ್ತಿವೆ. ಹನ್ನೆರಡನೇ ಶತಮಾನದಲ್ಲಿ 770 ಅಮರಗಣಂಗಳಲ್ಲಿ ಚೆನ್ನಯ್ಯನವರು ಪ್ರಮುಖರು. ಜಗತ್ತಿನ ಮೊಟ್ಟ ಮೊದಲ ಸಂಸತ್ತು ಅನುಭವ ಮಂಟಪದ ಚರ್ಚಾಗೋಷ್ಠಿಗಳಲ್ಲಿ ಚೆನ್ನಯ್ಯನವರು ಭಾಗವಹಿಸುತ್ತಿದ್ದರು. ಸಮಾವೇಶದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಲಾಗುವುದು ಎಂದು ಹೇಳಿದರು.</p>.<p>ಅಸೋಸಿಯೇಷನ್ ಜಿಲ್ಲಾ ಗೌರವ ಅಧ್ಯಕ್ಷ ಇಮ್ಯಾನುವೆಲ್ ದರ್ಬಾರೆ, ಅಧ್ಯಕ್ಷ ಕಮಲ ಹಾಸನ್ ಭಾವಿದೊಡ್ಡಿ, ಉಪಾಧ್ಯಕ್ಷರಾದ ಸಂಜು ಉಜಿನಿ, ಘಾಳೆಪ್ಪ ಅಂತಿ, ಪ್ರಮುಖರಾದ ಭೀಮಶಾ ಎಲ್. ಹೆಗಡೆ, ಜೇಮ್ಸ್ ಇಸ್ಲಾಂಪೂರ, ಧನರಾಜ ಮೇತ್ರೆ, ಸುಶೀಲಕುಮಾರ ಕೆಂಪೆನೋರ್, ನೋಹನ್ ಮಾಳಗೆ, ಸುರೇಶ ದೊಡ್ಡಿ, ನವೀನ್ಕುಮಾರ ಅಲ್ಲಾಪುರೆ, ಶಿವರಾಜ ನೆಳವಾಲಕರ್, ಸ್ವಾಮಿದಾಸ ಅತಿವಾಳೆ, ನರ್ಸಿಂಗ್ ಮಿರ್ಜಾಪುರ, ಸುಧಾಕರ ಬೆನಕನಳ್ಳಿ, ಉಮೇಶ ಅಡ್ಡೆ, ಯೇಶಪ್ಪ ಶೆಂಬೆಳ್ಳಿ ಹಾಜರಿದ್ದರು.</p>.<p>ಸಾಂವಿಧಾನಿಕ ಹಕ್ಕುಗಳ ಅರಿವು ಮಾದಾರ ಚೆನ್ನಯ್ಯ ಜಯಂತಿ ಚಿತ್ರದುರ್ಗ, ಹಂಪಿ ಶ್ರೀ ಭಾಗಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ‘ಮಾದಿಗ ಸಮಾಜದವರಲ್ಲಿ ಐಕ್ಯತೆ ಮೂಡಿಸಲು ಮಾದಿಗ ಸಂಘಟನೆಗಳ ಬೃಹತ್ ಐಕ್ಯತೆ ಸಮಾವೇಶ ಫೆ. 29ರಂದು ನಗರದ ನೌಬಾದ್ ಸಮೀಪದ ಡಾ. ಬಾಬು ಜಗಜೀವನರಾಂ ಸಮುದಾಯ ಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ಮಾದಿಕ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ್ ತಿಳಿಸಿದರು.</p>.<p>ಸಮಾಜದವರ ಸಾಂವಿಧಾನಿಕ ಹಕ್ಕುಗಳ ಕುರಿತು ಸಮಾವೇಶದಲ್ಲಿ ಜಾಗೃತಿ ಮೂಡಿಸಲಾಗುವುದು. ಆದ್ಯ ವಚನಕಾರ ಶಿವಶರಣ ಮಾದಾರ ಚೆನ್ನಯ್ಯನವರ 973ನೇ ಜಯಂತಿ ಉತ್ಸವ, ಅನ್ನದಾಸೋಹ ಮತ್ತು ದಿನದರ್ಶಿಕೆ ಬಿಡುಗಡೆ ಕೂಡ ಮಾಡಲಾಗುವುದು ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.</p>.<p>ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ, ಹಂಪಿಯ ಪೂರ್ಣಾನಂದ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ. ಕೇಂದ್ರ ಸಚಿವ ನಾರಾಯಣಸ್ವಾಮಿ, ಸಮಾಜದ ಪ್ರಮುಖರು ಪಾಲ್ಗೊಳ್ಳುವರು ಎಂದು ತಿಳಿಸಿದರು.</p>.<p>ಮಾದಾರ ಚೆನ್ನಯ್ಯ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ರಮೇಶ ಕಟ್ಟಿತೂಗಾಂವ ಮಾತನಾಡಿ, ನಾವು ಯಾವುದೇ ಪಕ್ಷದ ಹಿತೈಷಿಗಳಲ್ಲ. ಇದು ಸಮಾಜದ ಕಾರ್ಯಕ್ರಮ. ಹನ್ನೆರಡನೇ ಶತಮಾನದಲ್ಲಿ ಶರಣ ಮಾದಾರ ಚೆನ್ನಯ್ಯನವರು ದಾಸೋಹ ಸೇವೆ ಮೂಡುವುದರ ಮೂಲಕ ಹೆಸರಾಗಿದ್ದರು ಎಂದರು. </p>.<p>ಮಾದಾರ ಚೆನ್ನಯ್ಯನವರು ಗಂಜಿ ದಾಸೋಹ ಮಾಡುತ್ತಿದ್ದರು. ಅದನ್ನು ನೋಡಲು ಸ್ವತಃ ಬಸವಣ್ಣನವರು ಅವರ ಮನೆಗೆ ಹೋಗಿದ್ದರು. ಚೆನ್ನಯ್ಯನವರು ಗಂಜಿ ದಾಸೋಹ ನಡೆಸಿದ ಸ್ಥಳವೇ ಬಸವಕಲ್ಯಾಣದ ಗಂಜಿ ಕೆರೆ. ಅಲ್ಲೀಗ ಕಟ್ಟಡಗಳು ತಲೆ ಎತ್ತಿವೆ. ಹನ್ನೆರಡನೇ ಶತಮಾನದಲ್ಲಿ 770 ಅಮರಗಣಂಗಳಲ್ಲಿ ಚೆನ್ನಯ್ಯನವರು ಪ್ರಮುಖರು. ಜಗತ್ತಿನ ಮೊಟ್ಟ ಮೊದಲ ಸಂಸತ್ತು ಅನುಭವ ಮಂಟಪದ ಚರ್ಚಾಗೋಷ್ಠಿಗಳಲ್ಲಿ ಚೆನ್ನಯ್ಯನವರು ಭಾಗವಹಿಸುತ್ತಿದ್ದರು. ಸಮಾವೇಶದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಲಾಗುವುದು ಎಂದು ಹೇಳಿದರು.</p>.<p>ಅಸೋಸಿಯೇಷನ್ ಜಿಲ್ಲಾ ಗೌರವ ಅಧ್ಯಕ್ಷ ಇಮ್ಯಾನುವೆಲ್ ದರ್ಬಾರೆ, ಅಧ್ಯಕ್ಷ ಕಮಲ ಹಾಸನ್ ಭಾವಿದೊಡ್ಡಿ, ಉಪಾಧ್ಯಕ್ಷರಾದ ಸಂಜು ಉಜಿನಿ, ಘಾಳೆಪ್ಪ ಅಂತಿ, ಪ್ರಮುಖರಾದ ಭೀಮಶಾ ಎಲ್. ಹೆಗಡೆ, ಜೇಮ್ಸ್ ಇಸ್ಲಾಂಪೂರ, ಧನರಾಜ ಮೇತ್ರೆ, ಸುಶೀಲಕುಮಾರ ಕೆಂಪೆನೋರ್, ನೋಹನ್ ಮಾಳಗೆ, ಸುರೇಶ ದೊಡ್ಡಿ, ನವೀನ್ಕುಮಾರ ಅಲ್ಲಾಪುರೆ, ಶಿವರಾಜ ನೆಳವಾಲಕರ್, ಸ್ವಾಮಿದಾಸ ಅತಿವಾಳೆ, ನರ್ಸಿಂಗ್ ಮಿರ್ಜಾಪುರ, ಸುಧಾಕರ ಬೆನಕನಳ್ಳಿ, ಉಮೇಶ ಅಡ್ಡೆ, ಯೇಶಪ್ಪ ಶೆಂಬೆಳ್ಳಿ ಹಾಜರಿದ್ದರು.</p>.<p>ಸಾಂವಿಧಾನಿಕ ಹಕ್ಕುಗಳ ಅರಿವು ಮಾದಾರ ಚೆನ್ನಯ್ಯ ಜಯಂತಿ ಚಿತ್ರದುರ್ಗ, ಹಂಪಿ ಶ್ರೀ ಭಾಗಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>