<p><strong>ಹುಮನಾಬಾದ್</strong> (ಬೀದರ್ ಜಿಲ್ಲೆ): ಮಾಣಿಕ್ ಪ್ರಭು ಅಂಧ ಮಕ್ಕಳ ವಸತಿ ಶಾಲೆಯ ಬೆಳ್ಳಿ ಮಹೋತ್ಸವ ಅಂಗವಾಗಿ ಫೆ. 8ರಿಂದ 11ರವರೆಗೆ ರಾಷ್ಟ್ರಮಟ್ಟದ ಚೆಸ್ ಟೂರ್ನಿಯನ್ನು ತಾಲ್ಲೂಕಿನ ಮಾಣಿಕ್ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥಾನದ ಅಧ್ಯಕ್ಷ ಆನಂದರಾಜ್ ಮಾಣಿಕ್ ಪ್ರಭು ತಿಳಿಸಿದರು.</p>.<p>ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆಯ 10 ವಿದ್ಯಾರ್ಥಿಗಳು, ರಾಜ್ಯದ ವಿವಿಧ ಜಿಲ್ಲೆಗಳ 50 ಜನರು, ಹೊರ ರಾಜ್ಯಗಳ 210 ಸ್ಪರ್ಧಿಗಳು ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.</p>.<p>₹15 ಸಾವಿರ ನಗದು ಮೊದಲ ಬಹುಮಾನ, ₹10 ಸಾವಿರ ದ್ವಿತೀಯ ಹಾಗೂ ₹8 ಸಾವಿರ ತೃತೀಯ ಬಹುಮಾನ ನೀಡಲಾಗುವುದು. ನಾಲ್ಕನೇ ಸ್ಥಾನ ಪಡೆದವರಿಗೆ ₹7 ಸಾವಿರ, ಐದನೇ ಸ್ಥಾನಕ್ಕೆ ₹6 ಸಾವಿರ, ಆರನೇ ಸ್ಥಾನಕ್ಕೆ ₹5 ಸಾವಿರ, ಏಳನೇ ಸ್ಥಾನಕ್ಕೆ ₹4 ಸಾವಿರ, ಎಂಟನೇ ಸ್ಥಾನಕ್ಕೆ ₹3 ಸಾವಿರ, ಒಂಬತ್ತರಿಂದ 13ನೇ ಸ್ಥಾನ ಪಡೆದವರಿಗೆ ತಲಾ ₹2 ಸಾವಿರ, 14ರಿಂದ 25ನೇ ಸ್ಥಾನ ಪಡೆದವರಿಗೆ ತಲಾ ₹1 ಸಾವಿರ ನಗದು ವಿತರಿಸಲಾಗುವುದು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್</strong> (ಬೀದರ್ ಜಿಲ್ಲೆ): ಮಾಣಿಕ್ ಪ್ರಭು ಅಂಧ ಮಕ್ಕಳ ವಸತಿ ಶಾಲೆಯ ಬೆಳ್ಳಿ ಮಹೋತ್ಸವ ಅಂಗವಾಗಿ ಫೆ. 8ರಿಂದ 11ರವರೆಗೆ ರಾಷ್ಟ್ರಮಟ್ಟದ ಚೆಸ್ ಟೂರ್ನಿಯನ್ನು ತಾಲ್ಲೂಕಿನ ಮಾಣಿಕ್ ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥಾನದ ಅಧ್ಯಕ್ಷ ಆನಂದರಾಜ್ ಮಾಣಿಕ್ ಪ್ರಭು ತಿಳಿಸಿದರು.</p>.<p>ಮಾಣಿಕ್ ಪ್ರಭು ಅಂಧ ಮಕ್ಕಳ ಶಾಲೆಯ 10 ವಿದ್ಯಾರ್ಥಿಗಳು, ರಾಜ್ಯದ ವಿವಿಧ ಜಿಲ್ಲೆಗಳ 50 ಜನರು, ಹೊರ ರಾಜ್ಯಗಳ 210 ಸ್ಪರ್ಧಿಗಳು ಈಗಾಗಲೇ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.</p>.<p>₹15 ಸಾವಿರ ನಗದು ಮೊದಲ ಬಹುಮಾನ, ₹10 ಸಾವಿರ ದ್ವಿತೀಯ ಹಾಗೂ ₹8 ಸಾವಿರ ತೃತೀಯ ಬಹುಮಾನ ನೀಡಲಾಗುವುದು. ನಾಲ್ಕನೇ ಸ್ಥಾನ ಪಡೆದವರಿಗೆ ₹7 ಸಾವಿರ, ಐದನೇ ಸ್ಥಾನಕ್ಕೆ ₹6 ಸಾವಿರ, ಆರನೇ ಸ್ಥಾನಕ್ಕೆ ₹5 ಸಾವಿರ, ಏಳನೇ ಸ್ಥಾನಕ್ಕೆ ₹4 ಸಾವಿರ, ಎಂಟನೇ ಸ್ಥಾನಕ್ಕೆ ₹3 ಸಾವಿರ, ಒಂಬತ್ತರಿಂದ 13ನೇ ಸ್ಥಾನ ಪಡೆದವರಿಗೆ ತಲಾ ₹2 ಸಾವಿರ, 14ರಿಂದ 25ನೇ ಸ್ಥಾನ ಪಡೆದವರಿಗೆ ತಲಾ ₹1 ಸಾವಿರ ನಗದು ವಿತರಿಸಲಾಗುವುದು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>