<p>ಭಾಲ್ಕಿ: ಇಲ್ಲಿಯ ಹಳೇ ಪಟ್ಟಣದ ವಾರ್ಡ್ 1ರಲ್ಲಿರುವ ಬೀದರ್ ಬೇಸ್ನ ಪುರಾತನ ಪ್ರವೇಶದ್ವಾರ (ಅಗಸಿ) ಶಿಥಿಲಾವಸ್ಥೆಯಲ್ಲಿದ್ದು ನಿತ್ಯ ಜನರು ಜೀವ ಭಯದಲ್ಲೇ ಓಡಾಡುತ್ತಿದ್ದಾರೆ. ಪ್ರವೇಶ ದ್ವಾರ ಅಕ್ಕಪಕ್ಕದ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುವಂತಾಗಿದೆ. ಈ ಐತಿಹಾಸಿಕ ಪ್ರವೇಶ ದ್ವಾರ ಸುಮಾರು 17ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ.</p>.<p>ಹಿರೇಮಠ, ಹಳೇ ಪಟ್ಟಣಕ್ಕೆ ತೆರಳಲು ಸಾಕಷ್ಟು ಜನರು ಇದೇ ಪ್ರವೇಶ ದ್ವಾರದ ಮಾರ್ಗವಾಗಿ ಓಡಾಡುತ್ತಾರೆ. ಇನ್ನು ಸಾಕಷ್ಟು ಸಂಖ್ಯೆಯ ಹಳೇ ಪಟ್ಟಣದ ವಿದ್ಯಾರ್ಥಿಗಳು ಶಿವಾಜಿ, ಸತ್ಯನಿಕೇತನ ಶಾಲೆ, ಕಾಲೇಜುಗಳಿಗೆ ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ ಪುರಾತನ ಪ್ರವೇಶದ್ವಾರ ಶಿಥಿಲಗೊಂಡು, ಗೋಡೆ, ಚಾವಣಿ ಬಿರುಕು ಬಿಟ್ಟಿರುವುದರಿಂದ ಯಾವಾಗ ಬೀಳುತ್ತದೋ ಎನ್ನುವ ಆತಂಕ ಆರಂಭವಾಗಿದೆ.</p>.<p>‘ಸದ್ಯ ಮಳೆಗಾಲ ಇರುವುದರಿಂದ ಸತತ ಮಳೆ ಸುರಿದು ಪ್ರವೇಶ ದ್ವಾರ ಹಸಿ ಹಿಡಿದು ಕುಸಿದು ಬೀಳುವ ಆತಂಕ ಜನರಲ್ಲಿ ಹೆಚ್ಚಾಗಿದೆ’ ಎಂದು ನಿವಾಸಿಗಳಾದ ಪಾಂಡುರಂಗ ಮೇತ್ರೆ, ದತ್ತಾತ್ರಿ ಜಾಧವ್ ಅಳಲು ತೋಡಿಕೊಂಡರು.</p>.<p>ಕಳೆದ ವರ್ಷ ಈ ಮಾರ್ಗದ ರಸ್ತೆಯನ್ನು ಕೆಲ ತಿಂಗಳುಗಳವರೆಗೆ ಬಂದ್ ಮಾಡಲಾಗಿತ್ತು. ಪ್ರವೇಶ ದ್ವಾರದ ಪಕ್ಕವೇ ಹನುಮಾನ ದೇವಸ್ಥಾನ, ಮಹಾದೇವ ಮಂದಿರ ಇರುವುದರಿಂದ ಭಕ್ತರ ಅನುಕೂಲಕ್ಕಾಗಿ ಹಾಗೂ ಜನರ ಸುಲಭ ಓಡಾಟಕ್ಕಾಗಿ ಈ ಮಾರ್ಗವನ್ನು ಪುನಃ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ಹಿಂದಿನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಭೇಟಿ ನೀಡಿ ಪ್ರವೇಶ ದ್ವಾರದ ಬಿರುಕು ಬಿಟ್ಟಿರುವ ಗೋಡೆ ವೀಕ್ಷಿಸಿ ದುರಸ್ತಿಗೆ ಯೋಜನೆ ರೂಪಿಸಿ ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿತ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದರು.</p>.<p>‘2023-24ನೇ ಸಾಲಿನ ಎಸ್ಎಫ್ಸಿ (ಮುಕ್ತನಿಧಿ) ಅನುದಾನದಡಿ ಕಾಮಗಾರಿಗೆ 27-11-2023ರಂದು ಆಡಳಿತಾತ್ಮಕ ಮಂಜೂರಾತಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿಗಳು ವೃಥಾ ಕಾಲಹರಣ ಮಾಡುತ್ತಿದ್ದಾರೆ’ ಎಂದು ಪಾಂಡುರಂಗ ಮೇತ್ರೆ ದೂರಿದರು.</p>.<p>ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕಾಮಗಾರಿ ಆರಂಭಿಸಿ ಪ್ರವೇಶ ದ್ವಾರ ಪುನರ್ ನಿರ್ಮಾಣ ಮಾಡಿ ಪಟ್ಟಣದ ಅಂದ ಹೆಚ್ಚಿಸಬೇಕು. ಜನರ ಜೀವ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು ಎಂಬುದು ಪಟ್ಟಣ ವಾಸಿಗಳ ಆಶಯವಾಗಿದೆ.</p>.<div><blockquote> ತಿನಿತ್ಯ ನೂರಾರು ಜನರು ವಿದ್ಯಾರ್ಥಿಗಳು ಈ ಪ್ರವೇಶ ದ್ವಾರದ ಮೂಲಕ ಹಾದು ಹೋಗುತ್ತಾರೆ. ಕೂಡಲೇ ಕಾಮಗಾರಿ ಆರಂಭಿಸಿ ಜನರ ಜೀವ ರಕ್ಷಿಸಬೇಕು.</blockquote><span class="attribution">–ದತ್ತಾತ್ರಿ ಜಾಧವ ನಿವಾಸಿ</span></div>.<div><blockquote>ಜನಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರವೇಶ ದ್ವಾರ (ಅಗಸಿ) ತೆರವು ಪುನರ್ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಿ ಸುಮಾರು 8 ತಿಂಗಳೂ ಕಳೆದರೂ ಕೆಲಸ ಆರಂಭವಾಗಿಲ್ಲ. </blockquote><span class="attribution">–ಪಾಂಡುರಂಗ ಮೇತ್ರೆ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾಲ್ಕಿ: ಇಲ್ಲಿಯ ಹಳೇ ಪಟ್ಟಣದ ವಾರ್ಡ್ 1ರಲ್ಲಿರುವ ಬೀದರ್ ಬೇಸ್ನ ಪುರಾತನ ಪ್ರವೇಶದ್ವಾರ (ಅಗಸಿ) ಶಿಥಿಲಾವಸ್ಥೆಯಲ್ಲಿದ್ದು ನಿತ್ಯ ಜನರು ಜೀವ ಭಯದಲ್ಲೇ ಓಡಾಡುತ್ತಿದ್ದಾರೆ. ಪ್ರವೇಶ ದ್ವಾರ ಅಕ್ಕಪಕ್ಕದ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ಸಾಗಿಸುವಂತಾಗಿದೆ. ಈ ಐತಿಹಾಸಿಕ ಪ್ರವೇಶ ದ್ವಾರ ಸುಮಾರು 17ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ.</p>.<p>ಹಿರೇಮಠ, ಹಳೇ ಪಟ್ಟಣಕ್ಕೆ ತೆರಳಲು ಸಾಕಷ್ಟು ಜನರು ಇದೇ ಪ್ರವೇಶ ದ್ವಾರದ ಮಾರ್ಗವಾಗಿ ಓಡಾಡುತ್ತಾರೆ. ಇನ್ನು ಸಾಕಷ್ಟು ಸಂಖ್ಯೆಯ ಹಳೇ ಪಟ್ಟಣದ ವಿದ್ಯಾರ್ಥಿಗಳು ಶಿವಾಜಿ, ಸತ್ಯನಿಕೇತನ ಶಾಲೆ, ಕಾಲೇಜುಗಳಿಗೆ ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಆದರೆ ಪುರಾತನ ಪ್ರವೇಶದ್ವಾರ ಶಿಥಿಲಗೊಂಡು, ಗೋಡೆ, ಚಾವಣಿ ಬಿರುಕು ಬಿಟ್ಟಿರುವುದರಿಂದ ಯಾವಾಗ ಬೀಳುತ್ತದೋ ಎನ್ನುವ ಆತಂಕ ಆರಂಭವಾಗಿದೆ.</p>.<p>‘ಸದ್ಯ ಮಳೆಗಾಲ ಇರುವುದರಿಂದ ಸತತ ಮಳೆ ಸುರಿದು ಪ್ರವೇಶ ದ್ವಾರ ಹಸಿ ಹಿಡಿದು ಕುಸಿದು ಬೀಳುವ ಆತಂಕ ಜನರಲ್ಲಿ ಹೆಚ್ಚಾಗಿದೆ’ ಎಂದು ನಿವಾಸಿಗಳಾದ ಪಾಂಡುರಂಗ ಮೇತ್ರೆ, ದತ್ತಾತ್ರಿ ಜಾಧವ್ ಅಳಲು ತೋಡಿಕೊಂಡರು.</p>.<p>ಕಳೆದ ವರ್ಷ ಈ ಮಾರ್ಗದ ರಸ್ತೆಯನ್ನು ಕೆಲ ತಿಂಗಳುಗಳವರೆಗೆ ಬಂದ್ ಮಾಡಲಾಗಿತ್ತು. ಪ್ರವೇಶ ದ್ವಾರದ ಪಕ್ಕವೇ ಹನುಮಾನ ದೇವಸ್ಥಾನ, ಮಹಾದೇವ ಮಂದಿರ ಇರುವುದರಿಂದ ಭಕ್ತರ ಅನುಕೂಲಕ್ಕಾಗಿ ಹಾಗೂ ಜನರ ಸುಲಭ ಓಡಾಟಕ್ಕಾಗಿ ಈ ಮಾರ್ಗವನ್ನು ಪುನಃ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ಹಿಂದಿನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಭೇಟಿ ನೀಡಿ ಪ್ರವೇಶ ದ್ವಾರದ ಬಿರುಕು ಬಿಟ್ಟಿರುವ ಗೋಡೆ ವೀಕ್ಷಿಸಿ ದುರಸ್ತಿಗೆ ಯೋಜನೆ ರೂಪಿಸಿ ಶೀಘ್ರ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಿತ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದರು.</p>.<p>‘2023-24ನೇ ಸಾಲಿನ ಎಸ್ಎಫ್ಸಿ (ಮುಕ್ತನಿಧಿ) ಅನುದಾನದಡಿ ಕಾಮಗಾರಿಗೆ 27-11-2023ರಂದು ಆಡಳಿತಾತ್ಮಕ ಮಂಜೂರಾತಿ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿಗಳು ವೃಥಾ ಕಾಲಹರಣ ಮಾಡುತ್ತಿದ್ದಾರೆ’ ಎಂದು ಪಾಂಡುರಂಗ ಮೇತ್ರೆ ದೂರಿದರು.</p>.<p>ಈಗಲಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಕೂಡಲೇ ಕಾಮಗಾರಿ ಆರಂಭಿಸಿ ಪ್ರವೇಶ ದ್ವಾರ ಪುನರ್ ನಿರ್ಮಾಣ ಮಾಡಿ ಪಟ್ಟಣದ ಅಂದ ಹೆಚ್ಚಿಸಬೇಕು. ಜನರ ಜೀವ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು ಎಂಬುದು ಪಟ್ಟಣ ವಾಸಿಗಳ ಆಶಯವಾಗಿದೆ.</p>.<div><blockquote> ತಿನಿತ್ಯ ನೂರಾರು ಜನರು ವಿದ್ಯಾರ್ಥಿಗಳು ಈ ಪ್ರವೇಶ ದ್ವಾರದ ಮೂಲಕ ಹಾದು ಹೋಗುತ್ತಾರೆ. ಕೂಡಲೇ ಕಾಮಗಾರಿ ಆರಂಭಿಸಿ ಜನರ ಜೀವ ರಕ್ಷಿಸಬೇಕು.</blockquote><span class="attribution">–ದತ್ತಾತ್ರಿ ಜಾಧವ ನಿವಾಸಿ</span></div>.<div><blockquote>ಜನಪ್ರತಿನಿಧಿಗಳ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರವೇಶ ದ್ವಾರ (ಅಗಸಿ) ತೆರವು ಪುನರ್ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಿ ಸುಮಾರು 8 ತಿಂಗಳೂ ಕಳೆದರೂ ಕೆಲಸ ಆರಂಭವಾಗಿಲ್ಲ. </blockquote><span class="attribution">–ಪಾಂಡುರಂಗ ಮೇತ್ರೆ ನಿವಾಸಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>