<p><strong>ಔರಾದ್</strong>: ತಾಲ್ಲೂಕಿನ ಸಂತಪುರ ಹೋಲಿ ಕ್ರಾಸ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.</p>.<p>ಶಿಕ್ಷಕರ ಮಾರ್ಗದರ್ಶನದಲ್ಲಿ ಚುನಾವಣೆ ಆಯೋಗದ ಮಾದರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.</p>.<p>ಪ್ರಥ್ವಿರಾಜ್ (ಶಾಲಾ ನಾಯಕ), ವಿದ್ಯಾ (ಉಪ ನಾಯಕಿ), ವೆರೋನಿಕಾ (ಶಾಲಾ ಸಾಂಸ್ಕೃತಿಕ ಮಂತ್ರಿ) ದಾವಿದ್ (ಶಾಲಾ ಶಿಕ್ಷಣ ಮಂತ್ರಿ), ಇಸಾಕ್ (ಕ್ರೀಡಾ ಮಂತ್ರಿ), ರೋಷನ್ (ಶಾಲಾ ಶಿಸ್ತು ಮಂತ್ರಿ), ಸುಧೀರ್ (ಶಾಲಾ ಪರಿಸರ ಮಂತ್ರಿ) ಶಾಲಾ ಸಂಸತ್ತಿಗೆ ಆಯ್ಕೆಯಾದವರು.</p>.<p>‘ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ರಚನೆ ಪೂರಕ. ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ’ ಎಂದು ಮುಖ್ಯ ಶಿಕ್ಷಕಿ ಸಿಸ್ಟರ್ ಯಡ್ರಿಯನ್ ಹೇಳಿದರು.</p>.<p>ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಮಾತನಾಡಿ,‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಹಳ ಪ್ರಮುಖ ಘಟ್ಟ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೂ ಭಾರತೀಯ ಚುನಾವಣೆ ವ್ಯವಸ್ಥೆ ಹಾಗೂ ತಮ್ಮ ಜವಾಬ್ದಾರಿ ತಿಳಿಸಿ ಕೊಡಲು ಈ ಶಾಲಾ ಸಂಸತ್ ರಚನೆ ಉತ್ತಮ ವಿಧಾನವಾಗಿದೆ’ ಎಂದರು.</p>.<p>ಫಾದರ್ ಕ್ಲೀವನ್, ಶಿಕ್ಷಕ ಸತೀಶ್ ನಾಗೂರೆ, ಸೀಮಾ, ಸುನಿತಾ, ಅಂಜಲಿ, ಪೂಜಾ, ಅಂಬಿಕಾ, ಜೀವಿತಾ, ತಬೀತಾ, ಸುವರ್ಣಾ, ಅಲ್ವಿರಿನ್, ಮಂದಾಕಿನಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್</strong>: ತಾಲ್ಲೂಕಿನ ಸಂತಪುರ ಹೋಲಿ ಕ್ರಾಸ್ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಶಾಲಾ ಸಂಸತ್ತಿನಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.</p>.<p>ಶಿಕ್ಷಕರ ಮಾರ್ಗದರ್ಶನದಲ್ಲಿ ಚುನಾವಣೆ ಆಯೋಗದ ಮಾದರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.</p>.<p>ಪ್ರಥ್ವಿರಾಜ್ (ಶಾಲಾ ನಾಯಕ), ವಿದ್ಯಾ (ಉಪ ನಾಯಕಿ), ವೆರೋನಿಕಾ (ಶಾಲಾ ಸಾಂಸ್ಕೃತಿಕ ಮಂತ್ರಿ) ದಾವಿದ್ (ಶಾಲಾ ಶಿಕ್ಷಣ ಮಂತ್ರಿ), ಇಸಾಕ್ (ಕ್ರೀಡಾ ಮಂತ್ರಿ), ರೋಷನ್ (ಶಾಲಾ ಶಿಸ್ತು ಮಂತ್ರಿ), ಸುಧೀರ್ (ಶಾಲಾ ಪರಿಸರ ಮಂತ್ರಿ) ಶಾಲಾ ಸಂಸತ್ತಿಗೆ ಆಯ್ಕೆಯಾದವರು.</p>.<p>‘ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ರಚನೆ ಪೂರಕ. ಶಾಲಾ ಸಿಬ್ಬಂದಿ ಜೊತೆ ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರನ್ನಾಗಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ’ ಎಂದು ಮುಖ್ಯ ಶಿಕ್ಷಕಿ ಸಿಸ್ಟರ್ ಯಡ್ರಿಯನ್ ಹೇಳಿದರು.</p>.<p>ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಮಾತನಾಡಿ,‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಬಹಳ ಪ್ರಮುಖ ಘಟ್ಟ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಬಾಲ್ಯದಿಂದಲೂ ಭಾರತೀಯ ಚುನಾವಣೆ ವ್ಯವಸ್ಥೆ ಹಾಗೂ ತಮ್ಮ ಜವಾಬ್ದಾರಿ ತಿಳಿಸಿ ಕೊಡಲು ಈ ಶಾಲಾ ಸಂಸತ್ ರಚನೆ ಉತ್ತಮ ವಿಧಾನವಾಗಿದೆ’ ಎಂದರು.</p>.<p>ಫಾದರ್ ಕ್ಲೀವನ್, ಶಿಕ್ಷಕ ಸತೀಶ್ ನಾಗೂರೆ, ಸೀಮಾ, ಸುನಿತಾ, ಅಂಜಲಿ, ಪೂಜಾ, ಅಂಬಿಕಾ, ಜೀವಿತಾ, ತಬೀತಾ, ಸುವರ್ಣಾ, ಅಲ್ವಿರಿನ್, ಮಂದಾಕಿನಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>