<p>ಬೀದರ್: ‘18 ವರ್ಷ ವಯಸ್ಸಿನೊಳಗಿನ ಅಪ್ರಾಪ್ತರು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ ಅಂತಹವರ ಪೋಷಕರಿಗೆ ₹25 ಸಾವಿರ ದಂಡ, ಆರು ತಿಂಗಳು ಜೈಲು ಶಿಕ್ಷೆ ಇದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳಕರ ತಿಳಿಸಿದರು.</p>.<p>ಪ್ರಾದೇಶಿಕ ಸಾರಿಗೆ ಕಚೇರಿ, ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್ ಕ್ರಾಸ್ ಸೊಸೈಟಿ ಹಾಗೂ ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವಾಗ ಹೆಡ್ ಫೋನ್, ಬ್ಲೂಟೂತ್ ಮೊಬೈಲ್ ಫೋನ್ ಬಳಸಬಾರದು. ಬೈಕ್ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸಂಚರಿಸಬಾರದು. ಕಾರು ಓಡಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು ಎಂದು ತಿಳಿಸಿದರು.</p>.<p>ರಸ್ತೆಯುದ್ದಕ್ಕೂ ಇರುವ ಫಲಕಗಳು, ಸಂಕೇತಗಳನ್ನು ಗಮನಿಸಿ ವಾಹನ ಓಡಿಸಿದರೆ ಯಾವುದೇ ರೀತಿಯ ಅಪಘಾತಗಳು ಆಗುವುದಿಲ್ಲ ಎಂದರು.</p>.<p>ಮೋಟಾರ್ ವಾಹನ ನಿರೀಕ್ಷಕ ಅಶ್ವಿನ ರೆಡ್ಡಿ ಮಾತನಾಡಿ, ವಾಹನ ಮಾಲೀಕರು ಕಡ್ಡಾಯವಾಗಿ ಆರ್ಸಿ ಬುಕ್, ಇನ್ಶೂರೆನ್ಸ್ಗೆ ಸಂಬಂಧಿಸಿದ ದಾಖಲೆಗಳನ್ನು ಜತೆಗಿಟ್ಟುಕೊಳ್ಳಬೇಕು ಎಂದು ಹೇಳಿದರು.</p>.<p>ಮೋಟಾರ್ ವಾಹನ ನಿರೀಕ್ಷಕಿ ಈರಮ್ಮ ಸಿ., ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಪ್ರಾಚಾರ್ಯ ಶಿವರಾಜ ಜಮಾದಾರ, ಪ್ರಭಾರ ಪ್ರಾಂಶುಪಾಲ ಶಂಕರ ಜೆನಗೊಂಡ, ಶಿವಪುತ್ರ ಚೌಳೆ, ಶಿವರಾಮ, ಚಂದ್ರಕಾಂತ, ಸಿದ್ದು ತೋರಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ‘18 ವರ್ಷ ವಯಸ್ಸಿನೊಳಗಿನ ಅಪ್ರಾಪ್ತರು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ ಅಂತಹವರ ಪೋಷಕರಿಗೆ ₹25 ಸಾವಿರ ದಂಡ, ಆರು ತಿಂಗಳು ಜೈಲು ಶಿಕ್ಷೆ ಇದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳಕರ ತಿಳಿಸಿದರು.</p>.<p>ಪ್ರಾದೇಶಿಕ ಸಾರಿಗೆ ಕಚೇರಿ, ನೌಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್ ಕ್ರಾಸ್ ಸೊಸೈಟಿ ಹಾಗೂ ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ವಾಹನ ಚಲಾಯಿಸುವಾಗ ಹೆಡ್ ಫೋನ್, ಬ್ಲೂಟೂತ್ ಮೊಬೈಲ್ ಫೋನ್ ಬಳಸಬಾರದು. ಬೈಕ್ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸಂಚರಿಸಬಾರದು. ಕಾರು ಓಡಿಸುವವರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು ಎಂದು ತಿಳಿಸಿದರು.</p>.<p>ರಸ್ತೆಯುದ್ದಕ್ಕೂ ಇರುವ ಫಲಕಗಳು, ಸಂಕೇತಗಳನ್ನು ಗಮನಿಸಿ ವಾಹನ ಓಡಿಸಿದರೆ ಯಾವುದೇ ರೀತಿಯ ಅಪಘಾತಗಳು ಆಗುವುದಿಲ್ಲ ಎಂದರು.</p>.<p>ಮೋಟಾರ್ ವಾಹನ ನಿರೀಕ್ಷಕ ಅಶ್ವಿನ ರೆಡ್ಡಿ ಮಾತನಾಡಿ, ವಾಹನ ಮಾಲೀಕರು ಕಡ್ಡಾಯವಾಗಿ ಆರ್ಸಿ ಬುಕ್, ಇನ್ಶೂರೆನ್ಸ್ಗೆ ಸಂಬಂಧಿಸಿದ ದಾಖಲೆಗಳನ್ನು ಜತೆಗಿಟ್ಟುಕೊಳ್ಳಬೇಕು ಎಂದು ಹೇಳಿದರು.</p>.<p>ಮೋಟಾರ್ ವಾಹನ ನಿರೀಕ್ಷಕಿ ಈರಮ್ಮ ಸಿ., ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಪ್ರಾಚಾರ್ಯ ಶಿವರಾಜ ಜಮಾದಾರ, ಪ್ರಭಾರ ಪ್ರಾಂಶುಪಾಲ ಶಂಕರ ಜೆನಗೊಂಡ, ಶಿವಪುತ್ರ ಚೌಳೆ, ಶಿವರಾಮ, ಚಂದ್ರಕಾಂತ, ಸಿದ್ದು ತೋರಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>