ನೃತ್ಯಾಂಗನ ನಾಟ್ಯ ಕಲಾ ತಂಡದವರು ಸಮೂಹ ವಚನ ನೃತ್ಯ ಪ್ರಸ್ತುತಪಡಿಸಿದರು
ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬಸವಲಿಂಗ ಪಟ್ಟದ್ದೇವರು ಬಸವತತ್ವದ ನಿಜ ಮೂರ್ತಿ. ಮಠದ ಗುರುಗಳು ಮನದ ಗುರುಗಳು ಪಟ್ಟದ್ದೇವರು
. –ಅಕ್ಕ ಗಂಗಾಂಬಿಕೆ ಅಧ್ಯಕ್ಷೆ ಬಸವ ಸೇವಾ ಪ್ರತಿಷ್ಠಾನ
ಕನ್ನಡ ತತ್ವ ವೈಚಾರಿಕತೆ ಬೆಳೆಸಿದವರು ಬಸವಾದಿ ಶರಣರು. ಅದನ್ನು ಮುಂದುವರೆಸುತ್ತಿರುವವರು ಪಟ್ಟದ್ಧೇವರು.
–ಬಸವರಾಜ ಬಲ್ಲೂರ ಲೇಖಕ
ಬಸವಲಿಂಗ ಪಟ್ಟದ್ದೇವರು ಮತ್ತು ಮಾಗನೂರು ಬಸಪ್ಪನವರು ಬಡತನದಲ್ಲಿ ಬೆಳೆದು ಅನೇಕರ ಬಾಳು ಹಸನಾಗಿಸಿದ್ದಾರೆ.
–ಶಿವಾನಂದ ಸ್ವಾಮೀಜಿ ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠ
‘ಲಿಂಗಾನಂದ ಸ್ವಾಮೀಜಿ ಪ್ರವಚನದ ದೊಡ್ಡ ಪರಿಣಾಮ’
‘ನಾನು 9ನೇ ತರಗತಿಯಲ್ಲಿದ್ದಾಗ ಔರಾದ್ನಲ್ಲಿ ಅಮರೇಶ್ವರ ದೇವಸ್ಥಾನದ ಬಳಿ ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿಯವರು ನಡೆಸಿಕೊಡುತ್ತಿದ್ದ ಪ್ರವಚನ ಕೇಳಿದ ನಂತರ ನನ್ನ ಮೇಲೆ ದೊಡ್ಡ ಪರಿಣಾಮ ಉಂಟಾಯಿತು. ನಾನು ಬಹುದೇವೋಪಾಸನೆಯನ್ನು ತೊರೆದು ಇಷ್ಟಲಿಂಗ ಸರ್ವಸ್ವ ಎಂದು ಭಾವಿಸಿ ಅದನ್ನು ಆಚರಣೆಗೆ ತಂದೆ’ ಎಂದು ಬಸವಲಿಂಗ ಪಟ್ಟದ್ದೇವರು ಹಳೆಯ ದಿನಗಳನ್ನು ಮೆಲುಕು ಹಾಕಿದರು. ‘ಭಾಲ್ಕಿ ಹಿರೇಮಠಕ್ಕೆ ನಾನು ಓದಲು ಹೋಗಿದ್ದೆ. ಆದರೆ ನನ್ನ ಆಸಕ್ತಿ ಕಂಡು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ನನಗೆ ದೀಕ್ಷೆ ಕೊಟ್ಟು ಗುರು ಸ್ಥಾನ ಕೊಟ್ಟರು. ನಂತರ ಭಾಲ್ಕಿ ಮಠವನ್ನು ನೋಡಿಕೊಳ್ಳಬೇಕೆಂದು ಜವಾಬ್ದಾರಿ ವಹಿಸಿದರು. ಆದರೆ ನನ್ನ ಕುಟುಂಬ ಸದಸ್ಯರಿಗೆ ನನ್ನೂರಿನವರಿಗೆ ಅದು ಬೇಡವಾಗಿತ್ತು. ಆದರೆ ದೈವದ ಕರೆ ಬೇರೆಯಾಗಿತ್ತು’ ಎಂದು ಸ್ಮರಿಸಿದರು.