<p><strong>ಬಸವಕಲ್ಯಾಣ (ಬೀದರ್ ಜಿಲ್ಲೆ):</strong> ವಿದೇಶದಲ್ಲಿ ಉತ್ತಮ ಸಂಬಳದ ನೌಕರಿ ಕೊಡಿಸುವ ಆಮಿಷ ನೀಡಿ ಹಣ ಪಡೆದು ವಂಚಿಸಿರುವ ಬಗ್ಗೆ ಉಜ್ಬೇಕಿಸ್ತಾನಕ್ಕೆ ಹೋಗಿರುವ ತಾಲ್ಲೂಕಿನ ಕೆಲವರು ತಮ್ಮ ಸಮಸ್ಯೆ ತೋಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಬಸವಕಲ್ಯಾಣ ತಾಲ್ಲೂಕಿನ ಐವರು ಸೇರಿ ಹತ್ತಕ್ಕೂ ಹೆಚ್ಚಿನ ಮಂದಿಒಂದೇ ಸ್ಥಳದಲ್ಲಿ ಸೇರಿ ವಿಡಿಯೊದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.</p>.<p>‘ವಾರದ ಹಿಂದೆ ನಾವೆಲ್ಲ ಉಜ್ಬೇಕಿಸ್ತಾನಕ್ಕೆ ಬಂದಿದ್ದೇವೆ. ನಮಗೆ ನಿಯೋಜಿಸಿದ ಕಂಪನಿ ಬಿಟ್ಟು ಬೇರೆ ಕಂಪನಿಯಲ್ಲಿ ಕೆಲಸ ನೀಡಲಾಗಿದೆ. ಮಧ್ಯವರ್ತಿಗಳು ನಮ್ಮಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಅನ್ಯಾಯ ಮಾಡಿದ್ದಾರೆ. ಯಾವುದೇ ಸೌಲಭ್ಯಗಳೂ ಇಲ್ಲಿ ಇಲ್ಲ. ದಿನದಲ್ಲಿ ಒಂದು ಹೊತ್ತಿನ ಊಟವೂ ಸಿಗುತ್ತಿಲ್ಲ. ನಮ್ಮ ಕಣ್ಣೆದುರಲ್ಲೇ ಕೆಲವರು ಊಟವಿಲ್ಲದೆ ಮೃತಪಟ್ಟಿದ್ದಾರೆ. ಇದರಿಂದ ನಾವು ಭಯಗೊಂಡಿದ್ದೇವೆ’ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.</p>.<p>‘ಪ್ರಧಾನಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಅವರು ನಮ್ಮನ್ನು ಹೇಗಾದರೂ ಮಾಡಿ ಸ್ವದೇಶಕ್ಕೆ ಕರೆಸಿಕೊಳ್ಳಬೇಕು’ ಎಂದೂ ವಿನಂತಿಸಿದ್ದಾರೆ. ಬಸವಕಲ್ಯಾಣದವರು ಎಂದು ತಮ್ಮ ಹೆಸರು ಹೇಳಿರುವ ಸುನಿಲ, ಚನ್ನಪ್ಪ, ಅವಿನಾಶ, ಬಸವ, ಅಪ್ಪಾಸಾಬ್ ಅವರು ತಾವು ಕಷ್ಟದಲ್ಲಿದ್ದು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ. ಕಲಬುರಗಿಯ ರಮೇಶ, ಶಿವಾ ಕಮಲಾಪುರ, ರಾಜೇಶ ಹುಮನಾಬಾದ್ ಸಹ ತಮಗೆ ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ಕೋರಿದ್ದಾರೆ.</p>.<p><strong>ಶಾಸಕರಿಂದ ಧನ ಸಹಾಯ:</strong> </p><p>ಉಜ್ಬೇಕಿಸ್ತಾನದಲ್ಲಿ ಯುವಕರು ಸಂಕಟದಲ್ಲಿ ಸಿಲುಕಿರುವ ಬಗ್ಗೆ ಗೊತ್ತಾದ ತಕ್ಷಣ ಶಾಸಕ ಶರಣು ಸಲಗರ ಅವರು ವಿಡಿಯೊ ಕಾಲ್ ಮೂಲಕ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. </p>.<p>‘ಭಾರತಕ್ಕೆ ವಾಪಸ್ಸಾಗಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮಾತನಾಡಿ ವ್ಯವಸ್ಥೆ ಮಾಡುತ್ತೇವೆ. ವಂಚಿಸಿರುವ ಮಧ್ಯವರ್ತಿಗಳಿಂದ ಹಣ ಮರಳಿ ಕೊಡಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ. ಸಂಕಷ್ಟದಲ್ಲಿರುವವರ ಖರ್ಚಿಗಾಗಿ ₹50,000 ಹಣವನ್ನು ಶಾಸಕ ಸಲಗರ ಕಳುಹಿಸಿದ್ದಾರೆ.</p>.<p>‘ಸಂಸದ ಸಾಗರ ಖಂಡ್ರೆ ಅವರೂ ತಮ್ಮನ್ನು ಸಂಪರ್ಕಿಸಿ ಮಾತನಾಡಿದ್ದಾರೆ’ ಎಂದು ಶಾಸಕ ಸಲಗರ ಅವರಿಗೆ ಅಲ್ಲಿನ ಯುವಕರು ವಿಡಿಯೊ ಕಾಲ್ನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ (ಬೀದರ್ ಜಿಲ್ಲೆ):</strong> ವಿದೇಶದಲ್ಲಿ ಉತ್ತಮ ಸಂಬಳದ ನೌಕರಿ ಕೊಡಿಸುವ ಆಮಿಷ ನೀಡಿ ಹಣ ಪಡೆದು ವಂಚಿಸಿರುವ ಬಗ್ಗೆ ಉಜ್ಬೇಕಿಸ್ತಾನಕ್ಕೆ ಹೋಗಿರುವ ತಾಲ್ಲೂಕಿನ ಕೆಲವರು ತಮ್ಮ ಸಮಸ್ಯೆ ತೋಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p>.<p>ಬಸವಕಲ್ಯಾಣ ತಾಲ್ಲೂಕಿನ ಐವರು ಸೇರಿ ಹತ್ತಕ್ಕೂ ಹೆಚ್ಚಿನ ಮಂದಿಒಂದೇ ಸ್ಥಳದಲ್ಲಿ ಸೇರಿ ವಿಡಿಯೊದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.</p>.<p>‘ವಾರದ ಹಿಂದೆ ನಾವೆಲ್ಲ ಉಜ್ಬೇಕಿಸ್ತಾನಕ್ಕೆ ಬಂದಿದ್ದೇವೆ. ನಮಗೆ ನಿಯೋಜಿಸಿದ ಕಂಪನಿ ಬಿಟ್ಟು ಬೇರೆ ಕಂಪನಿಯಲ್ಲಿ ಕೆಲಸ ನೀಡಲಾಗಿದೆ. ಮಧ್ಯವರ್ತಿಗಳು ನಮ್ಮಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಅನ್ಯಾಯ ಮಾಡಿದ್ದಾರೆ. ಯಾವುದೇ ಸೌಲಭ್ಯಗಳೂ ಇಲ್ಲಿ ಇಲ್ಲ. ದಿನದಲ್ಲಿ ಒಂದು ಹೊತ್ತಿನ ಊಟವೂ ಸಿಗುತ್ತಿಲ್ಲ. ನಮ್ಮ ಕಣ್ಣೆದುರಲ್ಲೇ ಕೆಲವರು ಊಟವಿಲ್ಲದೆ ಮೃತಪಟ್ಟಿದ್ದಾರೆ. ಇದರಿಂದ ನಾವು ಭಯಗೊಂಡಿದ್ದೇವೆ’ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.</p>.<p>‘ಪ್ರಧಾನಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಅವರು ನಮ್ಮನ್ನು ಹೇಗಾದರೂ ಮಾಡಿ ಸ್ವದೇಶಕ್ಕೆ ಕರೆಸಿಕೊಳ್ಳಬೇಕು’ ಎಂದೂ ವಿನಂತಿಸಿದ್ದಾರೆ. ಬಸವಕಲ್ಯಾಣದವರು ಎಂದು ತಮ್ಮ ಹೆಸರು ಹೇಳಿರುವ ಸುನಿಲ, ಚನ್ನಪ್ಪ, ಅವಿನಾಶ, ಬಸವ, ಅಪ್ಪಾಸಾಬ್ ಅವರು ತಾವು ಕಷ್ಟದಲ್ಲಿದ್ದು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ. ಕಲಬುರಗಿಯ ರಮೇಶ, ಶಿವಾ ಕಮಲಾಪುರ, ರಾಜೇಶ ಹುಮನಾಬಾದ್ ಸಹ ತಮಗೆ ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ಕೋರಿದ್ದಾರೆ.</p>.<p><strong>ಶಾಸಕರಿಂದ ಧನ ಸಹಾಯ:</strong> </p><p>ಉಜ್ಬೇಕಿಸ್ತಾನದಲ್ಲಿ ಯುವಕರು ಸಂಕಟದಲ್ಲಿ ಸಿಲುಕಿರುವ ಬಗ್ಗೆ ಗೊತ್ತಾದ ತಕ್ಷಣ ಶಾಸಕ ಶರಣು ಸಲಗರ ಅವರು ವಿಡಿಯೊ ಕಾಲ್ ಮೂಲಕ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ. </p>.<p>‘ಭಾರತಕ್ಕೆ ವಾಪಸ್ಸಾಗಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮಾತನಾಡಿ ವ್ಯವಸ್ಥೆ ಮಾಡುತ್ತೇವೆ. ವಂಚಿಸಿರುವ ಮಧ್ಯವರ್ತಿಗಳಿಂದ ಹಣ ಮರಳಿ ಕೊಡಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ. ಸಂಕಷ್ಟದಲ್ಲಿರುವವರ ಖರ್ಚಿಗಾಗಿ ₹50,000 ಹಣವನ್ನು ಶಾಸಕ ಸಲಗರ ಕಳುಹಿಸಿದ್ದಾರೆ.</p>.<p>‘ಸಂಸದ ಸಾಗರ ಖಂಡ್ರೆ ಅವರೂ ತಮ್ಮನ್ನು ಸಂಪರ್ಕಿಸಿ ಮಾತನಾಡಿದ್ದಾರೆ’ ಎಂದು ಶಾಸಕ ಸಲಗರ ಅವರಿಗೆ ಅಲ್ಲಿನ ಯುವಕರು ವಿಡಿಯೊ ಕಾಲ್ನಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>